ಕಾರಡ್ಕ ಪಂಚಾಯತ್ ಮತ್ತೆ ಬಿಜೆಪಿ ಆಡಳಿತಕ್ಕೆ: ಹಾಲಿ ಪಂ. ಅಧ್ಯಕ್ಷ ಸೋಲು

ಮುಳ್ಳೇರಿಯ: ಕಾರಡ್ಕ ಪಂಚಾಯತ್ ಆಡಳಿತವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಈಗಾಗಲೇ 1ರಿಂದ 8ರ ವರೆಗಿರುವ ವಾರ್ಡ್ಗಳಲ್ಲಿ ಜಯಗಳಿಸಿದ್ದು, 12ನೇ ವಾರ್ಡ್ಗಳಲ್ಲಿ ಜಯ ಸಾಧ್ಯತೆ ಲೆಕ್ಕಹಾಕಲಾಗಿತ್ತು. ಆದರೆ 1ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ, ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಸೋಲನುಭವಿಸಿದರು. ಇಲ್ಲಿ ಐಕ್ಯರಂಗದ ಶರೀಫ್ ಎಂ. ಜಯ ಗಳಿಸಿದರು. 1ನೇ ವಾರ್ಡ್ನಲ್ಲಿ ಪ್ರಶಾಂತ್ ಕಲ್ಲಂಕೂಡ್ಲು, 2ನೇ ವಾರ್ಡ್ನಲ್ಲಿ ಬಾಲಕೃಷ್ಣ ಅಂಬೆಮೂಲೆ, 3ನೇ ವಾರ್ಡ್ನಲ್ಲಿ ಸವಿತ ಕುಮಾರಿ ಪಿ, 4ನೇ ವಾರ್ಡ್ನಲ್ಲಿ ವಸಂತಿ ಎ, 5ನೇ ವಾರ್ಡ್ನಲ್ಲಿ ಗಾಯತ್ರಿ, …

ದೇಲಂಪಾಡಿ ಪಂ.ನಲ್ಲಿ ಸಿಪಿಎಂ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ ಬಂಡುಕೋರ ಅಭ್ಯರ್ಥಿಗಳು

ಅಡೂರು: ಸಿಪಿಎಂ ಆಡಳಿತದಲ್ಲಿರುವ ದೇಲಂಪಾಡಿ ಪಂಚಾಯತ್‌ನಲ್ಲಿ ಇಬ್ಬರು ಸಿಪಿಎಂ ಅಭ್ಯರ್ಥಿಗಳನ್ನು ಪಕ್ಷದ ಬಂಡುಕೋರ ಅಭ್ಯರ್ಥಿಗಳು ಪರಾಭವಗೊಳಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡ ಏಳು ವಾರ್ಡ್‌ಗಳ ಪೈಕಿ 1ನೇ ವಾರ್ಡ್ ಆದ ಊಜಂಪಾಡಿಯಲ್ಲಿ  ಸಿಪಿಎಂ ಬಂಡುಕೋರ ಅಭ್ಯರ್ಥಿ ಐತ್ತಪ್ಪ ನಾಯ್ಕ್ 275 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 2ನೇ ವಾರ್ಡ್  ದೇಲಂಪಾಡಿಯಲ್ಲಿ ಸಿಪಿಎಂ ಬಂಡುಕೋರನಾಗಿ ಸ್ಪರ್ಧಿಸಿದ ಮುಸ್ತಫ ಹಾಜಿ 177 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ೩ನೇ ವಾರ್ಡ್  ಬೆಳ್ಳಿಪ್ಪಾಡಿಯಲ್ಲಿ ಬಿಜೆಪಿಯ ಧನಂಜಯ 201 ಮತಗಳ ಹಾಗೂ 4ನೇ …

ಬಿಜೆಪಿ ಬೂತ್ ಏಜೆಂಟನಿಗೆ ಹಲ್ಲೆ: ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್‌ನ ಎರಡನೇ  ವಾರ್ಡ್‌ನ ಬಿಜೆಪಿಯ ಬೂತ್ ಏಜೆಂಟ್ ಬಿಜೆಪಿ ಕಾರ್ಯಕರ್ತ ಗೋಪಾಲಕೃಷ್ಣನ್‌ರ ಮೇಲೆ ಮತದಾನ ದಿನದಂದು ಸಂಜೆ ಹಲ್ಲೆ ನಡೆಸಿದ ದೂರಿನಂತೆ ಐದು ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಬೇಡಗಂ ಕೇಸು ದಾಖಲಿಸಿಕೊಂಡಿದ್ದಾರೆ.ನೈಮುದ್ದೀನ್ ಪರಪ್ಪ, ಅರ್ಶಾದ್, ರಾಖೇಶ್, ಅಭಿಲಾಷ್, ಗೋಪಿ ಮತ್ತು ಮಧು ಮೊಳೆಯ್ಕಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಸ್ತುತ ವಾರ್ಡ್‌ನ ಬಿಜೆಪಿ ಉಮೇದ್ವಾರ ಪಿ. ಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಮತ ಚಲಾಯಿಸಲೆತ್ನಿಸಿದನ್ನು ತಡೆದ …

ಶಾಲೆಯ ಅಡುಗೆ ಕಾರ್ಮಿಕೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಶಾಲೆಯ ಅಡುಗೆ ಕಾರ್ಮಿಕೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಣತ್ತೂರು ಪೆರುತ್ತಡಿ ವಲಿಯವೀಟಿಲ್‌ನ ಶಾರದ (71) ಮೃತಪಟ್ಟ ಮಹಿಳೆ. ಇವರು ಪೆರುತ್ತಡಿ ಜಿಎಲ್‌ಪಿ ಶಾಲೆಯ  ಅಡುಗೆ ಕಾರ್ಮಿಕೆಯಾಗಿದ್ದರು. ನಿನ್ನೆ ಅಪರಾಹ್ನ 3 ಗಂಟೆ ವೇಳೆ ಮನೆ ಸಮೀಪದ ವ್ಯಕ್ತಿಯೋರ್ವರ ಕೆರೆಯಲ್ಲಿ ಇವರು ಮೃತಪಟ್ಟ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತರು ಪತಿ ನಾರಾಯಣ ಮಾರಾರ್, ಪುತ್ರ ಹರೀಶ್, ಸೊಸೆ ರಜಿತ, ಸಹೋದರ ಉಣ್ಣಿಕೃಷ್ಣ ಮಾರಾರ್, ಸಹೋದರಿ ಸುಭದ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶಿವಶಂಕರ ಮಾರಾರ್ …

ರೈಲಿಗೆ ಹತ್ತುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ರೈಲ್ವೇ ನೌಕರನ ಕೈಗೆ ಗಂಭೀರ ಗಾಯ

ಕುಂಬಳೆ: ರೈಲು ಗಾಡಿಗೆ ಹತ್ತುತ್ತಿದ್ದ ವೇಳೆ ಉಂಟಾದ ದುರ್ಘಟನೆಯಲ್ಲಿ ರೈಲ್ವೇ ನೌಕರನ ಕೈ ತುಂಡರಿಸಲ್ಪಟ್ಟ ದಾರುಣ ಘಟನೆ ಕುಂಬಳೆಯಲ್ಲಿ ಸಂಭವಿಸಿದೆ.  ತಮಿಳುನಾಡಿನ ತಿರುನಲ್ವೇಲಿ ನಿವಾಸಿಯಾದ ರಾಜಶೇಖರನ್ (36) ಎಂಬವರ ಬಲದ ಕೈ ತುಂಡರಿಸಲ್ಪಟ್ಟಿದೆ. ನಿನ್ನೆ ಅಪರಾಹ್ನ 2.50ಕ್ಕೆ ಕುಂಬಳೆಗೆ ತಲುಪಿದ ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತುತ್ತಿದ್ದ ವೇಳೆ ರಾಜಶೇಖರನ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಬಲಕೈ ಪ್ಲಾಟ್ ಫಾರ್ಮ್ ಹಾಗೂ  ರೈಲಿನ ಮಧ್ಯೆ ಸಿಲುಕಿಕೊಂಡು ತುಂಡರಿಸಲ್ಪ ಟ್ಟಿದೆ. ಅವರನ್ನು ಕಾಸರಗೋಡು ಜನ ರಲ್ …

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಲ್ಲೆ: ಯುಡಿಎಫ್ ಅಭ್ಯರ್ಥಿ ಸೇರಿ 20 ಮಂದಿ ವಿರುದ್ಧ ಕೇಸು

ಕಾಸರಗೋಡು: ಪೊಲೀಸ್ ಇನ್ಸ್‌ಪೆಕ್ಟರ್‌ರ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಅಜಾನೂರು ಪಂಚಾ ಯತ್‌ನ ಯುಡಿಎಫ್ ಅಭ್ಯರ್ಥಿ ಸಿ.ಎಚ್. ನಿಝಾಮುದ್ದೀನ್ ಸೇರಿದಂತೆ ಒಟ್ಟು 20 ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಅಜಾನೂರು ಪಂಚಾಯತ್‌ನ 24ನೇ ವಾರ್ಡ್‌ನಲ್ಲಿ ಮತದಾನದ ದಿನದಂದು ಸಂಜೆ ಅಲ್ಲಿನ ಬೂತ್ ಏಜೆಂಟ್ ಆಗಿದ್ದ ಐಎನ್‌ಎಲ್ ಕಾರ್ಯಕರ್ತರಿಗೆ ಯುಡಿಎಫ್‌ನ ತಂಡವೊಂದು ಬೆದರಿಕೆ ಒಡ್ಡಿತ್ತೆನ್ನಲಾಗಿದೆ. ಆ ಬಗ್ಗೆ ನೀಡಲಾದ ದೂರಿನಂತೆ ಅಲ್ಲಿಗೆ ಬಂದ ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ.ಅನೂಬ್ ಕುಮಾರ್‌ರ ನೇತೃತ್ವದ ಪೊಲೀಸರ …

ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರು ಮಂದಿ ಆರೋಪಿಗಳಿಗೆ 20 ವರ್ಷ ಕಠಿಣ ಸಜೆ, ಜುಲ್ಮಾನೆ

ಕೊಚ್ಚಿ: ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಎರ್ನಾಕುಳಂ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಲಾ 20 ವರ್ಷ ಕಠಿಣ ಸಜೆ ಹಾಗೂ ಒಟ್ಟಾರೆಯಾಗಿ 9.75 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಕಳೆದ ಅವಧಿಯನ್ನೂ ಶಿಕ್ಷಾ ಅವಧಿಯಾಗಿ ಪರಿಗಣಿಸಿ ಬಾಕಿ ಶಿಕ್ಷೆಯನ್ನು ಆರೋಪಿಗಳು ಅನುಭವಿಸಿದರೆ ಸಾಕೆಂದು, ಜುಲ್ಮಾನೆ ಮೊತ್ತವನ್ನು ಆರೋಪಿಗಳು ಸಂತ್ರಸ್ಥೆಗೆ ನೀಡಬೇಕೆಂದು ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ಪಲ್ಸರ್ ಸುನಿ ಅಲಿಯಾಸ್ …

ಕುಸಿದು ಬಿದ್ದ ಬಡ ಕುಟುಂಬದ ಮನೆ : ಅದೃಷ್ಟವಶಾತ್ ಅಪಾಯದಿಂದ ಪಾರು

ಉಪ್ಪಳ: ಹೆಂಚು ಹಾಸಿದ ಮನೆಯೊಂದು  ಕುಸಿದು ಬಿದ್ದ ಘಟನೆ ಕುಬಣೂರು ಒಡ್ಡಂಬೆಟ್ಟು ಎಂಬಲ್ಲಿ ಜರಗಿದೆ. ಆದರೆ ಅದೃಷ್ಟವಶಾತ್ ಮನೆಯೊಳಗೆ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ. ಕುಬಣೂರು ಒಡ್ಡಂಬೆಟ್ಟುವಿನ ಮಾಣಿಗ ಎಂಬವರ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದೆ. ಮಾಣಿಗ ಹಾಗೂ ಪುತ್ರಿ ಲಕ್ಷ್ಮಿ ಇಲ್ಲಿ ವಾಸವಾಗಿದ್ದು, ಆದರೆ ನಿನ್ನೆ ಸಂಜೆ ಇವರು ಮನೆಯಲ್ಲಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಪಕ್ಕಾಸು, ಹೆಂಚು ಪೂರ್ತಿ ಕುಸಿದು ಬಿದ್ದಿದ್ದು, ಬಡ ಕುಟುಂಬ ಸಂಕಷ್ಟಕ್ಕೀಡಾಗಿದೆ. ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ …

ಹೃದಯಾಘಾತ ಸಾವಿಗೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ-ಐಸಿಎಂಆರ್‌ನ ವರದಿ ಸರಿಯೆಂದು ತಿಳಿಸಿದ ರಾಜ್ಯ ಆರೋಗ್ಯ ಇಲಾಖೆ

ತಿರುವನಂತಪುರ:  ಅಲ್ಪ ಕಾಲದಿಂದ ಹೃದಯಾಘಾತ ಉಂಟಾಗಿ ಯುಕ-ಯುವತಿಯರು ಕುಸಿದುಬಿದ್ದು ಸಾವಿಗೀಡಾಗುವ ಘಟನೆಗಳಿಗೆ  ಕೋವಿಡ್ ವ್ಯಾಕ್ಸಿನೇಶನ್‌ನೊಂದಿಗೆ ಯಾವುದೇ ಸಂಬಂಧವಿಲ್ಲವೆಂದು  ಐಸಿಎಂಆರ್‌ನ ಅಧ್ಯಯನ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆ ಕೂಡಾ ಸರಿಯೆಂದು ಅಭಿಪ್ರಾಯಪಟ್ಟಿದೆ. ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡಮೋಲಜಿ ಮೂಲಕ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನಡೆಸಿದ ಅಧ್ಯಯನ  ಅಧಿಕೃತವಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ರಾಜ್ಯ ಆರೋಗ್ಯ ಇಲಾಖೆ ಕೂಡಾ ಅದನ್ನು ಒಪ್ಪಕೊಂಡಿದೆ. ಆದರೆ ಈ ಮೊದಲು ಆರೋಗ್ಯ ಸಮಸ್ಯೆಗಳಿಲ್ಲದ  ಯುವಕರು ಹಾಗೂ …

ರೈಲ್ವೇ ಗೇಟ್‌ನಲ್ಲಿ ಸಂಚಾರ ನಿಷೇಧ

ಕುಂಬಳೆ: ಕುಂಬಳೆ- ಮಂಜೇಶ್ವರ ರೈಲು ನಿಲ್ದಾಣಗಳ ಮಧ್ಯೆಗಿನ ಮುಟ್ಟಂ ರೈಲ್ವೇ ಕ್ರಾಸ್ ಎಲ್‌ಸಿ 287 ರೈಲ್ವೇ ಗೇಟ್ ದುರಸ್ತಿ ಕಾಮಗಾರಿಗಾಗಿ  ಮುಚ್ಚುಗಡೆ ಗೊಳಿಸುವ ದಿನಾಂಕವನ್ನು ಬದಲಿಸಲಾಗಿದೆ. ಈ ಮೊದಲು ಈ ತಿಂಗಳ 15, 16ರಂದು ಮುಚ್ಚು ವುದಾಗಿ ತಿಳಿಸಿದ್ದರೂ ಈಗ ಅದನ್ನು ಈ ತಿಂಗಳ 26ರಂದು ಬೆಳಿಗ್ಗೆ 8ರಿಂದ,  27ರಂದು ಸಂಜೆ 6 ಗಂಟೆವರೆಗೆ ಮುಚ್ಚಲು ತೀರ್ಮಾ ನಿಸಲಾಗಿದೆ. ಈ ಸಂದರ್ಭದಲ್ಲಿ ಈ ದಾರಿಯಾಗಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ವಾಹನಗಳು ಉಪ್ಪಳ ಗೇಟ್ ಮೂಲಕ ಸಂಚರಿಸಬೇಕೆಂದು ದಕ್ಷಿಣ …