ಕುಂಟಂಗೇರಡ್ಕ ನಿವಾಸಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ:  ಕುಂಟಂಗೇರಡ್ಕ ನಿವಾಸಿಯಾದ ಗಲ್ಫ್ ಉದ್ಯೋಗಿ ಚೇರಂಗೈಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಟಂಗೇರಡ್ಕದ ಮೊಹಿಯುದ್ದೀನ್‌ರ ಪುತ್ರ ಮುಹಮ್ಮದ್ ಅಮಾನುಲ್ಲ (61) ಮೃತ ವ್ಯಕ್ತಿ. ನಿನ್ನೆ ರಾತ್ರಿ ೮.೩೦ರ ವೇಳೆ ಕಾಸರಗೋಡು ಚೇರಂಗೈ ರೈಲ್ವೇ ಹಳಿಯಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಕಾಸರಗೋಡು ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹ ವನ್ನು ಜನರಲ್ ಆಸ್ಪತ್ರೆಯ ಶವಾಗಾ ರಕ್ಕೆ ತಲುಪಿಸಿದ್ದಾರೆ. ಒಂದು ವರ್ಷದ ಹಿಂದೆ ಅಮಾನುಲ್ಲ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಮರಳಿ ಹೋಗುವ …

ಮುಳ್ಳೇರಿಯದಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಮುಳ್ಳೇರಿಯ ಜಿವಿಎಚ್‌ಎಸ್‌ಎಸ್‌ನಲ್ಲಿ ಆರಂಭಗೊಂಡಿತು. ಇಂದು ಬೆಳಿಗ್ಗೆ ಶಾಲಾ ಪ್ರಾಂಶುಪಾಲೆ ಸುಧಾ ಎ.ವಿ. ಧ್ವಜಾರೋಹಣ ನಡೆಸುವ ಮೂಲಕ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ  ಪಿಟಿಎ ಅಧ್ಯಕ್ಷ ಸತೀಶ್, ಕಾರ್ಯಕ್ರಮದ ಜನರಲ್ ಕನ್ವೀನರ್ ಶಾಹುಲ್ ಹಮೀದ್ ಮಾಸ್ಟರ್, ವಿಎಚ್‌ಎಸ್‌ಇ ಪ್ರಾಂಶುಪಾಲ ಕುರಿಯನ್, ಎಸ್‌ಎಂಸಿ ಚೆಯರ್‌ಮೆನ್ ಮೋಹನ್ ಮೊದಲಾದವರು ಉಪಸ್ಥಿತ ರಿದ್ದರು. ಉಪಜಿಲ್ಲೆಯ 98 ಶಾಲೆಗಳಿಂದ 6000ದಷ್ಟು ಮಕ್ಕಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಂಗವಾಗಿ ನಿನ್ನೆ ಮುಳ್ಳೇರಿಯ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಿತು. …

ಜೀಪಿನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ ಪ್ರಕರಣ: ಆರೋಪಿಗಳಿಗೆ 2 ವರ್ಷ ಕಠಿಣ ಸಜೆ; 30,000 ರೂ. ದಂಡ

ಕಾಸರಗೋಡು: ಬೊಲೇರೊ ಜೀಪಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಕಿಲೋ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 30,000 ರೂ. ದಂಡ ವಿಧಿಸಿದೆ. ಕಣ್ಣೂರು ಮಟ್ಟನ್ನೂರಿನ ವಾಯಂತೋಡ್ ರಫ್ಶಾನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರನೀಸ್ (36), ಮಟ್ಟನ್ನೂರು ಇಲ್ಲಮೂಲ ರುಮೈಸ ಮಂಜಿಲ್‌ನ ಮಹ್‌ರೂಫ್ (36) ಎಂಬಿವರಿಗೆ ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಷನ್ಸ್ ನ್ಯಾಯಾಲಯ (ಎರಡು)ದ ನ್ಯಾಯಾಧೀಶೆ ಕೆ. ಪ್ರಿಯ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿಗಳು ಮೂರು ತಿಂಗಳು ಹೆಚ್ಚುವರಿ ಶಿಕ್ಷೆ …

ಪೋಕ್ಸೋ ಪ್ರಕರಣ: 9 ವರ್ಷದ ಬಳಿಕ ಆರೋಪಿ ಸೆರೆ

ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು 9 ವರ್ಷಗಳ ಬಳಿಕ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕಣ್ಣಾಪುರ ದೇಳಿ ಜಂಕ್ಷನ್‌ನ ಮುಬಾಶಿರ್ ಮಂಜಿಲ್‌ನ ಎಂ.ಎಂ. ಮುಹಮ್ಮದ್ ಮುಬಾಶಿರ್ (29) ಬಂಧಿತ ಆರೋಪಿ. ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಈತ ವಿದೇಶದಲ್ಲಿದ್ದನೆಂದೂ ಬಳಿಕ ಅಲ್ಲಿಂದ ಊರಿಗೆ ಹಿಂತಿರುಗಿದ ನಂತರ ಆತನನ್ನು ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ಪೋಕ್ಸೋ ಪ್ರಕರಣದಲ್ಲಿ ಒಟ್ಟು 7 ಮಂದಿ  ಆರೋಪಿಗಳಿದ್ದು …

ರಾಜ್ಯ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕಾವಿನಲ್ಲಿ: ಕಾಸರಗೋಡಿನಲ್ಲಿ ಡಿ. 11ರಂದು ಮತದಾನ: ಮತ ಎಣಿಕೆ ಡಿ. 13ರಂದು

ತಿರುವನಂತಪುರ: ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ರಾಜ್ಯ ಚುನಾವಣಾಧಿಕಾರಿ ಎ. ಶಾಜಹಾನ್ ನಿನ್ನೆ ವಿದ್ಯುಕ್ತವಾಗಿ ಘೋಷಿಸಿರುವ ಬೆನ್ನಲ್ಲೇ ರಾಜ್ಯ ಚುನಾವಣಾ ಕಾವಿನತ್ತ ಸಾಗತೊಡಗಿದೆ. ಡಿಸೆಂಬರ್ 9 ಮತ್ತು 11 ಎಂಬೀ ಎರಡು ಹಂತಗಳಲ್ಲಾಗಿ ಮತದಾನ ನಡೆಯಲಿದೆ. ಡಿಸೆಂಬರ್ 13ರಂದು ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 7ರಿಂದ ಸಂಜೆ 6ರ ತನಕ ಮತದಾನದ ಸಮಯ ನಿಗದಿಪಡಿಸ ಲಾಗಿದ. ಪ್ರಥಮ ಹಂತದಲ್ಲಿ ಡಿ. 9ರಂದು ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಇಡುಕ್ಕಿ ಮತ್ತು ದ್ವಿತೀಯ ಹಂತದಲ್ಲಿ ಡಿ.11 …

ರಾಷ್ಟ್ರೀಯ ಸಹಕಾರಿ ನೀತಿಯನ್ನು ಕೇರಳದಲ್ಲಿ ಜ್ಯಾರಿಗೊಳಿಸಬೇಕು- ಸಹಕಾರ ಭಾರತಿ

ಮುಳ್ಳೇರಿಯ: ಕೇಂದ್ರ ಸಹಕಾರಿ ಸಚಿವಾಲಯ ಘೋಷಿಸಿದ ರಾಷ್ಟ್ರೀಯ ಸಹಕಾರಿ ನೀತಿಯನ್ನು ಕೇರಳದಲ್ಲಿ ಜ್ಯಾರಿಗೊಳಿಸಲು ಕೇರಳ ಸರಕಾರ ಸಿದ್ಧವಾಗಬೇಕೆಂದು ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ನ್ಯಾ| ಕೆ. ಕರುಣಾಕರನ್ ಆಗ್ರಹಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಜರಗಿದ ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಭ್ಯಾಸವರ್ಗದಲ್ಲಿ ಮುಖ್ಯ ಭಾಷಣ ಮಾಡಿ ಅವರು ಈ ಬಗ್ಗೆ ತಿಳಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುವ ಸಹಕಾರಿ ಸಂಘದ ಅಭಿವೃದ್ಧಿಗೆ ರಾಷ್ಟ್ರೀಯ ಸಹಕಾರಿ ನೀತಿ ಸಹಾಯಕವಾಗಲಿದೆ. ಸಹಕಾರಿ ನೀತಿಯಲ್ಲಿ ಘೋಷಿಸಿದ ಸೌಲಭ್ಯ ಗಳನ್ನು …

ನಕಲಿ ಮತದಾರರನ್ನು ಸೇರಿಸಲು ಲೀಗ್ ಯತ್ನಿಸುತ್ತಿದೆ ಎಂದು ಆರೋಪಿಸಿ ನಗರಸಭೆಗೆ ಸಿಪಿಎಂ ಮಾರ್ಚ್

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ನಕಲಿ ಮತದಾರರನ್ನು ಮತದಾರರ ಯಾದಿಗೆ ಸೇರ್ಪಡೆಗೊಳಿಸಲು ಮುಸ್ಲಿಂ ಲೀಗ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಿಪಿಎಂ ನಗರಸಭಾ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಿತು. ಚುನಾವಣೆಯ ಪೂರ್ವಭಾವಿಯಾಗಿ ಮತ್ತೊಮ್ಮೆ ಮತದಾರರನ್ನು ಸೇರ್ಪಡೆಗೊಳಿಸಲು ನೀಡಿದ ಅವಕಾಶದ ಲಾಭ ಪಡೆದು ಮುಸ್ಲಿಂ ಲೀಗ್ ಈ ಯತ್ನ ನಡೆಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಪ್ರಧಾನ ಅಂಚೆ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್‌ಗೆ ನಗರಸಭಾ ದ್ವಾರದ ಬಳಿ ಪೊಲೀಸರು ತಡೆಯೊಡ್ಡಿದರು. ಮಾರ್ಚ್ ಹಾಗೂ ಧರಣಿಯನ್ನು ಜಿಲ್ಲಾ ಸಮಿತಿ ಸದಸ್ಯ ಟಿ.ಕೆ. …

ಚುನಾವಣೆ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಪರೀಕ್ಷೆಯಲ್ಲಿ ಬದಲಾವಣೆ ಸಾಧ್ಯತೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ  ಹಿನ್ನೆಲೆಯಲ್ಲಿ ರಾಜ್ಯದ ಸಾರ್ವತ್ರಿಕ ಶಿಕ್ಷಣ ಸಂಸ್ಥೆಗಳ ಕ್ರಿಸ್ಮಸ್ ಪರೀಕ್ಷೆಗಳ ದಿನಾಂಕಗಳಲ್ಲಿ ಬದಲಾವಣೆ ಯಾಗಲಿದೆ. ಅಕಾಡೆಮಿಕ್ ಕ್ಯಾಲೆಂಡರ್ ಅನುಸಾರ ದ. 11ರಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗುವುದಾದರೂ  9, 11ರಂದುಮತದಾನ, 13ರಂದು ಮತ ಎಣಿಕೆ ಘೋಷಿಸಿದ ಹಿನ್ನೆಲೆಯಲ್ಲಿ ದಶಂಬರ ಪ್ರಥಮ ವಾರದಲ್ಲೇ ಪರೀಕ್ಷೆ ನಡೆಸಲು ಸಾಧ್ಯತೆ ಇದೆ. ಚುನಾವಣೆಗೆ  ಮುಂಚಿತ ಹಾಗೂ ಬಳಿಕ ಎಂಬ ರೀತಿಯಲ್ಲಿ ಎರಡು ಹಂತಗಳಲ್ಲಾಗಿ ಪರೀಕ್ಷೆ ನಡೆಸಬಹುದೇ ಎಂಬ ಬಗ್ಗೆಯೂ ಚಿಂತಿಸಲಾಗುತ್ತಿದೆ. ಶಿಕ್ಷಣ ಗುಣಮಟ್ಟ ಅವಲೋಕನ ಸಮಿತಿ ಸಭೆಯಲ್ಲಿ ಅಂತಿಮ …

ಚೆಂಗಳ ಪಂಚಾಯತ್ ಬಂಟ ಸಮಾವೇಶ; ಸಮಸ್ಯೆಗಳ ಬಗ್ಗೆ ಬಂಟರು ಒಂದಾಗಿ ಹೋರಾಟ ಅಗತ್ಯ-ಸುಬ್ಬಯ್ಯ ರೈ

ಮುಳ್ಳೇರಿಯ : ಬಂಟ ಸಮಾಜ ತಮ್ಮ ಅವಶ್ಯಕತೆಗಳ ಬಗ್ಗೆ ಹೋರಾಟಕ್ಕಿ ಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿ, ಮಹಾ ದಾನಿ ಆಗಿರುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಮತ್ತು ಕುತ್ತಿಕ್ಕಾರು ಕೆ ಕೆ ಶೆಟ್ಟರು ಬಂಟ ಸಮಾಜದ ಸುಧಾ ರಣೆಗೆ ಬಹಳಷ್ಟು ಪ್ರಯತ್ನಿಸುತ್ತರಾ ದರೂ ಅವರಿಗೆ ಬೆಂಬಲವಾಗಿ ಬಂಟರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕೆAದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಅಭಿಪ್ರಾಯ ಪಟ್ಟರು. ನಾರಂಪಾಡಿಯ ಕುಟುಂಬಸ್ಥರ ಗುತ್ತಿನ ಮನೆಯಲ್ಲಿ ಚೆಂಗಳ …

ಜಿಲ್ಲಾ ಮಟ್ಟದ ಅಲ್‌ಬೀರ್ ಸಯನ್ಸ್ ಮ್ಯಾತ್ಸ್ ಫೇರ್ 13ರಂದು

ಕುಂಬಳೆ: ಸಮಸ್ತಾದ ಅಧೀನದಲ್ಲಿರುವ ಅಲ್‌ಬೀರ್ ಪ್ರೈಮರಿ ಮಕ್ಕಳ ಜಿಲ್ಲಾ ಮಟ್ಟದ ಸಯನ್ಸ್, ಮ್ಯಾತ್ಸ್ ಫೇರ್ ಮೊಗ್ರಾಲ್ ಪೆರುವಾಡ್ ಇಬ್ರಾಹಿಂ  ಬಾತಿಷ ಅಲ್‌ಬೀರ್‌ನಲ್ಲಿ ಈ ತಿಂಗಳ 13ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಅಲ್ ಬೀರ್ ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಪ್ರೊ. ಕೆ.ಪಿ. ಮುಹಮ್ಮದ್ ಉದ್ಘಾಟಿ ಸುವರು. ಅಧ್ಯಕ್ಷ ಹಾಜಿ ತಂಙಳ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ 18 ಶಾಲೆಗಳಿಂದಾಗಿ 400ರಷ್ಟು ಮಕ್ಕಳು ಭಾಗವಹಿಸು ವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ  ಪದಾಧಿಕಾರಿಗಳಾದ ಹಾದಿ ತಂಙಳ್, ಹಂದುಲ್ಲ …