ಸಹಕಾರಿ ಸಪ್ತಾಹದಂಗವಾಗಿ ಸೆಮಿನಾರ್ ಯಶಸ್ವಿಗೆ ಪೂರ್ವಭಾವಿ ಸಭೆ

ಮಂಜೇಶ್ವರ: 72 ನೇ ಸಹಕಾರಿ ಸಪ್ತಾಹದಂಗವಾಗಿ ನವೆಂಬರ್ 16ರಂದು ವರ್ಕಾಡಿ ಅಗ್ರಿಕಲ್ಚರ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆಯುವ ಸೆಮಿನಾರ್ ಯಶಸ್ವಿಗೊಳಿಸಲು ನಿನ್ನೆ ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಇವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್ ಜಯಾನಂದ ಉದ್ಘಾಟಿಸಿ ವಿವರಿಸಿದರು. ಮಂಜೇಶ್ವರ ತಾಲೂಕಿನ ವಿವಿಧ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಮಿತಿಗೆ ಅಧ್ಯಕ್ಷರಾಗಿ ವಿಶ್ವನಾಥ ಕುದುರು, (ಅಧ್ಯಕ್ಷ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ), ಉಪಾಧ್ಯಕ್ಷರಾಗಿ ರಾಮಚಂದ್ರ …

ಕೇರಳ ಕೇಂದ್ರೀಯ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಆರಂಭ

ಕಾಸರಗೋಡು: ಪೆರಿಯಾದಲ್ಲಿ ರುವ ಕೇರಳ ಕೇಂದ್ರೀಯ ವಿಶ್ವವಿದ್ಯಾ ಲಯದ ೯ನೇ ಘಟಿಕೋತ್ಸವ ಪ್ರಸ್ತುತ ವಿಶ್ವವಿದ್ಯಾಲಯದ ತೇಜಸ್ವಿನಿ ಹಿಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ನವದೆಹಲಿಯ ಡಿ.ಎನ್.ಐ.ಆರ್ ಕಾರ್ಯದರ್ಶಿ ಹಾಗೂ ಸಿಎನ್‌ಐಆರ್‌ನ ಆಡಳಿತ ನಿರ್ದೇಶಕ ಡಾ.ಎನ್. ಕಲೈಸೆಲ್ವಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲ್‌ಗರ್ ಅಧ್ಯಕ್ಷತೆ ವಹಿಸಿದರು. ಕೇಂದ್ರೀಯ ವಿವಿಯ ರಿಜಿಸ್ಟ್ರಾರ್ (ಉಸ್ತುವಾರಿ) ಹಾಗೂ ಕಂಟ್ರೋ ಲರ್ ಆಫ್ ಎಕ್ಸಾಮಿನೇಷನ್ ಡಾ. ಜಯಪ್ರಕಾಶ್ ಆರ್ ಕಾರ್ಯಕ್ರಮ ನಿರೂಪಿಸಿದರು.   ಪ್ರಸ್ತುತ ವಿವಿಯಲ್ಲಿ …

ಕುಂಡುಕೊಳಕೆ ಬೀಚ್ ಫೆಸ್ಟ್‌ಗೆ ಚಾಲನೆ

ಮಂಜೇಶ್ವರ: ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸಬಹುದಾದ ಕುಂಡುಕೊಳಗೆ ಬೀಚ್‌ನಲ್ಲಿ ಮತ್ತೊಮ್ಮೆ ಬೀಚ್ ಫೆಸ್ಟ್ ಆರಂಭಗೊಂಡಿದೆ. ಈ ವರ್ಷದ ಬೀಚ್ ಫೆಸ್ಟ್‌ಗೆ ಸ್ಥಳೀಯ ಪ್ರತಿನಿಧಿ ಮುಂತಾಸ್ ಸಮೀರ ಚಾಲನೆ ನೀಡಿದರು. ಈ ವೇಳೆ  ಅಶ್ರಫ್ ಬಡಾಜೆ, ಹರಿಶ್ಚಂದ್ರ ಮಂಜೇಶ್ವರ, ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಪಂಚಾಯತ್ ಸದಸ್ಯೆ ರೇಖಾ, ಉದ್ಯಮಿ ಅಲಿಕುಟ್ಟಿ, ಅನ್ವರ್, ಆಸಿಫ್, ಹಾರಿಸ್, ಪ್ರಾಯೋಜಕರಾದ ಶಾನವಾಸ್  ಅಹ್ಮದ್, ಶೆರೀಫ್ ನ್ಯಾಷನಲ್, ಇರ್ಫಾನ್ ಉಪಸ್ಥಿತರಿದ್ದರು. ಡಿಸೆಂಬರ್ 7 ರ ತನಕ ನಡೆಯಲಿರುವ ಬೀಚ್ ಫೆಸ್ಟಿವಲ್ ಮಂಜೇಶ್ವರ ಹಾಗೂ ಆಸುಪಾಸಿನ …

ಕುಳೂರು ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ

ಮಂಜೇಶ್ವರ: ಕುಳೂರಿನ ಸರ ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀಂಜ ಪಂಚಾಯತ್ ವತಿಯಿಂದ ನಿರ್ಮಿಸಿದ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಜನಾದÀðನ ಪೂಜಾರಿ ಕುಳೂರು, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ ಶುಭ ಹಾರೈಸಿದರು. ಇಂಜಿನಿಯರ್ ಸಾಯಿತ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ. ವಂದಿಸಿದರು.

ಉಪ್ಪಳದಲ್ಲಿ ಗಲ್ಫ್ ಉದ್ಯೋಗಿ ಮನೆಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಹೊಸ ತಿರುವು: ಗುಂಡು ಹಾರಿಸಿದ್ದು ಮನೆಯೊಡೆಯನ 14ರ ಹರೆಯದ ಪುತ್ರ

ಉಪ್ಪಳ:  ಉಪ್ಪಳದಲ್ಲಿ ಗಲ್ಫ್ ಉದ್ಯೋಗಿಯ ಮನೆಗೆ  ಗುಂಡು ಹಾರಿಸಲಾಯಿತೆಂಬ  ಪ್ರಕರಣಕ್ಕೆ ಹೊಸ ತಿರುವು ಮೂಡಿದೆ.  ಗುಂಡು ಹಾರಿಸಿರುವುದು ಮನೆ ಮಾಲಕನ ೧೪ರ ಹರೆಯದ ಪುತ್ರನಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಆತಂಕ ದೂರವಾಗಿದೆ.  ನಿನ್ನೆ ಸಂಜೆ ಪೊಲೀಸರು ನಡೆಸಿದ ತನಿಖೆ ವೇಳೆ ಬಾಲಕ ಘಟನೆಯ ಸತ್ಯಾವಸ್ಥೆಯನ್ನು ಬಹಿರಂಗಪಡಿಸಿ ದ್ದಾನೆ. ಗುಂಡು ಹಾರಿಸಲು ಬಳಸಿದ ಏರ್‌ಗನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಸಂಜೆ ಮನೆಗೆ ಗುಂಡು ಹಾರಿಸಿರುವುದಾಗಿ ದೂರು ಕೇಳಿಬಂದಿತ್ತು. ಘಟನೆ …

ಮುಳ್ಳೇರಿಯದಲ್ಲಿ ನಾಳೆಯಿಂದ ಶಾಲಾ ಕಲೋತ್ಸವ

ಮುಳ್ಳೇರಿಯ: 64ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಾಳೆಯಿಂದ 15ರವರೆಗೆ ಮುಳ್ಳೇರಿ ಯದಲ್ಲಿ ನಡೆಯಲಿದೆ. ಮುಳ್ಳೇ ರಿಯ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯುವ ಈ ಕಲೋತ್ಸವದಲ್ಲಿ 330 ಸ್ಪರ್ಧೆಗಳಲ್ಲಿ 6000ದಷ್ಟು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಕುಂಬಳೆ ಉಪಜಿಲ್ಲೆಯಲ್ಲಿ ಒಟ್ಟು 120 ಶಾಲೆಗಳಿದ್ದು, ಈ ಪೈಕಿ 98 ಶಾಲೆಗಳಿಂದ ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ನಾಳೆ 18 ವೇದಿಕೆಗಳಲ್ಲಿ ಸ್ಪರ್ಧೆ ನಡೆಯಲಿರುವುದು. ಕಲೋತ್ಸವಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ವಸ್ತ್ರ ವ್ಯಾಪಾರಿ ನಿಧನ

ಮುಳ್ಳೇರಿಯ: ಹಲವಾರು ವರ್ಷಗಳಿಂದ ಮುಳ್ಳೇರಿಯ ಪೇಟೆಯಲ್ಲಿ ಎ.ವಿ. ಸುಮಿತ್ರನ್ ಕ್ಲೋತ್ ಸ್ಟೋರ್ ಮಾಲಕರಾಗಿದ್ದ ಎ.ವಿ. ಸುಮಿತ್ರನ್ (60) ನಿಧನ ಹೊಂದಿದರು. ಮೃತರು ಪತ್ನಿ ಉಷಾ, ಮಕ್ಕಳಾದ ಸುಮೇಶ್, ನಿತೀಶ್, ದೇವಿಕ, ಸೊಸೆ ರಾಧಿಕಾ, ಸಹೋದರಿಯರಾದ ಭಾರತಿ, ಶಾಂತಾ, ಇಂದಿರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ವಿಜಯನ್, ಶಶಿಧರನ್ ಈ ಹಿಂದೆ ನಿಧನ ಹೊಂದಿದ್ದಾರೆ.

ದೇಶದಲ್ಲಿ ಭಯೋತ್ಪಾದಕ ದಾಳಿಗೆ ಸಂಚು: ಬೃಹತ್ ಪ್ರಮಾಣದ ಸ್ಫೋಟಕ ಪತ್ತೆ

ದೆಹಲಿ: ದೇಶದಲ್ಲಿ ಬೃಹತ್ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹರ್ಯಾಣದಲ್ಲಿ  300 ಕೆಜಿ ಆರ್‌ಡಿಎಕ್ಸ್ ಮತ್ತು ಇತರ ಭಾರೀ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹರ್ಯಾಣದ ಫರೀದಾಬಾದ್‌ನಲ್ಲಿ ಭಯೋತ್ಪಾದಕ ಸಂಪರ್ಕ ಹೊಂದಿರುವ ಶಂಕಿತ ವೈದ್ಯರೊಬ್ಬರಿಂದ  ಈ ಬೃಹತ್ ಪ್ರಮಾಣದ ಆರ್‌ಡಿಎಕ್ಸ್, ಎಕೆ 47  ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಶಂಕಿತ ವೈದ್ಯನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಪೊಲೀಸರ ವಶಕ್ಕೊ ಗಾದ ಈ ವೈದ್ಯ ಜಮ್ಮು  ಕಾಶ್ಮೀರಕ್ಕೆ ಸೇರಿದವನಾಗಿ ದ್ದಾನೆ. ಈ …

ಆಡಂಬರ ಕಾರುಗಳನ್ನು ಬಾಡಿಗೆಗೆ ಪಡೆದು ವಂಚನೆ: ಕೇಸು ದಾಖಲು

ಕಾಸರಗೋಡು: ರೈಲ್ವೇಯ ಅಗತ್ಯಕ್ಕೆಂದು ತಿಳಿಸಿ ಬಾಡಿಗೆಗೆ ಪಡೆದ ಆಡಂಬರ ಕಾರುಗಳನ್ನು ಮರಳಿ ನೀಡ ದೆ ವಂಚಿಸಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಪೇರಾಲ್‌ನ ಮೆಹ್‌ರೂಫ್ ಮಂಜಿಲ್‌ನ ಕೆ.ಎಂ. ಮುಜೀಬ್  ರಹ್ಮಾನ್‌ರ ದೂರಿನ ಮೇರೆಗೆ ಹೊಸದುರ್ಗ ಬಿ.ಎಂ.ಜೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಂಸುದ್ದೀನ್ ಮುಹಮ್ಮದ್ (44) ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ವಂಚನೆ ಕೇಸು ದಾಖಲಿಸಿದ್ದಾರೆ. 2025 ಜುಲೈ 1 ಹಾಗೂ ೩೧ರ ಮಧ್ಯೆಗಿನ ದಿನಗಳಲ್ಲಿ ಅಣಂಗೂರಿನಲ್ಲಿ  ದೂರುದಾತ ಹಾಗೂ ಅವರ ಸಹೋ ದರನ, ಮಾವನ ಮಾಲಕತ್ವದಲ್ಲಿರುವ ಎರಡು ಕ್ರೆಟ್ ಕಾರುಗಳು …

ಕುಂಟಂಗೇರಡ್ಕದಲ್ಲಿ ಸ್ಮಶಾನದಿಂದ 124 ಮರ ಕಡಿದು ಸಾಗಾಟ: ಪೊಲೀಸ್ ತನಿಖೆ ಆರಂಭ

ಕುಂಬಳೆ: ಕುಂಬಳೆ ಪಂಚಾ ಯತ್‌ನ ಅಧೀನದಲ್ಲಿ ಕಿದೂರು ಕುಂಟಂಗೇರಡ್ಕದಲ್ಲಿರುವ ಪರಿಶಿಷ್ಟ ಜಾತಿ ಸ್ಮಶಾನದಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಕಡಿದು ಸಾಗಾಟ ನಡೆಸಿದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ನವಂಬರ್ 6 ಅಥವಾ 7ರಂದು ಮರ ಕಡಿದು ಸಾಗಾಟ ನಡೆಸಿರುವುದಾಗಿ ಅಂದಾಜಿಸಲಾಗಿದೆ. ಸಣ್ಣ ಹಾಗೂ ದೊಡ್ಡ 124 ಮರಗಳನ್ನು ಕಡಿದು ಸಾಗಾಟ ನಡೆಸಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಾಟ ನಡೆಸಲಾಗಿದೆ ಎಂದು ಹೇಳಲಾಗು ತ್ತಿದೆ. …