ರಾಷ್ಟ್ರೀಯ ಹೆದ್ದಾರಿ : ಕುಂಬಳೆಯಲ್ಲಿ ಟೋಲ್ ಸಂಗ್ರಹರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆ-ಹೈಕೋರ್ಟ್ 

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕುಂಬಳೆ ಆರಿಕ್ಕಾಡಿಯಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆಂದು ಹೈಕೋರ್ಟ್ ಪ್ರಶ್ನಿಸಿದೆ. ಕ್ರಿಯಾ ಸಮಿತಿ ಕನ್ವೀನರ್ ಅಶ್ರಫ್ ಕಾರ್ಳೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಪ್ರಶ್ನೆಯನ್ನು ಮುಂದಿರಿಸಿದೆ. ಇದೇ ವೇಳೆ  ಆಯೋಗವನ್ನು ನೇಮಿಸಬೇಕೆಂಬ ಅರ್ಜಿಯನ್ನು ಕ್ರಿಯಾಸಮಿತಿ ಮುಂದಿರಿಸಿದ್ದು ಅದನ್ನು ರಾಷ್ಟ್ರೀಯ ಹೆದ್ದಾರಿ ಅಥೋರಿಟಿಗಾಗಿ ಹಾಜರಾದ ನ್ಯಾಯವಾದಿ ವಿರೋಧಿಸಿದ್ದಾರೆ. ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ಅಧ್ಯಕ್ಷರಾಗಿರುವ ಏಕ ಸದಸ್ಯ ಪೀಠ ಈ ಪ್ರಕರಣವನ್ನು ಪರಿಗಣಿಸುತ್ತಿದೆ. ಅರ್ಜಿಯ ಮೇಲೆ …

ರೈಲಿನ ಶೌಚಾಲಯದೊಳಗೆ ಬಾಗಿಲು ಮುಚ್ಚಿ ಕುಳಿತುಕೊಂಡ ಯುವಕ-ಯುವತಿ: ಪ್ರಯಾಣಿಕರಿಂದ ತರಾಟೆ

ಕೊಚ್ಚಿ: ರೈಲಿನ ಶೌಚಾಲಯ ದೊಳಗೆ ಹೋದ ಯುವಕ ಹಾಗೂ ಯುವತಿ ಎರಡು ಗಂಟೆಗಳ ಕಾಲ ಬಾಗಿಲು ಮುಚ್ಚಿ ಒಳಗಿದ್ದುದಾಗಿ ದೂರಲಾಗಿದೆ. ಇದರಿಂದ ಇತರ ಪ್ರಯಾಣಿಕರಿಗೆ ಶೌಚಾಲಯವನ್ನು ಬಳಸಲು ಸಾಧ್ಯವಾಗದೇ ಇದ್ದುದರಿಂದ ಬಾಗಿಲು ಬಡಿದು ಬೊಬ್ಬೆ ಹಾಕಿದರೂ ಯುವಕ-ಯುವತಿ ಹೊರಗೆಬಂದಿಲ್ಲ. ಕೊನೆಗೆ  ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಶೌಚಾಲಯದ ಬಾಗಿಲು ತೆರೆದಿದ್ದು ಆದರೆ ಏನೂ ಸಂಭವಿಸಿಲ್ಲವೆಂಬ ರೀತಿಯಲ್ಲಿ ಯುವಕ-ಯುವತಿ ವರ್ತಿಸಿರುವುದಾಗಿ ದೂರಲಾಗಿದೆ. ಇದೇ ವೇಳೆ ಯುವಕ ಹಾಗೂ ಯುವತಿ ಶೌಚಾಲಯದೊಳಗೆ  ಅವಿತುಕೊಂಡು ಇತರ ಪ್ರಯಾಣಿಕರು ಬಾಗಿಲು ಬಡಿಯುವ …

ಅಧಿಕಾರಿಗಳ ಅನಾಸ್ಥೆಕುಂಬ್ಡಾಜೆ- ನೇರಪ್ಪಾಡಿ ತೂಗುಸೇತುವೆ ಅಪಾಯ ಭೀತಿಯಲ್ಲಿ

ಕುಂಬ್ಡಾಜೆ: ಶಾಲಾ ವಿದ್ಯಾರ್ಥಿಗಳು ಸಹಿತ ಸ್ಥಳೀಯರು ನಿರಂತರ ಆಶ್ರಯಿಸುವ ತೂಗುಸೇತುವೆಯೊಂದು ಜೀರ್ಣಾವಸ್ಥೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಸೃಷ್ಟಿಯಾಗಿದೆ. ಕುಂಬ್ಡಾಜೆ ನೇರಪ್ಪಾಡಿಯನ್ನು ಸಂಪರ್ಕಿಸುವ ಈ ತೂಗುಸೇತುವೆ ಜೀರ್ಣಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಿಲ್ಲ. ಅಧಿಕಾರಿಗಳು ಈ ಸೇತುವೆಯ ಬಗ್ಗೆ ನಿರಾಸಕ್ತಿ ವಹಿಸುತ್ತಿರುವುದಾಗಿಯೂ ದೂರಲಾಗಿದೆ. ದಿನಂಪ್ರತಿ ೧೦೦ಕ್ಕೂ ಅಧಿಕ ಪ್ರಯಾಣಿಕರು ಈ ಮೂಲಕ ಸಾಗುತ್ತಿದ್ದಾರೆ. ಹಲವಾರು ಶಾಲೆಗಳಿಗೆ ವಿದ್ಯಾರ್ಥಿಗಳು, ವಿವಿಧ …

ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಹೆಚ್ಚಳ ವಿರುದ್ಧ  ಕೇರಳ ಸಾರಿಗೆ ಸಚಿವರಿಗೆ ಶಾಸಕ ಎಕೆಎಂ ಅಶ್ರಫ್‌ರಿಂದ ಮನವಿ

ತಿರುವನಂತಪುರ:  ಕಾಸರಗೋಡು-ಮಂಗಳೂರು ಮಧ್ಯೆ ಸಂಚಾರ ನಡೆಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ ದರವನ್ನು ದಿಢೀರ್ ಹೆಚ್ಚಿಸಿರುವ ಕರ್ನಾಟಕ ಸರಕಾರದ ಕ್ರಮದ ಬಗ್ಗೆ ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕೇರಳ ರಾಜ್ಯ ಸಾರಿಗೆ  ಸಚಿವ ಗಣೇಶ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.  ಕರ್ನಾಟಕದ ಆರ್ಡಿನರಿ ಸಾರಿಗೆ  ಬಸ್‌ಗಳಲ್ಲಿ 7 ರೂಪಾಯಿ, ರಾಜಹಂಸ ಬಸ್‌ನಲ್ಲಿ 10 ರೂಪಾಯಿ ಹೆಚ್ಚಿಸಲಾಗಿದೆ. ಕರ್ನಾಟಕದ  42 ಬಸ್‌ಗಳು ಆರಿಕ್ಕಾಡಿ ಟೋಲ್ ಪ್ಲಾಸಾ ಮೂಲಕ ಸಂಚರಿಸುತ್ತಿವೆ. ಕಾಸರಗೋಡಿನಿಂದ ಮಂಗಳೂರಿಗೆ …

ದರ್ಸ್ ವಿದ್ಯಾರ್ಥಿ ನಾಪತ್ತೆ

ಉಪ್ಪಳ: ದರ್ಸ್ ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ  ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆ ಯಾದ ವಿದ್ಯಾರ್ಥಿಯಾಗಿದ್ದಾನೆ.  ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂ ಬಕ್ಕರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂ ಭಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್  ಮನೆಯಲ್ಲೇ ಇದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.

ದೀಪಕ್‌ ಆತ್ಮಹತ್ಯೆ: ಆರೋಪಿ ಶಿಂಜಿತ ಮುಸ್ತಫ ಸೆರೆ

ಕಲ್ಲಿಕೋಟೆ: ಬಸ್‌ನಲ್ಲಿ ಲೈಂಗಿಕ ಆಕ್ರಮಣ ನಡೆಸಿರುವುದಾಗಿ ಪ್ರಚಾರಗೊಂಡ ಬೆನ್ನಲ್ಲೇ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಶಿಂಜಿತ ಮುಸ್ತಫ ಸೆರೆಯಾಗಿದ್ದಾಳೆ. ವಡಗರದ ಸಂಬಂಧಿಕರ ಮನೆಯಿಂದ ಯುವತಿ ಸೆರೆಗೀಡಾಗಿದ್ದಾಳೆ. ಈಕೆಯನ್ನು ಕೂಡಲೇ ಮೆಡಿಕಲ್ ಕಾಲೇಜು ಪೊಲೀಸರು ಠಾಣೆಗೆ ಕೊಂಡೊಯ್ದರು. ದೇಶ ಬಿಟ್ಟು ಪರಾರಿಯಾಗದಿರಲು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಪೊಲೀಸರು ಶಿಂಜಿತಾಳ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಿದ್ದರು. ಇದರ ಬೆನ್ನಲ್ಲೇ ಶಿಂಜಿತ ಕಲ್ಲಿಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ನೀಡಿದ್ದಳು. ಜಾಮೀ ನುರಹಿತ ಕಾಯ್ದೆ ಹೇರಿ ಶಿಂಜಿತಳ …

ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಸಮ್ಮೇಳನಕ್ಕೆ ಇಂದು ಸಂಜೆ ಚಾಲನೆ

ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ತಿನ 47ನೇ ರಾಜ್ಯ ಸಮ್ಮೇಳನಕ್ಕೆ ಎನ್‌ಟಿಯು ಜಿಲ್ಲಾ ಕಾರ್ಯಾಲಯದಲ್ಲಿ  ಇಂದು ಸಂಜೆ ೫ ಗಂಟೆಗೆ ಸಂಘಟನೆಯ ಸಂಪೂರ್ಣ ರಾಜ್ಯ ಸಮಿತಿಯ ಸಭೆಯೊಂದಿಗೆ ಚಾಲನೆ ದೊರಕಲಿದೆ. ಈ ಸಭೆಯನ್ನು ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹಕ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸುವರು. ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸುವರು. ನಾಳೆ ಬೆಳಿಗ್ಗೆ 9.30ಕ್ಕೆ  ಕಾಸರಗೋಡು ಟೌನ್ ಹಾಲ್ (ಜಯಕೃಷ್ಣನ್ ಮಾಸ್ತರ್ ನಗರ)ದಲ್ಲಿ ರಾಜ್ಯಾಧ್ಯಕ್ಷೆ ಕೆ. ಸ್ಮಿತ  ಧ್ವಜಾರೋಹಣ ಗೈಯ್ಯುವರು. ನಂತರ ನಡೆಯುವ ಪ್ರತಿನಿಧಿ ಸಭೆಯನ್ನು …

ಗಲ್ಫ್ ಉದ್ಯೋಗಿಯ ಪತ್ನಿಗೆ ಕಿರುಕುಳ : ಮೀನು ಮಾರಾಟಗಾರ ಬಂಧನ

ಬದಿಯಡ್ಕ: ಗಲ್ಫ್ ಉದ್ಯೋಗಿಯ ಪತ್ನಿಗೆ ಮದುವೆ ಭರವಸೆಯೊಡ್ಡಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಮೀನು ಮಾರಾಟಗಾರನ ವಿರುದ್ಧ ಬದಿಯಡ್ಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ನೀರ್ಚಾಲು ಬೀಜಂತಡ್ಕ ನಿವಾಸಿಯಾದ ಅಬ್ದುಲ್ ಖಾದರ್ (45) ಎಂಬಾತನನ್ನು   ಬಂಧಿಸಲಾ ಗಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 38ರ ಹರೆಯದ ಯುವತಿ ನೀಡಿದ ದೂರಿನಂತೆ ಪೊಲೀಸರು   ಅಬ್ದುಲ್ ಖಾದರ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 2025 ಅಗೋಸ್ತ್ 1ರಿಂದ …

ಡೆಂಗ್ಯು ಜ್ವರ: ಕಾರಡ್ಕ ನಿವಾಸಿ ನಿಧನ

ಮುಳ್ಳೇರಿಯ: ಕಾರಡ್ಕ ಮುಂಡೋಳು ಜಂಕ್ಷನ್‌ನಲ್ಲಿ  ಈ ಮೊದಲು ಆಟೋ ಚಾಲಕನಾಗಿದ್ದು, ಈಗ ಬೆಂಗಳೂರಿನ ಕಂಪೆನಿ ಯೊಂದರ ವಾಹನದಲ್ಲಿ ಚಾಲಕ ನಾಗಿ ದುಡಿಯುತ್ತಿದ್ದ ಪ್ರಭಾಕರನ್ (52) ನಿಧನ ಹೊಂದಿದರು. ಬೆಂಗಳೂರಿನಲ್ಲಿ ಜ್ವರ ತಗಲಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಊರಿಗೆ ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮುಳ್ಳೇರಿಯ ನಿವಾಸಿಯಾದ ಇವರು ಮೂಡಾಂಕುಳಂ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಪ್ರಭಾ, ಮಕ್ಕಳಾದ ಅನಘ, ಅನುನಂದ್, ಸಹೋದರರಾದ ಬಾಲಕೃಷ್ಣನ್, ನಾರಾಯಣನ್, ಕುಂಞಂಬು, ಸಹೋದರಿಯರಾದ ಕಮಲಾಕ್ಷಿ, …

ಚಿನ್ನದ ಬೆಲೆ ಇಂದು  ಪವನ್‌ಗೆ  ಹೆಚ್ಚಿದ್ದು 3680 ರೂ.

ಕಾಸರಗೋಡು: ರಾಜ್ಯದಲ್ಲಿ  ಚಿನ್ನದ ಬೆಲೆಯಲ್ಲಿ ಇಂದು ಕೂಡಾ ಭಾರೀ ಹೆಚ್ಚಳ ಉಂಟಾಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಇಂದು ಗ್ರಾಂಗೆ 460 ರೂಪಾಯಿಗಳ ಹೆಚ್ಚಳ ಉಂಟಾಗಿದೆ. ಇದರೊಂದಿಗೆ  1 ಗ್ರಾಂ ಚಿನ್ನಕ್ಕೆ 14,190 ರೂಪಾಯಿ ಹಾಗೂ 1  ಪವನ್‌ಗೆ 1,13,520 ರೂ.ಗೇರಿದೆ. ಅಂತಾರಾಷ್ಟ್ರೀಯ ಘರ್ಷಣೆ ಹೆಚ್ಚುತ್ತಿರುವುದರಿಂದ  ಚಿನ್ನದ ಬೆಲೆಯಲ್ಲಿ ಇನ್ನೂ ಹೆಚ್ಚಳವಾಗುವ ಸೂಚನೆಯಿದೆ ಯೆಂದು ಹೇಳಲಾಗುತ್ತಿದೆ.  ನಿನ್ನೆಯೂ ಚಿನ್ನದ ಬೆಲೆಯಲ್ಲಿ 3160 ರೂ. ಹೆಚ್ಚಳವಾಗಿ ಪವನ್‌ಗೆ 1,10,400 ರೂ. ಆಗಿತ್ತು.  ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡುಬಾರಿಯಾಗಿ ಬೆಲೆ …