ಪಿ.ಎಂ.ಶ್ರೀ ವಿವಾದ: ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಸಿಪಿಐ ಸಚಿವರು; ಎಡರಂಗದಲ್ಲಿ ಸ್ಫೋಟಕ ಸ್ಥಿತಿ ನಿರ್ಮಾಣ

ತಿರುವನಂತಪುರ: ಕೇಂದ್ರ ಸರಕಾರದ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದ ಹೆಸರಲ್ಲಿ ಎಡರಂಗದಲ್ಲಿ ಭುಗಿಲೆದ್ದ ವಿವಾದ ಈಗ ಸ್ಫೋಟಕ ಸ್ಥಿತಿಗೆ ತಲುಪುವಂತೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಾಗಲಿ, ಎಡರಂಗ ಸಭೆಯಲ್ಲಾಗಲಿ ಸರಿಯಾದ ಚರ್ಚೆ ನಡೆಸದೆ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದ ಸಿಪಿಐ ಸರಕಾರದ ಅಂತಹ ಕ್ರಮದ ವಿರುದ್ಧ ರಂಗಕ್ಕಿಳಿದಿದೆ. ಈ ವಿಷಯದ ಬಗ್ಗೆ  ಚರ್ಚಿಸಲು ನಿನ್ನೆ ಸಿಪಿಐ ಸೆಕ್ರೆಟರಿಯೇಟ್ ಸಭೆ ಕರೆಯಲಾಗಿತ್ತು. ಇದೇ …

ಯುವಕನಿಗೆ ಕಡಿದ ಪ್ರಕರಣ: ಸಹೋದರ ಸೆರೆ

ಕಾಸರಗೋಡು: ಯುವಕನನ್ನು ಕಡಿದು ಗಾಯಗೊಳಿಸಿದ ಪ್ರಕರಣ ದಲ್ಲಿ ಆತನ ಸಹೋದರನನ್ನು ಹೊಸ ದುರ್ಗ ಪೊಲೀಸರು ಬಂಧಿಸಿದ್ದಾರೆ. ಚಿತ್ತಾರಿ ರಾವಣೇಶ್ವರ ಪಾಣಂತೋಡು ನಿವಾಸಿ ಶೈಜು ಬಂಧಿತ ಆರೋಪಿ. ಕಳೆದ ಗುರುವಾರ ಮದ್ಯದಮಲಿನಲ್ಲಿ ತನ್ನ ಸಹೋದರ ಶಾಜಿ (47) ನೊಂದಿಗೆ ಜಗಳವಾಡಿ ಕತ್ತಿಯಿಂದ ಆತನ ತಲೆಗೆ ಕಡಿದು ಗಾಯ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೈಜುವನ್ನು ಬಂಧಿಸಲಾ ಗಿದೆ. ಗಂಭೀರ ಗಾಯಗೊಂಡ ಶಾಜಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನೆಲ್ಲಿಕುಂಜೆಗುತ್ತುನಲ್ಲಿ ಮುರಿದು ಬಿದ್ದ ಕಾಲುಸಂಕ ವಿದ್ಯಾರ್ಥಿಗಳ ಸಹಿತ ಸಂಚಾರಕ್ಕೆ ಸಮಸ್ಯೆ

ಉಕ್ಕಿನಡ್ಕ: ಕಾಲುಸಂಕ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬದಿಯಡ್ಕ ಪಂಚಾಯತ್‌ನ ಹಳೆಯ 5ನೇ ವಾರ್ಡ್ (ಈಗ 9ನೇ ವಾರ್ಡ್) ನೆಲ್ಲಿಕುಂಜೆಗುತ್ತು ಎಂಬಲ್ಲಿ ನಿರ್ಮಿಸಿದ್ದ ಕಾಲು ಸಂಕ ಮುರಿದು ಬಿದ್ದಿದೆ. ೨೦೦೦-೨೦೦೫ನೇ ವರ್ಷದ ಯೋಜನೆಯಲ್ಲಿ ಈ ಕಾಲುಸಂಕ ನಿರ್ಮಿಸಲಾಗಿತ್ತು. ತೋಡಿನ ಬದಿಯ ತಡೆಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಂಕದ ಸ್ಲ್ಯಾಬ್ ಕೆಳಗೆ ಬಿದ್ದಿದೆ. ಇದರಿಂದಾಗಿ ನೆಲ್ಲಿಕುಂಜೆ, ಕಜಂಪಾಡಿ ಸಹಿತ ವಿವಿಧ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಿಂದ ಉಕ್ಕಿನಡ್ಕ, …

ದೃಶ್ಯ ಮಾದರಿ ಕೊಲೆ ಪ್ರಕರಣ: ಜಾಮೀನಿನಲ್ಲಿ ಹೊರ ಬಂದ ಬಳಿಕ ತಲೆಮರೆಸಿಕೊಂಡ ಆರೋಪಿಯನ್ನು ಸಾಹಸಿಕವಾಗಿ ಸೆರೆ

ಕಣ್ಣೂರು: ಊರನ್ನೇ ತಲ್ಲಣಗೊಳಿಸಿದ ದೃಶ್ಯ ಮಾದರಿ  ಕೊಲೆಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಪರೇಶ್‌ನಾಥ್ ಮಂಡಳಿಯನ್ನು ಇರಿಟ್ಟಿ ಡಿವೈಎಸ್‌ಪಿ ಪಿ.ಕೆ. ಧನಂಜಯ ಬಾಬುರ ನಿರ್ದೇಶದಂತೆ ಇರಿಕ್ಕೂರ್ ಇನ್ಸ್‌ಪೆಕ್ಟರ್ ರಾಜೇಶ್ ಆಯೋಡನ್‌ರ ಮೇಲ್ನೋಟದಲ್ಲಿ ಬಾಂಗ್ಲಾ ದೇಶದ ಗಡಿಯಿಂದ ಎಎಸ್‌ಐ ಸದಾನಂದನ್ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಿವಾಸಿ ಅಶಿಕುಲ್ ಇಸ್ಲಾಂ (26)ನನ್ನು ಕೊಂದು ಹೂತುಹಾಕಿದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ ಪರೇಶ್‌ನಾಥ್ ಮಂಡಲ್. 2021 ಜೂನ್ 28ರಂದು ಅಶಿಕುಲ್ …

ಅಪಘಾತದಲ್ಲಿ ಸೊಂಟದಿಂದ ಕೆಳಗೆ ಚಲನಶಕ್ತಿ ಕಳೆದುಕೊಂಡ ಉದುಮ ನಿವಾಸಿ ಸಂಗೀತಳನ್ನು ‘ಸಿದ್ಧ’ ವಶೀಕರಿಸಿದ್ದು ಬ್ರೈನ್‌ವಾಶ್ ಮೂಲಕ: ಸಿಪಿಎಂ ಮುಖಂಡನಾದ ತಂದೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಕಾಸರಗೋಡು: ರಸ್ತೆ ಅಪಘಾತದಲ್ಲಿ ಬೆನ್ನೆಲುಬಿಗೆ ಗಂಭೀರ ಗಾಯಗೊಂಡು ಸೊಂಟದಿಂದ ಕೆಳಗೆ ಚಲನಶಕ್ತಿ ಇಲ್ಲದೆ ಶಯ್ಯಾವಲಂಬಿಯಾಗಿ ಸಂಕಷ್ಟ ಜೀವನ ನಡೆಸುತ್ತಿರುವ ಪುತ್ರಿಯನ್ನು  ಸಂಕಷ್ಟದಿಂದ ಪಾರು ಮಾಡಲು ಸಹಾಯ ಮಾಡಬೇಕೆಂದು ಆಗ್ರಹಿಸಿ ತಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಉದುಮದ ಸಿಪಿಎಂ ಮುಖಂಡ ಪಿ.ವಿ. ಭಾಸ್ಕರನ್ ಗುರುವಾರ ಸಂಜೆ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರಿಗೆ ದೂರು ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ನೀಡಿದರೂ ಫಲವಿಲ್ಲದ ಹಿನ್ನೆಲೆಯಲ್ಲಿ ಮನೆಗೆ …

ಬಿಜೆಪಿ ಮುಖಂಡ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಬಿಜೆಪಿ ಮುಖಂಡ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅರವಂಜಾಲ್ ಪನೆಯಂದಟ್ಟ ತಂಬಾನ್ (57) ಮೃತಪಟ್ಟವರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯನಾಗಿದ್ದಾರೆ. ಇಂದು ಬೆಳಿಗ್ಗೆ ಪಯ್ಯನ್ನೂರು ಮೇಲ್ಪಾಲದ ಸಮೀಪ ರೈಲ್ವೇ ಟ್ರಾಕ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಲುಪಿ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಶ್ವೇತ, ಕೃಷ್ಣ, ಮದುಲ್‌ಲಾಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುರುಡಪದವು ರಸ್ತೆ ಅಭಿವೃದ್ಧಿಗೆ ಚಾಲನೆ: ಕಾಮಗಾರಿ ಆರಂಭ

ಪೈವಳಿಕೆ: ಶೋಚನೀಯÁವಸ್ಥೆ ಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ದಿಗೆ ಕೊನೆಗೂ ಅಧಿಕಾರಿ ವರ್ಗ ಮುಂ ದಾಗಿದೆ. ಪ್ರಥಮ ಹಂತದಲ್ಲಿ ಲಾಲ್ ಭಾಗ್‌ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲು ತೀರ್ಮಾನಿಸ ಲಾಗಿದೆ.ರಸ್ತೆ ಅಗಲೀಕರಣಗೊಳಿ ಸುವ ಕಾಮಗಾರಿ ಕಳೆದ ಒಂದು ತಿಂಗಳಿAದ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದ್ದು, ರಸ್ತೆ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕುಂಬಳೆ ನಿವಾಸಿಯೋರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ …

ಜಿಲ್ಲಾ ಶಾಲಾ ಕ್ರೀಡಾ ಮೇಳ: ತಿರುವನಂತಪುರ ಜಿಲ್ಲೆಯ ನಾಗಾಲೋಟ; ಈಜು ಸ್ಪರ್ಧೆಯಲ್ಲಿ 7 ದಾಖಲೆ

ತಿರುವನಂತಪುರ: ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ 1287 ಅಂಕದೊAದಿಗೆ ತಿರುವನಂತಪುರ ಜಿಲ್ಲೆ ಚಾಂಪ್ಯನ್ ಪಟ್ಟದತ್ತ ಸಾಗುತ್ತಿದೆ. 146 ಚಿನ್ನ, 105 ಬೆಳ್ಳಿ, 126 ಕಂಚಿನ ಪದಕದೊಂದಿಗೆ ತಿರುವನಂತಪುರ ಜಿಲ್ಲೆ ಸಾಧನೆ ಮಾಡಿದೆ. ದ್ವಿತೀಯ ಸ್ಥಾನದಲ್ಲಿ ತೃಶೂರ್ (595 ಅಂಕ), ತೃತೀಯ ಸ್ಥಾನದಲ್ಲಿ ಪಾಲಕ್ಕಾಡ್ (541) ಅಂಕದೊAದಿಗೆ ಸೆಣಸಾಡುತ್ತಿದೆ. ಅಥ್ಲೆಟಿಕ್ಸ್ ಹೊರತಾಗಿ ಕ್ರೀಡಾ ಮೇಳದಲ್ಲಿ ತಿರುವನಂತಪುರ ತನ್ನ ಆದಿಪಥ್ಯವನ್ನು ಸ್ಥಾಪಿಸಿದೆ. ಗೇಮ್ಸ್ ವಿಭಾಗಗಳಲ್ಲಿ 727 ಅಂಕ (84 ಚಿನ್ನ, 51 ಬೆಳ್ಳಿ, 87 ಕಂಚು), ಈಜು ಸ್ಪರ್ಥೆಗಳಲ್ಲಿ 544 ಅಂಕ …

ಸ್ಥಳೀಯಾಡಳಿತ ಚುನಾವಣೆ: ಮಂಜೇಶ್ವರ ಪಂಚಾಯತ್‌ನ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಮಂಜೇಶ್ವರ: ಸೌಲಭ್ಯಗಳು ಅರ್ಹರಿಗೆ, ಭ್ರಷ್ಟಾಚಾರವಿಲ್ಲದ ಅಭಿವೃದ್ಧಿಗಾಗಿ ಎಸ್‌ಡಿಪಿಐಗೆ ಮತ ಚಲಾಯಿಸಿರಿ ಎಂಬ ಘೋಷಣೆಯೊಂದಿಗೆ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಂಜೇಶ್ವರ ಪಂಚಾಯತ್ ನ  ಜವಾಬ್ದಾರಿ ಹೊಂದಿರುವ ಅಶ್ರಫ್ ಬಡಾಜೆ ತಿಳಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅವರು ಪ್ರಕಟಿಸಿದರು. ಪಕ್ಷದ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು ಮಚ್ಚಂಪಾಡಿ ವಾರ್ಡ್‌ನಲ್ಲೂ, ಮಂಡಲ ಆರ್ಗನೈಸರ್ ಯಾಕೂಬ್ ಹೊಸಂಗಡಿ ಕಜೆಯಲ್ಲಿ ಸ್ಪರ್ಧಿಸಲಿದ್ದಾರೆ. ಪಂಚಾಯತ್ ಸಮಿತಿ ಸದಸ್ಯ …

ಶಶಿಕಲ ಕುಂಬಳೆ ಇವರಿಗೆ ಶಿಕ್ಷಕರತ್ನ ಪ್ರಶಸ್ತಿ ನಾಳೆ ಪ್ರದಾನ

ಕುಂಬಳೆ: ಇಲ್ಲಿನ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಶಿಕ್ಷಕಿ ಶಶಿಕಲಾ ಕುಂಬಳೆ ಇವರಿಗೆ ಮಂಗಳೂರು ಕಥಾಬಿಂದು ಪ್ರಕಾಶನ ಸಂಸ್ಥೆ ವತಿಯಿಂದ ಶಿಕ್ಷಕರತ್ನ ಪ್ರಶಸ್ತಿ ನಾಳೆ ಪ್ರದಾನ ಮಾಡಲಾಗುವುದು. ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಕಥೆ, ಕವನ ರಚನೆ, ಭಾಷಣ ಮೊದಲಾದವುಗಳಲ್ಲಿ ಮಾರ್ಗದರ್ಶನ ನೀಡಿ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಬಹಮಾನ ಗಳಿಸುವಂತೆ ಇವರು  ಮಾಡಿದ್ದಾರೆ. ಗಣಿತ ಮೇಳದಲ್ಲಿ ತೀರ್ಪುಗಾರರಾಗಿ ಪತ್ರಿಕೆಗಳಲ್ಲಿ ಲೇಖನವನ್ನು ಬರೆಯುವ ಹವ್ಯಾಸವಿಟ್ಟುಕೊಂಡಿದ್ದಾರೆ. ಈಗಾಗಲೇ ಇವರಿಗೆ ಚುಟುಕು, ಯುಗ ಆಚಾರ್ಯ ಜಿ.ವಿ. ಅರಸ್ ಪ್ರಶಸ್ತಿ, ಕಾಸರಗೋಡು ಕವಿ …