ಬಸ್‌ನೊಳಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ನೌಕರರು

ಕುಂಬಳೆ: ಬಸ್‌ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್‌ಲೆಟ್‌ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಬಸ್ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಧರ್ಮತ್ತಡ್ಕಕ್ಕೆ ತೆರಳುತ್ತಿದ್ದ  ಮಹಾಲಕ್ಷ್ಮಿ ಬಸ್‌ನಲ್ಲಿ ಪ್ಲಸ್‌ಟು ವಿದ್ಯಾರ್ಥಿನಿಯಾದ ಅಲೀಮತ್ ಶಮ್ನಾ ಎಂಬಾಕೆಯ  ಒಂದು ಪವನ್ ತೂಕದ ಬ್ರೇಸ್‌ಲೆಟ್ ಕಳೆದುಹೋಗಿತ್ತು.  ನಾಯ್ಕಾಪಿನಲ್ಲಿ ಬಸ್ಸಿಳಿದು ಮನೆಗೆ ಹೋಗುತ್ತಿದ್ದಾಗ ಬ್ರೇಸ್‌ಲೆಟ್ ಕಳೆದುಹೋಗಿರುವ ಬಗ್ಗೆ ವಿದ್ಯಾರ್ಥಿನಿಯ ಅರಿವಿಗೆ ಬಂದಿದೆ. ಈ ಮಧ್ಯೆ ಬಸ್‌ನೊಳಗೆ ನೌಕರರಿಗೆ  ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ಚಾಲಕ ಧರ್ಮತ್ತಡ್ಕ ಬಾಳಿಗದ ಸೋಮನಾಥ, ಕಂಡಕ್ಟರ್ ಮುಗುವಿನ …

ಸೆರೆಗೀಡಾದ ಯುವತಿಗೆ ಕಿರುಕುಳ’:  ಆತ್ಮಹತ್ಯೆಗೈದ ಸಿಐ ಬರೆದಿಟ್ಟ ಪತ್ರದಲ್ಲಿ ಮೇಲಧಿಕಾರಿ ವಿರುದ್ಧ ಗಂಭೀರ ಆರೋಪ

ಪಾಲಕ್ಕಾಡ್: ಇತ್ತೀಚೆಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್ ಅಧಿಕಾರಿ ಬರೆದಿಟ್ಟ ಪತ್ರವೊಂದು ಪೊಲೀಸರಿಗೆ ಲಭಿಸಿದ್ದು, ಅದರಲ್ಲಿ ಮೇಲಧಿಕಾರಿ ಯೊಬ್ಬನ ವಿರುದ್ಧ ಗಂಭೀರ ಆರೋಪಹೊರಿಸಲಾಗಿದೆ. ಚೆರುಪುಳಶ್ಶೇರಿ ಸಿಐ ಆಗಿದ್ದ ಬಿನು ಥೋಮಸ್ ಎಂಬವರು ಬರೆದಿಟ್ಟ ಪತ್ರ ಪತ್ತೆಯಾಗಿದ್ದು ಅದರಲ್ಲಿ  ಮೇಲಧಿಕಾರಿ ಯೋರ್ವ  ಅನೈತಿಕ ದಂಧೆ  ಪ್ರಕರಣ ದಲ್ಲಿ ಸೆರೆಗೀಡಾದ ಯುವತಿಗೆ ಬೆದರಿಕೆ ಯೊಡ್ಡಿ ಕಿರುಕುಳ ನೀಡಿರುವುದಾಗಿ  ಆರೋಪಹೊರಿ ಸಲಾಗಿದೆ. ಪ್ರಸ್ತುತ ಕಲ್ಲಿಕೋಟೆ ಡಿವೈಎಸ್ಪಿಯಾಗಿರುವ ಉಮೇಶ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳಿರುವ …

ಪಣಂಬೂರು ಕಡಲ ತೀರದಲ್ಲಿ ಕಳ್ಳತನ: ಬಾಲಕ ಸೆರೆ; 3.33ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕಳವುಗೈದಿದ್ದ 3.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ಗಳನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.ಈ ತಿಂಗಳ 24ರಂದು ಸ್ವಾತಿ ನಂದಿಪಳ್ಳಿ ತಮ್ಮ ಸ್ನೇಹಿತ ರೋಹಿತ್ ನೆಮ್ಮಲೆಟ್ಟಿ ಅವರೊಂದಿಗೆ ಪಣಂಬೂರು ಕಡಲತೀರಕ್ಕೆ ತಲುಪಿದ್ದರು. ತಮ್ಮ ಚಿನ್ನದ ಸರ (12 ಗ್ರಾಂ), ಲಾಕೆಟ್ (2 ಗ್ರಾಂ), ತಲಾ 2 ಗ್ರಾಂನ ಎರಡು ಉಂಗುರಗಳು, 4 ಗ್ರಾಂನ ಕಿವಿಯೋಲೆಗಳು, ಒಂದು ಮೊಬೈಲ್ ಫೋನ್, ರೋಹಿತ್ ಅವರ …

ಮಧೂರು ಪಂಚಾಯತನ್ನು ಸ್ಮಾರ್ಟ್ ಆಗಿ ಅಭಿವೃದ್ಧಿಪಡಿಸಲಾಗುವುದು- ಎಂ.ಎಲ್. ಅಶ್ವಿನಿ

ಕಾಸರಗೋಡು: ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಧೂರು ಪಂಚಾಯತ್‌ನಲ್ಲಿ ಬಿಜೆಪಿ ಹೆಚ್ಚಿನ ಬಹುಮತದೊಂದಿಗೆ ಅದಿsಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳಲ್ಲಿ ಮಧೂರು ಪಂಚಾಯತ್ ಸ್ಮಾರ್ಟ್ ಮಧೂರು ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದ್ದಾರೆ. ಮಧೂರು ಪಂಚಾಯತ್‌ನ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಂ.ನಲ್ಲಿ 50ನೇ ವಾರ್ಷಿಕೋ ತ್ಸವಕ್ಕೆ ಕಾಲಿಡುತ್ತಿರುವ ಬಿಜೆಪಿಯು ಅಪ್ರತಿಮ ಸಾಧನೆಗಳನ್ನು ಸಾದಿsಸಿದೆ. ಮುಂದಿನ ಐದು ವರ್ಷಗಳಲ್ಲಿ ಪಂಚಾಯತ್‌ನ ಎಲ್ಲಾ ವಾರ್ಡ್ ಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು …

ಜಿಲ್ಲಾ ಪಂಚಾಯತ್ ಮಂಜೇಶ್ವರ ಡಿವಿಶನ್ ಎಡರಂಗದ ಚುನಾವಣಾ ಕಚೇರಿ ಉದ್ಘಾಟನೆ

ಉಪ್ಪಳ: ಜಿಲ್ಲಾ ಪಂಚಾಯತ್ ಮಂಜೇಶ್ವರ ಡಿವಿಶನ್ ಎಡರಂಗದ ಚುನಾವಣಾ ಕಚೇರಿಯನ್ನು ಎನ್‌ಸಿಪಿಎಸ್ ಜಿಲ್ಲಾ ಅಧ್ಯಕ್ಷ ಕರೀಂ ಚಂದೇರ ಉದ್ಘಾಟಿಸಿದರು. ಕೈಕಂಬ- ಬಾಯಾರ್ ರಸ್ತೆಯಲ್ಲಿನ ಕಟ್ಟಡದಲ್ಲಿ ಕಚೇರಿ ಆರಂಭಗೊಂಡಿದೆ.  ಚುನಾವಣಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದರು. ಹಮೀದ್ ಕೋಸ್ಮೋಸ್ ಎನ್‌ಸಿಪಿ ರಾಜ್ಯ ಕಾರ್ಯದರ್ಶಿ ಸಿ. ಬಾಲನ್, ಅಭ್ಯರ್ಥಿ ಖದೀಜ ಮೊಗ್ರಾಲ್, ಬ್ಲೋಕ್ ಪಂ. ಅಭ್ಯರ್ಥಿಗಳಾದ ವಾಣಿಶ್ರೀ, ಆಯಿಷಾ ಟಿ, ನಾರಾಯಣನ್, ಸಿದ್ದಿಕ್ ಕೈಕಂಬ, ಸುಬೈರ್ ಪಡ್ಪು, ಉದಿನೂರು ಸುಕುಮಾರನ್, ಅಬ್ದುಲ್ ರಹ್ಮಾನ್ ಹಾಜಿ, ಸುರೇಂದ್ರನ್ ಮಾತನಾಡಿದರು. …

ರಾಷ್ಟ್ರೀಯ ಹೆದ್ದಾರಿ ಬದಿ ಬೀದಿನಾಯಿಗಳ ಗುಂಪು: ಸ್ಥಳೀಯರಲ್ಲಿ ಆತಂಕ

ಉಪ್ಪಳ: ಬೀದಿ ನಾಯಿಗಳ ಅಕ್ರಮಣ ವ್ಯಾಪಕಗೊಂಡು ಜನರಲ್ಲಿ ಭೀತಿ ಉಂಟಾಗಿರುವ ಬೆನ್ನಲ್ಲೇ ಪ್ರತಾಪ ನಗರ, ಉಪ್ಪಳ, ಉಪ್ಪಳ ಗೇಟ್, ಭಗವತೀ ಗೇಟ್, ವಾಮಂಜೂರು ಚೆಕ್‌ಪೋಸ್ಟ್, ಹೊಸಂಗಡಿ ಮೊದಲಾದ ರಾಷ್ಟಿçÃಯ ಹೆದ್ದಾರಿ ಹಾಗೂ ಒಳ ಪ್ರದೇಶಗಳಲ್ಲಿ ಬೀದಿ ನಾಯಿಗಳು ವ್ಯಾಪಕಗೊಂಡಿದೆ. ಇದರಿಂದ ಶಾಲಾ ಮಕ್ಕಳ ಸಹಿತ ಜನರ ಸಂಚಾರಕ್ಕೆ ಆತಂಕ ಉಂಟಾ ಗಿರುವುದಾಗಿ ದೂರಲಾಗಿದೆ. ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಹೆದ್ದಾರಿಯಲ್ಲಿ 10ಕ್ಕಿಂತ ಅಧಿಕ ಬೀದಿ ನಾಯಿಗಳ ಗುಂಪು ಸವಾರಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ತ್ಯಾಜ್ಯಯಿರುವ ಪ್ರದೇಶದಲ್ಲಿ ಪರಸ್ಪರ …

ಪೈವಳಿಕೆ ಪಂಚಾಯತ್‌ನ ವಿವಿಧ ವಾರ್ಡ್‌ಗಳ ಅಭ್ಯರ್ಥಿಗಳು

ಪೈವಳಿಕೆ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಪೈವಳಿಕೆ ಪಂಚಾಯತ್‌ನಿAದ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು: 1ನೇ ವಾರ್ಡ್ ಕುರುಡಪದವು -ಚಿತ್ರಾವತಿ [ಸಿ.ಪಿ.ಎಂ], ನಫೀಸತುಲ್ ಮಿಸ್ರಿಯಾ [ಲೀಗ್], ಸುಮನ.ಜಿ ಭಟ್ [ಬಿಜೆಪಿ], 2ನೇ ವಾರ್ಡ್ ಶಿರಂತಡ್ಕ -ಉಮೇಶ್ [ಬಿಜೆಪಿ], ಮೋಹನ [ಸ್ವತಂತ್ರ], ರೇಖಾ ಕಿಶೋರ್ ಚಿಪ್ಪಾರು [ಸಿ.ಪಿ.ಐ], ಸಕೀರ್ ಹುಸೈನ್ [ಲೀಗ್], 3ನೇ ವಾರ್ಡ್ ಚಿಪ್ಪಾರು- ಪ್ರಮೀಳ .ಇ [ಬಿಜೆಪಿ], ಯಶೋದ [ಸಿ.ಪಿ.ಎಂ], ಶರೀಫ್ [ಲೀಗ್], 4ನೇ ವಾರ್ಡ್ ಮಾಣಿಪ್ಪಾಡಿ -ಅಬ್ದುಲ್ ಹಾರೀಸ್ .ಎ …

ಸಬ್ ಜೈಲಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿಯ ಸಾವು: ದೇಹದಲ್ಲಿ ಗಾಯಗಳಿಲ್ಲ, ಹೃದಯಾಘಾತವುಂಟಾಗಿಲ್ಲ; ಸಾವಿಗೆ ಕಾರಣ ತಿಳಿಯಲು ರಾಸಾಯನಿಕ ತಪಾಸಣೆ 

ಕಾಸರಗೋಡು: ಕಾಸರಗೋಡು ಸಬ್ ಜೈಲಿನಲ್ಲಿ ಪೋಕ್ಸೋ ಪ್ರಕರಣದ ರಿಮಾಂಡ್ ಆರೋಪಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿ ದಿದೆ. ಸಾವಿಗೆ ಕಾರಣ ಪತ್ತೆಹಚ್ಚಲು ಮೃತದೇಹದಿಂದ ಸಂಗ್ರಹಿಸಿದ ಗಂಟಲ ದ್ರವವನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ. ಇದರ ವರದಿ ಲಭಿಸಿದರೆ ಮಾತ್ರವೇ ಸಾವಿಗೆ ಕಾರಣವೇನೆಂದು ತಿಳಿಯಬಹುದಾಗಿದೆ ಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ವಿದ್ಯಾನಗರ ಪೊಲೀಸರು 2016ರಲ್ಲಿ ದಾಖಲಿಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯಾದ ದೇಳಿ ಕುನ್ನುಪ್ಪಾರದ ಮುಬಶೀರ್(29) ನಿನ್ನೆ ಮುಂಜಾನೆ  ಮೃತಪಟ್ಟಿದ್ದಾನೆ. ಸಬ್ ಜೈಲಿನಲ್ಲಿ ಶಾರೀರಿಕ ಅಸ್ವಸ್ಥತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಈತನನ್ನು ಜನರಲ್ …

ನಿಲ್ಲಿಸದೆ ಪರಾರಿಯಾದ ಆಟೋ ರಿಕ್ಷಾದಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಸೆರೆ

ಕಾಸರಗೋಡು:  ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಮಾದಕದ್ರವ್ಯವಾದ 28.32 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮುಳಿಯಾರು ಮಾಸ್ತಿಕುಂಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ಕೆ. ಉಸ್ಮಾನ್ ಯಾನೆ ಚಾರ್ಲಿ ಉಸ್ಮಾನ್ (43), ಮಧೂರು ಶಿರಿಬಾಗಿಲು ಬದರ್ ಜುಮಾ ಮಸೀದಿ ಸಮೀಪದ ಕುಳತ್ತಿಂಗರ ಹೌಸ್‌ನ ಎಂ. ಅಬ್ದುಲ್ ರಹ್ಮಾನ್ (55) ಎಂಬಿವರನ್ನು ಕಾಸರಗೋಡು ನಗರಠಾಣೆ ಎಸ್.ಐ. ಕೆ. ರಾಜೀವನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.  ನಿನ್ನೆ ಸಂಜೆ ಶಿರಿಬಾಗಿಲಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ …

ಶಬರಿಮಲೆಯಲ್ಲಿ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್‌ನಲ್ಲಿ: ಗಂಭೀರ ಲೋಪ ಪತ್ತೆ ; ಗುತ್ತಿಗೆದಾರ, ರೆಡ್ಕೋಗೆ ನೋಟೀಸ್

ಪತ್ತನಂತಿಟ್ಟ: ಶಬರಿಮಲೆ ದೇಗುಲ ದಲ್ಲಿ ಜೇನುತುಪ್ಪದ ಹರಕೆ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್‌ನಲ್ಲಿ ಆಗಿತ್ತೆಂಬ ಗಂಭೀರ ವಿಷಯ ಹೊರಬಂದಿದೆ. ಇದಕ್ಕೆ ಸಂಬಂಧಿಸಿ ಜೇನುತುಪ್ಪ ವಿತರಿಸಿದ  ಗುತ್ತಿಗೆದಾರರಿಗೆ ಶಬರಿಮಲೆ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ನೋಟೀಸು ಜ್ಯಾರಿಗೊಳಿಸಿದ್ದಾರೆ. ಹೀಗೆ ವಿತರಿಸಲಾದ  ಜೇನುತುಪ್ಪ ವನ್ನು ಉಪಯೋಗಿಸದೆ  ಅದನ್ನು ಇನ್ನಷ್ಟು ಸಮಗ್ರ ರಾಸಾಯನಿಕ ಪರೀಕ್ಷೆ ಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ.  ಶಬರಿಮಲೆ ದೇಗುಲದಲ್ಲಿ ಉಪಯೋಗಿಸುವ  ಎಲ್ಲಾ ಸಾಮಾಗ್ರಿಗಳನ್ನು ಮೊದಲು ಪಂಪಾದಲ್ಲಿರುವ ಆಹಾರ ಭದ್ರತಾ ವಿಭಾಗದ  ಲ್ಯಾಬ್‌ಗೆ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಹೀಗೆ …