ಬೆಳ್ಳೂರು: ನಾಕೂರು ಕಾಲನಿಯ ಕುಡಿಯುವ ನೀರು ಸಮಸ್ಯೆಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

ಬೆಳ್ಳೂರು: ಪಂಚಾಯತ್‌ನ ಮೂರನೇ ವಾರ್ಡ್ ಕುಳದಪಾರೆಯ ನಾಕೂರು ಎಸ್‌ಸಿ ಕಾಲನಿಯಲ್ಲಿ ಕುಡಿ ಯುವ ನೀರು ಸಮಸ್ಯೆ ತಲೆದೋರಿದೆ.  ಪದೇ ಪದೇ ವಿದ್ಯುತ್ ಮೊಟಕುಗೊಳ್ಳು ತ್ತಿರುವುದರಿಂದ ಇಲ್ಲಿನ 30ರಷ್ಟು ಕುಟುಂಬಗಳು ನೀರಿಗಾಗಿ ಪರದಾಡಬೇಕಾಗುತ್ತಿದೆ. ಇಲ್ಲಿನ ಕುಡಿಯುವ ನೀರು ವಿತರಣೆ ಯೋಜನೆಗೆ ತ್ರಿಫೇಸ್ ವಿದ್ಯುತ್ ಲೈನ್‌ನ ಅಗತ್ಯವಿದೆ. ಇದೀಗ ವಿದ್ಯುತ್ ಸಂಪರ್ಕವಿದ್ದರೂ  ವಿದ್ಯುತ್ ಲೈನ್ ತೋಟದ ಮೂಲಕ ಸಾಗುತ್ತಿದೆ. ಇದರಿಂದ ತಂತಿಗಳ ಮೇಲೆ ಸೋಗೆ, ಮಡಲು ಬೀಳುತ್ತಿರುವುದರಿಂದ ಪದೇ ಪದೇ ವಿದ್ಯುತ್ ಮೊಟಕುಗೊಳ್ಳುತ್ತಿ ರುವುದು ನೀರು ವಿತರಣೆಗೆ ಬಾಧಿಸುತ್ತಿದೆ. ಈ …

ಮಂಜೇಶ್ವರ ಠಾಣೆ ಎಎಸ್‌ಐ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕುತ್ತಿಕ್ಕೋಲ್ ನಿವಾಸಿಯಾದ ಮಧುಸೂದನ(50) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಇವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.  ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಇದೇ ವೇಳೆ ಕ್ವಾರ್ಟರ್ಸ್‌ನೊಳಗಿನಿಂದ ಒಂದು ಪತ್ರ ಪತ್ತೆಯಾಗಿರುವುದಾಗಿ ಸೂಚನೆಯಿದೆ. ಪೊಲೀಸ್ ಠಾಣೆಗೆ ತಲುಪುವವರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಅಧಿಕಾರಿಯಾಗಿದ್ದ ಇವರು   ತನಿಖೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆಂದು ಹೇಳಲಾಗುತ್ತಿದೆ. …

ಹೊಸ ಬಸ್ ನಿಲ್ದಾಣದ ಸರ್ಕಲ್ ಅಭಿವೃದ್ಧಿ ಹೊಂದುತ್ತಿರುವಂತೆಯೇ ಹೆಚ್ಚುತ್ತಿರುವ ಸಂಚಾರ ತಡೆ

ಕಾಸರಗೋಡು: ರಸ್ತೆ ಎಷ್ಟೇ ಅಭಿವೃದ್ಧಿ ಹೊಂದಿದರೂ ಕಾಸರಗೋಡು ಪೇಟೆಯ ಸಾರಿಗೆ ಸಂಚಾರ ತಡೆಗೆ ಪರಿಹಾರ ವಾಗುವುದಿಲ್ಲ. ಕಾಸರಗೋಡು ಹೊಸ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ತೀವ್ರ ರೀತಿಯ ಸಾರಿಗೆ ಸಂಚಾರ ತಡೆ ಎದುರಿಸಲಾಗುತ್ತಿದೆ. ನಾಲ್ಕೂ ಕಡೆಗಳಿಂದಿರುವ ವಾಹನಗಳು ಜಂಕ್ಷನ್‌ಗೆ ತಲುಪುವಾಗ ಇಲ್ಲಿ ಭಾರೀ ಮಟ್ಟದ ಸಂಚಾರ ತಡೆ ಉಂಟಾಗುತ್ತಿದೆ. ಪೊಲೀಸರಿಗೆ ಕೂಡಾ ಇದನ್ನು ನಿಯಂತ್ರಿಸಲು ಸಾಧ್ಯವಾಗದಿರುವಾಗ ಆಟೋ ಕಾರ್ಮಿಕರು, ವ್ಯಾಪಾರಿಗಳು ಜೊತೆ ಗೂಡಿ ಸಂಚಾರ ನಿಯಂತ್ರಿಸಲಾಗುತ್ತಿದೆ. ಅಷ್ಟಕ್ಕೂ ತೀವ್ರಗೊಂಡ ಸಂಚಾರ ತಡೆ ಬೆಳಿಗ್ಗೆ ಮತ್ತು ಸಂಜ ಹೊತ್ತುಗಳಲ್ಲಿ ತಾರಕಕ್ಕೇರುತ್ತಿದೆ. …

ಮಹಿಳೆಯರೊಂದಿಗೆ ಅನುಚಿತ ವರ್ತನೆ: ಶಾಸಕ ಸ್ಥಾನಕ್ಕೆ ರಾಹುಲ್ ಮಾಕೂಟ್ಟತ್ತಿಲ್ ರಾಜೀನಾಮೆಗೆ ಬಿಜೆಪಿ, ಸಿಪಿಎಂ ಪಟ್ಟು

ತಿರುವನಂತಪುರ: ಮಹಿಳೆಯರೊಂ ದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ಆರೋಪ ಉಂಟಾದ ಬೆನ್ನಲ್ಲೇ ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇ ಕೆಂಬ ಪಟ್ಟು ಹಿಡಿದು ಬಿಜೆಪಿ ಮತ್ತು ಸಿಪಿಎಂ ಪ್ರತ್ಯಕ್ಷ ಹೋರಾಟ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಕಾಂಗ್ರೆಸ್‌ನ ಕೇರಳ ಘಟಕವೂ ರಾಹುಲ್‌ರ ವಿರುದ್ಧ ಉಂಟಾಗಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾನು …

ಬಾಲಕನಿಗೆ ಸಲಿಂಗರತಿ ಕಿರುಕುಳ: ಆಟೋ ಚಾಲಕ ಸೆರೆ

ಮಂಜೇಶ್ವರ: 17ರ ಹರೆಯದ ಬಾಲಕನನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಹಲವು ಬಾರಿ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಆಟೋ ಚಾಲಕನನ್ನು ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸಿದ್ದಾರೆ.  ಬಾಯಿ ಕಟ್ಟೆಯ ಇಬ್ರಾಹಿಂ ಖಲೀಲ್(25) ಎಂಬಾತ ಬಂಧಿತ ಆರೋಪಿಯಾ ಗಿದಾ ನೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ  ರಿಮಾಂಡ್ ವಿಧಿಸಿದೆ. 2023ರಿಂದ 2025ರ ವರೆಗಿನ ಕಾಲಾವಧಿಯಲ್ಲಿ ಬಾಲಕನಿಗೆ ಆರೋಪಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

ಮೀನು ಕಾರ್ಮಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮೀನು ಕಾರ್ಮಿಕ ನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕುಂಬಳೆ ದೇವೀನಗರ ತ್ಸುನಾಮಿ ಕಾಲನಿಯ ಅಬ್ದುಲ್ಲ (55) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಮುಂಜಾನೆ 5 ಗಂಟೆಗೆ  ಮನೆಯವರು ಎಚ್ಚೆತ್ತಾಗ ಅಬ್ದುಲ್ಲ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕೆಳಕ್ಕಿಳಿಸಿದ್ದಾರೆ. ಇದೇ ವೇಳೆ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಒಂದು ಬ್ಲೇಡ್ ಹಾಗೂ ರಕ್ತದ ಕಲೆಗಳು …

ಪಿಗ್ಮಿ ಏಜೆಂಟ್ ಸುರೇಶ್ ಕೆ ಸೂರ್ಲು ನಿಧನ

ಕಾಸರಗೋಡು: ಕಾಸರ ಗೋಡು ಸೂರ್ಲು ಬಟ್ಟಂಪಾರೆ ನಂದಿನಿ ನಿವಾಸದ ಸುರೇಶ್ ಕೆ (73) ಅಸೌಖ್ಯ ನಿಮಿತ್ತ ಮಂ ಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ದೀರ್ಘಕಾಲ ರಾಷ್ಟ್ರೀಕೃತ ಬ್ಯಾಂಕೊಂದರ ಪಿಗ್ಮಿ ಕಲೆಕ್ಷನ್ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಇವರು ಕಾಸರಗೋಡು ಎ.ಟಿ ರಸ್ತೆಯ ಆನೆಬಾಗಿಲು ತರವಾಡಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ  ರಕ್ಷಾಧಿಕಾರಿ, ತಳಂಗರೆ ಪಿಲಿಕುಂಜೆ ಭಗವತೀ ಕ್ಷೇತ್ರದ ಬಟ್ಟಂಪಾರೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಮೃತರು ಪತ್ನಿ ಕೆ.ಟಿ. ಶುಭ, ಮಕ್ಕಳಾದ ಪ್ರಶೋಬ್ ಕೆ.ಟಿ, ಸುಮಾ ಕೆ.ಟಿ, …

ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ, 28 ಗ್ರಾಂ ಎಂಡಿಎಂಎ ವಶ: ಮೂವರ ಬಂಧನ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ ಹಾಗೂ 28 ಗ್ರಾಂ ಎಂಡಿಎಂಎ ಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಸೆರೆಗೀ ಡಾದವರು ಕರ್ನಾಟಕ ಬಂಟ್ವಾಳ ನಿವಾಸಿಗಳಾಗಿದ್ದಾರೆ.  ಇವರನ್ನು ತನಿಖೆಗೊಳಪಡಿಸಲಾಗುತ್ತಿದೆ. ಇಂದು ಮುಂಜಾನೆ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್‌ರ ನೇತೃತ್ವದಲ್ಲಿ ತಲಪಾಡಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಮಾದಕವಸ್ತು ವಶಪಡಿಸಲಾಗಿದೆ.  ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಕಾರನ್ನು ನಿಲ್ಲಿಸಿದ ತಂಡದ ಓರ್ವ ಓಡಿ ಪರಾರಿಯಾಗಲು ಯತ್ನಿಸಿದ್ದನು. ಆತನನ್ನು ಬೆನ್ನಟ್ಟಿ ಪೊಲೀಸರು ಸೆರೆಹಿಡಿದಿದ್ದಾರೆ. …

ಹಣ ಸಹಿತ ಹೊರಗೆ ತೆರಳಿದ ವ್ಯಕ್ತಿ ನಾಪತ್ತೆ

ಕುಂಬಳೆ: ಕಟ್ಟಡ ನಿರ್ಮಾಣ ಕಾರ್ಮಿಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ದೇವೀನಗರ ನಿವಾಸಿ ಸೆಲ್ವರಾಜ್ (61) ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಈ ತಿಂಗಳ 16ರಂದು ಸಂಜೆ ಇವರು ಮನೆಯಿಂದ ಹೊರಗೆ ತೆರಳಿದವರು ಮರಳಿ ಬಂದಿಲ್ಲ. ವಿವಿಧೆಡೆ ಹುಡುಕಾ ಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪುತ್ರ ಮಣಿಕಂಠನ್ ನಿನ್ನೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಿಂದ ಹೊರಗೆ ತೆರಳುವ ವೇಳೆ ಸೆಲ್ವರಾಜ್‌ರ ಕೈಯಲ್ಲಿ 20 ಸಾವಿರ ರೂಪಾಯಿ ನಗದು ಇತ್ತೆಂದು ದೂರಿನಲ್ಲಿ ತಿಳಿಸಲಾ ಗಿದೆ. ಮೊಬೈಲ್ ಫೋನ್ ಮನೆಯಲ್ಲೇ ಇರಿಸಿ …