ಖ್ಯಾತ ಜಾದೂಗಾರ ಪ್ರೊ. ಮಾಧವ ನಿಧನ

ಕಾಸರಗೋಡು: ಹಿರಿಯ ಜಾದುಗಾರ ಪ್ರೊ. ಮಾಧವ (73) ನಿನ್ನೆ ನಿಧನ ಹೊಂದಿದರು. ಮೂಲತಃ ಉಬ್ರಂಗಳ ನಿವಾಸಿಯಾಗಿರುವ ಇವರು ಕೂಡ್ಲುನಲ್ಲಿ ವಾಸವಾಗಿದ್ದರು. ನೋರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿದ್ದರು. ೧೫ ಕಲಾವಿದರನ್ನೊಳಗೊಂಡ ಮಾಯಾರಂಜಿನಿ ತಂಡವನ್ನು ಕಟ್ಟಿ ಇಲ್ಯೂಶ್ಯನ್ ಜಾದು ಸಾಮಗ್ರಿಗಳನ್ನು ಬಳಸಿ ಕರ್ನಾಟಕ, ಕೇರಳದ ವಿವಿಧೆಡೆ ೫ ದಶಕಗಳ ಕಾಲ ಪ್ರದರ್ಶನ ನೀಡಿದ್ದಾರೆ. ಇವರ ಪುತ್ರ ಮಾಸ್ಟರ್ ಚಿಂತನ್ ಜಾದೂಗಾರನಾಗಿದ್ದು, ರಾಷ್ಟ್ರದ ಗಮನ ಸೆಳೆದಿದ್ದರಾದರೂ ಈ ಹಿಂದೆ …

ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಮೂವರಿಗೆ ತಂಡದಿಂದ ಹಲ್ಲೆ

ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದ. ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈಯ್ಯಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1.30ರ  ವೇಳೆ ಘಟನೆ ನಡೆದಿದೆ. ಈ ಮೂರು  ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ ಅವುಗಳನ್ನು ಉದ್ಯಾವರ ಅಂಡರ್ ಪಾಸ್ …

ಮನೆಯ ಎರಡಂತಸ್ತಿನಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಮೃತ್ಯು

ಕುಂಬಳೆ: ಪೈಂಟಿಂಗ್ ಕೆಲಸದ ವೇಳೆ ಮನೆಯ ಎರಡಂತಸ್ತಿನಿಂದ ಬಿದ್ದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶ ನಿವಾಸಿ ಶಂಸಾದ್ (30) ಮೃತಪಟ್ಟ ದುರ್ದೈವಿ. ನಿನ್ನೆ ಮಧ್ಯಾಹ್ನ ಪೆರ್ಮುದೆಯಲ್ಲಿ ದುರ್ಘಟನೆ ಸಂಭವಿಸಿದೆ. ಪೆರ್ಮುದೆಯ ರಾಮಚಂದ್ರ ಎಂಬವರ ಮನೆಯ ಎರಡಂತಸ್ತಿನಲ್ಲಿ ಪೈಂಟಿಂಗ್ ನಡೆಸುತ್ತಿದ್ದಂತೆ ಶಂಸಾದ್ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ಅಲ್ಲಿದ್ದವರು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪಿಎಸ್‌ಸಿ ಜಿಲ್ಲಾ ಕಚೇರಿಗೆ ಬೀಗ ಜಡಿಯಲು ಕೆಎಸ್‌ಯು ಯತ್ನ: ತಡೆದ ಪೊಲೀಸರು; 11 ಮಂದಿ ವಿರುದ್ಧ ಕೇಸು

ಕಾಸರಗೋಡು: ಪಿಎಸ್ ಸಿಯನ್ನು ರಾಜ್ಯ ಸರಕಾರ ಕೇವಲ ಒಂದು ನೋಟದ ವಸ್ತುವನ್ನಾಗಿಸಿ ಉದ್ಯೋಗಾ ರ್ಥಿಗಳನ್ನು ವಂಚಿಸುತ್ತಿ ದೆಯೆಂದು ಆರೋಪಿಸಿ ಕೆಎಸ್‌ಯು ಕಾರ್ಯ ಕರ್ತರು ನಿನ್ನೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ  ಬೀಗ ಜಡಿಯುವ ಯತ್ನ ನಡೆಸಿದ್ದು, ಅದನ್ನು ಪೊಲೀಸರು ತಡೆದಿದ್ದಾರೆ. ಕೆಎಸ್‌ಯು ಕಾರ್ಯಕರ್ತರು ಪ್ರತಿಭಟನೆ ಹಾಗೂ ಘೋಷಣೆಗಳೊಂ ದಿಗೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ ಆಗಮಿಸಿ ಬೀಗ ಜಡಿಯಲೆತ್ನಿಸಿದ್ದಾರೆ. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಜವಾದ್ ಪುತ್ತೂರು, ಇತರ ಪದಾಧಿಕಾರಿಗಳಾದ ನುಹ್‌ಮಾನ್ ಪಳ್ಳಂಗೋಡು, ಅನ್ಸಾರಿ ಕೋಟೆಕುನ್ನು, ವಿಷ್ಣು ಇರಿಯಣ್ಣಿ, ವೈಷ್ಣವ್ ಕೋಳಿಚ್ಚಾಲು, …

 ಎಂಡಿಎಂಎ ಸಹಿತ ಓರ್ವ ಸೆರೆ

ಕಾಸರಗೋಡು: ನಗರದಲ್ಲಿ ನಿನ್ನೆ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಹಿತ ಓರ್ವನನ್ನು ಸೆರೆಹಿಡಿಯಲಾಗಿದೆ. ನೆಲ್ಲಿಕುಂಜೆ ಬಂಗರಕುನ್ನು ಸಿಂಗಪೂರ್ ಹೌಸ್‌ನ ಬಿ.ಎಂ. ಸಿದ್ದಿಕ್ (43) ಎಂಬಾತನನ್ನು ಬಂಧಿಸಿ ೩೨ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ನಗರಠಾಣೆ ಎಸ್‌ಐ ಸಿ ಆರ್. ಮೌಶಮಿ ಹಾಗೂ ತಂಡ ನಿನ್ನೆ ರಾತ್ರಿ 10.30ರ ವೇಳೆ  ಕರಂದಕ್ಕಾಡಿನಿಂದ ಈತನನ್ನು ಬಂಧಿಸಿರುವುದಾಗಿ ತಿಳಿಸಲಾಗಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸ್ ತಂಡ ಕರಂದಕ್ಕಾಡ್‌ನ ಹೋಟೆಲೊಂ ದರ ಬಳಿಗೆ ತಲುಪಿದಾಗ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂ ದಿದೆ. ಇದರಿಂದ ಪೊಲೀಸರು …

ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆ: ಬಾಲಕಿ ವರ್ಷಗಳ ಕಾಲ ದೌರ್ಜನ್ಯಕ್ಕೀಡಾಗಿದ್ದಾಳೆಂದು ವರದಿ

ಕೊಚ್ಚಿ: ಎಳಮಕ್ಕರದಲ್ಲಿ ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆಯಲ್ಲಿ ಆತಂಕಗೊಳ್ಳುವ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದೆ. ಬಾಲಕಿ ಹಲವು ವರ್ಷಗಳಿಂದ ದೌರ್ಜನ್ಯಕ್ಕೀಡಾಗಿರುವುದಾಗಿಯೂ ಸಾವು ಸಂಭವಿಸುವ ಗಂಟೆಗಳ ಹಿಂದೆಯೂ ದೌರ್ಜನ್ಯ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ. ಆದರೆ ಬಾಲಕಿಯನ್ನು ದೌರ್ಜನ್ಯಗೈದಿ ರುವುದು ಯಾರು, ಎಲ್ಲಿ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಎಳಮಕ್ಕರ ಪೊಲೀಸ್ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪುತ್ರಿ ದೌರ್ಜನ್ಯಕ್ಕೀಡಾದ ಮಾಹಿತಿ ತಿಳಿದಿಲ್ಲವೆಂದು ಕೊಚ್ಚಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ತಾಯಿ ಪೊಲೀಸರಲ್ಲಿ …

ಕೇರಳದಲ್ಲಿ ಗಂಟೆಗೆ 160 ಕಿ.ಮೀ. ವೇಗದ ಏಳು ರೈಲು ಯೋಜನೆಗೆ ಅನುಮತಿ

ತಿರುವನಂತಪುರ: ಕೇರಳದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಏಳು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಇದರಂತೆ ಶೊರ್ನೂರು-ಮಂಗಳೂರು (307 ಕಿ.ಮೀ), ಕೊಯಂಬತ್ತೂರು-ಶೊರ್ನೂರು (99 ಕಿ.ಮೀ), ಶೊರ್ನೂರು-ಎರ್ನಾಕುಳಂ (106 ಕಿ.ಮೀ), ಎರ್ನಾಕುಳಂ-ಕಾಯಂಕುಳಂ (ಕೋಟ್ಟಯಂ ಮೂಲಕ 115 ಕಿ.ಮೀ), ಕಾಯಂಕುಳಂ-ತಿರುವನಂತಪುರ (105 ಕಿ.ಮೀ), ತಿರುವನಂತಪುರ-ನಾಗರ್‌ಕೋವಿಲ್  (76 ಕಿ.ಮೀ) ಮತ್ತು ಪೊದಾವೂರ್- ಅಂಬಲಪುಳ ಎಂಬೀ ರೈಲು ಅಭಿವೃದ್ಧಿ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸಲಾಗುದೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ …

2027ರಿಂದ ಒಂದನೇ ತರಗತಿ ಸೇರ್ಪಡೆ ಪ್ರಾಯಮಿತಿ ಆರು ವರ್ಷ

ತಿರುವನಂತಪುರ: 2027-28ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರ್ಪಡೆಗೊಳಿಸುವ ವಯೋಮಿತಿ ಯನ್ನು ಆರು ವರ್ಷವಾಗಿ ನಿಗದಿಪಡಿ ಸಲಾಗಿದೆ. ಇದರಂತೆ ಆರು ವರ್ಷ ಪೂರ್ತಿಯಾದ ಮಕ್ಕಳಿಗೆ ಮಾತ್ರವೇ ಇನ್ನು ಒಂದನೇ ತರಗತಿಗೆ ಪ್ರವೇಶ ಲಭಿಸಲಿದೆ. ಈ ಹೊಸ ಕ್ರಮ ಜ್ಯಾರಿಗೊಳ್ಳುವ ವೇಳೆ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾ ರ್ಥಿಗಳ ಸಂಖ್ಯೆಯಲ್ಲಿ  ಶೇ. ೪೫ರಷ್ಟು  ಕುಸಿತ ಉಂಟಾಗುವ ಸಾಧ್ಯತೆ ಇದೆಯೆಂದು  ಲೆಕ್ಕಹಾಕಲಾಗಿದೆ. ಮಾತ್ರವಲ್ಲ ಅಧ್ಯಾಪಕರ ಖಾಯಂ ನೇಮಕಾತಿಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದನೇ …

ಎಡರಂಗದ ಮಂಜೇಶ್ವರ ಮಂಡಲ ಅಭಿವೃದ್ಧಿ ಮುನ್ನಡೆ ಜಾಥಾ ಕಾಟುಕುಕ್ಕೆಯಿಂದ ಆರಂಭ

ಉಪ್ಪಳ: ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಅಭಿವೃದ್ದಿ ಮುನ್ನಡೆ ಜಾಥಾ ನಿನ್ನೆ ಸಂಜೆ ಕಾಟು ಕುಕ್ಕೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿ ದರು. ಜಾಥಾ ಇಂದು ಬೆಳಿಗ್ಗೆ ಪೆರ್ಲದಿಂದ ಆರಂಭಗೊAಡಿದ್ದು, ವಿವಿಧ ಕೇಂದ್ರಗಳಲ್ಲಿ ಪರ್ಯಟನೆ ನಡೆಸಿ ನಾಳೆ ಸಂಜೆ 6ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾರೋಪೆಗೊಳ್ಳಲಿದೆ. ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಸಮಾರೋಪ ಉದ್ಘಾಟಿಸುವರು. ಮುಖಂಡರಾದ ಕೆ.ಆರ್ ಜಯಾನಂದ, ಜಯರಾಮ ಬಲ್ಲಂಗುಡೇಲು, ಸಿ.ಎ ಝು ಬೈರ್, ಅಹಮ್ಮದ್ ನೇತೃತ್ವ ನೀಡುವರು.

ಬಿಜೆಪಿ ವಿರುದ್ಧ ಐಕ್ಯರಂಗದಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ವಿಧಾನಸಭಾ ಮಂಡಲದಲ್ಲಿ ಬಿಜೆಪಿ ಕೆಲವು ಅಧಿಕಾರಿಗಳ ಜೊತೆ ಸೇರಿಕೊಂಡು ಒಂದು ಸಮುದಾಯದ ಮತಗಳನ್ನು ವ್ಯಾಪಕವಾಗಿ ತಿರಸ್ಕರಿಸುತ್ತಿದೆ ಎಂದು ಶಾಸಕ ಎಕೆಎಂ ಅಶ್ರಫ್ ಆರೋಪಿಸಿ ದ್ದಾರೆ. ಫಾರ್ಮ್ 7 ದುರುಪಯೋಗ ಮಾಡಿ  ನಕಲಿ ದೂರು ನೀಡುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಸ್ವೀಕರಿಸಬೇಕೆಂದು ಆಗ್ರಹಿಸಿ ಯುಡಿಎಫ್ ವಿಧಾನಸಭಾ ಮಂಡಲ ಸಮಿತಿ ಇಲೆಕ್ಟ್ರಲ್ ರಿಜಿಸ್ಟ್ರೇ ಶನ್ ಆಫೀಸರ್‌ಗೆ ದೂರು ನೀಡಿದೆ.