ಧರ್ಮಸ್ಥಳ ಪ್ರಕರಣ: ಕೇರಳದ ಇಬ್ಬರು ಯೂ ಟ್ಯೂಬರ್ ಸೇರಿದಂತೆ ಹಲವರಿಗೆ ನೋಟೀಸ್ ಜ್ಯಾರಿ

ಮಂಗಳೂರು: ಧರ್ಮಸ್ಥಳ ಬಳಿಯ ಕಾಡಿನಲ್ಲಿ ಶವಗಳನ್ನು  ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್‌ಗಳಾದ ಸಮೀರ್ ಮತ್ತು ಮನಾಫ್ ಸೇರಿದಂತೆ ಹಲವರಿಗೆ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟೀಸ್ ಜ್ಯಾರಿಗೊಳಿಸಿದೆ. ಆ ಮೂಲಕ ಪ್ರಸ್ತುತ ಪ್ರಕರಣದ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಲಾಗಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್‌ಗಳು ಸುಮಾರು 500ರಷ್ಟು ಪೇಜರ್‌ಗಳು ಹಾಗೂ ೬೦ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳು ಶಾಮೀಲಾಗಿದ್ದಾರೆಂಬ ಮಾಹಿತಿ ಎಸ್‌ಐಟಿಗೆ ಲಭಿಸಿದೆ. …

ಕಾರುಣ್ಯ ಪ್ಲಸ್ ಲಾಟರಿಯ ದ್ವಿತೀಯ ಬಹುಮಾನ 30 ಲಕ್ಷ ರೂ. ಮಧು ಲಾಟರೀಸ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ

ಕಾಸರಗೋಡು: ಓಣಂ ಹಬ್ಬದ ಉತ್ರಾಡಂ ದಿನದಂದು ನಡೆಸಿದ ಕಾರುಣ್ಯ ಪ್ಲಸ್ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರೀಸ್ ಮೂಲಕ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಪಿವೈ 264876 ಎಂಬ ನಂಬ್ರಕ್ಕೆ ಬಹುಮಾನ ಲಭಿಸಿದೆ.  ಕಳೆದ ತಿಂಗಳ 16ರಂದು ನಡೆದ ಕಾರುಣ್ಯ ಲಾಟರಿಯ ಪ್ರಥಮವಾದ ಒಂದು ಕೋಟಿ ರೂ. ಮಧು ಲಾಟರಿ ಸ್ಟಾಲ್‌ನಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿತ್ತು. ರಾಜ್ಯ ಲಾಟರಿಯ ಓಣಂ ಬಂಪರ್ ಬಹುಮಾನ 25 …

ಭಾರತದಲ್ಲಿ ಅತೀ ಹೆಚ್ಚು ಪಂಚ ನಕ್ಷತ್ರ ಹೋಟೆಲ್‌ಗಳಿರುವ ರಾಜ್ಯ ಕೇರಳ

ತಿರುವನಂತಪುರ: ಭಾರತದಲ್ಲಿ ಅತೀ ಹೆಚ್ಚು ಪಂಚನಕ್ಷತ್ರ ಹೋಟೆಲ್‌ಗಳಿರುವ ರಾಜ್ಯ ಕೇರಳವಾಗಿದೆ.  ಅಪಾರ ಸಂಖ್ಯೆಯಲ್ಲಿ ಬೃಹತ್ ಉದ್ದಿಮೆಗಳು ಇರುವ ಮಹಾರಾಷ್ಟ್ರ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಇರುವುದಕ್ಕಿಂತಲೂ ಹೆಚ್ಚು ಫೈ  ಸ್ಟಾರ್ ಹೋಟೆಲ್‌ಗಳು  ಕೇರಳದಲ್ಲಿದೆ. ಮಾತ್ರವಲ್ಲ ಫೋರ್ ಮತ್ತು ತ್ರೀ ಸ್ಟಾರ್‌ಗಳು ಹೊಂದಿರುವ ಹೋಟೆಲ್‌ಗಳ ಸಾಲಿನಲ್ಲಿ ಕೇರಳ ಮುಂದಿದೆ. ಪ್ರವಾಸೋದ್ಯಮ ರಂಗದಲ್ಲಿ ಕೇರಳ ಮುಂದಿದ್ದು, ಅದಕ್ಕೆ ಹೊಂದಿಕೊಂಡು ಕೇರಳದಲ್ಲಿ ಪಂಚನಕ್ಷತ್ರ ಹೋಟೆಲ್‌ಗಳ ಸಂಖ್ಯೆ ಹೆಚ್ಚಾಗತೊಡಗಿದೆ.  ಭಾರತದಲ್ಲಿ 761 ಪಂಚನಕ್ಷತ್ರ ಹೋಟೆಲ್‌ಗಳಿದ್ದು, ಇದರಲ್ಲಿ 94 ಹೋಟೆಲ್‌ಗಳು (ಶೇ. 12) ಕೇರಳದಲ್ಲಿವೆ.  ಉಳಿದಂತೆ …

ಮಂಜೇಶ್ವರ ಉಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ : ಸನ್ಮಾನ

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ಸದಸ್ಯರು ಶಿಕ್ಷಕರ ದಿನಾಚರಣೆ ನಿಮಿತ್ತ ಅಂಬಾರು ನಿವಾಸಿ, ಉಪಜಿಲ್ಲಾ ವಿದ್ಯಾಧಿಕಾರಿ ಅಚ್ಯುತ. ಕೆ ಮತ್ತು ಅವರ ಪತ್ನಿ ಶಿಕ್ಷಕಿ ವಾರಿಜಾ.ಕೆ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, .ಲ| ಚರಣ್ ಬಂದ್ಯೋಡ್ , ಲ| ಮಾಧವ. ಕೆ., ಲ| ಲಕ್ಷಣ್ ಕುಂಬಳೆ ಪಿ.ಎಂ.ಜೆ.ಎಫ್. , ಲ| ಅಶೋಕ್ ಎಂ.ಜೆ.ಎಫ್., ಲ| ವಿಜಯನ್ ನಾಯರ್, ಲ| ತಿಮ್ಮಪ್ಪ ಭಂಡಾರಿ ಜೊತೆಗಿದ್ದರು.

ಪ್ಲಾಸ್ಟಿಕ್ ಬಳಕೆ ಇಳಿಸಲು ಕ್ರಮ: ಬಿವರೇಜ್ ಮದ್ಯ ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲೂ ಲಭ್ಯ

ಕಾಸರಗೋಡು: ಗಾಜು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಹೊರತಾಗಿ ಬಿವರೇಜ್ ಕಾರ್ಪರೇಶನ್‌ನ ಮದ ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲೂ ಲಭಿಸಲಿದೆ. ಪ್ಲಾಸ್ಟಿಕ್ ಉಪಯೋಗವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಸುವ ಉದ್ದೇಶದಿಂದ ಬಿವರೇಜ್ ಕಾರ್ಪರೇಶನ್ ಈ ತೀರ್ಮಾನಕ್ಕೆ ಬಂದಿದೆ. ಇದರಂತೆ 375 ಮಿಲ್ಲಿ ಲೀಟರ್  ಮದ್ಯ ಇನ್ನು ಟೆಟ್ರಾ ಪ್ಯಾಕ್‌ನಲ್ಲಿ ನಮ್ಮದೇ ಆದ ಬ್ರಾಂಡ್‌ನಲ್ಲಿ ಮಾರುಕಟ್ಟೆಗಿಳಿಸಲಾಗು ವುದೆಂದು ಬಿವರೇಜ್ ಕಾರ್ಪರೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಟೆಟ್ರಾ ಪ್ಯಾಕೆಟ್ ನಿರ್ಮಿಸಲು 17 ಕೋಟಿ ರೂ. ವೆಚ್ಚದಲ್ಲಿ ಸ್ಥಾವರ ನಿರ್ಮಿಸಲಾಗುವುದು. ಆದರೆ ಈ ಯೋಜನೆಗೆ ಅಬಕಾರಿ …

ಅರಣ್ಯ ವಲಯಗಳ ಪ್ರವಾಸಿ ಕೇಂದ್ರಗಳಿಗೆ ಇನ್ನು ಏಕ ಮಂಡಳಿ

ಕಾಸರಗೋಡು: ಅರಣ್ಯ ವಲಯಗಳ ಎಲ್ಲಾ ಪ್ರವಾಸಿ ಕೇಂದ್ರಗಳು ಇನ್ನು ಏಕಮಂಡಳಿ ಆಶ್ರಯದಲ್ಲಿ ಕಾರ್ಯವೆಸಗಲಿವೆ. ಇದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ‘ಕೇರಳ ವನ- ಇಕೋ ಟೂರಿಸಂ ಅಭಿವೃದ್ಧಿ ಮಂಡಳಿ’ಗೆ ರೂಪು ನೀಡಲಾಗುವುದು. ಇದಕ್ಕಾಗಿ ಕರಡು ಮಸೂದೆಗೆ ರೂಪು ನೀಡಲಾಗಿದ್ದು, ಅದು ಈಗ ಸಚಿವಸಂಪುಟದ ಪರಿಶೀಲನೆಯಲ್ಲಿದೆ. ಅರಣ್ಯ ಇಲಾಖೆಯ ಇಕೋ ಟೂರಿಸಂಗೆ ಸಂಬಂಧಪಟ್ಟ ಸಂಘಗಳು, ಹುಲಿ ಸಂರಕ್ಷಣಾ ಫೌಂಡೇಶನ್‌ಗಳು, ಅರಣ್ಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಇಕೋ ಡೆವಲಪ್‌ಮೆಂಟ್ ಸಮಿತಿಗಳು ಇನ್ನು ಹೊಸ ಮಂಡಳಿಯಡಿ ಕಾರ್ಯವೆಸಗಲಿದೆ. ಆದರೆ ಆರ್ಥಿಕ ನಿಯಂತ್ರಣವಿರುವ …

ಅಸೌಖ್ಯದಿಂದ ಮಹಿಳೆ ನಿಧನ

ಉಪ್ಪಳ: ಶಿರಿಯ ವಾನಂದೆ ನಿವಾಸಿ ದಿ| ಸದಾಶಿವ ಶೆಟ್ಟಿ ಯವರ ಪತ್ನಿ ಸೀತಾ ಶೆಟ್ಟಿ [78] ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಶಶಿಧರ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಸುಜಾತ ಶೆಟ್ಟಿ, ಸೊಸೆಯಂದಿರಾದ ರೂಪಕಲಾ ಶೆಟ್ಟಿ,ಆಶಾಲತಾ ಶೆಟ್ಟಿ, ಶಿಲ್ಪ ಶೆಟ್ಟಿ, ಸಹೋದರಿಯರಾದ ಲಕ್ಷ್ಮೀ, ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಗುರುಸ್ವಾಮಿ ನಿಧನ

ವರ್ಕಾಡಿ: ಹಿರಿಯ ಗುರುಸ್ವಾಮಿ, ಕೆಳಗಿನ ತಾಡ ನಿವಾಸಿ ಕೆ.ಪಿ. ರಾಮಯ್ಯ ನಾಯ್ಕ್ (80) ನಿಧನ ಹೊಂದಿದರು. ವರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸುಂರದಕಟ್ಟೆ ಇದರ ಸ್ಥಾಪಕ ಸದಸ್ಯ, ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಸಂಘ ಕಾಲದಿಂದಲೇ ಸಂಘಪರಿವಾರ ಕಾರ್ಯಕರ್ತ ರಾಗಿದ್ದು, ಪ್ರಸ್ತುತ ಬಿಜೆಪಿ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಪದ್ಮಾವತಿ, ಪುತ್ರಿ ದಾಕ್ಷಾಯಿಣಿ, ಅಳಿಯ ಸಚ್ಚಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಗೋಪಿನಾಥ್ ಮೊರತ್ತಣೆ, ಪಂ. ಸದಸ್ಯ ರಾಜ್‌ಕುಮಾರ್ …

ಜೂಜಾಟ: ಐದು ಮಂದಿ ಸೆರೆ

ಕಾಸರಗೋಡು:  ಬಟ್ಟತ್ತೂರು ಕೋಟಪ್ಪಾರ ರಸ್ತೆ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ದಲ್ಲಿ ನಿರತರಾದ ಆರೋಪದಂತೆ ಐದು ಮಂದಿಯನ್ನು ಎಸ್‌ಐ ಎಂ. ಸವ್ಯಸಾಚಿಯವರ ನೇತೃತ್ವದ ಬೇಕಲ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 2,510 ರೂ. ನಗದು ವಶಪಡಿಸಿಕೊಂ ಡಿದ್ದಾರೆ. ಪನೆಯಾಲ ನಿವಾಸಿಗಳಾದ ಗುರುವಯ್ಯ (52), ರಾಮಚಂದ್ರನ್ (65), ಸುಬ್ರಾಯ (65), ಪ್ರಭಾಕರನ್ (70) ಮತ್ತು ಪದ್ಮನಾಭನ್ (72) ಬಂಧಿತರಾದವರಾಗಿದ್ದಾರೆ.

ಗಡಿನಾಡ ಕಲಾವಿದರು ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಗಡಿನಾಡ ಕಲಾವಿದರು ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಜರಗಿತು. ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುಕುಮಾರ್ ಕೆ. ಕಣ್ಣನ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಕಾಂತ ಲೆಕ್ಕಪತ್ರ ಮಂಡಿಸಿದರು. ಹಿರಿಯ ನಾಟಕ ಕಲಾವಿದ ಸುರಾಜ್ ಮಾವಿಲರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸುಕುಮಾರ್ ಕೆ. ಕಣ್ಣನ್, ಅಧ್ಯಕ್ಷರಾಗಿ ವರಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷರಾಗಿ ದಿವಾಕರ ಅಶೋಕನಗರ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕುಮಾರದಾರ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಬೇಕಲ್, ಕೋಶಾಧಿಕಾರಿಯಾಗಿ ಜಯಶ್ರೀ ದಿವಾಕರ, ಸಂಚಾಲಕರಾಗಿ …