ಲೀಗ್ ಕೋಟೆಯಾದ ಕೊಡ್ಯಮ್ಮೆಯಲ್ಲಿ ಲೀಗ್ ಅಭ್ಯರ್ಥಿಗೆ ಸವಾಲೊಡ್ಡಿ ಲೀಗ್ ಕಾರ್ಯಕರ್ತ ಸ್ಪರ್ಧಾಕಣಕ್ಕೆ

ಕುಂಬಳೆ: ಯುಡಿಎಫ್‌ನ ಪ್ರಧಾನ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಮಧ್ಯೆ ಮತ್ತು ಲೀಗ್‌ನವರ ಮಧ್ಯೆ ತೀವ್ರ ಪೈಪೋಟಿ ನಡೆಯುವ ಕುಂಬಳೆ ಪಂಚಾಯತ್‌ನ ಲೀಗ್ ಕೋಟೆಯಾದ ಕೊಡ್ಯಮ್ಮೆ ೯ನೇ ವಾರ್ಡ್‌ನಲ್ಲಿ ಲೀಗ್ ಅಭ್ಯರ್ಥಿಗಳಿಗೆ ಭಾರೀ ಸವಾಲೊಡ್ಡಿ ಒಂದು ವಿಭಾಗ ಲೀಗ್ ಕಾರ್ಯಕರ್ತರು ಪಕ್ಷದ ಸಕ್ರಿ ಯ ಕಾರ್ಯಕರ್ತನನ್ನು ಕಣಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಎಡರಂಗಕ್ಕೆ ಲಭಿಸಿದ ಗೆಲುವು ಲೀಗ್ ನಾಯಕತ್ವವನ್ನು ಬೆಚ್ಚಿಬೀಳಿಸಿತ್ತು. ಈಬಾರಿ ಸ್ವಂತ ಕೋಟೆಯನ್ನು ವಶಪಡಿಸಿಕೊಳ್ಳಲು ಪಕ್ಷದ ಪ್ರಬಲನಾದ ಅಬ್ಬಾಸ್ ಕೊಡ್ಯಮ್ಮೆ ಅವರನ್ನು ಕಣಕ್ಕಿಳಿಸುವುದರೊಂದಿಗೆ  …

ಪುತ್ತಿಗೆ ಬ್ಲೋಕ್ ಪಂಚಾಯತ್ ಡಿವಿಶನ್‌ನಲ್ಲಿ ಪ್ರಧಾನ ಸ್ಪರ್ಧೆ ಕಾಂಗ್ರೆಸ್-ಕಾಂಗ್ರೆಸ್ ಮಧ್ಯೆ; ಬಿಜೆಪಿ, ಸಿಪಿಎಂಗೆ ಕೌತುಕ

ಕುಂಬಳೆ: ನಾಮಪತ್ರ ಸಮರ್ಪಣೆ ದಿನಾಂಕ ಕೊನೆಗೊಂಡ ಬಳಿಕ ಚುನಾವಣೆ ಚಿತ್ರ ಸ್ಪಷ್ಟಗೊಂಡಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಪುತ್ತಿಗೆ ಡಿವಿಷನ್‌ನಲ್ಲಿ ಪ್ರದಾನ ಪಕ್ಷಗಳ ಅಭ್ಯರ್ಥಿಗಳೆಲ್ಲಾ ರಂಗದಲ್ಲಿದ್ದರೂ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆಯಾಗಿದೆ ಎಂಬುದು ಸ್ಪಷ್ಟಗೊಂಡಿತು. ಕಾಂಗ್ರೆಸ್‌ನ ಔದ್ಯೋಗಿಕ ಅಭ್ಯರ್ಥಿಯಾಗಿ ಯೂತ್ ಮುಖಂಡ ಜುನೈದ್ ಸ್ಪರ್ಧಿಸುವ ಈ ಡಿವಿಷನ್‌ನಲ್ಲಿ ಕಾಂಗ್ರೆಸ್‌ನ ಪ್ರಧಾನ ಮುಖಂಡ, ಕೃಷಿ ಸಂಘಟನಾ ನೇತಾರನಾದ ಶುಕೂರ್ ಕಾಣಾಜೆ ಕೂಡಾ ನಾಮಪತ್ರ ಸಮರ್ಪಿಸಿ ಸ್ಪರ್ಧಾರಂಗದಲ್ಲಿದ್ದಾರೆ. ಅಭ್ಯರ್ಥಿನಿರ್ಣ ಯದಲ್ಲಿ ಪಕ್ಷದ ನೇತೃತ್ವ ನಿಷ್ಪಕ್ಷವಾದ ನಿಲುವು ಕೈಗೊಂಡಿಲ್ಲವೆಂಬುದು ಶುಕೂರ್ ನಾಮಪತ್ರ ಸಲ್ಲಿಸಲು …

ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ; ಪೌರ ಸನ್ಮಾನ, ಪ್ರಶಸ್ತಿ ಪ್ರದಾನ 26ರಂದು ಕಾಯರ್‌ಕಟ್ಟೆಯಲ್ಲಿ

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ನ.29ರಂದು ಕಾಯರ್‌ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಉದ್ಘಾಟಿ ಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವರು.ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ …

ರೈಲ್ವೇ ನಿಲ್ದಾಣದಿಂದ ಪಾನ್‌ಮಸಾಲೆ ಸಹಿತ ಇಬ್ಬರ ಸೆರೆ

ಮಂಜೇಶ್ವರ: ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ  1632 ಪ್ಯಾಕೆಟ್ ಪಾನ್‌ಮಸಾಲೆ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಮರವಟ್ಟಂ ನಿವಾಸಿ ಶೌಕತ್‌ಅಲಿ (43), ಕಣ್ಣೂರು ಚೆಂಗಲಾಯಿ ನಿವಾಸಿ ಮೊಹಮ್ಮದ್ ಮೊಯ್ದೀನ್ (65) ಸೆರೆಗೀಡಾದವರು. ಶನಿವಾರ ಅಪರಾಹ್ನ 2 ಗಂಟೆಗೆ ಪ್ಲಾಟ್‌ಫಾರ್ಮ್‌ನಲ್ಲಿ ಗೋಣಿಚೀಲ ಸಹಿತ ನಿಂತಿದ್ದ ವೇಳೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಪಾನ್‌ಮಸಾಲೆ ಪತ್ತೆಯಾಗಿದೆ. ಠಾಣೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಇವರನಬ್ಬರನ್ನು ಕಸ್ಟಡಿಗೆ ತೆಗೆದು ಮಾಲನ್ನು ವಶಪಡಿಸಿದ್ದಾರೆ.

ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಣ

ಕಾಸರಗೋಡು: ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಿಸಲಾಗಿದೆ. ಯೂನುಸ್ ಎಂಬಾ ತನನ್ನು ಚೇವಾಯೂರಿನಲ್ಲಿ ಅಪಹರಿಸಲಾ ಗಿದ್ದು, ಘಟನೆಯಲ್ಲಿ ನಾಲ್ಕು ಮಂದಿಯನ್ನು ಚೇವಾಯೂರ್ ಪೊಲೀಸರು ಕಸ್ಟಡಿಗೆ ಚೆಗೆದಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಅಪಹರಣಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಸ್ಟಡಿಗೆ ತೆಗೆದವರನ್ನು ವಿಚಾರಣೆಗೆ ಳಪಡಿಸಲಾಗುತ್ತಿದೆ.

ಆಟೋದಲ್ಲಿ ಮದ್ಯ ಸಾಗಾಟ: ಚಾಲಕ ಪರಾರಿ

ಕಾಸರಗೋಡು: ಆಟೋದಲ್ಲಿ 34.2 ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ವಶಪಡಿಸಲಾಗಿದೆ. ಆಟೋಚಾಲಕ ವಾಹನವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ 8 ಗಂಟೆ ವೇಳೆ ಕೂಡ್ಲು ಪಾಯಿಚ್ಚಾ ಲ್‌ನಲ್ಲಿ ಘಟನೆ ನಡೆದಿದೆ. ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ಪ್ರಿವೆಂಟಿವ್ ಆಫೀಸರ್ ಕೆ.ವಿ. ರಂಜಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಆಟೋವನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿ ಯಾಗಿದ್ದಾನೆ.  ಮಾಲನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ಕೂಲಿ ಕಾರ್ಮಿಕ ನಿಧನ

ಮುಳ್ಳೇರಿಯ: ನೆಟ್ಟಣಿಗೆ ನಾಕೂರು ನಿವಾಸಿ, ಕೂಲಿ ಕಾರ್ಮಿಕ ಗುರುಪ್ರಸಾದ್ (30) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ದಿ| ದೇವಪ್ಪ ನಾಯ್ಕ್- ಇಂದಿರ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಸಹೋದರ ಯೋಗೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.

ಬಾಲಗೋಕುಲ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೇಂದ್ರ- ನ್ಯಾಯವಾದಿ ಅಕ್ಷತಾ

ಸೀತಾಂಗೋಳಿ: ಮಕ್ಕಳನ್ನು ಶಾಲೆಗೆ ಸೇರಿಸೋದು, ಅವರಿಗೆ ಬೇಕಾದ್ದನ್ನು ತೆಗೆದುಕೊಟ್ಟ ಮಾತ್ರಕ್ಕೆ ಹೆತ್ತವರ ಜವಾಬ್ದಾರಿ ಮುಗಿಯೋದಿಲ್ಲ. ಅವರೇನು ಮಾಡುತ್ತಾರೆ? ಯಾರೊಂ ದಿಗೆ ಸೇರುತ್ತಾರೆ? ಅವರ ಇಷ್ಟ ಕಷ್ಟ ಗಳೇನು ಎನ್ನುವುದನ್ನೂ ಗಮನಿಸ ಬೇಕು ಎಂದು ಯುವ ನ್ಯಾಯವಾದಿ ಅಕ್ಷತಾ ಇಕ್ಕೇರಿ ಅಭಿಪ್ರಾಯಪಟ್ಟರು. ಮುಕಾರಿಕಂಡಕ್ಕೆ ಸಮೀಪದ ಕುಕ್ಕೂಡೆಲ್‌ನ ಸ್ವಾಮಿ ಕೊರಗಜ್ಜ ಬಾಲ ಗೋಕುಲ ಕುಣಿತ ಭಜನಾ ಸಂಘದ 2ನೇ ವಾರ್ಷಿಕೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಭಾಷಣ ಮಾಡಿ ಮಾತಾ ಡುತ್ತಿದ್ದರು.ಕ್ಷೇತ್ರಗಳು ಜೀವನದಲ್ಲಿ ಸಂಸ್ಕಾರ, ಧರ್ಮ ಜಾಗೃತಿ ಮೂಡಿಸುವ …

ಇಲೆಕ್ಟ್ರಿಕ್ ಸೈಕಲ್ ಅಪಘಾತ: ಗಾಯಗೊಂಡ ವ್ಯಕ್ತಿ ಮೃತ್ಯು

ಉಪ್ಪಳ:    ಬಾಯಾರು ಕೊಜಪ್ಪೆ  ಜಂಕ್ಷನ್ ಸಮೀಪ  ಇಲೆಕ್ಟ್ರಿಕ್ ಸೈಕಲ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬಾಯಾರು ಕೊಜಪ್ಪೆ ನಿವಾಸಿ ಇಬ್ರಾಹಿಂ (66) ಮೃತಪಟ್ಟ ದುರ್ದೈವಿ. ನಿನ್ನೆ ಬೆಳಿಗ್ಗೆ 9.30ರ ವೇಳೆ ಅಪಘಾತ ಉಂಟಾಗಿದೆ. ಅಳಿಯ ಚಲಾಯಿಸುತ್ತಿದ್ದ ಇಲೆಕ್ಟ್ರಿಕ್ ಸೈಕಲ್‌ನ ಹಿಂಬದಿ ಕುಳಿದು ಇಬ್ರಾಹಿಂ ಪ್ರಯಾಣಿಸುತ್ತಿದ್ದರು. ಕೊಜಪ್ಪೆ ಜಂಕ್ಷನ್ ಸಮೀಪ   ಸೈಕಲ್  ನಿಯಂತ್ರಣ  ಮಗುಚಿ ಬಿದ್ದು ಅಪಘಾತ ವುಂಟಾಗಿರುವುದಾಗಿ  ಹೇಳಲಾಗುತ್ತಿದೆ.  ಗಂಭೀರ ಗಾಯಗೊಂಡ ಇಬ್ರಾಹಿಂರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲ …

ಮಂಗಲ್ಪಾಡಿ ಪಂ.ನಲ್ಲಿ ಲೀಗ್ ಅಭ್ಯರ್ಥಿ ಅವಿರೋಧ ಆಯ್ಕೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಪಂಚಾಯತ್‌ನ 24ನೇ ವಾರ್ಡ್ ಮಣಿಮುಂಡ ದಲ್ಲಿ ಲೀಗ್ ಅಭ್ಯರ್ಥಿಯಾಗಿ ನಾಮಪತ್ರಿಕೆ ಸಲ್ಲಿಸಿದ ಸಮೀನ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಈ ವಾರ್ಡ್‌ನಲ್ಲಿ  ಅವರಿಗೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲದುದರಿಂದ ಸಮೀನರನ್ನು  ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಪರಾಭವಗೊಂಡಿದ್ದ ಈ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಸಮಾನ ಶಕ್ತಿ ಹೊಂ ದಿರುವುದಾಗಿ ಹೇಳಲಾಗುತ್ತಿದೆ. ಸಮೀನ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆಯಾಗಿದ್ದರು. ನಾಮಪತ್ರಿಕೆ ಸಲ್ಲಿಸಬೇಕಾದ …