ನಾಡು ಕೈಜೋಡಿಸಿದರೂ ಫಲ ಬೀರಲಿಲ್ಲ:ಕರುಳು ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಮೊಗ್ರಾಲ್ ನಿವಾಸಿ ವಿದ್ಯಾರ್ಥಿ ನಿಧನ

ಕಾಸರಗೋಡು: ಹಳದಿ ಕಾಮಾಲೆ ತಗಲಿದ ಹಿನ್ನೆಲೆಯಲ್ಲಿ ಕರುಳು ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಎರ್ನಾಕುಳಂನ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ 17ರ ಹರೆಯದ ಯುವಕ ಮೃತಪಟ್ಟನು. ಮೊಗ್ರಾಲ್ ನಡ್ಪಳ್ಳಂ ಸಲಾಮತ್‌ನಗರ್ ನಿವಾಸಿ ಫೈಸಲ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾನೆ. ಮೂರು ತಿಂಗಳ ಜ್ವರ ತಗಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದು, ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಪಾಸಣೆಯಲ್ಲಿ ಕರುಳಿಗೆ ರೋಗ ತಗಲಿರುವುದನ್ನು ಪತ್ತೆಹಚ್ಚಲಾಗಿತ್ತು. ಅದಕ್ಕಾಗಿ ಕರುಳು ಬದಲಾವಣೆ ನಡೆಸಬೇಕೆಂದು ವೈದ್ಯರು ನಿರ್ದೇಶಿಸಿದ್ದರು. ಈ …

ರೈಲು ಹಳಿಯಲ್ಲಿ ಕಲ್ಲು ಇರಿಸಿದ ಮೂವರು ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಮಂಜೇಶ್ವರ: ಉಪ್ಪಳ ಐಲ ಬೀಚ್ ರಸ್ತೆಯ ರೈಲು ಹಳಿಯಲ್ಲಿ ಕಲ್ಲು ಇರಿಸಿದ್ದ ಮೂವರು ವಿದ್ಯಾರ್ಥಿ ಗಳನ್ನು ಮಂಜೇ ಶ್ವರ ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಉಪ್ಪಳ ನಿವಾಸಿಗಳಾದ 10, ಪ್ಲಸ್‌ವನ್, ಪ್ಲಸ್‌ಟು ವಿದ್ಯಾರ್ಥಿಗಳನ್ನು ಪೊಲೀಸರು ಈ ರೀತಿ ವಶಕ್ಕೆ ತೆಗೆದು ಕೊಂಡು ನಂತರ ಅವರ ಹೆತ್ತವರನ್ನು ಠಾಣೆಗೆ ಕರೆಸಿ ಮುನ್ನೆಚ್ಚರಿಕೆ ನೀಡಿ ಹೆತ್ತವರ ಜೊತೆ ಹೋಗಲು ಅನುಮತಿ ನೀಡಿದರು. ನಿನ್ನೆ ಮಧ್ಯಾಹ್ನ 1.30ಕ್ಕೆ ದಾದರ್-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದ ವೇಳೆ ಐಲ ಬೀಚ್‌ನ ರೈಲು ಹಳಿಯಲ್ಲಿ ಕಲ್ಲು …

ಚುನಾವಣೆ: ಡಿ. 9ರಿಂದ 11ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 9ರಂದು ಸಂಜೆ 6 ಗಂಟೆಯಿಂದ 11ರಂದು ಸಂಜೆ ಮತದಾನ ಕೊನೆಗೊಳ್ಳುವವರೆಗೆ ಡ್ರೈಡೇ ಆಗಿ ಆಚರಿಸಲಾಗುವುದು. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಮದ್ಯ ಖರೀದಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅನಧಿಕೃತ ಮದ್ಯ ಸಂಗ್ರಹ, ಮಾರಾಟವನ್ನು ಕಠಿಣವಾಗಿ ತಡೆಯಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಧಿಕೃತ ಮದ್ಯ ಮಾರಾಟದ ವಿರುದ್ಧ ತೀವ್ರ ನಿಲುವು ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಮತ ಎಣಿಕೆ ದಿನವಾದ ಡಿ. 13ರಂದು ಕೂಡಾ ಡ್ರೈಡೇ ಆಗಿ …

ವಾರಂಟ್ ಆರೋಪಿ ವಿಮಾನ ನಿಲ್ದಾಣದಿಂದ ಸೆರೆ

ಕಾಸರಗೋಡು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿ ಯಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉತ್ತರ ಪ್ರದೇಶದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ಜಮಾಯತ್ ಶಾಲೆ ಬಳಿಯ ಅಬ್ದುಲ್ ಶಹಿಲ್  ಆರೋಪಿಯಾಗಿದ್ದಾನೆ. 2014ರಲ್ಲಿ ವಿದ್ಯಾನಗರ ಪೊಲೀಸರು ದಾಖಲಿಸಿ ಕೊಂಡಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಬ್ದುಲ್ ಶಹೀಲ್‌ನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದರು. ಈ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(1)ರಲ್ಲಿ ಆರಂಭಗೊಂಡಿತ್ತು. ಆದರೆ ಆ ವೇಳೆ ಆರೋಪಿ …

ಮತದಾರರ ಯಾದಿ ಪರಿಷ್ಕರಣೆ: ರಾಜ್ಯದಲ್ಲೇ ಮಾದರಿಯಾಗಿ ಅಂಗಡಿಮೊಗರು ಬೂತ್ ಬಿಎಲ್‌ಒ ವಿಖ್ಯಾತ್ ಬಿ. ರೈ

ಕಾಸರಗೋಡು: ರಾಜ್ಯ ಮಟ್ಟದಲ್ಲಿಯೇ 15 ದಿನದಲ್ಲಿ ಎಸ್‌ಐಆರ್ ಎನ್ಯುಮರೇಷನ್ ಫಾರ್ಮ್ ವಿತರಿಸಿ, ಭರ್ತಿಗೊಳಿಸಿ ಅದನ್ನು ಸ್ವೀಕರಿಸಿ ಅಪ್ಲೋಡ್ ಪೂರ್ತಿಗೊಳಿಸಿರುವುದರಲ್ಲಿ ಪ್ರಥಮ ಸ್ಥಾನ ಮಂಜೇಶ್ವರ ತಾಲೂಕಿನ 170ನೇ ನಂಬ್ರ ಬೂತ್ ಆದ ಅಂಗಡಿಮೊಗರುವಿನ ಬಿಎಲ್‌ಒ ವಿಖ್ಯಾತ್ ಬಿ. ರೈಗೆ ಆಗಿದೆ.  ಜಿಲ್ಲೆ ಯಲ್ಲಿ ಮತದಾರರ ಯಾದಿ ಪರಿಷ್ಕರಿ ಸುವ ಕೆಲಸ ಒಂದು ವಾರ್ಡ್‌ನಲ್ಲಿ ಮೊದಲು ಪೂರ್ತಿಯಾಗಿರುವುದು ಅಂಗಡಿಮೊಗರು ವಾರ್ಡ್‌ನಲ್ಲಾಗಿದೆ. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಹಾಗೂ ಕರ್ತವ್ಯನಿಷ್ಠೆಯಿಂದ ನಡೆಸಿದ ಅಂಗಡಿಮೊಗರು ವಾರ್ಡ್ ಬಿಎಲ್‌ಒ ವಿಖ್ಯಾತ್ ರೈಯನ್ನು …

ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರ ಮತನೀಡುವ ಉತ್ಸಾಹದಲ್ಲಿ

ಕಾಸರಗೋಡು: ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಾಯದ ಮತದಾರ ಪನತ್ತಡಿ ಪಂಚಾಯತ್‌ನಲ್ಲಿದ್ದಾರೆ. ಇಲ್ಲಿನ ೩ನೇ ವಾರ್ಡ್ ಕೋಯತ್ತಡ್ಕ ದಲ್ಲಿ ವಾಸಿಸುವ ಎಂಕಪ್ಪು ನಾಯ್ಕ್ (105) ಅತ್ಯಂತ ಹೆಚ್ಚು ಪ್ರಾಯದ ಜಿಲ್ಲೆಯ ಮತದಾರನಾಗಿದ್ದಾರೆ. ಇವರು ಕಳೆದ ಬಾರಿಯೂ ಮತದಾನ ಗೈದಿದ್ದರು. ಈಗ ಅಸ್ವಸ್ಥತೆಗಳು ಹೆಚ್ಚಿದ್ದರೂ ಮತದಾನ ಮಾಡುವ ಆವೇಶದಲ್ಲಿ ಯಾವುದೇ ಕುಂದು ಉಂಟಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲಿಯೇ ಇವರು ಮತದಾನ ದಾಖಲಿಸಿದ್ದರು. ಕಳೆದ ಚುನಾವಣೆ ವೇಳೆಯಲ್ಲಿ ಕಾಞಂಗಾಡ್ ಸಹಾಯಕ ಜಿಲ್ಲಾಧಿ ಕಾರಿ ಪ್ರತೀಕ್ ಜೈನ್ ಇವರ ಮನೆಗೆ ತೆರಳಿ …

ಚೆಂಗಳದಲ್ಲಿ ಕಾಂಗ್ರೆಸ್- ಲೀಗ್ ಮಧ್ಯೆ ಭಿನ್ನಾಭಿಪ್ರಾಯ: 3ನೇ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಲೀಗ್‌ನಿಂದ ಸ್ಪರ್ಧೆ

ಚೆಂಗಳ: ಹಲವು ಕಾಲದಿಂದ ಮುಸ್ಲಿಂ ಲೀಗ್ ಸ್ಪರ್ಧಿಸುತ್ತಿದ್ದ ಹಾಗೂ ಲೀಗ್‌ಗೆ ಅತ್ಯಂತ ಹೆಚ್ಚು ಸ್ವಾಧೀನವಿರುವ ಚೆಂಗಳ ಪಂಚಾಯತ್‌ನ 3ನೇ ವಾರ್ಡ್ ನಲ್ಲಿ ಈ ಬಾರಿ ಕಾಂಗ್ರೆಸ್ ಸ್ಪರ್ಧಿಸುತ್ತಿರು ವುದನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್, ಯೂತ್ ಲೀಗ್, ಎಂಎಸ್‌ಎಫ್ ಸಮಿತಿ ಸದಸ್ಯರು ಸದಸ್ಯತನಕ್ಕೆ ರಾಜೀ ನಾಮೆ ಸಲ್ಲಿಸಿದ್ದಾರೆ. ಮೇಲ್ಸಮಿತಿಯ ಕೆಲವು ನೇತಾರರ ಏಕಪಕ್ಷ ತೀರ್ಮಾ ನದ ವಿರುದ್ಧ ಈ ಪ್ರತಿಭಟನೆ ನಡೆಸಲಾ ಗಿದೆ. ಇದೇ ವೇಳೆ ಮುಸ್ಲಿಂ ಲೀಗ್ ಟೌನ್ ಸಮಿತಿಯ ಅಧ್ಯಕ್ಷನಾಗಿದ್ದ ಅಶ್ರಫ್ ಕೆ.ಡಿ.ಯವರ ಪತ್ನಿ ಫಾತಿಮತ್ …

ಉಮೇಶ್ ಕಾಮತ್ ಕಂಪೆನಿ ಮಾಲಕ ನಿಧನ

ಕಾಸರಗೋಡು: ಕಾಞಂಗಾಡ್‌ನ ಹಿರಿಯ ವ್ಯಾಪಾರಿ ಕೆ. ಉಮೇಶ್ ಕಾಮತ್ ಕಂಪೆನಿಯ ಮಾಲಕ ಮೇಲಾಂಗೋಟ್ ಎಸ್‌ಎಸ್ ಕಲಾ ಮಂದಿರ ಸಮೀಪ ನಿವಾಸಿ ಕೆ. ಉಮೇಶ್ ಕಾಮತ್ (78) ನಿಧನ ಹೊಂದಿದರು. ಕಾಞಂಗಾಡ್‌ನ ಮೊದಲ ಮಿಠಾಯಿ ನಿರ್ಮಾಣ ಕಂಪೆನಿಯಾದ ಬ್ರೂಕ್ ಕನ್ಫೆಕ್ಷನರಿ ಮಾಲಕನಾಗಿದ್ದರು. ಕಾಞಂಗಾಡ್ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ, ಹೊಸದುರ್ಗ ಲಕ್ಷ್ಮೀವೆಂಕಟೇ ಶ್ವರ ಕ್ಷೇತ್ರ ಮೆನೇಜಿಂಗ್ ಟ್ರಸ್ಟಿ, ಜಿಎಸ್‌ಬಿ ಗ್ರಾಮಸಭಾ ಅಧ್ಯಕ್ಷ, ಕಾಞಂಗಾಡ್ ಚಿನ್ಮಯ ಮಿಷನ್ ಅಧ್ಯಕ್ಷ ಸಹಿತ ವಿವಿಧ ರಂಗದಲ್ಲಿ ಕಾರ್ಯಾ ಚರಿಸಿದ್ದರು. ಇಂದು ಬೆಳಿಗ್ಗೆ …

ಕುಬಣೂರು ರಸ್ತೆಯಲ್ಲಿ ಮತ್ತೆ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವ ಕೃತ್ಯ ಮತ್ತೆ ವ್ಯಾಪಕಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವಾಹನ ಸಂಚಾರದ ವೇಳೆ ಇಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ಅವಶಿಷ್ಠಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು …

ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ ಆರಂಭ

ಪೈವಳಿಕೆ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ೧೮ನೇ ವಾರ್ಷಿಕೋತ್ಸವ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದ್ದು, ಇಂದು ಬೆಳಿಗ್ಗೆ ಮಂದಿರದ ಪ್ರಧಾನ ಅರ್ಚಕ ವೇ|ಮೂ| ವೆಂಕಟರಮಣ ಮೂಡಿತ್ತಾಯ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನೆ ಪ್ರಾರಂಭ ಗೊಂಡಿತು. ದ್ವಾದಶ ನಾಳೀಕೇರ ಗಣಯಾಗ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ನೃತ್ಯ ಸಂಭ್ರಮ, ೯ಕ್ಕೆ ಯಕ್ಷಗಾನ ನಾಟ್ಯ ವೈಭವ, ೧೦ಕ್ಕೆ ಕಲಾ …