ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾದ ಮೂರು ಮಂದಿ ಕುಂಬಳೆಯಲ್ಲಿ ಸೆರೆ : ಮನೆಯ ಟೆರೇಸ್ ಮೇಲೆ ಅವಿತುಕೊಂಡಿದ್ದ ಆರೋಪಿಗಳು ; ಕುಂಬಳೆ, ತೃಶೂರು ಪೊಲೀಸರ ಸಂಯುಕ್ತ ಕಾರ್ಯಾಚರಣೆ
ಕುಂಬಳೆ: ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದ ಮೂವರು ರೌಡಿಗಳನ್ನು ಕುಂಬಳೆಯ ಮನೆಯೊಂದರ ಟೆರೆಸ್ನ ಮೇಲಿನಿಂದ ಕುಂಬಳೆ ಹಾಗೂ ತೃಶೂರು ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಅತೀ ಸಾಹಸಿಕ ರೀತಿಯಲ್ಲಿ ಸೆರೆಹಿಡಿಯಲಾಗಿದೆ. ತೃಶೂರು ಕರಿಕ್ಕುಳಿ ಅಶೇರಿ ಕಯಟ್ಟಂ ಪಣಿಗ ಎಂಬಲ್ಲಿನ ಡುಡು ಯಾನೆ ಇಜಾಸ್ (27), ಕರುವನ್ನೂರು ನೆಡುಂಬೂರಕ್ಕಲ್ ನಿವಾಸಿ ನಿಯಾಸ್ (31), ಪೊರತ್ತಿಶ್ಶೇರಿ ಪುರಾಯಾಟ್ಟು ಪರಂಬಿಲ್ ನಿವಾಸಿ ಗೋಕುಲ್ಕೃಷ್ಣ (27) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕೊಟೇಶನ್, ಕಾಪಾ, ಮಾದಕವಸ್ತು, ಹತ್ಯೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಈ ಆರೋಪಿಗಳು …