ವಿಧಾನಸಭಾ ಚುನಾವಣೆ: ಜಿಲ್ಲೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ  ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಂತೆ  ಮಂಜೇಶ್ವರ ಠಾಣೆಯ ನೂತನ ಇನ್‌ಸ್ಪೆಕ್ಟರ್ ಆಗಿ ಜಿಜೀಶ್‌ರನ್ನು ನೇಮಿಸಲಾಗಿದೆ. ಇಲ್ಲಿಂದ  ಪಿ.ಅಜಿತ್ ಕುಮಾರ್‌ರನ್ನು ತಳಿಪರಂಬಕ್ಕೆ ವರ್ಗಾಯಿಸ ಲಾಗಿದೆ.  ಕುಂಬಳೆ ಕರಾವಳಿ ಠಾಣೆಯಿಂದ ಕೆ.ಆರ್. ಅನೂಪ್‌ರನ್ನು ಬದಿಯಡ್ಕಕ್ಕೆ, ಕಲ್ಲಿಕೋಟೆಯಿಂದ ಬೈಜು ಕೆ ಜೋಸ್‌ರನ್ನು ಕುಂಬಳೆಗೆ  ವರ್ಗಾಯಿಸಲಾಗಿದೆ.  ಶಿವನ್ ಚೋಡತ್ತ್ತ್ ಅವರನ್ನು ಹೊಸದುರ್ಗಕ್ಕೆ, ಎಂ.ಪಿ. ವಿನೀಶ್‌ರನ್ನು ವಿದ್ಯಾನಗರಕ್ಕೆ  , ಕೆ.ಪಿ. ವಿನೋದ್ ರನ್ನು ಬೇಡಗಕ್ಕೆ ಸಿ. ಶಾಜುರನ್ನು ಅಂಬಲತ್ತರಕ್ಕೆ, ಉಮೇಶ್‌ರನ್ನು ಚಿಟ್ಟಾರಿಕ್ಕಲ್‌ಗೆ, ಎಂ.ವಿ. ಶಿಜುರನ್ನು …

ಆದ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿದಾಗ ಶ್ರೇಯಸ್ಸು ಸಾಧ್ಯ- ಪೆರ್ಲ ಹಿಂದೂ ಸಂಗಮದಲ್ಲಿ ಸಾಧ್ವಿಶ್ರೀ

ಪೆರ್ಲ: ಹಿಂದೂ ಸಂಗಮ ಆಯೋಜನಾ ಸಮಿತಿ ಎಣ್ಮಕಜೆ ಪಂ. ಸಮಿತಿ ಆಶ್ರಯದಲ್ಲಿ ಪೆರ್ಲ ಪೇಟೆ ವಠಾರದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿಕೊಂಡಾಗ ಮಹತ್ವದ ಶ್ರೇಯಸ್ಸು ಕಾಣಲು ಸಾಧ್ಯ. ಶ್ರೇಷ್ಠ ದಾರ್ಶನಿಕರನ್ನು ವಿಶ್ವಕ್ಕೆ ನೀಡಿರುವ ಹೆಗ್ಗಳಿಕೆ ಭಾರತಕ್ಕಿದೆ. ಧರ್ಮ ಹಾಗೂ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಮಸ್ತ ಹಿಂದೂ ಸಮಾಜಕ್ಕೆ ಮಹತ್ವದ ಜವಾಬ್ದಾರಿಯಿದೆ. ಆರೆಸ್ಸೆಸ್‌ನ ನೂರನೇ ವರ್ಷಾಚರಣೆಯ ಮಹತ್ವದ …

ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ನಾಲ್ವರು ಕಾರ್ಮಿಕರು ಮೃತ್ಯು: ಗುತ್ತಿಗೆದಾರನ ಅಮಾನತು

ಕಲ್ಲಿಕೋಟೆ: ಕಲ್ಲಿಕೋಟೆಯ ವ್ಯಾಪಾರ ಕೇಂದ್ರವಾಗಿರುವ ವಲಿಯಂಗಾಡಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿ ಅದರ ಗುತ್ತಿಗೆದಾರನನ್ನು ಅಮಾನತುಗೊಳಿಸಲಾಗಿದೆ. ಕಲ್ಲಿಕೋಟೆ ಕಾರ್ಪರೇಶನ್‌ನ ಮಾಲಕತ್ವದಲ್ಲಿರುವ 60 ವರ್ಷದಷ್ಟು ಹಳೆಯದಾದ ಕಟ್ಟಡದ ಸನ್‌ಶೇಡ್‌ನ ಸ್ಲ್ಯಾಬ್ ನಿನ್ನೆ ಮಧ್ಯಾಹ್ನ ಕುಸಿದು ಅದರ ಅಡಿಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ದೇಹದ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ತಲೆಹೊರೆ ಕಾರ್ಮಿಕ ಕಿರಾಶೇರಿಯ ಪಿ.ಎ. ಅಬ್ದುಲ್ ಜಬ್ಬಾರ್ (60), ಅತ್ತೋಳಿ ನಿವಾಸಿಗಳಾದ ಕುನಿ ಅಶ್ರಫ್ (56), ಬಶೀರ್ (65) …

ನಿರ್ಮಾಣ ಕಾರ್ಮಿಕರ 16 ತಿಂಗಳ ಪಿಂಚಣಿ, ಸೌಲಭ್ಯ ಶೀಘ್ರ ವಿತರಿಸಲು ಸರಕಾರ ಮುಂದಾಗಬೇಕು-ಎಐಟಿಯುಸಿ

ಕಾಸರಗೋಡು: ಕೇರಳದಲ್ಲಿ ಕಾರ್ಮಿಕರ ಹಾಗೂ ಕುಟುಂಬಗಳ ಸಾಮಾಜಿಕ ಸುರಕ್ಷತೆಯನ್ನು ಖಚಿತಪಡಿಸಲು ಜ್ಯಾರಿಗೆ ತರಲಾದ ನಿರ್ಮಾಣ ಕಾರ್ಮಿಕರ ಕ್ಷೇಮ ನಿಧಿ ಮಂಡಳಿಯನ್ನು ಸರಕಾರ ಸಂರಕ್ಷಿಸಬೇಕೆಂದು ಕನ್‌ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಜಿಲ್ಲಾ  ಸಮ್ಮೇಳನ ಒತ್ತಾಯಿಸಿದೆ. 16 ತಿಂಗಳ ಪಿಂಚಣಿ ವಿತರಣೆಯಾಗಿಲ್ಲ. ಒಂದು ವರ್ಷದಿಂದ ಸೌಲಭ್ಯ, ಅರ್ಜಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಕೇರಳ ರಾಜ್ಯೋದಯ ದಿನದಂದು ಮುಖ್ಯಮಂತ್ರಿ ತನ್ನ ಭಾಷಣದಲ್ಲಿ ಈ ಪಿಂಚಣಿ  ವಿತರಣೆಗಾಗಿ 950 ಕೋಟಿ ರೂಪಾಯಿ ಮೀಸಲಿಡುವುದಾಗಿ ತಿಳಿಸಿದ್ದರು. ಅದರ ಮೇಲೆ ಕಾರ್ಮಿಕರು ನಿರೀಕ್ಷೆಯಿರಿಸಿದ್ದಾರೆ. ಆದ್ದರಿಂದ ಪಿಂಚಣಿ …

ಪಾವೂರಿನಿಂದ ಮಧ್ಯವಯಸ್ಕನನ್ನು ಅಪಹರಣಗೈದ ನಾಲ್ಕು ಮಂದಿ ಬಂಧನ: ಎರಡು ಕಾರು ವಶ; ಇತರ ಆರೋಪಿಗಳಿಗಾಗಿ ಶೋಧ; ಅಪಹರಣಕ್ಕೀಡಾದ ವ್ಯಕ್ತಿ ಸುರಕ್ಷಿತ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರಿನಿಂದ  ಅಪಹರಣಕ್ಕೀಡಾದ ಮಧ್ಯ ವಯಸ್ಕನನ್ನು ಪೊಲೀಸರು ಅತೀ ಸಾಹಸಿಕವಾಗಿ  ರಕ್ಷಿಸಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದಲ್ಲಿ ಸೆರೆಹಿಡಿಯ ಲಾಗಿದೆ. ಅಪಹರಣಕ್ಕಾಗಿ ಬಳಸಿದ ಎರಡು ಕಾರುಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಂಜೇಶ್ವರ ಪಾವೂರು ನಿವಾಸಿಗಳಾದ ಅಬ್ದುಲ್ ಗಫೂರ್ (25), ಅಬ್ದುಲ್ ಅನಸ್ (27), ಮುಹಮ್ಮದ್ ಶಿಹಾಬ್ (40), ಮುಹಮ್ಮದ್ ರಫೀಕ್ (40) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಪಾವೂರು ಕೊಂಬಂಕುಳಿಯ ಸಾಮಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ …

ತಂತ್ರಿವರ್ಯರ ವಾದ ಎತ್ತಿ ಹಿಡಿದ ವಿಪಕ್ಷ: ಕಲುಷಿತಗೊಂಡ ವಿಧಾನಸಭಾ ಅಧಿವೇಶನ

ತಿರುವನಂತಪುರ: ಒಂದು ವಾರದ ಬಿಡುವಿನ ಬಳಿಕ ಇಂದು ಪುನರಾರಂಭ ಗೊಂಡ ರಾಜ್ಯ ವಿಧಾನಸಭೆಯ  ಅಧಿವೇಶನದಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಶಬರಿಮಲೆ ತಂತ್ರಿವರ್ಯರನ್ನು ಬಂಧಿಸಿದ ವಿಷಯವನ್ನು ಎತ್ತಿ ಹಿಡಿದು ವಿಪಕ್ಷಗಳು ನಡೆಸಿದ ಪ್ರತಿಭಟನೆ ವಿಧಾನಸಭಾ ಅಧಿವೇಶನವನ್ನು ಕಲುಷಿತಗೊಳಿಸಿತು. ಮಾತ್ರವಲ್ಲ ವಿಧಾನಸಭೆಗೆ ಆಗಮಿಸುವ ವೇಳೆ ವಿಪಕ್ಷೀಯರು ಕೈಯಲ್ಲಿ ಫಲಕ ಗಳನ್ನು ಹಿಡಿದು ಸದನಕ್ಕೆ ಆಗಮಿಸಿ ಶಬರಿಮಲೆ ತಂತ್ರಿವರ್ಯರ ಹೇಳಿಕೆ ಯನ್ನು ಎತ್ತಿ ಹಿಡಿದು ಅದರ ಹೆಸರಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ   ನಂತರ ಸಭಾತ್ಯಾಗ ನಡೆಸಿ ದರು. …

ಆಡಿಟೋರಿಯಂ ಮೆನೇಜರ್ ಬಾವಿಗೆ ಬಿದ್ದು ಮೃತ್ಯು

ಬೋವಿಕ್ಕಾನ: ಕಂಗಿನ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೋವಿಕ್ಕಾನ ಸಮೀಪದ ಮುಂಡಕೈ ಕೆ.ಕೆ. ವಳಪ್ಪಿನ ಕೆ. ಚಂದ್ರನ್ (45) ಸಾವನ್ನಪ್ಪಿದ ದುರ್ದೈವಿ. ಇವರು ಇರಿಯಣ್ಣಿಯ ಕೈಲಾಸ್ ಆಡಿಟೋರಿ ಯಂನ ಮೆನೇಜರ್ ಆಗಿದ್ದರು. ಮೊನ್ನೆ ಸಂಜೆ ಅಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳಿದ ಚಂದ್ರನ್ ತಮ್ಮ ಅಡಿಕೆ ತೋಟಕ್ಕೆ ನೀರು  ಹಾಯಿಸಲೆಂದು ಹೋಗುವ ವೇಳೆ ಆವರಣವಿಲ್ಲದ ಬಾವಿಗೆ  ಕಾಲು ಜಾರಿ ಬಿದ್ದಿದ್ದರೆನ್ನಲಾ ಗಿದೆ. ಬಾವಿಗೆ ಬಿದ್ದ ಶಬ್ದ ಕೇಳಿದ ಸಮೀಪ …

ಪೊಲೀಸರು ವಿಚಾರಣೆ ನಡೆಸಿದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ ಪ್ರಕರಣ: ಸಹೋದರನ ಹೇಳಿಕೆ ದಾಖಲಿಸಿದ ಪೊಲೀಸ್

ಕಾಸರಗೋಡು: ನೆರೆಮನೆಯ ಚಿನ್ನ ಕಳವಿಗೀಡಾದ ಬಗ್ಗೆ ಲಭಿಸಿದ ದೂರಿಗೆ ಸಂಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ ಯುವತಿ  ವಿಷಪ್ರಾಶನಗೈದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಆಕೆಯ ಸಹೋದರನ ಹೇಳಿಕೆಯನ್ನು ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ ಆಕೆಯ ಹೆತ್ತವರು ಹಾಗೂ ಇತರರ ಹೇಳಿಕೆಯನ್ನು ದಾಖಲಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಆಲಂಪಾಡಿ ನಾಲತ್ತಡ್ಕದ ನಬೀಸತ್ ಜಸೀಲ (24) ಫೆ. 15ರಂದು ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ಬಗ್ಗೆ  ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ  ಆಕೆಯ ಮನೆಯವರು ವಿದ್ಯಾನಗರ …

ಚಿನ್ನ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿ 41 ಲಕ್ಷ ರೂ. ದರೋಡೆ: ಕಾಸರಗೋಡಿನ ಮೂವರ ಸೆರೆ

ಕಾಸರಗೋಡು: ಚಿನ್ನದ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ೪೧ ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮೂವರನ್ನು ಕೊಯಂಬತ್ತೂರು ಕೆ.ಜಿ. ಚಾವಡಿ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ಮುಂಡಕಂಡ ವೀಥಿಕಿಳಕ್ಕೇ ವೀಟಿಲ್‌ನ ನಿತಿನ್ (33), ನೀಲೇಶ್ವರ ಚಾತಮತ್ತ್ ಮೀತಲೆ ವೀಟಿಲ್‌ನ ಶ್ರೀಕುಮಾರ್ (31) ಮತ್ತು  ನೀಲೇಶ್ವರ ಪಳ್ಳಿಕ್ಕರೆ ಕನಕವೀಟಿಲ್‌ನ ಸುಧೀಶ್ (39) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ.  ದರೋಡೆಗೈದ ಹಣದ ಪೈಕಿ 2೦,೦೦೦ ರೂ.,  ಅಪಹರಣಕ್ಕಾಗಿ ಉಪಯೋಗಿಸಲಾದ ಕಾರು ಮತ್ತು ಮೊಬೈಲ್ ಫೋನ್ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಚಿನ್ನ …

ಮುಳ್ಳೇರಿಯ: ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಚಿರತೆಯೊಂದು ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಳ್ಳೇರಿಯ ಸಮೀಪದ ಪೆರಿಯಡ್ಕದ ಆನಂದನ್ ಎಂಬವರ ಮನೆ ಬಳಿಯ ಬಾವಿಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಪಾಲ ಕರು ಹಾಗೂ ಆರ್‌ಆರ್‌ಟಿ ತಂಡ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದೊಂದಿಗೆ ಚಿರತೆಯನ್ನು ನಿನ್ನೆ ರಾತ್ರಿವೇಳೆ ಬಾವಿಯಿಂದ ಮೇಲಕ್ಕೆತ್ತಿದು. ನಂತರ ಅದನ್ನು ಅರಣ್ಯ ಇಲಾಖೆ ಕಚೇರಿಗೆ ಸಾಗಿಸಲಾಯಿತು. ಕಾರಡ್ಕ ಅರಣ್ಯವಲಯದಲ್ಲಿ ಹಲವು ದಿನಗಳ ಹಿಂದೆಯೇ ಚಿರತೆ …