ಸಚಿವರಿಂದ ಕಂದಾಯ ವಿಭಾಗೀಯ ಕಚೇರಿ ಉದ್ಘಾಟನೆ
ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಂದಾಯ ವಿಭಾಗೀಯ ಕಚೇರಿ (ಆರ್.ಡಿ.ಒ)ವನ್ನು ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯ ಕಂದಾಯ ಖಾತೆ ಸಚಿವ ಕೆ. ರಾಜನ್ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ರಿ-ಬಿಲ್ಡ್ ಕೇರಳ ಯೋಜನೆಯಲ್ಲಿ ಒಳಪಡಿಸಿ ಆರ್ಡಿಒ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. 2020-21ನೇ ಆರ್ಥಿಕ ವರ್ಷದ ರೀ-ಬಿಲ್ಡ್ ಕೇರಳ ಇನ್ಸ್ಸೆಂಟೀವ್ ನಿಧಿಯಿಂದ ೪ ಕೋಟಿ ರೂ. ಈ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದು 1052.39 ಸ್ಕ್ವಾರ್ ಫೀಟ್ನ ದ್ವಿ ಅಂತಸ್ತಿನ ಕಟ್ಟಡವಾಗಿದೆ. …