ಮಾಡಾಯಿಕಾವು ಕ್ಷೇತ್ರದ ಸೇವಾ ರಶೀದಿಯ ನಕಲಿ ಉಪಯೋಗಿಸಿ ವಂಚನೆ: ನೌಕರ ಅಮಾನತು

ಪಯ್ಯನ್ನೂರು: ಪ್ರಸಿದ್ಧ ಕ್ಷೇತ್ರವಾದ ಮಾಡಾಯಿಕಾವುನಲ್ಲಿ ಬಲಿವಾಡು ಸೇವೆಗೆ ನಕಲಿ ರಶೀದಿ ಉಪಯೋಗಿಸಿ  ಹಣ ವಂಚಿಸಿದ ನೌಕರನನ್ನು ಅಮಾನತುಗೊಳಿಸಲಾಗಿದೆ. ಮಲಬಾರ್ ದೇವಸ್ವಂ ಎಂಪ್ಲೋಯಿಸ್ ಯೂನಿಯನ್ (ಸಿಐಟಿಯು) ಮಾಡಾಯಿ ಏರಿಯಾ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯನಾದ ಎ.ವಿ. ಅನೀಶ್ (೪೫) ವಂಚನೆ ನಡೆಸಿರುವ ವ್ಯಕ್ತಿ. ಮಾಡಾಯಿಕಾವ್‌ನ ಕೌಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ನೌಕರನಾಗಿದ್ದಾನೆ ಈತ. ಸೋಮವಾರ ಕ್ಷೇತ್ರದರ್ಶನಕ್ಕೆ ತಲುಪಿದ ಕರ್ನಾಟಕ ನಿವಾಸಿಗೆ ನೀಡಿದ ಸೇವಾ ರಶೀದಿಯ ನಕಲಿ ಪ್ರತಿಯನ್ನು ಇನ್ನೋರ್ವರಿಗೆ ರಶೀದಿಯಾಗಿ ನೀಡಿ ಹಣವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಕರ್ನಾಟಕ ನಿವಾಸಿಗೆ ನೀಡಿದ ರಶೀದಿಯ …

ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ

ಬೇಳ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯ ಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ವಿದ್ವಾಂಸ ನಾರಾಯಣ ಭಟ್ ರಚಿಸಿದ ಪದ್ಯಗಳಿಗೆ ಸಂಸ್ಥೆಯ ನವ್ಯಶ್ರೀ ಕುಲಾಲ್, ಶರಣ್ಯ ಶೆಟ್ಟಿ, ಯಶಿಕ ಸಂದೀಪ್, ದಿಯಾ ಸುಕೇಶ್ ನೃತ್ಯ ಮಾಡಿದರು. ನಾರಾಯಣ ಭಟ್‌ರ ಪುತ್ರ ಡಾ. ವೆಂಕಟ ಗಿರೀಶ್‌ರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, …

ರಾಹುಲ್ ಮಾಂಕೂಟತ್ತಿಲ್ ಪಕ್ಷಕ್ಕೆ ಸವಾಲೆಸೆದಿರುವುದು ಸರಿಯಲ್ಲ-ಸಂಸದ  ಉಣ್ಣಿತ್ತಾನ್

ಕಾಸರಗೋಡು: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿಷಯ ದಲ್ಲಿ ಕಾಸರಗೋಡು  ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಟುವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.  ರಾಹುಲ್ ರನ್ನು ಬೆಂಬಲಿಸುವವರ ವಿರುದ್ಧವೂ ಅವರು ರೋಷ ವ್ಯಕ್ತಪಡಿಸಿದ್ದಾರೆ.  ರಾಹುಲ್ ಮಾಂಕೂಟತ್ತಿಲ್ ಬೆತ್ತ ನೀಡಿ ಹೊಡೆಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಿರೀಕ್ಷೆಯಿರಿಸಿಕೊಂಡಿದ್ದ ಯುವ ನೇತಾರ ಪಕ್ಷಕ್ಕೆ ಸವಾಲೆಸೆ ದಿರುವುದು ಸರಿಯಲ್ಲವೆಂದು ಉಣ್ಣಿತ್ತಾನ್ ತಿಳಿಸಿದ್ದಾರೆ. ಇದೇ ವೇಳೆ ರಾಹುಲ್ ವಿರುದ್ಧ ಈ ಹಿಂದೆ ಶಿಸ್ತು ಕ್ರಮ ಕೈಗೊಂಡಿರುವುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ಕೆ. ಮುರಳೀಧರನ್ ತಿಳಿಸಿದಾರೆ. ಶಾಸಕ ಸ್ಥಾನಕ್ಕೆ ರಾಜೀ …

ಯುವತಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಪಾತ: ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ತಲೆಮರೆಸಿಕೊಂಡ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್

ತಿರುವನಂತಪುರ: ತಿರುವನಂತಪುರ ನಿವಾಸಿಯಾಗಿರುವ ಯುವತಿಗೆ  ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಗರ್ಭಿಣಿಯಾದ ಆಕೆಯನ್ನು ಗರ್ಭಛಿದ್ರಗೊಳಪಡಿಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರೂ, ಪಾಲಕ್ಕಾಡ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ  ರಾಹುಲ್ ಮಾಂಕೂಟತ್ತಿಲ್ (36) ವಿರುದ್ಧ ತಿರುವನಂತಪುರ ನೆಡುಮಂ ಙಾಡ್ ವಲಿಯಮಲ ಪೊಲೀಸರು ಜಾಮೀನುರಹಿತ ಕೇಸುದಾಖಲಿಸಿ ಕೊಂಡಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 89ರ ಪ್ರಕಾರ ಈ ಪ್ರಕರಣ ದಾಖಲಿಸಲಾಗಿದ್ದು, ಇದು 10 ವರ್ಷ ಸಜೆ ಲಭಿಸುವ ಅಪರಾಧಕೃತ್ಯವಾಗಿದೆ. ಇದರ ಹೊರತಾಗಿ ಗರ್ಭಛಿದ್ರ ಗೊಳಿಸಲು …

ಹಿರಿಯ ವ್ಯಾಪಾರಿ ಶಂಭು ಹೆಬ್ಬಾರ್ ನಿಧನ

ಸೀತಾಂಗೋಳಿ: ಸೀತಾಂ ಗೋಳಿ ಪೇಟೆಯ  ಹಿರಿಯ ವ್ಯಾಪಾರಿ  ಶಂಭು ಹೆಬ್ಬಾರ್ (63) ಸ್ವ-ಗೃಹದಲ್ಲಿ ನಿಧನಹೊಂದಿದರು. ಸೀತಾಂ ಗೋಳಿ ನಿವಾಸಿಯಾದ ಇವರು ಹಲವು ವರ್ಷಗಳ ಕಾಲ ಸೀತಾಂ ಗೋಳಿ ಪೇಟೆಯಲ್ಲಿ ವ್ಯಾಪಾರಿ ಯಾಗಿದ್ದರು. ಬಳಿಕ ಅಸೌಖ್ಯ ಬಾಧಿಸಿದ ಹಿನ್ನೆಲೆ ಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ದೇವಕಿ, ಮಕ್ಕ ಳಾದ ಶರತ್, ಕಾರ್ತಿಕ್, ಪ್ರತೀಕ್ಷ, ಸಹೋದರರಾದ ಸುಬ್ರ ಹ್ಮಣ್ಯ, ರಾಮಕೃಷ್ಣ, ಮಹಾದೇವ, ಸಹೋ ದರಿ ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಮಜಳಿಕೆ ನಿವಾಸಿ ಮಾಧವ (68) ಎಂಬವರು  ಸಾವಿಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 7.30ರ ವೇಳೆ ಮನೆಯ ಬೆಡ್‌ರೂಂನ ಕಿಟಿಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು.  ಕೂಡಲೇ ಸಹೋದರರು ಮಾಧವ ರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮಾಧವರ ಪತ್ನಿ ಉಷಾ ನವಂಬರ್ 7ರಂದು ಹೃದಯಾ ಘಾತದಿಂದ ನಿಧನಹೊಂದಿದ್ದರು. ಅನಂತರ ಇವರು ಮನೆಯಲ್ಲಿ …

ಬಿಎಲ್‌ಒಗೆ ಹಲ್ಲೆಗೈಯ್ಯಲೆತ್ನ : ಸಿಪಿಎಂ ಲೋಕಲ್ ಸೆಕ್ರೆಟರಿ ಬಂಧನ

ಮುಳ್ಳೇರಿಯ: ಎಸ್‌ಐಆರ್ ಫಾರ್ಮ್ ನೀಡಿಲ್ಲವೆಂದು ಆರೋಪಿಸಿ ಬೂತ್ ಲೆವೆಲ್ ಆಫೀಸರ್‌ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯಲು ಯತ್ನಿಸಿದ  ಸಿಪಿಎಂ ಲೋಕಲ್ ಸೆಕ್ರೆಟರಿಯನ್ನು ಬಂಧಿಸಲಾಗಿದೆ. ದೇಲಂಪಾಡಿ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷನೂ ಪಾಂಡಿ ಲೋಕಲ್ ಸೆಕ್ರೆಟರಿಯಾದ  ಚಾಪೆಕ್ಕಲ್‌ನ ಎ. ಸುರೇಂದ್ರನ್ (53)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪಯರಡ್ಕ ವಾರ್ಡ್‌ನ  ಬಿಎಲ್‌ಒ ಪಿ. ಅಜಿತ್ ನೀಡಿದ ದೂರಿನಂತೆ    ಸುರೇಂದ್ರನ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಚಾಪೆಕ್ಕಲ್ ಕಮ್ಯುನಿಟಿ ಹಾಲ್‌ನಲ್ಲಿ  ಅಜಿತ್‌ಗೆ ಹಲ್ಲೆಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ. ಎಸ್‌ಐಆರ್ ಫಾರ್ಮ್ ಸಂಗ್ರಹಿಸಲೆಂದು  ಬಿಎಲ್‌ಒ ಅಲ್ಲಿಗೆ …

ಮನೆಗೆ ನುಗ್ಗಿ ಇರಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಮನೆಗೆ ನುಗ್ಗಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಮೂರು ವರ್ಷ ಕಠಿಣ ಸಜೆ ಹಾಗೂ 3೦೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಅಡೂರು ಅತ್ತನಾಡಿ ನಿವಾಸಿ ಸುಂದರ (38) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2018 ನವಂಬರ್ 15ರಂದು ಬೆಳಿಗ್ಗೆ ಅಡೂರು ಮೈನಾಡಿಯಲ್ಲಿ ಮದ್ಯ ಕುಡಿಯಲು …

ಜಾಂಬ್ರಿ ಗುಹೆ ಪರಿಸರದಲ್ಲಿ ಅಪೂರ್ವವಾಗಿ ಹರಿಣ- ಸಾರಂಗ ಜೋಡಿ ಜಿಂಕೆ ಪತ್ತೆ

ಬೆಳ್ಳೂರು: ನೆಟ್ಟಣಿಗೆ  ಕ್ಷೇತ್ರಕ್ಕೆ ಸಂಬಂಧಪಟ್ಟ ಜಾಂಬ್ರಿ ಗುಹಾ ಪ್ರದೇಶ ಒಳಗೊಂಡ ಬಂಟಾಜೆ ರಕ್ಷಿತಾರಣ್ಯದ ಚೆಂಡೆತ್ತಡ್ಕ ಬಯಲಿನಲ್ಲಿ ಅತ್ಯಪೂರ್ವವಾಗಿ ಜಿಂಕೆ ಜೋಡಿ ಪತ್ತೆಯಾಗಿದೆ. ಹವ್ಯಾಸಿ ಛಾಯಾಗ್ರಾಹಕ ಪ್ರಶಾಂತ್ ಪಾಣಾಜೆ ಇದನ್ನು ಸೆರೆ ಹಿಡಿದಿದ್ದಾರೆ. ಚೆಂಡೆತ್ತಡ್ಕ ಬಯಲಿನಲ್ಲಿ ಕಾಡು ಕೋಣ, ಹಂದಿ, ಮುಳ್ಳುಹಂದಿ, ಮರಬೆಕ್ಕು, ಕಾಡುಬೆಕ್ಕು, ಮಂಗ, ಮುಜು, ಅಳಿಲು, ಚಣಿಲು, ನವಿಲು ಮಾಮೂಲಾಗಿ ಕಂಡುಬರುತ್ತಿದ್ದರೂ ಜಿಂಕೆ, ಕಡವೆ, ನರಿ ಅಪೂರ್ವವಾಗಿ ಕಂಡು ಬರುತ್ತಿದೆ. ಆದರೆ ಈಗ ಅಪೂರ್ವವಾಗಿ ಹರಿಣಿ- ಸಾರಂಗ ಜೋಡಿ ಪತ್ತೆಯಾಗಿದೆ.

ಮುಂದುವರಿದ ಮಾದಕದ್ರವ್ಯ ಬೇಟೆ: ಎಂಡಿಎಂಎ, ಹೈಬ್ರೀಡ್ ಗಾಂಜಾ ಪತ್ತೆ; ನಾಲ್ವರ ಸೆರೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ  ಗಾಂಜಾ ಇತ್ಯಾದಿ ಮಾದಕದ್ರವ್ಯ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದು,  ನಿನ್ನೆ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಹೈಬ್ರೀಡ್ ಗಾಂಜಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಮತ್ತು ಎಸ್‌ಪಿಯ ಮಾದಕದ್ರವ್ಯ ವಿರುದ್ಧ ಸ್ಕ್ವಾಡ್ ಉಳಿಯತ್ತಡ್ಕಕ್ಕೆ ಸಮೀಪದ ಇಜ್ಜತ್‌ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6 ಗ್ರಾಂ ಎಂಡಿಎಂಎ ಮತ್ತು 6 ಗ್ರಾಂ ಹೈಬ್ರೀಡ್ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದು ಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳಿ ಯತ್ತಡ್ಕ …