ಉಪ್ಪಳದಲ್ಲಿ ಅಪಾರ್ಟ್‌ಮೆಂಟ್‌ನಿಂದ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿದುಬಿಡುವುದರ ವಿರುದ್ಧ  ಕ್ರಿಯಾ ಸಮಿತಿಯಿಂದ ಮಾರ್ಚ್

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ನಿರ್ಮಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಕ್ರಮದಿಂದಾಗಿ ಅವೈಜ್ಞಾನಿಕವಾಗಿವೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವುಗಳನ್ನು ನೋಡಿ ನಿಂತಿರುವುದರ ಫಲವಾಗಿ ಇದೀಗ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆಯೆಂದು ಮಾನವ ಹಕ್ಕು ಕಾರ್ಯಕರ್ತ ಕೂಕಲ್ ಬಾಲಕೃಷ್ಣನ್ ಆರೋಪಿಸಿದ್ದಾರೆ. ಉಪ್ಪಳ ಕೈಕಂಬದ ಅಪಾರ್ಟ್‌ಮೆಂಟ್‌ವೊಂದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರ ಪ್ರದೇಶಕ್ಕೆ  ಮಲಿನ ಜಲ ಹರಿದುಬಿಡುವುದರ  ವಿರುದ್ಧ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ್ಲಾಟ್‌ನ ಮುಂಭಾಗದಲ್ಲಿ ಪೊಲೀಸರು ಮಾರ್ಚ್‌ಗೆ ತಡೆಯೊಡ್ಡಿದ್ದಾರೆ. ಬಹುಜನ ಮುನ್ನಡೆ ಕ್ರಿಯಾ ಸಮಿತಿ …

ಶ್ರೀ ನಾರಾಯಣಗುರು ಜಯಂತಿ 7ರಂದು

ಕಾಸರಗೋಡು: ಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭಗೊಂಡಿದೆ. ಗುರುಪೂಜೆ, ಪ್ರಾರ್ಥನೆ, ಸಂಸ್ಮರಣೆ, ಪಾಯಸ ವಿತರಣೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಸೆ. 7ರಂದು ನಾರಾಯಣಗುರು ಜಯಂತಿ ಆಚರಿಸಲಾಗುವುದು. ಗುರುಮಂದಿರಗಳು, ಗುರುಗಳು ಸ್ಥಾಪಿಸಿದ ಕ್ಷೇತ್ರಗಳು, ಗುರುವಿಗೆ ಸಂಬಂ ಧಪಟ್ಟ ಸ್ಥಳಗಳಲ್ಲಿ ಕಾರ್ಯಕ್ರಮಗಳಿ ರುವುದು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಮಂದಿರದ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ನೀಡು ವರು. 7ರಂದು ಮುಂಜಾನೆ 5.30ಕ್ಕೆ ಬಾಗಿಲು ತೆರೆಯುವುದು, 6.30ಕ್ಕೆ ಗುರು ಅರ್ಚನೆ, …

ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಸದಸ್ಯರಿಗೆ ಓಣಂ ಉಡುಪು ವಿತರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ ವೆಸ್ಟ್ ಯೂನಿಟ್‌ನ ವತಿಯಿಂದ ಓಣಂ ಪ್ರಯುಕ್ತ ಯೂನಿಟ್ ಸದಸ್ಯ ರಿಗೆ ಉಡುಪು ವಿತರಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಇವರು ಸದಸ್ಯೆ ಶಾಲಿನಿ ರಾಜೇಂ ದ್ರನ್‌ರಿಗೆ ಓಣಂ ಉಡುಪು ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟ್‌ನ ಹಿರಿಯ ಸದಸ್ಯ ಪ್ರಕಾಶ್ ಸ್ಟುಡಿಯೋ ಮಾಲಕ ಜಯಪ್ರಕಾಶ್ ಅವರಿಗೆ ಯೂನಿಟ್ ನೀರೀಕ್ಷಕ ಶ್ರೀಜಿತ್ ಓಣಂ ಉಡುಪು ನೀಡಿದರು.ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸ್ಪೊರ್ಟ್ಸ್ ಕೋಓರ್ಡಿನೇಟರ್ ರತೀಶ್ ರಾಮು, ವಲಯ ಕೋಶಾ ಧಿಕಾರಿ ಮನು …

ಸಿಪಿಐ ರಾಜ್ಯ ಸಮ್ಮೇಳನಕ್ಕೆ ಅದ್ದೂರಿಯ ಚಾಲನೆ

ಆಲಪ್ಪುಳ:  ಸಿಪಿಐಯ ರಾಜ್ಯ ಸಮ್ಮೇಳನಕ್ಕೆ ಆಲಪ್ಪುಳದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಕಯ್ಯೂರು, ಪಾಳಯಂ ಮತ್ತು ಗುರುನಾಡ್ ಎಂಬೆಡೆಗಳಿಂದಾಗಿ ಬಂದ ಪತಾಕೆ, ಬ್ಯಾನರ್ ಮತ್ತು ಧ್ವಜಸ್ತಂಭಗಳ ಜಾಥಾ ನಿನ್ನೆ ಸಮ್ಮೇಳನ ನಗರದಲ್ಲಿ ಸಂಗಮಿಸಿದ ಬಳಿಕ ವಯಲಾರು ಹೋರಾಟ ನೇತಾರೆ ಪಿ.ಕೆ. ಮೇದಿನಿ ಧ್ವಜಾರೋಹಣ ನಡೆಸುವ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ, ಅಸಿಸ್ಟೆಂಟ್ ರಾಜ್ಯ ಕಾರ್ಯದರ್ಶಿ ಸಂಸದ ಪಿ.ಪಿ. ಸುನೀಶ್, ಸಚಿವರುಗಳಾದ ಪಿ. ಪ್ರಸಾದ್, ಕೆ. ರಾಜನ್ ಪ್ರಧಾನ ಸಂಚಾಲಕ ಟಿ.ಜೆ. …

ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಮಹಾಸಭೆ: ಶಾರದೋತ್ಸವ, ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಜರಗಿತು. ಲಿಂಗಪ್ಪ ಶೆಟ್ಟಿಗಾರ್ ಪರಂಕಿಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕೃಷ್ಣ ಪಿ ಅಡ್ಕ, ಬಾಲಕೃಷ್ಣ ಅಂಬಾರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 39ನೇ ವರ್ಷದ ಶಾರದಾ ಮಹೋತ್ಸವ ಹಾಗೂ 75ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಉತ್ಸವದ ಯಶಸ್ವಿಗೆ ನೂತನ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ತುಂಗ, ಉಪಾಧ್ಯಕ್ಷರಾಗಿ ಕೃಷ್ಣ ಪ್ರಗತಿನಗರ ಮುಟ್ಟಂ, ಜಾನಕಿ ಶೆಟ್ಟಿಗಾರ್ ಪೋರಿಕೋಡು, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಶೆಟ್ಟಿಗಾರ್ …

ಸ್ಥಳೀಯರ ಸಹಾಯ ಫಲ ನೀಡಲಿಲ್ಲ: ಆದೂರಿನಲ್ಲಿ ಹಾವು ಕಚ್ಚಿದ್ದ ವ್ಯಕ್ತಿ ಮೃತ್ಯು

ಮುಳ್ಳೇರಿಯ:  ಹಾವು ಕಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಆದೂರು ಆಲಂತಡ್ಕದ  ಚಂದ್ರನ್ (60) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಗೋಸ್ತ್ ೨೧ರಂದು ಮನೆ ಪರಿಸರದಲ್ಲಿ ಚಂದ್ರನ್‌ರಿಗೆ ಹಾವು ಕಚ್ಚಿತ್ತು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ  ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ  ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ಚಿಕಿತ್ಸೆಗಾಗಿ ಪ್ರತಿದಿನ  ಭಾರೀ ಮೊತ್ತ ವ್ಯಯಿಸ ಬೇಕಾಗಿ ಬಂದಿತ್ತು. ಬಡ ಕುಟುಂಬವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿರುವ ಹಣವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಕುಟುಂಬ ಸಂಕಷ್ಟಕ್ಕೀಡಾದಾಗ ಸ್ಥಳೀಯರು ಚಿಕಿತ್ಸಾ ಸಹಾಯ …

ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರಣ: ತಲೆಮರೆಸಿಕೊಂಡ ಕುಂಜತ್ತೂರು ನಿವಾಸಿ ಸೆರೆ; ನಾಲ್ವರು ಆರೋಪಿಗಳು ಈಗಲೂ ಗಲ್ಫ್‌ನಲ್ಲಿ

ಮಂಜೇಶ್ವರ:  ಮನೆಯಲ್ಲಿ ಗಲಾಟೆ ಸೃಷ್ಟಿಸುತ್ತಿದ್ದಾನೆಂದು ನಾಗರಿಕರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಬಳಿಕ ಸಂಬಂಧಿಕನೊಂದಿಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರ ಣದಲ್ಲಿ ಇನ್ನೋರ್ವನನ್ನು ಬಂಧಿಸ ಲಾಗಿದೆ. ಕುಂಜತ್ತೂರು ನಿವಾಸಿಯಾದ ನೌಫಲ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ತನಿಖೆಗೊಳಪಡಿಸಲಾಗುತ್ತಿದೆ. ಮೀಂಜ ಮದಕ್ಕಳದ  ದಿ| ಅಬ್ದುಲ್ಲ ಎಂಬವರ ಪುತ್ರ ಮೊಯ್ದೀನ್ ಆರಿಫ್ (21) ಕೊಲೆಗೀಡಾದ ಪ್ರಕರಣದಲ್ಲಿ  ನೌಫಲ್ ನನ್ನು ಬಂಧಿಸಲಾಗಿದೆ. 8 ಮಂದಿ ಆರೋಪಿಗಳಿರುವ ಈ ಪ್ರಕರಣದಲ್ಲಿ ಮೂವರನ್ನು ಈ ಹಿಂದೆ ಬಂಧಿಸಲಾ ಗಿತ್ತು. …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ತಲೆಹೊರೆ ಕಾರ್ಮಿಕ ಮೃತ್ಯು

ಕಾಸರಗೋಡು: ವಿಷ ಸೇವಿಸಿ ಗಂಭೀರ ಅಸ್ವಸ್ಥಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ತಲೆಹೊರೆ ಕಾರ್ಮಿಕ ಮೃತಪಟ್ಟನು. ಕೇಳುಗುಡ್ಡೆ ನಿವಾಸಿ ಉಮೇಶ್ ಎಂಬವರ ಪುತ್ರ ಯೋಗೀಶ್ (32) ಮೃತಪಟ್ಟ ಯುವಕ. ಬಟ್ಟಂಪಾರೆಯಲ್ಲಿ ತಲೆಹೊರೆ ಕಾರ್ಮಿಕನಾಗಿದ್ದ ಇವರು ಬಿಎಂಎಸ್ ಕಾರ್ಯಕರ್ತ ನಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ ಸ್ಥಿತಿಯಲ್ಲಿ ಯೋಗೀಶ್ ಪತ್ತೆಯಾಗಿದ್ದರು. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೂ ಬಳಿಕ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ತಂದೆ, …

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮತಿ: ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಕ್ರಮ ಆರಂಭ

ಕಾಸರಗೋಡು: ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಂಗೀಕಾರ ನೀಡಿದೆ. ಇದರಂತೆ  ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್ ಈ ತಿಂಗಳ ೨೨ರಂದು  ಆರಂಭಗೊಳ್ಳಲಿದೆ.  ಮೊದಲ ಹಂತದಲ್ಲಿ ೫೦ ಸೀಟುಗಳಿಗೆ ಪ್ರವೇಶ ನೀಡಲಾಗುವುದು. ಈ ಹಿಂದೆ ಕೈಗೊಳ್ಳಲಾದ ತೀರ್ಮಾನದಂತೆ ಕಾಸರಗೋಡು ಜನರಲ್ ಆಸ್ಪತ್ರೆ  ಟೀಚಿಂಗ್ ಆಸ್ಪತ್ರೆಯಾಗಿ ಕಾರ್ಯವೆಸಗಲಿದೆ.    ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಅಡ್ಮಿನಿಸ್ಟ್ರೇಟೀವ್ ಬ್ಲೋಕ್‌ನಲ್ಲಿ ಥಿಯರಿ ತರಗತಿಗಳು ಹಾಗೂ ಜನರಲ್ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಗತಿಗಳು ನಡೆಯಲಿದೆ. ಮೊದಲ ವರ್ಷದ ಪಠ್ಯಕ್ರಮದ ಪ್ರಕಾರ ಮೊದಲು ಥಿಯರಿ ತರಗತಿ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕ ಮದ್ಯ ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕುಡಾಲುಮೇರ್ಕಳ ಪರಪ್ಪ ನಿವಾಸಿ  ಚಂದ್ರಹಾಸ (38) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ ಕರ್ನಾಟಕ ನಿರ್ಮಿತ 23 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕಯ್ಯಾರು ಚರ್ಚ್ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮದ್ಯ ಸಹಿತ ವ್ಯಕ್ತಿ ಸೆರೆಗೀಡಾಗಿದ್ದಾನೆ.