ಯುವಕನಿಗೆ ಬೆದರಿಕೆಯೊಡ್ಡಿ ಹಣ ಲಪಟಾಯಿಸಿದ ಪ್ರಕರಣ: ನಾಲ್ವರ ಸೆರೆ

ಕಾಸರಗೋಡು: ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರನ್ನು  ಬೆದರಿಸಿ 1,01,000 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಉಳಿಯತ್ತಡ್ಕ ನೇಶನಲ್ ನಗರದ ಸುಲೈಮಾನ್ ಆದಿಲ್ (18), ಮಂಜತ್ತಡ್ಕದ ಅಹಮ್ಮದ್ ಕಬೀರ್ (26), ಉಳಿಯತ್ತಡ್ಕದ ರೈಯೀಸ್ ಅಹಮ್ಮದ್ (19) ಮತ್ತು ಪಳ್ಳಂ ನಿವಾಸಿಯಾಗಿರುವ 17ರ  ಅಪ್ರಾಪ್ತ ಬಾಲಕ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಈ ತಿಂಗಳ 24ರಂದು ರಾತ್ರಿ 9.30ಕ್ಕೆ ನಗರದ ನೆಲ್ಲಿಕುಂಜೆಯಲ್ಲಿ ದೂರುಗಾರ ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಅವರ  ಪರ್ಸ್‌ನ್ನು …

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರ ಕಾರ್ಪೋರೇಶನ್  ಮೇಯರ್ ಆಗಿ ವಿ.ವಿ. ರಾಜೇಶ್

ತಿರುವನಂತಪುರ: ಕೇರಳ ಮಾತ್ರ ವಲ್ಲದೆ ಭಾರತದ ಗಮನ ಸೆಳೆಯಲ್ಪಟ್ಟ ತಿರುವನಂತಪುರ ಕಾರ್ಪೋರೇಶನ್ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ್ ಆಯ್ಕೆಗೊಂಡಿದ್ದಾರೆ.  ತಿರುವನಂತಪುರ ಕಾರ್ಪೋರೇ ಶನ್‌ನ ಕಣ್ಣಾಮೂಲ ವಾರ್ಡ್‌ನಿಂದ ಪಕ್ಷೇತರರಾಗಿ ಗೆದ್ದು ಬಂದ ಪಾಟೂರು ರಾಧಾಕೃಷ್ಣನ್ ಕೂಡಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಆ ಮೂಲಕ ತಿರುವನಂತಪುರ  ಕಾರ್ಪೋರೇಶನ್‌ನ ಒಟ್ಟು ೩ ಸದಸ್ಯರ ಬಲದಲ್ಲಿ ಬಿಜೆಪಿ  51 ಸದಸ್ಯರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ 50 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಗೆದ್ದಿದೆ.  ಕೇರಳದ ಕಾರ್ಪೋರೇಶನ್ ಒಂದರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ  …

ಬೆಳ್ಳೂರು: ಕೆ. ಗೀತಾ, ನರೇಂದ್ರ ಗೌಡ ಮರಳಿ ಬಿಜೆಪಿಗೆ ಸೇರ್ಪಡೆ

ಬೆಳ್ಳೂರು: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೆ. ಗೀತಾ ಮತ್ತು ನರೇಂದ್ರ ಗೌಡ ಅವರ ಮೇಲಿನ ಸಂಘಟನಾ ಕ್ರಮವನ್ನು  ಪಕ್ಷ ಹಿಂತೆಗೆದುಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಕೆ. ಗೀತಾ ಬೆಳ್ಳೂರು ಪಂಚಾಯತ್‌ನ 5ನೇ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಚುನಾವಣಾ ಸಮಯದಲ್ಲಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೀತಾರನ್ನು ಹಾಗೂ ನರೇಂದ್ರ ಗೌಡ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಬಳಿಕ ಪಕ್ಷದ …

ಕಳಾಯಿ ಹೊಳೆಯಿಂದ ಹೊಯ್ಗೆ ಕಳವು ಜೆಸಿಬಿ ವಶ; ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಳಾಯಿ ಹೊಳೆಯಿಂ ದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ಜೆಸಿಬಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದು, ಅಲ್ಲದೆ ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಹೊಳೆಯಿಂದ ಹೊಯ್ಗೆ ಸಂಗ್ರಹ ನಡೆಯುತ್ತಿರುವ  ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್, ಉಮೇಶ್ ಕೆ.ಆರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹೊಯ್ಗೆ ಸಂಗ್ರಹಕ್ಕೆ ಬಳಲುತ್ತಿದ್ದ ಜೆಸಿಬಿ ವಶಪಡಿಸಲಾಗಿದೆ. ಇದರಂತೆ ಹೊಯ್ಗೆ  ಸಾಗಾಟ ನಡೆಸುವ ಆರೋಪದಂತೆ ಕುಂಜತ್ತೂರು ಮಾಸ್ಕೋ ಹಾಲ್ ಬಳಿಯ …

ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ, ಬೆಳ್ಳಿ ಕಳವು

ಕಾಸರಗೋಡು: ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ- ಬೆಳ್ಳಿ ಆಭರಣಗಳು ಹಾಗೂ ದಾಖಲೆಗಳನ್ನು ಕಳವುಗೈಯ್ಯಲಾಗಿದೆ ಎಂದು ದೂರಲಾಗಿದೆ. ಕಾಞಂಗಾಡ್, ಪಡನ್ನಕ್ಕಾಡ್ ಕುರುಂದೂರುನ ಪಿ.ಕೆ. ಜೋಜಿಯವರ ಮನೆಯಿಂದ ಕಳವು ನಡೆಸಲಾಗಿದೆ. ಬುಧವಾರ ರಾತ್ರಿ 12 ಗಂಟೆ ಹಾಗೂ ಗುರುವಾರ ಮುಂಜಾನೆ 2.30ರ ಮಧ್ಯೆ ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿ ಕಳ್ಳರು ಕಪಾಟಿನಲ್ಲಿರಿಸಿದ್ದ ೨ ಪವನ್ ಚಿನ್ನಾಭರಣ ಹಾಗೂ ಬೆಳ್ಳಿಯ ಸೊಂಟಪಟ್ಟಿ ಇತರ ದಾಖಲೆಗಳನ್ನು ಕಳವುಗೈದಿರುವುದಾಗಿ ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಎಸ್‌ಐ …

ಜತೆಗೆ ವಾಸಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು: ಜತೆಗೆ ವಾಸಿಸುತ್ತಿದ್ದ ಯುವತಿ ಮೇಲೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. 39ರ ಹರೆಯದ, ವಿವಾಹ ವಿಚ್ಛೇದನಗೊಂಡ ಯುವತಿ ನೀಡಿದ ದೂರಿನಂತೆ ತೃಕರಿಪುರದ ಮುಹಮ್ಮದ್ ಅಲಿ ಎಂಬಾತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. 2019ರಿಂದ ಯುವತಿ ಹಾಗೂ ಮುಹಮ್ಮದ್ ಅಲಿ ಜತೆಗೆ ವಾಸಿಸುತ್ತಿದ್ದರು. ಈ ವೇಳೆ ಆರೋಪಿ ತನಗೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದೂ ಭಾರೀ ಮೊತ್ತವನ್ನೂ ಪಡೆದು ವಂಚಿಸಿದ್ದಾನೆಂದು ಯುವತಿ ಪೊಲೀಸರಿಗೆ ನೀಡಿದ ದೂರಿ ನಲ್ಲಿ ತಿಳಿಸಿದ್ದಾಳೆ. ಮುಹಮ್ಮದ್ ಅಲಿ ಯನ್ನು ಪತ್ತೆಹಚ್ಚಲು …

ಬದಿಯಡ್ಕ ಪಂ. ಅಧ್ಯಕ್ಷಸ್ಥಾನ: ಬಿಜೆಪಿಯಿಂದ ಡಿ. ಶಂಕರ ಸ್ಪರ್ಧೆಗೆ: ಯುಡಿಎಫ್‌ನಲ್ಲಿ ಚರ್ಚೆ ಮುಂದುವರಿಕೆ; ಮತದಾನ ವೇಳೆ ಸಿಪಿಎಂ ನಿಲುವು ನಿರ್ಣಾಯಕ

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮ ಪಂಚಾಯ ತ್‌ಗಳಲ್ಲಿ ಚುನಾಯಿತರಾದವರ ಪೈಕಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ನಾಳೆ ನಡೆಯಲಿರುವಂತೆಯೇ ಬಹುತೇಕ ಮಂದಿಯ ಗಮನ ಬದಿಯಡ್ಕ ಗ್ರಾಮ ಪಂಚಾಯತ್‌ನತ್ತ ಹರಿದಿದೆ. ಪ್ರಸ್ತುತ ಪಂಚಾಯತ್‌ನಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವ ಪಕ್ಷದಿಂದ ಆಯ್ಕೆಗೊ ಳ್ಳುವರು ಎಂದು ತಿಳಿಯಲು ಮತದಾರರು ಕಾತರದಿಂದ  ಕಾದು ನಿಂತಿದ್ದಾರೆ. ಒಟ್ಟು ೨೧ ವಾರ್ಡ್‌ಗಳಿರುವ ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಯುಡಿಎಫ್‌ಗೆ ತಲಾ 10 ಸೀಟುಗಳು, ಸಿಪಿಎಂಗೆ ಒಂದು ಸೀಟು ಲಭಿಸಿದೆ. ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೇರಬೇಕಾದರೆ …

ಕೆಎಸ್‌ಆರ್‌ಟಿಸಿ- ಬೈಕ್ ಢಿಕ್ಕಿ: ಹೊಡೆದು ಖಾಸಗಿ ಬಸ್ ಚಾಲಕ ಮೃತ್ಯು

ಹೊಸದುರ್ಗ: ಚಿತ್ತಾರಿಕಲ್ ಕುನ್ನುಂಗೈಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಕಾಞಂಗಾಡ್ ಚೆರುವತ್ತೂರು- ಚೀಮೇನಿ ರೂಟ್ ನಲ್ಲಿ ಸಾಗುವ ಖಾಸಗಿ ಬಸ್‌ನ ಚಾಲಕನಾಗಿರುವ ಕುನ್ನುಂಗೈ ಮುಳ್ಳಿಕ್ಕಾಡ್ ನಿವಾಸಿ ಪ್ರವೀಣ್ (28) ಮೃತಪಟ್ಟ ಯುವಕ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಹೊಳೆಗೆ ತ್ಯಾಜ್ಯ ಉಪೇಕ್ಷೆ: ಕುಬಣೂರು ಸುವರ್ಣಗಿರಿ ಹೊಳೆ ಪರಿಸರ ದುರ್ವಾಸನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ವ್ಯಾಪಕ ತ್ಯಾಜ್ಯವನ್ನು ಎಸೆದು ಪರಿಸರ ದುರ್ವಾಸನೆಯಿಂದ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಗೋಣಿ ಚೀಲ, ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯ ಸಹಿತ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ನೀರು ಮಲಿನಗೊಳ್ಳುತ್ತಿದೆ. ಶಾಂತಿಗುರಿಯಿAದ ಕುಬಣೂರು ವಿದ್ಯಾನಗರಕ್ಕೆ ಸಾಗುವ ಸೇತುವೆ ಇದಾಗಿದ್ದು, ಹೊಳೆ ಪರಿಸರದಲ್ಲಿ ದೇವಸ್ಥಾನ, ಮಸೀದಿ ಸಹಿತ ಹಲವಾರು ಮನೆಗಳು ಹಾಗೂ ನೂರಾರು ಮಂದಿ ಈ ರಸ್ತೆ ಮೂಲಕ ಸಂಚರಿಸÀÄತ್ತಿದ್ದಾರೆ. ರಾತ್ರಿ ಹೊತ್ತಲ್ಲಿ ತ್ಯಾಜ್ಯಗಳನ್ನು ವಾಹನದ …

ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸುಶಾಸನ ದಿನಾಚರಣೆ

ಬದಿಯಡ್ಕ: ಮಾಜಿ ಪ್ರಧಾನಿ  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಸುಶಾಸನ ದಿನವಾಗಿ ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿ, ಹಸಿವುಮುಕ್ತ, ದಾರಿದ್ರ್ಯಮುಕ್ತ, ಭಯಮುಕ್ತ ವಾತಾವರಣದ ಕನಸು ಕಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಬಿತ್ತಿದ ರಾಷ್ಟ್ರಭಕ್ತಿಯ ಬೀಜ ಇಂದು ವಿಶ್ವದಲ್ಲೇ ಗುರುತಿಸುವ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದರು. ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ …