ಪಿ.ಎಂ.ಶ್ರೀ ವಿವಾದ: ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಸಿಪಿಐ ಸಚಿವರು; ಎಡರಂಗದಲ್ಲಿ ಸ್ಫೋಟಕ ಸ್ಥಿತಿ ನಿರ್ಮಾಣ
ತಿರುವನಂತಪುರ: ಕೇಂದ್ರ ಸರಕಾರದ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದ ಹೆಸರಲ್ಲಿ ಎಡರಂಗದಲ್ಲಿ ಭುಗಿಲೆದ್ದ ವಿವಾದ ಈಗ ಸ್ಫೋಟಕ ಸ್ಥಿತಿಗೆ ತಲುಪುವಂತೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಾಗಲಿ, ಎಡರಂಗ ಸಭೆಯಲ್ಲಾಗಲಿ ಸರಿಯಾದ ಚರ್ಚೆ ನಡೆಸದೆ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದ ಸಿಪಿಐ ಸರಕಾರದ ಅಂತಹ ಕ್ರಮದ ವಿರುದ್ಧ ರಂಗಕ್ಕಿಳಿದಿದೆ. ಈ ವಿಷಯದ ಬಗ್ಗೆ ಚರ್ಚಿಸಲು ನಿನ್ನೆ ಸಿಪಿಐ ಸೆಕ್ರೆಟರಿಯೇಟ್ ಸಭೆ ಕರೆಯಲಾಗಿತ್ತು. ಇದೇ …