ಅಧ್ಯಾಪಕ ನಿಧನ

ಮಂಜೇಶ್ವರ: ಕಳೆದ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಆನೆಕಲ್ಲು ನಿವಾಸಿ ಗೋಪಾಲ ನಾಯ್ಕ (47) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ವರ್ಕಾಡಿ ಧರ್ಮನಗರ ಮಣವಾಟಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಾಪಕರಾಗಿದ್ದರು. ಇವರ ತಂದೆ ಪೊಡಿಯ ನಾಯ್ಕ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಂದರಿ, ಪತ್ನಿ ಮಮತ, ಮಕ್ಕಳಾದ ರಕ್ಷಿತ್, ಯಕ್ಷಿತ್, ಸಹೋದರರಾದ ನಾರಾಯಣ ನಾಯ್ಕ್, ಕೃಷ್ಣ (ಅಧ್ಯಾಪಕ), ಸಹೋದರಿಯರಾದ …

ಬದಿಯಡ್ಕದಲ್ಲಿ ಬಿಜೆಪಿ ಆಡಳಿತ

ಕಾಸರಗೋಡು: ಗ್ರಾಮ ಪಂಚಾಯತ್‌ಗಳಲ್ಲಿ ನೂತನ ಅಧ್ಯಕ್ಷರ  ಆಯ್ಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಉಪಾಧ್ಯಕ್ಷರ ಆಯ್ಕೆ ಅಪರಾಹ್ನ ನಡೆಯಲಿರುವುದು. ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಆಡಳಿತ ಬಿಜೆಪಿಗೆ ಲಭಿಸಿದೆ. ಇಂದು ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಅದೃಷ್ಟ ಬಿಜೆಪಿಯ ಪಾಲಾಗಿದೆ. ಇದರಿಂದ ಬಿಜೆಪಿಯ ಡಿ. ಶಂಕರ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಪಂಚಾಯತ್‌ನಲ್ಲಿ ಒಟ್ಟು ೨೧ ವಾರ್ಡ್‌ಗಳಿದ್ದು, ಈ ಪೈಕಿ ಯುಡಿಎಫ್ ಹಾಗೂ ಬಿಜೆಪಿ ತಲಾ 10 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಸಮಾನ ಬಲ ಹೊಂದಿದೆ. ಒಂದು ವಾರ್ಡ್‌ನಲ್ಲಿ …

20ರ ಹರೆಯದ ಯುವಕ ನೇಣು: ಮನನೊಂದ ಅಜ್ಜಿ, ಸಹೋದರಿ ಆತ್ಮಹತ್ಯೆ

ಕಣ್ಣೂರು: ಕುಟುಂಬವೊಂದರ ಮೂರು ಮಂದಿ ಆತ್ಮಹತ್ಯೆಗೈದ ಸ್ಥಿತಿ ಯಲ್ಲಿ ಪತ್ತೆಹಚ್ಚಲಾಗಿದೆ. ಕೂತು ಪರಂಬ್ ನೀರ್ವೇಲಿ ಎಂಬಲ್ಲಿನ ನಿಮಿಷ ನಿವಾಸದ ಇ. ಕಿಶನ್ (20), ವಿ.ಕೆ. ರೆಜಿ, ಸಹೋದರಿ ರೋಜ ಎಂಬಿವರು ಆತ್ಮಹತ್ಯೆಗೈದವರು. ಮೂರಿಯಾಡ್ ಚೆಮ್ಮಾಲ್ ರಸ್ತೆಯ ಅಜ್ಜಿಯ ಮನೆಯಲ್ಲಿ ಈ ಮೂವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಿಶನ್‌ನನ್ನು ನಿನ್ನೆ ಸಂಜೆ ಅಜ್ಜಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿ ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಜ್ಜಿ ಹಾಗೂ ಸಹೋದರಿ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಡಂಗುರ ಶೋಭಾಯಾತ್ರೆ ನಾಳೆ

ಮೊಗ್ರಾಲ್: ೬೪ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಶೋಭಾಯಾತ್ರೆ ನಾಳೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಪ್ತಿಗೊಳ್ಳಲಿದೆ. ಕಲೋತ್ಸವವನ್ನು ಗ್ರೀನ್ ಪ್ರೊಟೋಕಾಲ್ ಪಾಲಿಸಿ ನಡೆಸಲು ಸಮಿತಿ ಕಾರ್ಯಾಚರಣೆ ನಡೆಸುತ್ತಿದೆ. ಇದರಂಗವಾಗಿ ತೆಂಗಿನ ಮಡಲು ಹೆಣೆಯುವ ಸ್ಪರ್ಧೆ, ಗ್ರೀನ್ ವಾಲೆಂಟಿಯರ್‌ಗಳಿಗೆ ತರಗತಿಗಳನ್ನು ಹಮ್ಮಿಕೊಳ್ಳಲಾಯಿತು. ಶುಚಿತ್ವ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಪಿ. ಜಯನ್, ಪ್ರೋಗ್ರಾಂ ಆಫೀಸರ್ ರಂಜಿತ್ ಕೆ.ವಿ, ಶುಚಿತ್ವ ಮಿಷನ್ ರಿಸೋರ್ಸ್ ಪರ್ಸನ್ ರಂಜಿನಿ ಕಾರಡ್ಕ ತರಗತಿಗೆ …

ಅಶ್ರಫ್ ಪಚ್ಲಂಪಾರೆ ಮನೆಗೆ ಆಕ್ರಮಣ : ಆರೋಪಿಗಳ ಬಂಧನಕ್ಕೆ ಕ್ರಿಯಾ ಸಮಿತಿ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಶ್ರಫ್ ಪಚ್ಲಂಪಾರೆಯವರ ಮನೆಗೆ ಆಕ್ರಮಣಗೈದು ನಾಲ್ಕು ತಿಂಗಳ ಗರ್ಭಿಣಿಯಾದ ಮಹಿಳೆಯನ್ನು, ಮಕ್ಕಳನ್ನು ಆಕ್ರಮಿಸಿ ದಾಂಧಲೆ ನಡೆಸಿದ ಅಕ್ರಮಿಗಳನ್ನು ರಕ್ಷಿಸಲಿರುವ ಪೊಲೀಸರ ಕ್ರಮವನ್ನು ಉಪೇಕ್ಷಿಸಬೇಕೆಂದು ಕ್ರಿಯಾ ಸಮಿತಿ ಆಗ್ರಹಿಸಿದೆ. ಎರಡುಮೂರು ಕಿಲೋಮೀಟರ್ ದೂರದಿಂದ ಬಂದ ಅಕ್ರಮಿಗಳು ಗೇಟ್‌ನ ಹೊರಗಿನಿಂದ ಮನೆಗೆ ಪಟಾಕಿಗಳನ್ನೆಸೆದು ಬಳಿಕ ಒಳಗೆ ನುಗ್ಗಿ ಆಕ್ರಮಿಸಿದ್ದು, ಗಾಯಗೊಂಡ ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಹಿಳೆಯರ ಮಾನಹಾನಿ ಹಾಗೂ ಮನೆಗೆ ನಷ್ಟ ಉಂಟುಮಾಡಿದ ಅಕ್ರಮಿಗಳ ವಿರುದ್ಧ ಕೌಂಟರ್ …

ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ಹೂವಿನ ಪೂಜೆ, ಸನ್ಮಾನ

ಉಪ್ಪಳ: ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ವಿಶೇಷ ಹೂವಿನ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಪಿ.ಕೃಷ್ಣ ಅಡ್ಕ ಅಧ್ಯಕ್ಷತೆ ವಹಿಸಿದರು.ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಿಕೆ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಧಾರ್ಮಿಕ ಭಾಷಣ ಮಾಡಿದರು. ತೀಯಾ ಸಮಾಜ ಬೆಂ ಗಳೂರು ಪ್ರಧಾನ ಕಾರ್ಯದರ್ಶಿ ಸದಾನಂದ.ಕೆ, ಮಮತಾ ಶಶಿಧರ ಶೆಟ್ಟಿ ಗ್ರಾಮಚಾವಡಿ ಶಿರಿಯ, ಮಹಿಳಾ ಸಂಘದ ಅಧ್ಯಕ್ಷೆ ಅಮಿತಾ ಆನಂದ …

ಮುಗು ಕ್ಷೇತ್ರದಲ್ಲಿ ಗರ್ಭಗುಡಿಗೆ ದಾರಂದ ಮುಹೂರ್ತ

ಮುಂಡಿತ್ತಡ್ಕ: ಶೇಣಿ- ಮುಗು ಉಭಯ ಗ್ರಾಮಗಳ ಪ್ರಸಿದ್ಧ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯದೇವ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿಯ ದಾರಂದ ಮುಹೂರ್ತ ಕಿರುಷಷ್ಠಿಯಾದ ನಿನ್ನೆ ಜರಗಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಗರ್ಭಗುಡಿ ನಿರ್ಮಾಣ ನಡೆಯುತ್ತಿದೆ. ಈ ವರ್ಷದ ಕಿರು ಷಷ್ಠಿ ಮಹೋತ್ಸವದಂಗವಾಗಿ ದೇವರಿಗೆ ನವಕಾಭಿಷೇಕ, ಪರಿವಾರ ದೈವಗಳಿಗೆ ಹಾಗೂ ನಾಗ ತಂಬಿಲ ಸೇವೆ, ಬಲಿವಾಡು ಕೂಟ ಜರಗಿತು.

ನಾಯ್ಕಾಪುನಲ್ಲಿ ಟೈಲರಿಂಗ್ ತರಬೇತಿ ಸಮಾರೋಪ

ಕುಂಬಳೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವನಿತ ಮಹಿಳಾ ಸಮಾಜ ನಾಯ್ಕಾಪು ಕುಂಬಳÉ ಇವರ ಜಂಟಿ ಆಶ್ರಯದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.  ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ತರಬೇತಿ ಪಡೆದ ಮಹಿಳೆಯರು  ಬ್ಯಾಂಕ್ ಸಾಲ ಸೌಲಭ್ಯ ಪಡೆದು ತಮ್ಮದೇ ವ್ಯಾಪಾರ ಮಾಡಿ ಬೇರೆ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ …

ಹೊಯ್ಗೆ ದಂಧೆಕೋರರ ಪತ್ತೆಗೆ ಮಫ್ತಿ ವೇಷದಲ್ಲಿ ಪೊಲೀಸ್ ಕಾರ್ಯಾಚರಣೆ: 2 ದೋಣಿ ವಶ;  ಗಾಳ ಹಾಕುತ್ತಿದ್ದ ಪೊಲೀಸರನ್ನು ಕಂಡು ತಂಡ ಪರಾರಿ

ಕುಂಬಳೆ: ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ಸಂಗ್ರಹಿಸಿ ಸಾಗಾಟ ನಡೆಸಲು ದಂಧೆಕೋರರು ನಡೆಸುವ ತಂತ್ರಗಾರಿಕೆಯನ್ನು ಕುಂಬಳೆ ಪೊಲೀಸರು ಉಪಾಯ ದಿಂದ ಪತ್ತೆಹಚ್ಚಿದ್ದಾರೆ. ಈ ಮೂಲಕ ಮೊಗ್ರಾಲ್ ಅಳಿವೆ ಬಾಗಿಲಿನಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ೨ ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹಗಾರರು ಓಡಿ ಪರಾರಿಯಾಗಿದ್ದಾರೆ. ಈ ಹಿಂದೆ ದೋಣಿ ಮೂಲಕ ಸಂಗ್ರಹಿಸಿದ ಹೊಯ್ಗೆಯನ್ನು  ದಡಕ್ಕೆ ತಲುಪಿಸಿ ಅಲ್ಲಿಂದ ಟಿಪ್ಪರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಪೊಲೀಸರು ಅದರ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಹೊಯ್ಗೆಯನ್ನು …

ನಿವೃತ್ತ ತಹಶೀಲ್ದಾರ್, ಗುರುಸ್ವಾಮಿ ಶಂಕರ ದೇವಾಂಗ ನಿಧನ

ಕಾಸರಗೋಡು: ಅಣಂಗೂರು ಶಾರದಾನಗರ ನಿವಾಸಿಯೂ ನಿವೃತ್ತ ತಹಶೀಲ್ದಾರ್ ಬಿ. ಶಂಕರ ದೇವಾಂಗ (86) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. 51 ವರ್ಷಗಳ ಕಾಲ ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ ಇವರು ಗುರುಸ್ವಾಮಿಯಾಗಿ ದ್ದರು. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಯಾಗಿದ್ದರು. ಕಾಸರಗೋಡು ಶ್ರೀ ಅಯ್ಯಪ್ಪ ಸೇವಾ ಸಂಘದ ಸದಸ್ಯ, ಕುಂಬಳೆ ನಾಯ್ಕಾಪು ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರೂ ಆಗಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಪ್ರಶಾಂತ್ (ವ್ಯಾಪಾರಿ), ಪವಿತ್ರನ್ (ವ್ಯಾಪಾರಿ), …