ಕೆಲಸಕ್ಕೆಂದು ಮಹಾರಾಷ್ಟ್ರಕ್ಕೆ ಹೋದ ಯುವಕ ನಾಪತ್ತೆ

ಅಡೂರು: ಕೆಲಸಕ್ಕೆಂದು ಮಹಾರಾಷ್ಟ್ರಕ್ಕೆ ಹೋದ ಯುವಕ ನಾಪತ್ತೆಯಾದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದೂರು ಮಂಡೆಬೆಟ್ಟಿ ನಿವಾಸಿ  ನಾರಾಯಣ ಎಂಬವರ ಪುತ್ರ ರಮೇಶ (22) ನಾಪತ್ತೆಯಾದ ಯುವಕ. ಈ ಬಗ್ಗೆ ಸಹೋದರಿ ಶ್ಯಾಮಲ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  2025 ಜನವರಿ  23ರಂದು ಮಧ್ಯಾಹ್ನ 1.30ಕ್ಕೆ   ರಮೇಶ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗು ವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಇವರು ಮಂಗಳೂರಿಗೆ ತಲುಪಿರುವುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ …

ನ್ಯಾಯವಾದಿ ಮನೆಯಿಂದ ಕಳವು: ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೆ ಪೊಲೀಸ್ ನಿರ್ಧಾರ

ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಹಾಗೂ ಹಣ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕಲಂದರ್ ಇಬ್ರಾಹಿಂ ಎಂಬಾತನನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕಳವು ಪ್ರಕರಣದಲ್ಲಿ ಈತ ಮಾತ್ರವಲ್ಲದೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತಿಳಿಯಬೇಕಾಗಿದೆ. ಅಲ್ಲದೆ ಮನೆಯಿಂದ ಕಳವು ನಡೆಸಿದ ಚಿನ್ನ, ಬೆಳ್ಳಿ …

ಬ್ಯಾಂಕ್ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪುಲ್ಲೂರು ಸೇವಾ ಸಹಕಾರಿ ಬ್ಯಾಂಕ್ ನೌಕರ ಎಂ. ನಿಧೀಶ್ (35) ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪುಲ್ಲೂರು ಕೊಡವಳಂ ಪಟ್ಟರ್‌ಕಂಡಂ ನಿವಾಸಿಯಾಗಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಕಾಞಂಗಾಡ್ ಕುಶಾಲನಗರ ಕಲ್ಲಂಚಿರ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರು, ಗೆಳೆಯರು ತಲುಪಿ ಮೃತದೇಹದ ಗುರುತುಹಚ್ಚಿ ದ್ದಾರೆ. ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ನಿಧೀಶ್ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗುತ್ತಿದೆ. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ದಿ| ನಿಟ್ಟೂರು ಕುಂಞಿರಾಮನ್- ಬಾಲಾಮಣಿ ದಂಪತಿ ಪುತ್ರನಾದ ನಿಧೀಶ್ ಪತ್ನಿ ವೀಣ, …

ಶಬರಿಮಲೆ ಚಿನ್ನ ಕಳವು: ಕಾಂಗ್ರೆಸ್‌ನಿಂದ ಕಲೆಕ್ಟರೇಟ್ ಮಾರ್ಚ್, ಘರ್ಷಣೆ

ಕಾಸರಗೋಡು: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳನ್ನು ಸೆರೆಹಿಡಿದು ಜೈಲಿಗಟ್ಟಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಿನ್ನೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮಾರ್ಚ್ ನಡೆಸಿದರು. ಕಲೆಕ್ಟರೇಟ್  ಬಳಿ ದಾರಿಯಲ್ಲಿ ಪೊಲೀಸರು ನಿರ್ಮಿಸಿದ್ದ ಬಾರಿಕೇಡನ್ನು ದೂಡಿಹಾಕಿ ಕಾರ್ಯಕರ್ತರು ಮುನ್ನುಗ್ಗಲೆತ್ನಿಸಿದಾಗ ಅವರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ದರು. ಆಗ ಅಲ್ಲಿ ಘರ್ಷಣೆಯ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರು ರಾಜ್ಯ  ಸರಕಾರದ ವಿರುದ್ಧ ಮುಗಿಲು ಮುಟ್ಟುವ ಘೋಷಣೆಯನ್ನು ಮೊಳಗಿಸಿದರು. ಮಾರ್ಚ್‌ನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ …

ಕಾಞಂಗಾಡ್‌ನಲ್ಲಿ ಸೆಂಚುರಿ ವೆಡ್ಡಿಂಗ್ ಸೆಂಟರ್ ಉದ್ಘಾಟನೆ ನಾಳೆ

ಹೊಸದುರ್ಗ: 1 ಲಕ್ಷ ಸ್ಕ್ವಾರ್ ಫೀಟ್‌ನಲ್ಲಿ ಉತ್ತರಕೇರಳದ ಅತ್ಯಂತ ದೊಡ್ಡ ಬ್ರೈಡಲ್ ಫ್ಯಾಶನ್ ಶೋರೂಂ ಆದ ಸೆಂಚುರಿ ವೆಡ್ಡಿಂಗ್ ಸೆಂಟರ್ ಕಾಞಂಗಾಡ್‌ನಲ್ಲಿ ನಾಳೆ ಚಟುವಟಿಕೆ ಆರಂಭಿಸಲಿದೆ. ನಾಲ್ಕು ದಶಕಗಳಿ ಗಿಂತಲೂ ಹೆಚ್ಚಾಗಿ ಫ್ಯಾಶನ್ ರಂಗದಲ್ಲಿ ಅನುಭವ ಸಂಪತ್ತು, ಪರಂಪರೆ, ವಿಶ್ವಾಸ ವಾಗಿದೆ  ಉತ್ತರಕೇರಳದ ಅತ್ಯಂತ ದೊಡ್ಡ ಬ್ರೈಡಲ್ ಶೋರೂಂ ಕಾಞಂಗಾಡ್‌ನಲ್ಲಿ ಆರಂಭಿಸಲು ಸೆಂಚುರಿಗೆ ಪ್ರೇರಣ ಶಕ್ತಿಯಾಗಿರುವುದು. ಎಲ್ಲಾ ವಿಧದ ಬ್ರೈಡಲ್ ಫ್ಯಾಶನ್‌ಗಳು, ವೆಡ್ಡಿಂಗ್ ಸಾರಿಗಳು, ಲೆಹಂಗಗಳು ಎಂಬಿವುಗಳ ನೂತನ ಸಂಗ್ರಹ, ಅಲ್ಲದೆ ಪ್ರತ್ಯೇಕ ಸೆಕ್ಷನ್ ಇಲ್ಲಿ ಸಿದ್ಧಪಡಿಸಲಾ …

ಶಾಂತಿಪಳ್ಳದ ಸುಬೈರ್‌ರ ಮನೆಯಿಂದ ಕಳವು: ಎರಡು ವರ್ಷವಾದರೂ ಆರೋಪಿಗಳ ಸೂಚನೆ ಇನ್ನೂ ಅಲಭ್ಯ

ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಮನೆಯಿಂದ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸುವುದರೊಂದಿಗೆ ತನ್ನ ಮನೆಯಿಂದ ನಡೆದ ಕಳವು ಬಗ್ಗೆ ಸೂಚನೆ ಲಭಿಸಬಹದೇ ಎಂಬ ನಿರೀಕ್ಷೆಯನ್ನು ಶಾಂತಿಪಳ್ಳದ ಸುಬೈರ್ ವ್ಯಕ್ತಪಡಿಸಿದ್ದಾರೆ. 2024 ಮಾರ್ಚ್ 25ರಂದು ಸುಬೈರ್‌ರ ಮನೆಯಿಂದ ಕಳವು ನಡೆದಿತ್ತು. ಮನೆಯ ಬಾಗಿಲು ಮುರಿದು ಒಳನುಗ್ಗದ ಕಳ್ಳರು ಕಪಾಟಿನಲ್ಲಿಟ್ಟಿದ್ದ 25 ಪವನ್ ಚಿನ್ನಾಭರಣ, 450 ದಿರ್ಹಾಂ, 5 ಹೊಸ ಟಿ ಶರ್ಟ್‌ಗಳು, 1 ಭಾರೀ ಮೌಲ್ಯದ ಶೂ ಮೊದಲಾದವುಗಳನ್ನು ಕಳ್ಳರು ದೋಚಿದ್ದರು. ಕಳವು ನಡೆದು ಎರಡು …

ರಾಜ್ಯ ಬಜೆಟ್ ನಾಳೆ ಮಂಡನೆ: ಹಲವು ಮಹತ್ತರ ಜನಕಲ್ಯಾಣ ಯೋಜನೆಗಳ ಘೋಷಣೆ ಸಾಧ್ಯತೆ

ತಿರುವನಂತಪುರ: ಪಿಣರಾಯಿ ವಿಜಯನ್ ನೇತೃತ್ವದ ಎರಡನೇ  ಸರಕಾರದ ಕೊನೆಯ ಬಜೆಟ್‌ನ್ನು ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ನಾಳೆ ಬೆಳಿಗ್ಗೆ 9ಕ್ಕೆ ಮಂಡಿಸುವರು. ಇದು 2026-27ನೇ ಆರ್ಥಿಕ ವರ್ಷದ ಬಜೆಟ್ ಆಗಿದೆ. ರಾಜ್ಯ ವಿಧಾನಸಭೆಗೆ ಎಪ್ರಿಲ್‌ನಲ್ಲಿ ಚುನಾವಣೆ ನಡೆಯಲಿರುವ ಸಾಧ್ಯತೆಯನ್ನು ಮುಂದಕ್ಕೆ ಕಂಡುಕೊಂಡು ಜನರನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಲು ಹಲವು ಜನಕಲ್ಯಾಣ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ ಮಂಡನೆಯ ಮೊದಲೇ ಈ ಬಾರಿ ರಾಜ್ಯ ಬಜೆಟ್ ಮಂಡಿಸಲಾಗುತ್ತಿದೆ ಎಂಬ ವಿಶೇಷತೆಯೂ ಇದಕ್ಕಿದೆ. …

ಅಪಘಾತದಲ್ಲಿ ಗಾಯಗೊಂಡ ಬ್ಯಾಂಕ್ ನೌಕರನ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಮಾರ್ಪನಡ್ಕ ಶಾಖೆಯ ನೌಕರ, ಕುಂಟಿಕಾನ ಶ್ರೀ ಭಾರತಾಂಬ ಸೇವಾ ಟ್ರಸ್ಟ್‌ನ ಸದಸ್ಯ, ಸಾಮಾಜಿಕ ಕಾರ್ಯಕರ್ತ ನೀರ್ಚಾಲು ದೇವರಮೆಟ್ಟು ನಿವಾಸಿ ನಳಿನಾಕ್ಷನ್‌ರ ಚಿಕಿತ್ಸಾ ಸಹಾಯಕ್ಕಾಗಿ ಮೊತ್ತ ಹಸ್ತಾಂತರಿಸಲಾಯಿತು. ಅಪಘಾತದಲ್ಲಿ ಗಾಯಗೊಂಡ ನಳಿನಾಕ್ಷನ್ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ದೊಡ್ಡ ಮೊತ್ತ ವೆಚ್ಚವಾಗಲಿದ್ದು ಈ ಹಿನ್ನೆಲೆಯಲ್ಲಿ ಸಹಾಯ ನೀಡಲಾಗಿದೆ. ದುರ್ಗಾ ಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಸಂಗ್ರಹಿಸಿದ ಮೊತ್ತವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ವಾರ್ಡ್ ಪ್ರತಿನಿಧಿ ಶ್ಯಾಮ್‌ಪ್ರಸಾದ್ ಸರಳಿ ಇವರ ಉಪಸ್ಥಿತಿಯಲ್ಲಿ ಶ್ರೀಭಾರತಾಂಬ …

ಮಾದಕಪದಾರ್ಥ ಸಾಗಾಟ: ಸೆರೆಯಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಸಹಿತ ಇಬ್ಬರು ಉದುಮದ ವಸತಿಗೃಹದಲ್ಲಿ ಸೆರೆ

ಕಾಸರಗೋಡು: ಉದುಮ ಪಳ್ಳಂನ ವಸತಿಗೃಹದಲ್ಲಿ ಬೇಕಲ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರು ಸೆರೆಗೀಡಾಗಿದ್ದಾರೆ. ಪಳ್ಳಿಕ್ಕೆರೆ, ಪಳ್ಳಿಪುಳ ಸ್ನೇಹಾಲಯದ ಗೋಕುಲ್‌ರಾಜ್ (25), ಉದುಮ ಪಳ್ಳಂನ ಚಾಮತ್ತೋಟ್ಟಂ ಹೌಸ್ ನಿವಾಸಿ ಅನೀಶ್ ನಾರಾಯಣ (31) ಎಂಬಿವರನ್ನು ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಸೆರೆಹಿಡಿದಿದೆ.  ಸೋಮವಾರ ಸಂಜೆ ಎಸ್‌ಐಯವರ ನೇತೃತ್ವದಲ್ಲಿ ಪಳ್ಳಂನ ಕೋಡಂಗೈ ವಸತಿಗೃಹದಲ್ಲಿನ 101ನೇ ನಂಬ್ರ ಕೊಠಡಿಗೆ ದಾಳಿ ನಡೆಸಲಾಗಿತ್ತು. ಇಲ್ಲಿಂದ 3.87 ಗ್ರಾಂ ಎಂಡಿಎಂಎ  ಹಾಗೂ ಮಾದಕಪದಾರ್ಥ ಉಪ ಯೋಗಿಸುವುದಕ್ಕಿರುವ ಸಾಮಗ್ರಿಗಳನ್ನು ಪೊಲೀಸರು ವಶಪಡಿ ಸಿದ್ದರು. …

ನೇಣು ಬಿಗಿದು ಚಿಕಿತ್ಸೆಯಲ್ಲಿದ್ದ ಉದ್ಯೋಗ ಖಾತರಿ ಯೋಜನೆ ಕಾರ್ಮಿಕ ಮೃತ್ಯು

ಪೈವಳಿಕೆ: ಮನೆ ಬಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ  ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕೊಚ್ಚಿ ಆಲುವಾ ನಿವಾಸಿ, ಕಳೆದ 20 ವರ್ಷಗಳಿಂದ  ಪೈವಳಿಕೆಯ ಮರಿಕೆಯಲ್ಲಿ ವಾಸವಾಗಿರುವ  ಬಾಬು ಕೆ.ಯು (46) ಮೃತಪಟ್ಟಿದ್ದಾರೆ. ಇವರು ಈ ಹಿಂದೆ ಟೈಲ್ಸ್  ಹಾಸುವ ಕೆಲಸವನ್ನು ನಿರ್ವಹಿಸುತ್ತಿದ್ದು, ಬಳಿಕ ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಾಗಿದ್ದರು. ಈ ತಿಂಗಳ ೧೯ರಂದು ಸಂಜೆ ಪತ್ನಿ ಸುಂದರಿ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಾಗ ಮನೆಯಲ್ಲಿ ಬಾಬು …