ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಆರಂಭ
ಕಾಸರಗೋಡು: ಛಾಯಾಗ್ರಹಣ ವಲಯದಲ್ಲಿ ಕೆಲಸ ಮಾಡುವವರ ಅತ್ಯಂತ ದೊಡ್ಡ ಸಂಘಟನೆಯಾದ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ೪೧ನೇ ಜಿಲ್ಲಾ ಸಮ್ಮೇಳನ ಕಾಞಂಗಾಡ್ ವ್ಯಾಪಾರ ಭವನದಲ್ಲಿ ಆರಂಭಗೊಂಡಿತು. ನಿಧನ ಹೊಂದಿದ ಫೊಟೋ ಗ್ರಾಫರ್ಗಳಾದ ವಿನೋದ್, ಚಿದಾನಂದ ಅರಿಬೈಲು ಎಂಬಿವರ ಸ್ಮರಣಾರ್ಥವಿರುವ ನಗರದಲ್ಲಿ ಎರಡು ದಿನಗಳಲ್ಲಾಗಿ ಸಮ್ಮೇಳನ ನಡೆಯಲಿದೆ. ನಿನ್ನೆ ಬೆಳಿಗ್ಗೆ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಧ್ವಜಾರೋಹಣಗೈದರು. ಬಳಿಕ ಟ್ರೇಡ್ ಫೇರ್ನ್ನು ರಾಜ್ಯಾಧ್ಯಕ್ಷ ಎ.ಸಿ. ಜೋನ್ಸನ್ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. …
Read more “ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಆರಂಭ”