ಬಾವಿಕೆರೆ ಅಣೆಕಟ್ಟು ಟೂರಿಸಂ ಯೋಜನೆಗೆ ಮಾರ್ಚ್‌ನಲ್ಲಿ ಚಾಲನೆ

ಬೋವಿಕ್ಕಾನ:  ಬಾವಿಕೆರೆ ಅಣೆಕಟ್ಟು ಪ್ರವಾಸೋಧ್ಯಮ ಯೋಜನೆಯನ್ನು ಮುಂದಿನ ತಿಂಗಳು ಆರಂಭಿಸಲಾಗುವುದೆಂದು ಶಾಸಕ ಸಿ.ಎಚ್. ಕುಂಞಂಬು ತಿಳಿಸಿದ್ದಾರೆ. ಬಾವಿಕೆರೆ ಕುಡಿಯುವ ನೀರು ಯೋಜನೆಯ ಡ್ಯಾಮ್ ಸ್ವೆಟ್‌ಗೆ ಸಂಬಂಧಿಸಿದ ಸ್ಥಳ ಟೂರಿಸಂ ಪ್ರೊಜೆಕ್ಟ್‌ಗೆ ಸೂಕ್ತವಾದ ಸ್ಥಳವೆಂದು ಪತ್ತೆ ಮಾಡಿ ರಾಜ್ಯ ಮುಂಗಡಪತ್ರದಲ್ಲಿ ೫ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಈ ಯೋಜನೆಯ ಟೆಂಡರನ್ನು ತಿರುವನಂ ತಪುರ ಕೇಂದ್ರವಾಗಿ ಕಾರ್ಯಾಚರಿಸುವ ಹಾಬಿಟಾಟ್ ಟೆಕ್ನಾಲಜಿ ಗ್ರೂಪ್ ವಹಿಸಿಕೊಂಡಿದೆ. ಮುಂದಿನ ತಿಂಗಳು ಪ್ರಥಮ ವಾರ ದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗು ವುದು. ಬಳಿಕ ಕಾಮಗಾರಿ …

ಕ.ಸಾ.ಪ.ದಿಂದ ಕೆ.ಟಿ. ಗಟ್ಟಿ ನುಡಿನಮನ

ಕಾಸರಗೋಡು: ಸಾಮಾನ್ಯ ಹಿನ್ನೆಲೆಯಿಂದ ಬಂದು ಎಂಟನೇ ತರಗತಿವರೆಗೆ ಮಾತ್ರ ಕಲಿತ ಕೆ.ಟಿ ಗಟ್ಟಿಯವರು ಅದೃಷ್ಟವನ್ನೇ ನಂಬಿ ಕೂರದೆ ಅನನ್ಯ ಸಾಧನೆಯಿಂದಲೇ ಮೇಲೆ ಬಂದವರು. ಸತತ ಪರಿಶ್ರಮ ಪಟ್ಟು ಖಾಸಗಿಯಾಗಿ ಶಿಕ್ಷಣ ಮುಂದುವರಿಸಿ ಪದವಿ,ಸ್ನಾತಕೋತ್ತರ ಪದವಿ ಪಡೆದು ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯ ಗಳಿಸಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ಆಂಗ್ಲ ಲ್ರ‍್ಭÃಫೆಸರ್ ಆಗಿ ಸೇವೆ ಸಲ್ಲಿಸಿದರು. ೪೦ರಷ್ಟು ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದರು. ಅವರ ಈ ಸಾಧನೆ ಅನನ್ಯವಾದುದು, ಮಾದರಿಯಾದುದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ …

ಮುಸ್ಲಿಂ ಲೀಗ್ ಉಮೇದ್ವಾರರ ಘೋಷಣೆ

ಕಲ್ಲಿಕೋಟೆ: ಯುಡಿಎಫ್‌ನ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಕೂಡಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಉಮೇದ್ವಾರರ  ಹೆಸರನ್ನು ವಿದ್ಯುಕ್ತವಾಗಿ ಪ್ರಕಟಿಸಿದೆ. ಇದರಂತೆ ಮಲಪ್ಪುರಂ ಲೋಕಸಭಾ ಕ್ಷೇತ್ರದಲ್ಲಿ  ಇ.ಟಿ, ಮೊಹಮ್ಮದ್ ಬಶೀರ್ ಹಾಗೂ ಪೊನ್ನಾನಿ ಲೋಕ ಸಭಾ ಕ್ಷೇತ್ರದಲ್ಲಿ ಅಬ್ದುಲ್ ಸಮದ್ ಸಮದಾನಿ ಸ್ಪರ್ಧಿಸಲಿದ್ದಾರೆಂದು ಮುಸ್ಲಿಂ ಲೀಗ್ ನೇತಾರರು ತಿಳಿಸಿದ್ದಾರೆ.  ಈ ಪೈಕಿ ಇ.ಟಿ. ಮೊಹಮ್ಮದ್ ಬಷೀರ್ ಈಗ ಪೊನ್ನಾನಿ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಆ  ಕ್ಷೇತ್ರ ಬಿಟ್ಟು ಅವರು ಮುಂದಿನ ಚುನಾವಣೆಯಲ್ಲಿ ಮಲಪ್ಪುರಂ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ತಮಗೆ ಮೂರು …

ರಸ್ತೆ ಡಾಮರೀಕರಣ ವೇಳೆ ಕಾರ್ಮಿಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ರಸ್ತೆ ಡಾಮರೀಕರಣ ಕೆಲಸ ಮಧ್ಯೆ ಕಾರ್ಮಿಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಮೀಂಜ ಬಳಿ ನಡೆದಿದೆ. ಕಾಸರಗೋಡು ವಿದ್ಯಾನಗರ ನೆಲ್ಕಳ ಎಸ್.ಸಿ ಕಾಲನಿಯ ರಾಜನ್ ಎಂಬವರ ಪುತ್ರ ಶಾಜು (೩೬) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೂಡಂಬೈಲು ನಾಟೆ ಕಲ್ಲಿನಲ್ಲಿ ನಿನ್ನೆ ರಸ್ತೆ ಡಾಮರೀಕರಣ ಕೆಲಸ ನಡೆದಿದೆ. ಕೆಲಸ ನಡೆಯುತ್ತಿದ್ದಂತೆ ಸಂಜೆ ೪.೩೦ರ ವೇಳೆ ಶಾಜು ಕುಸಿದು ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು …

ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು: ನಿನ್ನೆ ನಾಪತ್ತೆಯಾಗಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆಯಾದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಹಳೆಯಂಗಡಿ ರೈಲ್ವೇ ಸೇತುವೆ ಬಳಿ ಮೃತದೇಹಗಳು ಪತ್ತೆಯಾಗಿದೆ. ಸುರತ್ಕಲ್‌ನ ಖಾಸಗಿ ಶಾಲೆಯೊಂದರ ೧೦ನೇ ತರಗತಿ ವಿದ್ಯಾರ್ಥಿಗಳಾದ ಯಶ್ವಿತ್ ಚಂದ್ರಕಾಂತ್, ರಾಘವೇಂದ್ರ, ನಿರೂಪ, ಅನ್ವಿತ್‌ರ ಮೃತದೇಹಗಳು ಇಂದು ಪತ್ತೆಯಾಗಿದೆ. ನಿನ್ನೆ ವಿದ್ಯಾರ್ಥಿಗಳು ಮಾದರಿ ಪರೀಕ್ಷೆ ಬರೆದು ಶಾಲೆಯಿಂದ ಮನೆಗೆ ಹಿಂತಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಂದಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಟ ನಡೆಸುತ್ತಿದ್ದ ಮಧ್ಯೆ ಹಳೆಯಂಗಡಿ ನದಿ ಬಳಿ ಬ್ಯಾಗ್, …

ಒಣಗಲು ಹಾಕಿದ್ದ ರಬ್ಬರ್ ಶೀಟ್ ಬೆಂಕಿಗಾಹುತಿ

ದೇಲಂಪಾಡಿ: ಇಲ್ಲಿಗೆ ಸಮೀಪದ ನೂಯಿಂವೀಡ್ ಎನ್.ಎ. ಯೂಸಫ್‌ರ ಮನೆ ಸಮೀಪದ ರಬ್ಬರ್ ಶೆಡ್‌ಗೆ ಬೆಂಕಿ ತಗಲಿ ಅಪಾರ ನಾಶ ಉಂಟಾಗಿದೆ.  ಇಲ್ಲಿ ಒಣಗಿಸಲು ಇಟ್ಟಿದ್ದ ೭೫ರಷ್ಟು ರಬ್ಬರ್ ಶೀಟ್ ಹಾಗೂ ಶೆಡ್‌ನ ಮಾಡು ಪೂರ್ಣವಾಗಿ ಹೊತ್ತಿ ಉರಿದಿದೆ. ಪರಿಸರದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಂಕಿ ತಗಲಿದ್ದು, ಸಮೀಪ ವಾಸಿಗಳು ಓಡಿ ಬಂದು ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಒಲೆಯಿಂದ ಬೆಂಕಿ ಹರಡಿರುವುದೋ ಅಥವಾ ಯಾರಾದರೂ ಕಿಚ್ಚಿರಿಸಿದ್ದೆ ಎಂಬ ಬಗ್ಗೆ ಸಂಶಯವಿದೆ ಎಂದು ಯೂಸಫ್ ತಿಳಿಸಿದ್ದಾರೆ. ಇಲ್ಲಿಂದ ನಾಲ್ಕು …

‘ವಂದೇ ಭಾರತ್’ ರೈಲಿನಲ್ಲಿ ಅನಿಲ ಸೋರಿಕೆ: ತಪ್ಪಿದ ಭಾರೀ ಅನಾಹುತ

ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿ ಯಲ್ಲಿ ದಿಢೀರ್ ಅನಿಲ ಸೋರಿಕೆ ಉಂಟಾಗಿದ್ದು,  ಸಂಭಾವ್ಯ ಭಾರೀ ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿದೆ. ಈ ರೈಲು ಇಂದು ಬೆಳಿಗ್ಗೆ ೭ ಗಂಟೆಗೆ ತಿರುವನಂತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿತ್ತು. ಅದು ಕಳಮಶ್ಶೇರಿ- ಆಲುವಾ ರೈಲು ನಿಲ್ದಾಣ ನಡುವೆ ತಲುಪಿದ ವೇಳೆ ಅದರ ಸಿ-೫ ಬೋಗಿಯಲ್ಲಿ ದಿಢೀರ್ ಆಗಿ ಹೊಗೆ ಕಾಣಿಸಿಕೊಂಡಿದೆ. ಆಗ ಅದರಲ್ಲಿದ್ದ ಪ್ರವಾಸಿಗರು ಒಮ್ಮೆಲೇ ಭಯಭೀತರಾದರು.  ಆಗ ಅವರಿಗೆ ಉಸಿರಾಟ ತೊಂದರೆಯೂ ಅನುಭವಗೊಳ್ತೊಡಗಿತು. ತಕ್ಷಣ …

ಕಾರು ಮರಕ್ಕೆ ಢಿಕ್ಕಿ ಮೂವರಿಗೆ ಗಾಯ

ಉಪ್ಪಳ: ಕಾರೊಂದು ನಿಯಂತ್ರಣ ತಪ್ಪಿ  ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಪೈವಳಿಕೆ ಬಳಿ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಕಾರಿನಲ್ಲಿದ್ದ ಮೂರು ಮಂದಿ ಗಾಯಗೊಂಡಿದ್ದಾರೆ. ಕಾಸರಗೋಡು ಭಾಗದಿಂದ ಬಾಯಾರು ಭಾಗಕ್ಕೆ ಆಗಮಿಸಿದ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಸಂಬಂಧಿಕರಾದ ಇಬ್ಬರು ಯುವಕರು ಹಾಗೂ ಓರ್ವೆ ಯುವತಿ ಇದ್ದರು. ಇವರನ್ನು  ನಾಗರಿಕರು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ.

ಲೋಕಸಭಾ ಚುನಾವಣೆ: ಕಾಸರಗೋಡಿನಲ್ಲಿ ಎಂ.ವಿ. ಬಾಲಕೃಷ್ಣನ್ ಎಡರಂಗ ಅಭ್ಯರ್ಥಿ

ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇರಳದಲ್ಲಿ ಇತರ ರಾಜಕೀಯ ಒಕ್ಕೂಟಗಳಿಗೆ ಮುಂಚಿತವಾಗಿಯೇ ಎಡರಂಗ ತನ್ನ ಅಭ್ಯರ್ಥಿಗಳ ಯಾದಿ ಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಚೆರುವತ್ತೂರು ಕೊವ್ವಚ್ಚಾಲ್ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಸಕ್ರಿಯ ರಾಜಕೀಯ ಸೇವೆಗೆ ಧುಮುಕಿದ್ದ ಎಂ.ವಿ. ಬಾಲಕೃಷ್ಣನ್‌ರನ್ನು ತಮ್ಮ ಉಮೇದ್ವಾರರನ್ನಾಗಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಘೋಷಿಸಿದ್ದಾರೆ. ಎಂ.ವಿ. ಬಾಲಕೃಷ್ಣನ್ ಈ ಹಿಂದೆ ಕಯ್ಯಾರು ಗ್ರಾಮ ಪಂಚಾಯತ್ …

ಅಪಾಯರೀತಿಯಲ್ಲಿ ಕಾರು ಚಲಾಯಿಸಿದ ಯುವಕನ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ನಾಗರಿಕರು

ಮುಳಿಯಾರು: ಅಪಾಯಕರವಾದ ರೀತಿಯಲ್ಲಿ ಅಪರಿಮಿತ ವೇಗದಲ್ಲಿ ಕಾರು ಚಲಾಯಿಸಿದ ಯುವಕನನ್ನು ನಾಗರಿಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿನ್ನೆ ರಾತ್ರಿ ಮುಳಿಯಾರು ಬಳಿಯ ಮಾಸ್ತಿ ಗುಡ್ಡೆಯಲ್ಲಿ ಘಟನೆ ನಡೆದಿದೆ. ಅಪಾಯಕರವಾದ ರೀತಿಯಲ್ಲಿ ಕಾರು ಚಲಾಯಿಸಿದ ಯುವಕನ ಕಾರನ್ನು ತಡೆದು ನಿಲ್ಲಿಸಿ ಸ್ಥಳೀಯರು, ಬಳಿಕ ಆದೂರು ಎಸ್.ಐಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಎಸ್.ಐ. ತಂಬಾನ್ ಹಾಗೂ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದಿದ್ದಾರೆ. ಕಾರನ್ನು ಕಸ್ಟಡಿಗೆ ತೆಗೆದಿದ್ದು, ಯುವಕ ಮದ್ಯಪಾನಗೈದಿರಬೇಕೆಂದು ಶಂಕಿಸಲಾಗಿದೆ.