ಬಾಗಿಲುಗಳನ್ನು ತೆರೆದಿರಿಸಿ ಸಂಚರಿಸಿದ ಬಸ್‌ಗಳಿಂದ ಜುಲ್ಮಾನೆ ವಸೂಲಿ

ತಿರುವನಂತಪುರ: ಸಾರಿಗೆ ಕಾನೂನನ್ನು ಉಲ್ಲಂಘಿಸಿಬಾಗಿಲು ಗಳನ್ನು ತೆರೆದು ಸೇವೆ ನಡೆಸಿದ 4099 ಬಸ್‌ಗಳಿಂದಾಗಿ ಒಟ್ಟು 12,69,750 ರೂ.ವನ್ನು ಜುಲ್ಮಾನೆ ರೂಪದಲ್ಲಿ ವಸೂಲಿ ಮಾಡಲಾಗಿದೆ. ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸುತ್ತಿರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ರಸ್ತೆ ಸುರಕ್ಷತಾ ಮ್ಯಾನೇಜ್‌ಮೆಂಟ್ ಐಜಿಯವರ ನೇತೃತ್ವದಲ್ಲಿ ರಾಜ್ಯದಾದ್ಯಂತವಾಗಿ ಒಂದು ವಾರ ನಡೆಸಲಾದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಈ ಜುಲ್ಮಾನೆ ವಸೂಲಿ ಮಾಡಲಾಗಿದೆ. ಬಸ್‌ಗಳು ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸಿದಲ್ಲಿ ಕೆಲವೊಮ್ಮೆ ಪ್ರಯಾಣಿಕರು ನಿಯಂತ್ರಣ ತಪ್ಪಿ ರಸ್ತೆಗೆ …

ಖಾಸಗಿ ಬಸ್‌ಗಳಲ್ಲಿ ಕೆಲಸಕ್ಕೆ ಪೊಲೀಸ್ ಸರ್ಟಿಫಿಕೇಟ್ ಬೇಕೆಂಬ ಕ್ರಮಕ್ಕೆ ಹೈಕೋರ್ಟ್ ಸಮರ್ಥನೆ

ಕೊಚ್ಚಿ: ಖಾಸಗಿ ಬಸ್‌ಗಳಲ್ಲಿ ದುಡಿಯುವ ಚಾಲಕರು ಮತ್ತು ನಿರ್ವಾಹಕರು ಪೊಲೀಸ್ ಸರ್ಟಿಫಿಕೇಟ್ ಪಡೆಯಬೇಕೆಂಬ ರಾಜ್ಯ ಸಾರಿಗೆ ಇಲಾಖೆ ನೀಡಿದ ಹೊಸ ನಿರ್ದೇಶಕ್ಕೆ ರಾಜ್ಯ ಹೈಕೋರ್ಟ್ ಸಮರ್ಥನೆ ನೀಡಿದೆ. ಬಸ್‌ಗಳ ಹಿಂದೆ ಮತ್ತು ಮುಂದುಗಡೆ ಕ್ಯಾಮರಾಗಳನ್ನು ಅಳವಡಿಸಬೇಕು, ವಾಹನ ಎಲ್ಲಿಗೆ ತಲುಪಿದೆ ಎಂಬುವುದನ್ನು ಅರಿತುಕೊಳ್ಳಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಏರ್ಪಡಿಸಬೇಕೆಂಬ ನಿರ್ದೇಶಗಳಿಗೂ ಹೈಕೋರ್ಟ್ ಅಸ್ತು ನೀಡಿದೆ. ಮಾತ್ರವಲ್ಲ ಖಾಸಗಿ ಬಸ್‌ಗಳ ಅಮಿತವೇಗ ಹಾಗೂ ಸ್ಪರ್ಧಾತ್ಮಕ ಓಟವನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಜ್ಯಾರಿಗೊಳಿಸಿದ ಹೊಸ ಕ್ರಮಗಳಿಗೂ ನ್ಯಾಯಾಲಯ ಸಮರ್ಥನೆ ನೀಡಿದೆ. …

ಜನರಲ್ ಆಸ್ಪತ್ರೆಯಲ್ಲಿ ಉಚಿತ ಊಟ ವಿತರಿಸುವ ವ್ಯಕ್ತಿ ವಿರುದ್ಧ ದೂರು: ತನಿಖೆಗೆ ಮಾನವಹಕ್ಕು ಆಯೋಗ ಆದೇಶ

ಕಾಸರಗೋಡು: ಜನರಲ್ ಆಸ್ಪತ್ರೆಯ ರೋಗಿಗಳಿಗೆ ದಿನಂಪ್ರತಿ ಉಚಿತವಾಗಿ ಮಧ್ಯಾಹ್ನದೂಟ ವಿತರಿಸುವ ವ್ಯಕ್ತಿ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇ ಕೆಂದು ಮಾನವ ಹಕ್ಕು ಆಯೋಗದ ಜ್ಯುಡೀಶಿಯಲ್ ಸದಸ್ಯ ಕೆ. ಬೈಜುನಾಥ್ ಟೌನ್ ಎಸ್‌ಎಲ್‌ಒಗೆ ನಿರ್ದೇಶಿಸಿದ್ದಾರೆ. ದೂರಿನಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಆಯೋಗದ ಅರಿವಿಗೆ ಬಂದಿಲ್ಲವೆಂದೂ ಆದೇಶ ದಲ್ಲಿ ತಿಳಿಸಲಾಗಿದೆ. ಉಚಿತ ಆಹಾರದ ಹೆಸರಲ್ಲಿ ಜನರಿಂದ ಸಾವಿರಾರು ರೂಪಾಯಿ ಪಡೆಯು ತ್ತಿರು ವುದಾಗಿ ಆರೋಪಿಸಿ ಸಲ್ಲಿಸಿದ ದೂರಿನಂತೆ ಈ ನಿರ್ದೇಶ …

ಪಿಟ್ ಎನ್‌ಡಿಪಿಎಸ್ ಕಾನೂನು ಪ್ರಕಾರ ಓರ್ವ ಸೆರೆ

ಕಾಸರಗೋಡು: ಮಾದಕ ದ್ರವ್ಯ ಪ್ರಕರಣದ ಆರೋಪಿಯನ್ನು ಪಿಟ್ ಎನ್‌ಡಿಪಿಎಸ್ ಕಾನೂನಿನ ಪ್ರಕಾರ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಮಾಸ್ತಿಕುಂಡ್ ನಿವಾಸಿ ಮುಹಮ್ಮದ್ ಸಹದ್ (26) ಬಂಧಿತ ಆರೋಪಿ. ಈತ ಆದೂರು, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಮತ್ತು ಎರ್ನಾಕುಳಂ ಎಕ್ಸೈಸ್ ರೇಂಜ್ ಕಚೇರಿಯಲ್ಲಿ ದಾಖಲಿಸಲಾದ ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಮಾರಾಟ ಮಾಡಲೆಂದು ಮಾದಕ ದ್ರವ್ಯವಾದ 99.54 ಗ್ರಾಂ ಎಂಡಿಎಂಎ ಕೈವಶವಿರಿಸಿದುದಕ್ಕೆ ಸಂಬಂಧಿಸಿ ಆದೂರು ಪೊಲೀಸ್ ಠಾಣೆಯಲ್ಲಿ …

ಆನ್‌ಲೈನ್ ಟ್ರೇಡಿಂಗ್: ಚಳಿಯಂಗೋಡು ನಿವಾಸಿಯ 56 ಲಕ್ಷ ರೂ. ವಂಚನೆ; ಸೈಬರ್ ಪೊಲೀಸರಿಂದ ತನಿಖೆ

ಕಾಸರಗೋಡು: ವಿವಿಧ ಕಂಪೆನಿಗಳ ಶೇರ್‌ಗಳನ್ನು ಖರೀದಿಸಿ ಟ್ರೇಡಿಂಗ್ ನಡೆಸಲೆಂದು ತಿಳಿಸಿ 56,10,000 ರೂ. ವಂಚಿಸಿರುವುದಾಗಿ ದೂರಲಾಗಿದೆ. ಚೆಮ್ನಾಡ್, ಚಳಿಯಂಗೋಡು ವಾಲಿವ್ಯೂ ನಿವಾಸಿ ಅಬ್ದುಲ್ ಖಾದರ್ ಕಡವತ್ ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ತನಿಖೆ ಆರಂಭಿಸಿದರು. ಗೂಗಲ್ ಪ್ಲೇಸ್ಟೋರ್‌ನಿಂದ ಐಐಎಫ್‌ಎಲ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ 2025 ಜುಲೈ 2ರಿಂದ ಆಗಸ್ಟ್ 5ರವರೆಗಿರುವ ದಿನಗಳಲ್ಲಿ ವಿವಿಧ ಖಾತೆಗಳಿಗೆ ಹಣ ಪಾವತಿಸುವಂತೆ ಮಾಡಿ ವಂಚನೆ ನಡೆಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಹೇಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲಿರುವ ಯತ್ನ ಮುಂದುವರಿಯುತ್ತಿದೆ.

‘ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿಯನ್ನು ಹೊರತುಪಡಿಸಬೇಕು’- ಸುಪ್ರೀಂಕೋರ್ಟ್ ಸಮೀಪಿಸಿದ ರಾಜ್ಯಪಾಲ

ತಿರುವನಂತಪುರ: ಕೇರಳದ ಎರಡು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿ ಯನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಡಿಜಿಟಲ್ ವಿಶ್ವವಿದ್ಯಾಲಯಗಳ ಉಪಕುಲಪ ತಿಗಳ ನೇಮಕಾತಿಗಾಗಿರುವ ಸರ್ಜ್ ಸಮಿತಿ ಹಾಗೂ ನೇಮಕಾತಿ ಪ್ರಕ್ರಿಯೆಗಳಿಂದ ಮುಖ್ಯಮಂ ತ್ರಿಯನ್ನು ಹೊರತು ಪಡಿಸಬೇಕೆಂಬ ಪ್ರಧಾನ ಬೇಡಿಕೆಯನ್ನು  ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಯಲ್ಲಿ ರಾಜ್ಯಪಾಲರು ಮುಂದಿರಿಸಿದ್ದಾರೆ. ಉಪಕುಲಪತಿಗಳ ನೇಮಕಾತಿಗಾಗಿ ಸರ್ಜ್ ಸಮಿತಿ ತಯಾರಿಸುವ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕೆಂಬ ನಿರ್ದೇಶವನ್ನು ಈ ಹಿಂದೆ …

ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಳಿ ವ್ಯಕ್ತಿಯೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಶಿವಗಂಗಾ ಕರೈಕುಡಿ ಕಟ್ಟು ತಲೈವಾಸಲ್ ಬಚ್ಚ ಕೂಡಲ್ ಸ್ಟ್ರೀಟ್‌ನ ನಜ್ಮುದ್ದೀನ್ ಖಾದರ್ ಬಚ್ಚ (71) ಎಂಬವರು ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಸುಮಾರು 6.15ರ ವೇಳೆ ಘಟನೆ ನಡೆದಿದೆ. ಹಳಿ ದಾಟುತ್ತಿದ್ದಾಗ ಇವರಿಗೆ ರೈಲು ಢಿಕ್ಕಿ ಹೊಡೆದಿರಬಹು ದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿ ಪತ್ತೆಯಾದ ಗುರುತುಚೀಟಿ ಮೂಲಕ ವ್ಯಕ್ತಿಯ ಗುರುತು ಹಚ್ಚಲಾಗಿದೆ. ಮೃತದೇಹ ವನ್ನು ಕಾಸರಗೋಡು ಜನರಲ್ …

ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ನಡೆಸುವ ತಂಡದ ಇಬ್ಬರ ಸೆರೆ

ಮಂಜೇಶ್ವರ: ಶಾಲಾ ವಿದ್ಯಾರ್ಥಿ ಗಳನ್ನು ಮಾದಕವಸ್ತುಗಳತ್ತ ಆಕರ್ಷಿಸಲು ಗಾಂಜಾ ಮಿಠಾಯಿ ವಿತರಿಸುವ ತಂಡದ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ಮುನೀರ್ (48), ಉದ್ಯಾವರ ಬಲ್ಲಂಗೋಡು ನಿವಾಸಿ ಮುಹಮ್ಮದ್ ಹನೀಫ್ ಎಂಬಿವರನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್  ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಸೆರೆಹಿಡಿದಿದೆ. ಅಬಕಾರಿ ಇನ್‌ಸ್ಪೆಕ್ಟರ್ ವಿಷ್ಣು ಪ್ರಕಾಶ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ 0.21  ಗ್ರಾಂ ಮೆಥಾಫಿಟಮಿನ್, 81 ಗ್ರಾಂ ಗಾಂಜಾ ಎಂಬಿವುಗಳನ್ನು ವಶಪಡಿಸಿ ಇಬ್ಬರನ್ನು ಸೆರೆಹಿಡಿಯಲಾಗಿದೆ. ಅಸಿಸ್ಟೆಂಟ್ …

ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ವ್ಯಕ್ತಿ ಸೆರೆ

ಕಾಸರಗೋಡು: ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆ ಸಿದ ವ್ಯಕ್ತಿ ಯ ನ್ನು ಬಂದಡ್ಕ ಎಕ್ಸೈಸ್ ರೇಂಜ್ ಕಚೇರಿಯ ಇನ್‌ಸ್ಪೆಕ್ಟರ್ ಶಹಬಾಸ್ ಅಹಮ್ಮದ್ ಎ.ಪಿ ನೇತೃತ್ವದ ತಂಡ  ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಕುತ್ತಿಕ್ಕೋಲು ಪೈರು ನಿವಾಸಿ ಜೋಬಿನ್ ಕುರ್ಯನ್ (35) ಬಂಧಿತ ಆರೋಪಿ. ಕುತ್ತಿಕೋಲ್‌ನ ಅಲ್ಫೋನ್ಸಾ ಎಂಬ ಮಹಿಳೆಯ ಮಾಲಕತ್ವದಲ್ಲಿರುವ ಹಿತ್ತಿಲ ಮುಂದಿನ ಬಾವಿ ಬಳಿ  ಗಾಂಜಾ ಸಸಿ ನೆಟ್ಟು ಬೆಳೆಸಿದ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ಐಬಿ ಪ್ರಿವೆಂಟೀವ್ ಆಫೀಸರ್ ರವೀಂದ್ರನ್ ಎಂ.ಕೆ ನೀಡಿದ ಗುಪ್ತ …

ಕಾಲೇಜು ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಕಾಲೇಜು ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಮಧೂರಿಗೆ ಸಮೀಪದ ಪಟ್ಲ ಕುದ್ರೆಪ್ಪಾಡಿ ನಿವಾಸಿ ಹಾಗೂ ಮಂಗಳೂರಿನ ಖಾಸಗಿ ಕಾಲೇಜೊಂದರ ಬಿಸಿಐ ಮೂರನೇ ವರ್ಷದ ವಿದ್ಯಾರ್ಥಿ ಇಬ್ರಾಹಿಂ (20) ನಾಪತ್ತೆಯಾದ ಯುವಕ. ಈತ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಹೋದ ನಂತರ ಹಿಂತಿರುಗಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆತನ ತಂದೆ ಅಬ್ದುಲ್ ಖಾದರ್ ತಿಳಿಸಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.