ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರಿಡುವಂತಿಲ್ಲ

ತಿರುವನಂತಪುರ: ಕೇರಳದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮದ ಆಧಾರದಲ್ಲಿ ಹೆಸರು ಇಡುವಂತಿಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.  ಇದರಂತೆ ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಸ್ಥಾಪಿಸಲಾಗುವ ಯಾವುದೇ ಸರಕಾರಿ ಹಾಗೂ ಸರಕಾರಿ ಸಾಮ್ಯದ  ವಿಶ್ವವಿದ್ಯಾಲಯಗಳು, ಸರಕಾರಿ ಶಾಲೆಗಳು, ಕಾಲೇಜುಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರು ಇಡಬಾರದೆಂದು ಸರಕಾರ ನಿರ್ದೇಶ ನೀಡಿದೆ. ಆದರೆ ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಈ ಹೊಸ …

ಬೇಕರಿಯಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಬೇಕರಿಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿಹೋಗಿದೆ.  ಸತೀಶ್ ಕೋಟೆಕಣಿ ಎಂಬವರ ಮಾಲಕತ್ವದ ಶ್ರೀಲಕ್ಷ್ಮಿ ಬೇಕರಿಯಲ್ಲಿ ನಿನ್ನೆ ರಾತ್ರಿ ಸುಮಾರು 1 ಗಂಟೆ ವೇಳೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕದಳ ತಕ್ಷಣ ತಲುಪಿ ಬೆಂಕಿ ನಂದಿಸಿದೆ. ಬೆಂಕಿ ತಗಲಿದ ಪರಿಣಾಮ ಬೇಕರಿಯೊಳಗಿದ್ದ  ಭಾರೀ ಪ್ರಮಾಣದ ಸಾಮಗ್ರಿಗಳು ಉರಿದು ನಾಶಗೊಂಡಿವೆ. ಬೆಂಕಿ ತಗಲಲು ಕಾರಣ ತಿಳಿದುಬಂದಿಲ್ಲ. ಇದೇ ಬೇಕರಿ  ಕ್ಯಾಂಟೀನ್ ಆಗಿಯೂ …

ವಿದ್ಯುತ್ ಚಾಲಿತ ಸ್ಕೂಟರ್ ಬೆಂಕಿಗಾಹುತಿ

ಕಾಸರಗೋಡು: ವಿದ್ಯುತ್ ಚಾಲಿತ ಸ್ಕೂಟರ್ ಬೆಂಕಿಗಾಹುತಿ ಯಾಗಿ ಭಾರೀ ನಷ್ಟ ಉಂಟಾದ ಘಟನೆ ನಗರದ ಅಣಂಗೂರಿನಲ್ಲಿ ನಿನ್ನೆ ನಡೆದಿದೆ. ಪರವನಡ್ಕ ನಿವಾಸಿ ಕೆ. ಸುರೇಶ್ ಎಂಬವರ ಸ್ಕೂಟರ್ ಬೆಂಕಿಗಾಹುತಿ ಯಾಗಿದೆ. ಸ್ಕೂಟರಿನ ಬ್ಯಾಟರಿ ಸರಿಯಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ ಸುರೇಶ್ ನಿನ್ನೆ ಅಣಂಗೂರಿನ ಸರ್ವೀಸ್ ಸೆಂಟರೊಂದಕ್ಕೆ ದುರಸ್ತಿಗಾಗಿ ತಂದಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೇ ಪಕ್ಕದ ಅಂಗಡಿಯೊಂದರ ಸಿಬ್ಬಂದಿಗಳು ತಕ್ಷಣ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಪಿ.ಎನ್. ವೇಣುಗೋಪಾಲನ್ ನೇತೃತ್ವದ …

ಯುವತಿ ಪ್ರಿಯತಮನೊಂದಿಗೆ ಪರಾರಿ

ಕಾಸರಗೋಡು: ಯುವತಿ ಯೋರ್ವೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾಲೋಂ ಅದಿರುಮಾವು ಎಂಬಲ್ಲಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನ (19) ಪ್ರಿಯತಮನಾದ ವೆಸ್ಟ್ ಎಳೇರಿ ಕೂಳಿಪ್ಪಾರದ ರಂಜಿತ್‌ನ ಜೊತೆ  ತೆರಳಿರುವುದಾಗಿ ಹೇಳಲಾಗುತ್ತಿದೆ.  ಬೀನ ತಾಯಿಯ ಸಹೋದರಿಯ ಕೂಳಿಪ್ಪಾರದ ಮನೆಯಲ್ಲಿ ವಾಸಿಸುತ್ತಿ ದ್ದರು. ಈಮಧ್ಯೆ ರಂಜಿತ್‌ನೊಂದಿಗೆ ಸ್ನೇಹದಲ್ಲಿದ್ದಳೆನ್ನಲಾಗಿದೆ. ನಿನ್ನೆ ಸಂಜೆ ೭ ಗಂಟೆ ವೇಳೆ ಅಲ್ಲಿನ ಮನೆಯಿಂದ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ …

ಮಗನ ಸಾವಿನಿಂದ ಮನನೊಂದಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ

ಕಾಸರಗೋಡು: ಪುತ್ರ ನೇಣುಬಿಗಿದು ಸಾವಿಗೀಡಾದ ಘಟನೆಯಿಂದ ತೀವ್ರವಾಗಿ  ನೊಂದು ಕೊಂಡಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ.   ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಂಪಾಡಿ ಕೊರಂಬಾರ ಎಂಬಲ್ಲಿನ ಎ. ಬಾಲಕೃಷ್ಣನ್ ನಾಯರ್ (70) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.  ಬಾಲಕೃಷ್ಣನ್ ನಾಯರ್ ಬಾವಿಗೆ ಬಿದ್ದ ವಿಷಯ ತಿಳಿದು ತಲುಪಿದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ಬೇಡಗಂ ಪೊಲೀಸರು ಮೃತದೇಹವನ್ನು ಪಂಚನಾಮೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು. ಜನವರಿ 31ರಂದು ಬಾಲಕೃಷ್ಣನ್ ನಾಯರ್‌ರ ಪುತ್ರ ಮಣಿಕಂಠನ್ (47) ಅಡೂರು …

ಶೋಚನೀಯ ಸ್ಥಿತಿಯಲ್ಲಿರುವ ಶಿಕ್ಷಣ, ಆರೋಗ್ಯ ಕೇಂದ್ರಗಳ ಮುಚ್ಚುಗಡೆ: ಬದಲಿ ವ್ಯವಸ್ಥೆಯಿಲ್ಲದೆ ಸಮಸ್ಯೆ

ಕುಂಬಳೆ: ಕಳೆದ ಮಳೆಗಾಲದಲ್ಲಿ ಕೋಟ್ಟಯಂನಲ್ಲಿ ಸರಕಾರಿ ಆಸ್ಪತ್ರೆ ಕಟ್ಟಡವೊಂದು ಕುಸಿದುಬಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ಹಲವು ಆರೋಗ್ಯ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು. ಆದರೆ ಅವುಗಳನ್ನು ದುರಸ್ತಿಗೊಳಿಸಲು  ಕ್ರಮ ಉಂಟಾಗಲಿಲ್ಲ. ಇದು  ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಶೋಚನೀಯ ಸ್ಥಿತಿಯಲ್ಲಿದ್ದ ಕಟ್ಟಡಗಳನ್ನು ಮುಚ್ಚುಗಡೆಗೊಳಿಸ ಲಾಗಿತ್ತು. ಇದರಂತ ಕಾಸರಗೋಡು ಜಿಲ್ಲೆಯಲ್ಲೂ ಕೆಲವು ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಸರಕಾರಿ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ (ಬಿಎಫ್‌ಎಚ್‌ಸಿ) …

ಶುದ್ದ ಜಲ ಪೋಲಾಗಿ ಹೊಳೆಯಂತಾದ ರಸ್ತೆ: ಸೂರ್ಲುನಲ್ಲಿ ಕಟ್ಟಿ ನಿಲ್ಲುವ ನೀರಿಗೆ ಪರಿಹಾರವಿಲ್ಲ

ಕಾಸರಗೋಡು: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಇದೊಂದು ಹಳೆಯ ಪ್ರಸಿದ್ಧ ಚಿತ್ರಗೀತೆ. ಆದರೆ ಬಟ್ಟಂಪಾರೆ ಸೂರ್ಲು ರಸ್ತೆಯಲ್ಲಿ ನೆಲದ ಮೇಲೆಯೂ ದೋಣಿ ಸಾಗುವಂತಹ ಪರಿಸ್ಥಿತಿಯನ್ನು ಜಲಪ್ರಾಧಿಕಾರ ನಿರ್ಮಿಸಿದೆ. ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಹೊಳೆಯಂತಾಗಿದೆ. ಈ ಪರಿಸರದಲ್ಲಿ ಸಾಗಿದ ಪೈಪ್ ಎಲ್ಲೋ ಹಾನಿಗೊಂಡು ನೀರು ಪೋಲಾಗಿ ರಸ್ತೆಯಲ್ಲಿರುವ ಹೊಂಡಗಳಲ್ಲಿ ತುಂಬಿಕೊಳ್ಳುತ್ತಿದೆ. ತೀವ್ರ ನೀರಿನ ಕ್ಷಾಮ ಉಂಟಾಗಬಹುದಾದ ಬೇಸಿಗೆ ಸಮೀಪದಲ್ಲೇ ಇದ್ದು, ಆದರೆ ಅಧಿಕಾರಿಗಳು ನೀರು ಪೋಲಾಗುವುದನ್ನು ತಡೆಯಲು ಯಾವುದೇ …

ವಿವಿಧೆಡೆ ಕಡಲ್ಕೊರೆತದಿಂದ ಹಾನಿಗೊಂಡ ರಸ್ತೆ: ದುರಸ್ತಿಗೆ ಸ್ಥಳೀಯರ ಒತ್ತಾಯ

ಉಪ್ಪಳ: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳದಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿ ಸಮುದ್ರ ತೀರ ಪ್ರದೇಶದ ರಸ್ತೆಗಳು ಸಮುದ್ರ ಪಾಲಾಗಿ ನಾಶಗೊಂಡಿವೆ. ಆದರೆ ಇದುವರೆಗೂ ರಸ್ತೆ ಮರು ನಿರ್ಮಿಸದೆ ಇರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಪಂಚಾಯತ್‌ನ ಹನುಮಾನಗರ, ಶಿವಾಜಿನಗರ, ಕುದುಪುಳು, ಬಂಗ್ಲ, ಪೆರಿಂಗಡಿ, ಬೇರಿಕೆ ಸಹಿತ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಂಡು ಸ್ಥಳೀಯ ಮೀನು ಕಾರ್ಮಿಕರ ಕುಟುಂಬಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ರೋಗಿಗಳನ್ನು ಕೊಂಡೊಯ್ಯಲು ಕೂಡಾ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ. …

ಆದೂರು ಗೇರು ಸಂತತಿ ತೋಟದಲ್ಲಿ ಫಾರ್ಮ್ ಫೆಸ್ಟ್: ಸಾರ್ವಜನಿಕರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅವಕಾಶ

ಅಡೂರು: ಗಾಳಿಮುಖ ಗೇರುಬೀಜ ಸಂತತಿ ತೋಟದಲ್ಲಿ ಹಸಿರು ಉಡುಗೆ ತೊಟ್ಟ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನಾಗರಿಕರಿಗೆ ಸುವರ್ಣಾವಕಾಶ ಒದಗಿಸಲಾಗುತ್ತಿದೆ. ಸರಕಾರದ ಅಧೀನದಲ್ಲಿರುವ ಫಾರ್ಮ್‌ಗಳನ್ನು ಜನಪರಗೊಳಿಸಬೇಕೆಂಬ ಕೃಷಿ ಸಚಿವರ ನಿರ್ದೇಶ ಪ್ರಕಾರ ಈ ತಿಂಗಳ 28, ಮಾರ್ಚ್ 1, 2ರಂದು ವಿಪುಲವಾದ ಫಾರ್ಮ್ ಫೆಸ್ಟ್ ನಡೆಯಲಿದೆ. ಮೂರು ದಿನಗಳಲ್ಲಾಗಿ ನಡೆಯುವ ಈ ಕೃಷಿ ಪ್ರದರ್ಶನ ಮಾರಾಟಮೇಳ ಆದೂರು ಗಾಳಿಮುಖ ಪ್ರದೇಶಗಳಲ್ಲಾಗಿ ವ್ಯಾಪಿಸಿರುವ ಗೇರುತೋಟದ ಸೌಂದರ್ಯವನ್ನು ಸಾರ್ವಜನಿಕರಿಗೆ ಸಮೀಪದಿಂದ ಸವಿಯಲು ಅವಕಾಶ ಒದಗಿಸಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ …

ಕಾರ್ಮಿಕಶ್ರೇಷ್ಠ ಪುರಸ್ಕಾರ ಜಿಲ್ಲೆಯ 3 ಮಂದಿಗೆ 27ರಂದು ಪ್ರದಾನ

ಕಾಸರಗೋಡು: ರಾಜ್ಯದ 20 ವಿಭಿನ್ನ ಉದ್ಯೋಗ ವಲಯಗಳ ಉತ್ತಮ ಕಾರ್ಮಿಕರಿಗಿರುವ ೨೦೨೪ನೇ ವರ್ಷದ ಉದ್ಯೋಗ ಶ್ರೇಷ್ಠ ಪುರಸ್ಕಾರಗಳಲ್ಲಿ ಮೂರು ಪುರಸ್ಕಾರಗಳು ಕಾಸರಗೋಡಿಗೆ ಲಭಿಸಿದೆ. ಮೇರಿಮೆಲ್ಡ (ಅಡುಗೆ), ಶಿಬು ಎ. (ಶೇಂದಿ ಕಾರ್ಮಿಕ), ಬಬಿತ ಬೇಬಿ (ಬಾರ್ಬರ್, ಬ್ಯೂಟೀಷ್ಯನ್) ಎಂಬಿವರಿಗೆ ಈ ಪುರಸ್ಕಾರ ಲಭಿಸಿದೆ. 1 ಲಕ್ಷ ರೂ. ಹಾಗೂ ಪ್ರಶಸ್ತಿ ಪತ್ರ ಅಡಕವಾಗಿರುವ ಪುರಸ್ಕಾರವನ್ನು ಈ ತಿಂಗಳ 27ರಂದು ತಿರುವನಂತಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ವಿ. ಶಿವನ್ ಕುಟ್ಟಿ ಪ್ರದಾನ ಮಾಡುವರು. ಚೆರುವತ್ತೂರು ಮಡಕ್ಕರದ ರೆಸ್ಟೋರೆಂಟ್ ನಲ್ಲಿ …