ಆಸ್ಪತ್ರೆಗೆ ನುಗ್ಗಿ ಯುವಕನಿಗೆ ಹಲ್ಲೆ : ವೈದ್ಯರ ಕರ್ತವ್ಯ ನಿರ್ವಹಣೆಗೆ ಅಡಚಣೆ: ಜನರಲ್ ಆಸ್ಪತ್ರೆಯಲ್ಲಿ ಇಂದು ಮತ್ತೆ ಪ್ರತಿಭಟನೆ ನಡೆಸಿದ ವೈದ್ಯರು, ಸಿಬ್ಬಂದಿಗಳು

ಕಾಸರಗೋಡು: ಕೌಟುಂಬಿಕ ಕಲಹದಿಂದ ಗಾಯಗೊಂಡು ಚಿಕಿತ್ಸೆ ಗಾಗಿ ಬಂದ ಯುವಕರ ಮೇಲೆ ಆಸ್ಪತ್ರೆಗೆ ನೇರವಾಗಿ ನುಗ್ಗಿ ಬಂದು ಅವರ ಮೇಲೆ ಪುನಃ ಹಲ್ಲೆ ನಡೆಸಿ ಆ ಮೂಲಕ ಮಹಿಳಾ ವೈದ್ಯೆಯ ಕರ್ತವ್ಯ ನಿರ್ವ ಹಣೆಗೆ ಅಡ್ಡಿ ಉಂಟುಮಾಡಿರುವುದನ್ನು ಪ್ರತಿಭಟಿಸಿ ಕೇರಳ ಸರಕಾರ ಮೆಡಿಕಲ್ ಆಫೀಸರ್ಸ್ (ಕೆಜಿಎಂಒ) ಮತ್ತು ಐಎಂಎ ನೇತೃತ್ವದಲ್ಲಿ ವೈದ್ಯರು ಹಾಗೂ ಸ್ಟಾಫ್ ಕೌನ್ಸಿಲ್‌ನ ನೇತೃತ್ವದ ಆಸ್ಪತ್ರೆಯ ಸಿಬ್ಬಂದಿಗಳು ಇಂದು ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಿದರು. ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ …

ಸ್ಕೂಟರ್ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತ್ಯು: ನಾಡಿನಲ್ಲಿ ಶೋಕಸಾಗರ

ಕುಂಬಳೆ: ಕೊಡ್ಯಮ್ಮೆ ಪೂಕಟ್ಟೆಯಲ್ಲಿ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಗೋಡೆಗೆ ಬಡಿದು ಸಂಭವಿಸಿದ ಅಪಘಾತದಲ್ಲಿ ೧೦ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಬಂಬ್ರಾಣ ಚೂರಿತ್ತಡ್ಕದ ರಸಾಕ್-ರಂಸೀನಾ ದಂಪತಿಯ ಪುತ್ರಿ ರಿಸ್ವಾನ (15) ಮೃತಪಟ್ಟ ದುರ್ದೈವಿಯಾ ಗಿದ್ದಾಳೆ. ಈಕೆ ಕೊಡ್ಯಮ್ಮೆ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ ರಿಸ್ವಾನ ಹಾಗೂ ಸ್ನೇಹಿತೆ ಸ್ಕೂಟರ್‌ನಲ್ಲಿ ಟ್ಯೂಶನ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಗಾಯಗೊಂಡ ರಿಸ್ವಾನ ಹಾಗೂ ಸ್ನೇಹಿತೆಯನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ …

ಸ್ಕೂಟರ್‌ನ ನಂಬರ್ ಪ್ಲೇಟ್ ಜೆಸಿಬಿಗೆ: ಅನಧಿಕೃತವಾಗಿ ಮಣ್ಣು ತೆಗೆಯುತ್ತಿದ್ದ ಜೆಸಿಬಿ ಪೊಲೀಸ್ ಕಸ್ಟಡಿಗೆ

ಕುಂಬಳೆ: ಪೇರಾಲ್ ಪೊಟ್ಟೋರಿಯಲ್ಲಿ ಅನಧಿಕೃತವಾಗಿ ಮಣ್ಣು ತೆಗೆಯುತ್ತಿರುವುದಕ್ಕೆ ಪೊಲೀಸರು ತಡೆಯೊಡ್ಡಿ ಜೆಸಿಬಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಈ ಕುರಿತಾಗಿ ಸಮಗ್ರ ವರದಿಯನ್ನು ಜಿಯೋಲಜಿ ಇಲಾಖೆಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಟ್ಟೋರಿಯಲ್ಲಿ  ವ್ಯಕ್ತಿಯೊಬ್ಬನ ಮಾಲಕತ್ವದಲ್ಲಿರುವ ಸ್ಥಳದಿಂದ  ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆದು ಕೊಂಡೊಯ್ಯಲಾಗುತ್ತಿದೆಯೆಂಬ ಮಾಹಿತಿಯಂತೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಪೊಲೀಸರನ್ನು ಕಂಡೊಡನೆ  ಟಿಪ್ಪರ್ ಲಾರಿಗಳಲ್ಲಿ  ಚಾಲಕರು ಪರಾರಿಯಾಗಿದ್ದಾರೆ. ಮಣ್ಣು ತೆಗೆಯುತ್ತಿದ್ದ ಜೆಸಿಬಿಯ ಆಪರೇಟರ್‌ನೊಂದಿಗೆ ದಾಖಲೆಗಳನ್ನು ಕೇಳಿದಾಗ ಸರಿಯಾದ ಮಾಹಿತಿ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.  …

ಶಬರಿಮಲೆ ಚಿನ್ನ ಕಳವು ಪ್ರಕರಣ : ಮುಜರಾಯಿ ಮಂಡಳಿ ಮಾಜಿ ಆಯುಕ್ತ ಸೆರೆ; ಒಂದನೇ ಆರೋಪಿಯ ವಿದೇಶ ವ್ಯವಹಾರಗಳ ಬಗ್ಗೆ ತನಿಖೆ

 ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ತಿರುವಿದಾಂ ಕೂರು ಮುಜರಾಯಿ ಮಂಡಳಿಯ ಆಯುಕ್ತರಾಗಿದ್ದ ಕೆ.ಎಸ್. ಬೈಜುರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ನಾಲ್ಕಕ್ಕೇರಿದೆ.  ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಮಂಡಳಿಯ ಅಡ್ಮಿನಿಸ್ಟ್ರೇ ಟಿವ್ ಆಫೀಸರ್ ಆಗಿದ್ದ ಮುರಾರಿಬಾಬು ಮತ್ತು ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಸುಧೀಶ್ ಕುಮಾರ್‌ರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಬೈಜುರ ಬಂಧನ ನಡೆದಿದೆ. ಇವರನ್ನು …

ಆಟೋರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ:  ಆಟೋ ಚಾಲಕ ನೋರ್ವ ಮನೆಯಲ್ಲಿ ಹೃದಯಾಘಾ ತದಿಂದ ಮೃತಪಟ್ಟರು.  ಉಪ್ಪಳ ನಯಾಬಜಾರ್ ಬಳಿಯ ಅಂಬಾರಿನ ಬಾಡಿಗೆ ಮನೆಯಲ್ಲಿ ವಾಸಿಸುವ ಮೊಹಮ್ಮದ್ ಶಾಹಿದ್ (43) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೈಕಂಬದಲ್ಲಿ ಕಳೆದ 20 ವರ್ಷಗಳಿಂದ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 9.30ಕ್ಕೆ ಮನೆಗೆ ತಲುಪಿದ ಇವರಿಗೆ ಹೃದಯಾಘಾತವುಂಟಾಗಿತ್ತು. ಕೂಡ ಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿ ಸಿದ್ದು ಅಷ್ಟರೊಳಗೆ ನಿಧನ ಸಂಭವಿಸಿತ್ತು.  ದಿವಂಗತರಾದ ಅಬ್ದುಲ್ ಖಾದರ್-ಜೈನಾಬಿ ದಂಪತಿಯ ಪುತ್ರನಾದ  ಮೃತರು ಪತ್ನಿ ಶಾಹಿನ್, ಮಕ್ಕಳಾದ …

ಬ್ಯಾಂಕ್ ಕಾವಲುಗಾರನನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆ

ಕುಂಬಳೆ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಬ್ಯಾಂಕ್‌ನ ರಾತ್ರಿ ಕಾವಲುಗಾರನನ್ನು ವ್ಯಕ್ತಿಯೋರ್ವ ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ರಾತ್ರಿ ಕಾವಲುಗಾರನಾದ ವರ್ಕಾಡಿ ಕಳಿಯೂರಿನ ಅಭಿಷೇಕ್ (24) ಎಂಬವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ 9.45ಕ್ಕೆ ಕರ್ತವ್ಯಕ್ಕಾಗಿ ಬ್ಯಾಂಕ್‌ಗೆ ಮನೆಯಿಂದ ತೆರಳುತ್ತಿದ್ದಾಗ ಕಳಿಯೂರು ಸಮೀಪ ವ್ಯಕ್ತಿಯೋರ್ವ ತಡೆದು ನಿಲ್ಲಿಸಿ ಹಲ್ಲೆ ಗೈದಿರುವುದಾಗಿ ಅಭಿಷೇಕ್ ದೂರಿದ್ದಾರೆ.

ಕುಂಡಂಗುಳಿಯ ಜಿಬಿಜಿ ಠೇವಣಿ ವಂಚನೆ : ಇನ್ನೊಂದು ಪ್ರಕರಣ ದಾಖಲು

ಕಾಸರಗೋಡು: ಹಲವು ಮಂದಿ ಯಿಂದ  ಕೋಟ್ಯಂತರ ರೂಪಾಯಿ ಠೇವಣಿಯಾಗಿ ಸಂಗ್ರಹಿಸಿದ ಬಳಿಕ ಅದನ್ನು ಮರಳಿ ನೀಡದೆ ವಂಚಿಸಿದ ಕುಂಡಂಗುಳಿಯ ಜಿಬಿಜಿ (ಗ್ಲೋಬಲ್ ಬ್ಯುಸಿನೆಸ್ ಗ್ರೂಪ್) ವಿರುದ್ಧ ಬೇಡಗಂ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಪೆರಿಯ ಪುಳಿಕ್ಕಾಲ್‌ನ ರತಿ (38) ನೀಡಿದ ದೂರಿನಂತೆ ಜಿಬಿಜಿ ಕಂಪೆನಿಯನ್ನು ಒಂದು ಹಾಗೂ ಮೆನೇಜಿಂಗ್ ಡೈರೆಕ್ಟರ್ ಕುಂಡಂಗುಳಿ ಚಿನ್ನು ಲಾಲ್ ಹಾಸ್‌ನ ಡಿ. ವಿನೋದ್ ಕುಮಾರ್ ನನ್ನು ಎರಡನೇ ಆರೋಪಿಯಾಗಿ ಕೇಸು ದಾಖಲಿಸಲಾಗಿದೆ.  2022 ಸೆಪ್ಟಂಬರ್ 22ರಂದು ಭಾರೀ ಲಾಭದ ಭರವಸೆಯೊಡ್ಡಿ 50 …

ಕೊಲೆ ಆರೋಪಿಯ ಮೃತದೇಹ ಉಪ್ಪಳ ಗೇಟ್ ಬಳಿ ಪತ್ತೆ ಪ್ರಕರಣ: ಕರ್ನಾಟಕ ಪೊಲೀಸರಿಂದಲೂ ತನಿಖೆ ತೀವ್ರ

ಉಪ್ಪಳ: ಮೂರು ಕೊಲೆ ಪ್ರಕರಣಗಳು ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಮಂಗಳೂರಿನ ನೌಫಲ್ (37) ಎಂಬಾತನ ಮೃತದೇಹ ನಿಗೂಢ ರೀತಿಯಲ್ಲಿ ಉಪ್ಪಳ ರೈಲ್ವೇ ಗೇಟ್ ಸಮೀಪ ಪತ್ತೆಯಾದ ಘಟನೆಗೆ ಸಂಬಂಧಿಸಿ ಕರ್ನಾಟಕ ಪೊಲೀಸರು ಕೂಡಾ ತನಿಖೆ ತೀವ್ರಗೊಳಿಸಿದ್ದಾರೆ. ಈ ಸಂಬಂಧ ಉಪ್ಪಳಕ್ಕೆ ತಲುಪಿದ ಕರ್ನಾಟಕ ಪೊಲೀಸರು ಮೃತದೇಹ ಕಂಡು ಬಂದ ಸ್ಥಳವನ್ನು ಪರಿಶೀಲಿಸಿ ದರು. ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದ ಸ್ಕೂಟರನ್ನು ಪರಿಶೀಲನೆ ನಡೆಸಲಾಯಿತು. ನೌಫಲ್ ಕೊಲೆಗೀಡಾಗಿರ ಬಹುದೆಂಬ ಸಂಶಯದ ಮೇರೆಗೆ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. …

ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ವಶ: ಮಾಲಕಿ ವಿರುದ್ಧ ಕೇಸು

ಕುಂಬಳೆ: 17ರ ಹರೆಯದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ಅದರ ಆರ್‌ಸಿ ಮಾಲಕಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಶಿರಿಯ ಶಾಲೆ ಸಮೀಪ ನಿನ್ನೆ ಸಂಜೆ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ನಡೆಸಿದ ತನಿಖೆ ಯಲ್ಲಿ ಸ್ಕೂಟರ್ ಬಾಲಕನ ಸ್ನೇಹಿತನ ತಾಯಿಯಾದ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಬಳಿಯ ಮರಿಯಮ್ಮತ್ ಎಚ್. ಪರ್ಸಾಯಿ (26) ಎಂಬವರದ್ದೆಂದು ತಿಳಿದು ಬಂದಿದ್ದು, ಇದರಿಂದ ಈಕೆ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿ

ಕಾಸರಗೋಡು:  ಬಸ್‌ನ   ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಿನ್ನೆ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ತೆಕ್ಕಿಲ್‌ನಲ್ಲಿ ಸಂಭವಿಸಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ತೆಕ್ಕಿಲ್‌ನ ಇಳಿಜಾರಿನಲ್ಲಿ ಅಪ ಘಾತವುಂಟಾಗಿದೆ. ಕಾಸರಗೋಡಿಗೆ ಬರುತ್ತಿದ್ದ ಪ್ರತಾಪ್ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಎದುರು ಸಂಚರಿಸುತ್ತಿದ್ದ ಲಾರಿಗೆ ಬಡಿದಿದೆ. ಅಪಘಾತದಿಂದ ಎರಡು ಲಾರಿಗಳ ಮಧ್ಯೆ ಬಸ್ ಸಿಲುಕಿಕೊಂಡಿತು. ಅಪಘಾತದಿಂದ ಯಾರೂ ಗಂಭೀರ ಗಾಯಗೊಂಡಿಲ್ಲವೆಂದು ತಿಳಿದು ಬಂದಿದೆ.