ಶಬರಿಮಲೆಯಲ್ಲಿ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್ನಲ್ಲಿ: ಗಂಭೀರ ಲೋಪ ಪತ್ತೆ ; ಗುತ್ತಿಗೆದಾರ, ರೆಡ್ಕೋಗೆ ನೋಟೀಸ್
ಪತ್ತನಂತಿಟ್ಟ: ಶಬರಿಮಲೆ ದೇಗುಲ ದಲ್ಲಿ ಜೇನುತುಪ್ಪದ ಹರಕೆ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್ನಲ್ಲಿ ಆಗಿತ್ತೆಂಬ ಗಂಭೀರ ವಿಷಯ ಹೊರಬಂದಿದೆ. ಇದಕ್ಕೆ ಸಂಬಂಧಿಸಿ ಜೇನುತುಪ್ಪ ವಿತರಿಸಿದ ಗುತ್ತಿಗೆದಾರರಿಗೆ ಶಬರಿಮಲೆ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ನೋಟೀಸು ಜ್ಯಾರಿಗೊಳಿಸಿದ್ದಾರೆ. ಹೀಗೆ ವಿತರಿಸಲಾದ ಜೇನುತುಪ್ಪ ವನ್ನು ಉಪಯೋಗಿಸದೆ ಅದನ್ನು ಇನ್ನಷ್ಟು ಸಮಗ್ರ ರಾಸಾಯನಿಕ ಪರೀಕ್ಷೆ ಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ. ಶಬರಿಮಲೆ ದೇಗುಲದಲ್ಲಿ ಉಪಯೋಗಿಸುವ ಎಲ್ಲಾ ಸಾಮಾಗ್ರಿಗಳನ್ನು ಮೊದಲು ಪಂಪಾದಲ್ಲಿರುವ ಆಹಾರ ಭದ್ರತಾ ವಿಭಾಗದ ಲ್ಯಾಬ್ಗೆ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಹೀಗೆ …