ಯುವತಿಯನ್ನು ಬಿಗಿದಪ್ಪಿಕೊಂಡ ವ್ಯಕ್ತಿ ಬಂಧನ

ಬದಿಯಡ್ಕ: ಯುವತಿಯನ್ನು ಬಿಗಿದಪ್ಪಿಕೊಂಡ ಆರೋಪದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಶಂಕರಂಪಾಡಿ ಮಾಹಿಪಡ್ಪು ನಿವಾಸಿಯೂ ಪ್ರಸ್ತುತ ಬಾಡೂರಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿಬು ಕೆ.ವಿ (48) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ನಿನ್ನೆ 21ರ ಹರೆಯದ ಯುವತಿಯನ್ನು ಬಿಗಿದಪ್ಪಿಕೊಂಡಿರುವುದಾಗಿ ದೂರಲಾಗಿದೆ. ಈಬಗ್ಗೆ ಯುವತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯೋತ್ಸವ ವೇಳೆ ಪಟಾಕಿ ಸಿಡಿಸಿ ಮಕ್ಕಳು ಗಾಯಗೊಂಡ ಪ್ರಕರಣ: ಗೆದ್ದ ಅಭ್ಯರ್ಥಿ ಸೇರಿ 51 ಮಂದಿ ವಿರುದ್ಧ ಕೇಸು

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಮಕ್ಕಳು ಗಾಯಗೊಂಡ ಘಟನೆಗೆ ಸಂಬಂಧಿಸಿ ಚುನಾವಣೆಯಲ್ಲಿ ಗೆದ್ದ  ಅಭ್ಯರ್ಥಿ ಸೇರಿ ಒಟ್ಟು ೫೧ ಮಂದಿಯ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನಗರಸಭೆಯ ಕೋಟೆ ರಸ್ತೆ ವಾರ್ಡ್‌ನಲ್ಲಿ   ಯುಡಿಎಫ್‌ನ ಜಾಫರ್ ಕಮಾಲ್ ಗೆಲುವುಸಾಧಿಸಿದ್ದು ಫಲಿತಾಂಶ ಪ್ರಕಟಗೊಂಡ ಬಳಿಕ ಯುಡಿಎಫ್ ಕಾರ್ಯಕರ್ತರು ಜಾಫರ್ ಕಮಾಲ್‌ನೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿ ಗೆಲುವಿನ ಸಂಭ್ರಮ ಆಚರಿಸಿದ್ದರು.  …

ಗೆಳೆತನ ಬೆಳೆಸಿ ಮದ್ಯ ಸೇವಿಸಿ ಯುಎಸ್ ಪ್ರಜೆಗೆ ಹಲ್ಲೆ: ಚಿನ್ನ, ಹಣ ಅಪಹರಿಸಿದ ಯುವಕರು ಸೆರೆ

ಕೊಚ್ಚಿ: ಐಟಿ ಕಂಪೆನಿ ಆರಂಭಿಸ ಲಿರುವ ಚರ್ಚೆಗಳ ಮಧ್ಯೆ ಕೊಚ್ಚಿಗೆ ತಲುಪಿದ ಯುಎಸ್ ಪ್ರಜೆಯನ್ನು ಹೋಟೆಲ್ ಕೊಠಡಿಯಲ್ಲಿ ಬಂಧನ ಗೊಳಿಸಿ ಹಲ್ಲೆ ನಡೆಸಿ ಹಣವನ್ನು ಅಪಹರಿಸಿದ ಇಬ್ಬರು ಯುವಕರು ಸೆರೆಯಾಗಿದ್ದಾರೆ. ಮುಳಂದುರುತ್ತಿ ನಿವಾಸಿ ಆದರ್ಶ್, ಪಳ್ಳುರುತ್ತಿ ನಿವಾಸಿ ಆಕಾಶ್ ಎಂಬಿವರನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಹಲವಾರು ಕ್ರಿಮಿನಲ್ ಪ್ರಕರಣ ಗಳಲ್ಲಿ ಇವರು ಆರೋಪಿಯಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಯುಎಸ್ ಪ್ರಜೆ ಹಾಗೂ ನ್ಯೂಯೋರ್ಕ್‌ನಲ್ಲಿ ಐಟಿ ಪ್ರೊಫೆಶನಲ್ ಆಗಿರುವ ಒಡಿಶ್ಶಾ ನಿವಾಸಿ ಇನ್ಫೋ ಪಾರ್ಕ್‌ನಲ್ಲಿ …

ಶೋಚನೀಯ ಸ್ಥಿತಿಯಲ್ಲಿರುವ ಮೀನು ಮಾರುಕಟ್ಟೆಗೆ ಹೊಸ ನಗರಸಭಾ ಆಡಳಿತ ಸಮಿತಿಯಿಂದ ಮುಕ್ತಿ ದೊರಕುವ ನಿರೀಕ್ಷೆ

ಕಾಸರಗೋಡು: ನಗರದ ಮೀನು ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನವೀಕರಿಸುವ ಕಳೆದ ನಗರಸಭೆಯ ತೀರ್ಮಾನ ಕಾಗದಕ್ಕೆ ಸೀಮಿತಗೊಂಡಿರುವುದು ನಗರಸಭಾ ಚುನಾವಣೆಯಲ್ಲಿ ಚರ್ಚೆಯಾಗಿತ್ತು.  ಕಾಸರಗೋಡು ನಗರದ ಮಧ್ಯಭಾಗದಲ್ಲಿರುವ ಮೀನು ಮಾರುಕಟ್ಟೆಯ ಶೋಚನೀಯಾವಸ್ಥೆ ಬಗ್ಗೆ ಹಲವು ಬಾರಿ ಮೀನು ಮಾರಾಟಗಾರರು, ಸಮೀಪದ ವ್ಯಾಪಾರಿಗಳು ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿಯೇ ಮೀನು ಮಾರಾಟ, ಸ್ಥಳದ ಇತಿಮಿತಿಯಿಂದಾಗಿ ಉಸಿರುಗಟ್ಟಿಸುವಂತಹ ವಾತಾವರಣ ಈಗ ಮೀನು ಮಾರುಕಟ್ಟೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಆಡಳಿತ ಸಮಿತಿಯ ಕಾಲದಲ್ಲಿ ಜ್ಯಾರಿಯಾಗದ ನವೀಕರಣ ಕೆಲಸಗಳಿಂದಾಗಿ ಮೀನು ಕಾರ್ಮಿಕರು ಚುನಾವಣೆಯಲ್ಲಿ …

ಸಿಪಿಎಂ- ಬಿಜೆಪಿ ಒಳ ಒಪ್ಪಂದದ ದುರಾಡಳಿತಕ್ಕೆ ಕೊಟ್ಟ ಉತ್ತರ ಯುಡಿಎಫ್ ಗೆಲುವು- ಕಾಂಗ್ರೆಸ್

ಪೈವಳಿಕೆ: ಪೈವಳಿಕೆ ಪಂಚಾಯತ್‌ನಲ್ಲಿ ಕಳೆದ ಐದು ವರ್ಷಗಳಿಂದ ಸಿ.ಪಿ.ಎಂ. ಹಾಗೂ ಬಿ.ಜೆ.ಪಿ. ಒಳ ಒಪ್ಪಂದ ಮೂಲಕ ನಡೆಸಿಕೊಂಡು ಬಂದ ದುರಾಡಳಿತಕ್ಕೆ ಜನತೆ ತಕ್ಕ ಉತ್ತರ ನೀಡುವ ಮೂಲಕ ಐಕ್ಯರಂಗ ಹೆಚ್ಚು ಸ್ಥಾನಗಳನ್ನು ಪಡೆಯಲು ಕಾರಣವಾಯಿತು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ತಿಳಿಸಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪಂ.ಮಜಿರ್ಪಳ್ಳ ಡಿವಿಶನ್ ನಿಂದ ಆಯ್ಕೆಯಾದ ಮೋಹನ ರೈ ಕಯ್ಯಾರು ಹಾಗೂ ವಿವಿಧ ವಾರ್ಡ್ ಗಳಲ್ಲಿ ಆಯ್ಕೆಯಾದ ರಾಘವೇಂದ್ರ …

ಯುಡಿಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿಯಾಗಿ ಲಕ್ಷ್ಮಣ ಪ್ರಭು ಕುಂಬಳೆ ನೇಮಕ

ಕುಂಬಳೆ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಯುಡಿಎಫ್ ಕಾರ್ಯ ದರ್ಶಿಯಾಗಿ ಕಾಂಗ್ರೆಸ್‌ನ ನೇತಾರ ಲಕ್ಷ್ಮಣ ಪ್ರಭು ಕುಂಬಳೆ ಆಯ್ಕೆಯಾಗಿ ದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕ ಇವರನ್ನು ನೇಮಕಗೊಳಿಸಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಐಕ್ಯರಂಗದ ಪ್ರಚಂಡ ಗೆಲುವು ಹಿನ್ನೆಲೆಯಲ್ಲಿ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಡಿಸಿಸಿ ಈ ನೇಮಕಾತಿ ನಡೆಸಿದೆ. ಕಾಂಗ್ರೆಸ್ ಕುಂಬಳೆ ಪಂ. ಘಟಕ ಉಪಾಧ್ಯಕ್ಷ, ಐಎನ್‌ಟಿಯುಸಿ ಮಂಡಲ ಅಧ್ಯಕ್ಷ, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ, ಬ್ಲೋಕ್ ಅಧ್ಯಕ್ಷ ಮೊದಲಾದ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಪುತ್ತಿಗೆ ಜಿಲ್ಲಾ ಪಂಚಾಯತ್ …

ಸಂತಡ್ಕ ಮಾಡ ಕ್ಷೇತ್ರದ ವಾರ್ಷಿಕ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಶ್ರೀ ಕ್ಷೇತ್ರ ಸಂತಡ್ಕ ಮಾಡದ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 20ರಿಂದ 23ರವರೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರಾಡಳಿತ ಟ್ರಸ್ಟ್ನ ಅಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿ ಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಶ್ವರ ವಸಂತ ಭಟ್ ತೊಟ್ಟೆತ್ತೋಡಿ, ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೈವದ ಹೊಡೆತದಿಂದ ಯುವಕನಿಗೆ ಗಾಯ : ಸಾಮಾಜಿಕ ತಾಣದಲ್ಲಿ ದೃಶ್ಯ ವೈರಲ್

ಕಾಸರಗೋಡು: ಪಳ್ಳಿಕ್ಕೆರೆಯ ಕ್ಷೇತ್ರವೊಂದರಲ್ಲಿ  ಉತ್ಸವ ವೇಳೆ ದೈವದ  ಹೊಡೆತದಿಂದ ಯುವಕನೋರ್ವ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ ಹರಿದಾಡುತ್ತಿದೆ. ನೀಲೇಶ್ವರ ಪಳ್ಳಿಕ್ಕೆರೆ ಪಾಲರೆಕೀಳಿಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ದೈವದರ್ಶನ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಮೊನ್ನೆ ರಾತ್ರಿ ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ  ದೈವ ಹೊಡೆದಿರುವುದಾಗಿಯೂ ಈ ವೇಳೆ ಗಾಯಗೊಂಡು ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ.  ನೀಲೇಶ್ವರ ನಿವಾಸಿ ಮನು ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಭಯಪಡಿಸುವ ಆಚಾರದ ಅಂಗವಾಗಿ …

ಸ್ಥಳೀಯಾಡಳಿತ ಚುನಾವಣೆಯ ಲೆಕ್ಕಾಚಾರ: 80 ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್, 58ರಲ್ಲಿ ಎಡರಂಗ ಮುನ್ನಡೆ ; ಎರಡರಲ್ಲಿ ಎನ್‌ಡಿಎ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ  ಹೊರಬಂದಾಗ ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ 80ರಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಆಡಳಿತ ಒಕ್ಕೂಟವಾದ ಎಡರಂಗಕ್ಕೆ ೫೮ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಎgಡು ವಿಧಾನಸಭಾ ಕ್ಷೇತ್ರಗಳಲ್ಲಿ  ಮುನ್ನಡೆ ಸಾಧಿಸಿದೆ. ತಿರುವನಂತಪುರ ಜಿಲ್ಲೆಯ ನೇಮಂ ಮತ್ತು ವಟ್ಟಿಯೂರು ಕಾವು  ಎಂಬಿವುಗಳಿಗೆ ಬಿಜೆಪಿ (ಎನ್‌ಡಿಎ) ಮುನ್ನಡೆ ಸಾಧಿಸಿರುವ ವಿಧಾನಸಭಾ ಕ್ಷೇತ್ರಗಳಾಗಿವೆ. ಮಲಪ್ಪುರಂ, ವಯನಾಡು, ಪತ್ತನಂತಿಟ್ಟ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಯುಡಿಎಫ್  …

ಬೈಕ್- ಕಾರು ಢಿಕ್ಕಿ: ಹೇರೂರು ನಿವಾಸಿ ಯುವಕನಿಗೆ ಗಂಭೀರ ಗಾಯ

ಉಪ್ಪಳ: ಉದ್ಯಾವರ ಹತ್ತನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು-ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ವಾಹನ ಅಪಘಾತದಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹೇರೂರು ನಿವಾಸಿ ಮೊಹಮ್ಮದ್ ಅಶ್ರಫ್ (30) ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 12.45ರ ವೇಳೆ ಅಪಘಾತವುಂ ಟಾಗಿದೆ. ಮೊಹಮ್ಮದ್ ಅಶ್ರಫ್  ಬೈಕ್‌ನಲ್ಲಿ ತಲಪಾಡಿ ಭಾಗದಿಂದ ಮಂಜೇಶ್ವರ ಭಾಗಕ್ಕೆ ಬರುತ್ತಿದ್ದ ವೇಳೆ ಮಂಗಳೂರು ಭಾಗಕ್ಕೆ  ಶಬರಿಮಲೆ ತೀರ್ಥಾಟಕರು ಸಂಚರಿಸುತ್ತಿದ್ದ  ಕಾರು ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.