ಮಹಿಳೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮಹಿಳೆಯೊಬ್ಬರು ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿ ನಿವಾಸಿ ದಿ| ಜನಾರ್ದನ ಆಚಾರ್ಯರ ಪತ್ನಿ ಸುಗುಣ (77) ಮೃತ ಮಹಿಳೆ. ನಿನ್ನೆ ರಾತ್ರಿ ಇವರು ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದರು. ಇಂದು ಮುಂಜಾನೆ ೩.೩೦ರ ವೇಳೆ ಮನೆಯವರು ಎಚ್ಚೆತ್ತು ನೋಡಿದಾಗ ಸುಗುಣ ನಾಪತ್ತೆಯಾಗಿದ್ದರೆನ್ನಲಾಗಿದೆ. ಇದರಿಂದ ಕೂಡಲೇ ಹುಡುಕಿದಾಗ ಮನೆ ಅಂಗಳದಲ್ಲಿರುವ ಬಾವಿಯಲ್ಲಿ ಸುಗುಣ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ತಲುಪಿ …

ಪೂಚಕ್ಕಾಡ್‌ನಲ್ಲಿ ಮುಂಜಾನೆ ಅಪಘಾತ : ಸ್ಕೂಟರ್ ಸವಾರ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಪಳ್ಳಿಕ್ಕರೆ ಪೂಚಕ್ಕಾಡ್‌ನಲ್ಲಿ ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟನು. ಚೆರ್ವತ್ತೂರು ಕಾಡಂಗೋಡು ನಿವಾಸಿ ಎ.ಪಿ. ಮುಹಮ್ಮದ್ ಫಾಯಿಸ್ (23) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಜೊತೆಗೆ ಸಂಚರಿಸಿದ್ದ ಸಹಪಾಠಿ ಚಿತ್ತಾರಿ ಪೆಟ್ರೋಲ್‌ಬಂಕ್ ಸಮೀಪದ ರಯೀಸ್ ಗಾಯ ಗೊಂಡಿದ್ದಾನೆ. ಇಂದು ಮುಂಜಾನೆ ಮೂರೂವರೆ ಗಂಟೆಗೆ ಘಟನೆ ನಡೆದಿದೆ. ಮಂಗಳೂರಿನಿಂದ ಸ್ಕೂಟರ್‌ನಲ್ಲಿ ಫಾಯೀಸ್ ಮನೆಗೆ ಹಿಂತಿರುಗುತ್ತಿದ್ದನು. ಸ್ಕೂಟರ್‌ಗೆ ಲಾರಿ ಢಿಕ್ಕಿಯಾದಾಗ ಎದುರು ಭಾಗದಿಂದ ಬರುತ್ತಿದ್ದ ಇನ್ನೊಂದು ಲಾರಿಯಡಿಗೆ ಫಾಯಿಸ್ ಬಿದ್ದಿದ್ದಾನೆ. ಕೂಡಲೇ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದನು. …

ಹೊಸ ಇತಿಹಾಸ ಸೃಷ್ಟಿ: ತೆರೆ ಕಂಡ ಎರಡೇ ದಿನದಲ್ಲಿ ಗಳಿಕೆಯಲ್ಲಿ ಶತಕ ಬಾರಿಸಿದ ‘ಎಂಬುರಾನ್’

ತಿರುವನಂತಪುರ: ತೆರೆಕಂಡ ಎರಡೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗಳಿಸುವ ಮೂಲಕ ಯೂನಿವರ್ಸಲ್ ಸ್ಟಾರ್ ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ‘ಎಂಬುರಾನ್’ ಎಂಬ ಮಲೆಯಾಳಂ ಸಿನಿಮಾ ಕೇರಳದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ನಟ ಹಾಗೂ ನಿರ್ದೇಶಕರೂ ಆಗಿರುವ ಪೃಥ್ವೀರಾಜ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಇವರೇ ಈ ಹಿಂದೆ ನಿರ್ದೇಶಿಸಿ 200 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮೂಲಕ ಸೂಪರ್ ಹಿಟ್ ಆಗಿದ್ದ ಮೋಹನ್‌ಲಾಲ್ ನಟಿಸಿದ ಲೂಸಿಫರ್ ಚಿತ್ರದ ಎರಡನೇ ಭಾಗವಾಗಿದೆ ಎಂಬುರಾನ್.

ಮನೆಯಿಂದ 3 ಕ್ವಿಂಟಾಲ್ ಅಡಿಕೆ ಕಳವು

ಉಪ್ಪಳ: ಕುಟುಂಬ ಮನೆಗೆ ಬೀಗ ಜಡಿದು ಹೊರಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಮೂರು ಕ್ವಿಂಟಾಲ್ ಅಡಿಕೆ ಕಳವುಗೈದ ಬಗ್ಗೆ ದೂರಲಾಗಿದೆ. ಕೋಡಿಜಾಲು ಕೊಡ್ಲಮೊಗರುವಿನ ಲೋಕೇಶ ರೈ ಎಂಬವರ ಮನೆಯಿಂದ ಅಡಿಕೆ ಕಳವಿಗೀಡಾಗಿದೆ. ಲೋಕೇಶ್ ರೈ ಕುಟುಂಬ ಸಮೇತ ಮಾರ್ಚ್ 21ರಂದು ಹೊರಗೆ ತೆರಳಿ 24ರಂದು  ಮರಳಿ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಅಡಿಕೆ ಕಳವುಗೈದಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಲೋಕೇಶ್ ರೈ ನೀಡಿದ …

20 ಗೋಣಿ ಅಡಿಕೆ ಕಳವು

ಬಂದಡ್ಕ: ಬೇಡಗಂ ಅಂಬಿಲಾಡಿಯಲ್ಲಿ ಕೊಠಡಿಯಲ್ಲಿರಿಸಿದ್ದ 20 ಗೋಣಿ ಒಣಗಿದ ಅಡಿಕೆ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ನೇರ ಎಂಬಲ್ಲಿನ ಕಣ್ಣನ್ ಎಂಬ ಕೃಷಿಕನ ಅಡಿಕೆ ಗುರುವಾರ ರಾತ್ರಿ ಕಳವಿಗೀಡಾಗಿದೆ. ಕಣ್ಣನ್‌ರ ಮಾಲಕತ್ವದಲ್ಲಿರುವ ಕಟ್ಟಡದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಡಿಕೆ ಕಳವು ನಡೆಸಿದ್ದಾರೆ. ಕೊಠಡಿಯಲ್ಲಿ 40 ಗೋಣಿ ಚೀಲಗಳಲ್ಲಿ ಅಡಿಕೆ ಸಂಗ್ರಹಿಸಿಡಲಾಗಿತ್ತು. ಇದರಿಂದ 20 ಗೋಣಿ ಚೀಲ ಅಡಿಕೆಯನ್ನು ದೋಚಲಾಗಿದೆ. ನಿನ್ನೆ ಬೆಳಿಗ್ಗೆ ಈ ವಿಷಯ ಅರಿವಿಗೆ ಬಂದಿದೆ.  ಸುಮಾರು ಒಂದೂವರೆ ಲಕ್ಷ ರೂಪಾಯಿಯ ಅಡಿಕೆ ಕಳವಿಗೀಡಾಗಿರುವುದಾಗಿ ಅಂದಾಜಿಸಲಾಗಿದೆ. ಈ …

ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ವಕ್ಫ್ ಮಸೂದೆ ಮಂಡನೆ- ಅಮಿತ್ ಶಾ

ನವದೆಹಲಿ: ಸಂಸತ್ತಿನ ಹಾಲಿ ಅಧಿವೇಶನದಲ್ಲೇ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಗುವುದೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು 2024 ಆಗಸ್ಟ್‌ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ  ಕಳುಹಿಸಿಕೊಡಲಾಗಿತ್ತು. ಅದನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುವುದು. ಪ್ರಸ್ತುತ ನಡೆಯುತ್ತಿರುವ ಸಂಸತ್ ಬಜೆಟ್ ಅಧಿವೇಶನವು ಎಪ್ರಿಲ್ 4ರಂದು ಕೊನೆಗೊಳ್ಳಲಿದೆ. ಅದರೊಳಗಾಗಿ ಈ ಮಸೂದೆಯನ್ನು ಮತ್ತೆ ಸಂಸತ್‌ನಲ್ಲಿ ಮಂಡಿಸಲಿದ್ದೇವೆ. ನರೇಂದ್ರ ಮೋದಿ ಸರಕಾರವು ಸಂವಿಧಾನದ ಚೌಕಟ್ಟಿಗೆ ಅನುಗುಣವಾಗಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಿಂದಾಗಿ ಉದ್ದೇಶಿತ …

ರೈಲಿನಲ್ಲಿ ಸಾಗಿಸುತ್ತಿದ್ದ 1100 ಪ್ಯಾಕೆಟ್ ತಂಬಾಕು ಉತ್ಪನ್ನ ವಶ

ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ 1100 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ನಿನ್ನೆ ಸಂಜೆ ೪ ಗಂಟೆ ವೇಳೆ ಮಂಗಳೂರು ಭಾಗದಿಂದ ಬಂದು ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದ ವರಾವಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಂಬಾಕು ಉತ್ಪನ್ನ ಪತ್ತೆಯಾಗಿದೆ. ಜನರಲ್ ಬೋಗಿಯ ಟಾಯ್‌ಲೆಟ್ ಸಮೀಪ ಬ್ಯಾಗ್‌ನಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ತಂಬಾಕು ಉತ್ಪನ್ನ ಕಂಡು ಬಂದಿತ್ತು. ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ರಜಿಕುಮಾರ್ ನೇತೃತ್ವದಲ್ಲಿ ಡಾನ್ಸಾಫ್ ತಂಡದ ಸದಸ್ಯರಾದ ಮಹೇಶ್, ಜ್ಯೋತಿಷ್, ಶರತ್ …

ಬಸ್‌ನಲ್ಲಿ ಸಾಗಿಸುತ್ತಿದ್ದ 30 ಕಿಲೋ ಪಾನ್ ಮಸಾಲೆ ವಶ: ಓರ್ವ ಸೆರೆ

ಉಪ್ಪಳ: ಮಂಗಳೂರು ಭಾಗದಿಂದ ಕಾಸರಗೋಡು ಭಾಗಕ್ಕೆ ಮಾದಕವಸ್ತು ಸಾಗಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅದರ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರಂತೆ ಇಂದು ಬೆಳಿಗ್ಗೆ ನಡೆಸಿದ ಕಾರ್ಯಾಚರಣೆ ವೇಳೆ ಉಪ್ಪಳ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 30 ಕಿಲೋ ಪಾನ್‌ಮಸಾ ಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಉತ್ತರ ಪ್ರದೇಶ ನಿವಾಸಿ ಶೈಲೇಶ್ ಸೋಂಕಾರ್ (20) ಎಂ ಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ತಲಪಾಡಿಯಲ್ಲಿ ಪೊಲೀಸರು, ಶ್ವಾನದಳ ನಡೆಸಿದ ಕಾರ್ಯಾಚರಣೆಯಲ್ಲಿ ಪಾನ್ …

ಮಾದಕ ವಸ್ತು ಸಹಿತ ಓರ್ವ ಸೆರೆ

ಕಾಸರಗೋಡು: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1.280 ಗ್ರಾಂ ಎಂಡಿಎAಎ, 26.850 ಗ್ರಾಂ ಗಾಂಜಾ ಸಹಿತ ಓರ್ವ ಸೆರೆಗೀಡಾಗಿದ್ದಾನೆ. ಪೊಯಿನಾಚಿ ಚೆರುಕರ ಕಾಲನಿಯ ಅಬೂಬಕ್ಕರ್ ಸಿದ್ದಿಕ್ (33) ಎಂಬಾತನನ್ನು ಬೇಕಲ ಎಸ್.ಐ. ಸವ್ಯಸಾಚಿ ನೇತೃತ್ವದ ಪೊಲೀ ಸರು ಬಂಧಿಸಿದ್ದಾರೆ. ಪನಯಾಲ್, ಬಟ್ಟತ್ತೂರು ಚಂದ್ರಪುರ ರಸ್ತೆಯಲ್ಲಿ ಕುಣಿಕುನ್ನಿಲ್ ಎಂಬಲ್ಲಿAದ ಮಾದಕ ವಸ್ತು ವಶಪಡಿಸಲಾಗಿದೆ. ನಿನ್ನೆ ರಾತ್ರಿ 7.45ರ ವೇಳೆ ಪಾಲಕುನ್ನು ಭಾಗಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾವನ್ನು ತಪಾಸಣೆ ಗೈದಾಗ ಮಾದಕ ವಸ್ತು ಪತ್ತೆಯಾಗಿದೆ.

ಕೊಡಗಿನಲ್ಲಿ ಪತ್ನಿ, ಪುತ್ರಿ ಸಹಿತ ನಾಲ್ವರನ್ನು ಕಡಿದು ಕೊಲೆ: ಆರೋಪಿಯಾದ ವಯನಾಡ್ ನಿವಾಸಿ ಸೆರೆ

ಮಡಿಕೇರಿ: ಇಲ್ಲಿಗೆ ಸಮೀಪದ ಕೊಡಗಿನಲ್ಲಿ ಯುವಕನೋರ್ವ ಪತ್ನಿ ಸಹಿತ ನಾಲ್ಕು ಮಂದಿಯನ್ನು ಕಡಿದು ಕೊಲೆಗೈದ ಭೀಕರ ಘಟನೆ ನಡೆದಿದೆ. ಆರೋಪಿಯಾದ ವಯನಾಡು ನಿವಾಸಿ ಯನ್ನು ಪೊಲೀಸರು ಬಂಧಿಸಿದ್ದಾರೆ. ವಯನಾಡ್ ತಿರುನೆಲ್ಲಿ ನಿವಾಸಿ ಉಣ್ಣಿಕಪರಂಬ್ ನಿವಾಸಿಯಾದ ಗಿರೀಶ್ (೩೮) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆನ್ನಲಾಗಿದೆ. ಈತ ಪತ್ನಿ ನಾಗಿ (30), ಪುತ್ರಿ ಕಾವೇರಿ (5), ನಾಗಿಯ ತಂದೆ ಕರಿಯ (75), ತಾಯಿ ಗೌರಿ (70) ಎಂಬಿವರನ್ನು ಕಡಿದು ಕೊಲೆಗೈದಿರುವುದಾಗಿ ತಿಳಿದು ಬಂದಿದೆ. ಘಟನೆ ಬಳಿಕ ಪರಾರಿಯಾದ ಆರೋಪಿಯನ್ನು ವಯನಾಡ್ ತಲ …