ಡಾ| ಎ.ವಿ. ಸುರೇಶ್ ನಿಧನ

ಕಾಸರಗೋಡು: ಕಾಸರಗೋಡು ಗುಡ್ಡೆ ದೇವಸ್ಥಾನ ಬಳಿಯ ಡಾ| ಎ.ವಿ. ಸುರೇಶ್ (62) ನಿಧನ ಹೊಂದಿದರು. ವೈಕ್ಕಂ ಟಿ.ವಿ. ಪುರಂ ನಿವಾಸಿಯಾದ ಇವರು ನಿವೃತ್ತ ಡಿಎಂಒ (ಆಯುರ್ವೇದ) ಆಗಿದ್ದರು. ಮೃತರು ಪತ್ನಿ ನಿಶಾ (ಯೂನಿಟಿ ಹೆಡ್, ಕೆಲ್, ಕಾಸರಗೋಡು), ಮಕ್ಕಳಾದ ಡಾ| ಹರ್ಷ (ಅಸೋಸಿ ಯೇಟ್ ಪ್ರೊಫೆಸರ್, ಶಾರದಾಂಬಾ ಮೆಡಿಕಲ್ ಕಾಲೇಜು ತಲಪಾಡಿ), ಋಷಿಕೇಶ್ (ಐಟಿ ಹೈದರಾಬಾದ್), ಅಳಿಯ ಶಬರಿನಾಥ್ (ಇಂಜಿನಿ ಯರ್ ಬೆಂಗಳೂರು), ಸಹೋದರ- ಸಹೋದರಿಯರಾದ ಸುಭಾಷ್, ಡಾ| ಸುನಿಲ್, ಪೊನ್ನಮ್ಮ, ವತ್ಸಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು …

ಗುಂಡು ತಗಲಿ ಬಾಲಕ ಮೃತಪಟ್ಟ ಘಟನೆ: ಸೇರಾಜೆ, ಪರಿಸರ ಪ್ರದೇಶದಲ್ಲಿ ಶೋಕಸಾಗರ

ಪೆರ್ಲ: ದೇಹಕ್ಕೆ ಗುಂಡು ತಗಲಿ ಸೇರಾಜೆ ನಿವಾಸಿಯಾದ ಬಾಲಕ ಸಾವಿಗೀಡಾದ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಸೇರಾಜೆ ನಿವಾಸಿ ವಸಂತಪೂಜಾರಿಯ ಪುತ್ರ ಮೋಕ್ಷಿತ್ (17) ಕಳೆದ ಶನಿವಾರ ಸಂಜೆ ಉಪ್ಪಿನಂಗಡಿ ಬಳಿಯ ರಾಮಕುಂಜದಲ್ಲಿರುವ ಮನೆಯಲ್ಲಿ ಗುಂಡು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಇದೇ ವೇಳೆ ತಂದೆ ವಸಂತ ಪೂಜಾರಿ ಇರಿತದಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ವಸಂತ ಪೂಜಾರಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಿದ್ದು, ಅವರಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ತಂದೆ ವಸಂತರಿಗೆ ಇರಿದು ಗಾಯಗೊಳಿಸಿದ ಬಳಿಕ …

ಪೆರ್ಮುದೆ ನಿವಾಸಿ ಗಲ್ಫ್‌ನಲ್ಲಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಮೂರು ವಾರಗಳ ಹಿಂದೆ ಗಲ್ಫ್‌ಗೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರು. ಬಂದ್ಯೋಡು ಪೆರ್ಮುದೆ ಪೆಟ್ರೋಲ್ ಬಂಕ್ ಸಮೀಪದ ಅಂದುಂಞಿ ಯವರ ಪುತ್ರ ಆದಂ ಕುಂಞಿ (49) ಮೃತ ವ್ಯಕ್ತಿ. ಇವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇವರ ತಾಯಿ ಬೀಫಾತಿಮ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಪತ್ನಿ ರಮ್ಲ, ಮಕ್ಕ ಳಾದ ತಸ್ನಿಂ, ಫಾತಿಮತ್ ರಿಫ, ಸಮೀಮ, ಸಹೋದರ- ಸಹೋ ದರಿಯರಾದ ಅಹಮ್ಮದಲಿ, …

ಉಪ್ಪಳ, ಕನ್ಯಪ್ಪಾಡಿಯಲ್ಲಿ ಮನೆಗಳಿಗೆ ಕಳ್ಳರ ದಾಳಿ: ಚಿನ್ನಾಭರಣ, ನಗದು ಕಳವು

ಉಪ್ಪಳ:  ಕುಂಬಳೆಯಲ್ಲಿ ಮನೆ ಯಿಂದ ನಗ-ನಗದು ಕಳವಿಗೀಡಾದ ಪ್ರಕರಣದಲ್ಲಿ ತನಿಖೆ ಮುಂದು ವರಿಯುತ್ತಿರುವಂತೆಯೇ ಉಪ್ಪಳ ಹಾಗೂ ಬದಿಯಡ್ಕದಲ್ಲಿ ಮನೆಗಳಿಂದ ಕಳವು ನಡೆದಿದೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಹಮ್ಮದ್ ಮಂಜಿಲ್‌ನ ರುಕ್ಸಾನ ಎಂಬವರ ಮನೆಯಿಂದ 23.5 ಪವನ್ ಚಿನ್ನಾಭರಣಗಳು ಕಳವಿಗೀಡಾಗಿದೆ. ಈ ಬಗ್ಗೆ ರುಕ್ಸಾನ  ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ.  ಮನೆಯ ಕಪಾಟಿನಲ್ಲಿರಿಸಿದ್ದ  ಚಿನ್ನಾಭರಣಗಳು ಕಳವಿಗೀಡಾಗಿದೆ. ದೂರುದಾತೆಯ ಮಗಳ ಮದುವೆ ಜನವರಿ 23ರಂದು ನಡೆದಿತ್ತು. ಇದರ ಪೂರ್ವಭಾವಿಯಾಗಿ ಮನೆಯಲ್ಲಿ ವಿವಿಧ ರೀತಿಯ ಕೆಲಸಗಳನ್ನು …

ಬೀದಿನಾಯಿ, ವನ್ಯಜೀವಿಗಳ ಉಪಟಳದ ಬೆನ್ನಲ್ಲೇ ಹಾವುಗಳ ಕಾಟ: 5 ಹೆಬ್ಬಾವುಗಳು ಸೆರೆ

ಮೊಗ್ರಾಲ್ : ಬೀದಿನಾಯಿಗಳ ಹಾಗೂ ವನ್ಯಜೀವಿಗಳ ಉಪಟಳ ಎದುರಿಸು ತ್ತಿರುವ ಮೊಗ್ರಾಲ್ ಮತ್ತು ಪೇರಾಲ್ ಪ್ರದೇಶಗಳಲ್ಲಿ ಈಗ ಹೆಬ್ಬಾವುಗಳ ಕಾಟವೂ ತಲೆಯೆತ್ತತೊಡಗಿದೆ. ಇದು ಪ್ರದೇಶದವರನ್ನು ಇನ್ನಷ್ಟು ಭಯಭೀತರನ್ನಾಗಿ ಸತೊಡಗಿದೆ. ಪೇರಾಲ್ ನಿವಾಸಿ ಮೊಹಮ್ಮದ್  ಪೇರಾಲ್ ಎಂಬವರ ಹಿತ್ತಿಲಲ್ಲಿ ಕಾಡು ಬಳ್ಳಿಗಳಿಂದ ಆವೃತ್ತಗೊಂಡಿದ್ದ ಪೊದೆಯಲ್ಲಿ ಐದು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಅರಣ್ಯ ಇಲಾಖೆಯಿಂದ ಹಾವು ಹಿಡಿಯುವ ಬಗ್ಗೆ ನುರಿತ ತರಬೇತಿ ಪಡೆದ ಸರ್ಪ ವಲಂಟಿಯರ್ ಕಾಸರಗೋಡು ಅಡ್ಕತ್ತಬೈಲು ನಿವಾಸಿ ಅಮೀನ್ ಅಡ್ಕತ್ತಬೈಲು ಸ್ಥಳಕ್ಕೆ …

ಭಾರತೀಯ ಸಂವಿಧಾನ ಸಮಾನ ನೀತಿ ಹಾಗೂ ಸಂತ್ರಸ್ತ ಜನತೆಯ ಪ್ರಣಾಳಿಕೆ -ಸಚಿವ ಎ.ಕೆ. ಶಶೀಂದ್ರನ್

ಕಾಸರಗೋಡು: ಭಾರತದ ಸಂವಿಧಾನವು ಸಂತ್ರಸ್ತ ಜನತೆಯ ಹಾಗೂ ಸಮಾನ ನೀತಿಯ ಒಂದು ಪ್ರಣಾಳಿಕೆ ಯಾಗಿದೆ ಎಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ. ವಿದ್ಯಾನಗರದ ಸ್ಟೇಡಿಯಂನಲ್ಲಿ ಭಾರತದ ೭೭ನೇ ಗಣರಾಜ್ಯೋತ್ಸವದಂಗವಾಗಿ ನಿನ್ನೆ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದುವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು. ಫೆಡರಲಿಸಂ ಎನ್ನುವುದು ನಮ್ಮ ಸಂವಿಧಾನದ ಮೂಲ ಘಟಕವಾಗಿದೆ. ಅಧಿಕಾರ ವಿಭಜನೆ ಹಾಗೂ ಪರಸ್ಪರ ಗೌರವ ಇದರ ಪ್ರಧಾನ ಅಂಶವಾಗಿದೆ. ಭಾರತೀಯ ಫೆಡರಲಿಸಂ ನಮ್ಮ ವೈವಿಧ್ಯತೆಯನ್ನು ಸಂಘಟಿತವಾಗಿ ನಿಲ್ಲಿಸುವ ಒಂದು ರಾಷ್ಟ್ರೀಯ ಸಾಮೂಹಿಕ ಒಡಂಬಡಿಕೆಯೂ …

ವಾಹನಗಳಿಂದ ಟೋಲ್ ಸಂಗ್ರಹ: ಕುಂಬಳೆ ಟೋಲ್‌ಬೂತ್‌ಗೆ ಮುತ್ತಿಗೆ ಹಾಕಿ ಮಹಿಳೆಯರಿಂದ ಬೃಹತ್ ಪ್ರತಿಭಟನೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿ ತೀವ್ರಗೊಂಡಿದೆ. ಇದರ ಅಂಗವಾಗಿ ನಿನ್ನೆ ಮಹಿಳೆಯರು ನಡೆಸಿದ ಟೋಲ್ ಬೂತ್ ಮಾರ್ಚ್‌ನಿಂದ ಅಲ್ಪ ಹೊತ್ತು ಸಂಘರ್ಷಾವಸ್ಥೆ ಸೃಷ್ಟಿಸಿತು. ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಟೋಲ್ ಬೂತ್‌ಗೆ ನುಗ್ಗಲು ಯತ್ನಿಸಿದರು. ಬಳಿಕ ಶಾಸಕರ ನೇತೃತ್ವದಲ್ಲಿ ಮುಷ್ಕರ ಸಮಿತಿ ಪದಾಧಿಕಾರಿಗಳು ಮಾತುಕತೆ ನಡೆಸಿದುದರಿಂದ ಚಳವಳಿನಿರತರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಇದರಿಂದ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅನಂತರ …

ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಚಟ್ಟಂಚಾಲ್ ಸಮೀಪದ ಬೆಂಡಿಚ್ಚಾಲ್‌ನಿಂದ ನಾಪತ್ತೆಯಾದ ಯುವಕನ ಮೃತದೇಹ ಚಂದ್ರಗಿರಿ ಹೊಳೆಯಲ್ಲಿ ತಳಂಗರೆ ಸೇತುವೆ ಸಮೀಪ ಪತ್ತೆಯಾಗಿದೆ. ಎಯ್ಯಳದ ದಿ| ಅಬ್ದುಲ್ಲ ಕುಂಞಿಯವರ ಪುತ್ರ  ನಿಸಾರ್ (47) ಮೃತಪಟ್ಟ ವ್ಯಕ್ತಿ. ಕಳೆದ ಶನಿವಾರ ಮಧ್ಯಾಹ್ನ ಆಹಾರ ಸೇವಿಸಿ ಮನೆಯಿಂದ ಹೊರಗೆ ಹೋದ ನಿಸಾರ್ ಮರಳಿ ಬಂದಿರಲಿಲ್ಲ. ಈ ಬಗ್ಗೆ ಸಹೋದರಿಯ ಪತಿ ಅಬ್ದುಲ್ ಖಾದರ್ ಎಂಬವರು ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆದಿತ್ಯವಾರ ರಾತ್ರಿ ೧೦ ಗಂಟೆ ವೇಳೆ ಮೃತದೇಹ …

ಕರ್ತವ್ಯ ಮಧ್ಯೆ ಕಾರಿನಲ್ಲಿ ಕುಳಿತು ಪೊಲೀಸರ ಬಹಿರಂಗ ಮದ್ಯಪಾನ: ಆರು ಮಂದಿ ಅಮಾನತು

ತಿರುವನಂತಪುರ: ಕೆಲಸ ಸಮಯದಲ್ಲಿ ಕಾರಿನಲ್ಲಿ ಕುಳಿತುಕೊಂಡು ಬಹಿರಂಗವಾಗಿ ಮದ್ಯಪಾನ ನಡೆಸುವ ಪೊಲೀಸರ ದೃಶ್ಯ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ತಪ್ಪಿತಸ್ಥರಾದ 6 ಮಂದಿ ಪೊಲೀಸರನ್ನು ಅಮಾನತ ಗೊಳಿಸಲಾಗಿದೆ. ತಿರುವನಂತಪುರ ಕಳಕೂಟಂ ಪೊಲೀಸ್  ಠಾಣೆಯ 6 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಇವರನ್ನು ಉತ್ತಮ ನಡತೆ ತರಬೇತಿಗಾಗಿ ಕಳುಹಿಸಲಾಗುವುದು. ಇತ್ತೀಚೆಗೆ ಕಾರಿನೊಳಗೆ ಕುಳಿತುಕೊಂಡು ಈ ಪೊಲೀಸರು ಮದ್ಯಪಾನಗೈಯ್ಯುತ್ತರುವ ದೃಶ್ಯ ಬಹಿರಂಗಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಟೀಕೆಗಳುಂಟಾಗಿತ್ತು. ಅದರ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿತ್ತು. ಪೊಲೀಸರ ಕ್ರಮ ಗಂಭೀರ ಲೋಪವೆಂದು …

ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೀಯಾ ಸಮಾಜ ಬೇಡಿಕೆ: ಹಕ್ಕುಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಆರಂಭ

ಕುಂಬಳೆ: ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ತೀಯಾ ಸಮುದಾಯಕ್ಕೆ ಮೀಸಲಿರಿಸಬೇಕು,  ಈಳವರಿಂದ ಪ್ರತ್ಯೇಕಿಸಿ ತೀಯಾ ಸಮಾಜವನ್ನು ಪ್ರತ್ಯೇಕ ಜಾತಿಯಾಗಿ ನೋಂದಾಯಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ತೀಯಾ ಕ್ಷೇಮ ಸಭಾ ಆಂದೋಲನ ಆರಂಭಿಸಿದೆ.  ಹೋರಾಟದಂಗವಾಗಿ ಹಕ್ಕು ಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಕುಂಬಳೆಯಿಂದ ಮೊನ್ನೆ ಆರಂಭಗೊಂಡಿತು. ಸದ್ಗುರು ನಿತ್ಯಾನಂದ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡ ಪ್ರಚಾರ ಯಾತ್ರೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ತೀಯಾ ಕ್ಷೇಮ ಸಭಾ ರಾಜ್ಯಾಧ್ಯಕ್ಷ …