ಮಾಜಿ ಗಲ್ಫ್ ಉದ್ಯೋಗಿ ನಿಧನ

ಕುಂಬಳೆ: ಮಾಟೆಂಗುಳಿ ನಿವಾಸಿ  ಕುಂಞಿಮಾಹಿನ್ ಕುಟ್ಟಿ (79) ನಿಧನಹೊಂದಿದರು.  ಇವರು ಮಾಜಿ ಗಲ್ಫ್ ಉದ್ಯೋಗಿಯಾಗಿದ್ದಾರೆ.  ಮೃತರು ಪತ್ನಿ ಫಾತಿಬಿ, ಮಕ್ಕಳಾದ ಅಸ್ಲಾಂ, ರಹೀಂ, ರಿಫಾಯಿ, ಸೊಸೆಯಂದಿರಾದ ಸರೀನ, ರೌಲ, ಇರ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕುಂಬಳೆ ಬದರ್ ಜುಮಾ ಮಸೀದಿ ಬಳಿ ನಡೆಯಿತು.

ಚುನಾವಣೆ ಪ್ರಕ್ರಿಯೆಯಲ್ಲಿ ಕನ್ನಡಕ್ಕೆ ಅವಗಣನೆ: ಮಾಹಿತಿ ಹಕ್ಕು ಕಾರ್ಯಕರ್ತ ಆರೋಪ

ಕುಂಬಳೆ: ತ್ರಿಸ್ತರ ಪಂಚಾಯತ್‌ಗಳಿಗೆ ಸ್ಪರ್ಧಿಸುವ ಭಾಷಾ ಅಲ್ಪಸಂಖ್ಯಾತರಾದ ಅಭ್ಯರ್ಥಿಗಳೊಂದಿಗೆ ತಾರತಮ್ಯ ನೀತಿ ತೋರಿಸುತ್ತಿರುವುದಾಗಿ ಕುಂಬಳೆಯ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಕನ್ನಡ ಭಾಷೆ ತಿಳಿದಿರುವ ಅಭ್ಯರ್ಥಿಗಳು ಮಲೆಯಾಳದಲ್ಲಿರುವ ನಾಮಪತ್ರಿಕೆಯ ಸತ್ಯಪ್ರತಿಜ್ಞೆಯನ್ನು ಹೇಗೆ ಹೇಳುವುದೆಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಹಲವು ಕಡೆಗಳಲ್ಲಿ ವಾಗ್ವಾದಗಳು ಉಂಟಾಗಿವೆ. ಜಿಲ್ಲಾ ಪಂಚಾಯತ್‌ಗೆ ನಾಮಪತ್ರ ಸಲ್ಲಿಸಿದ ಕೇಶವ ನಾಯ್ಕ್ ಮಲಯಾಳ ತಿಳಿದಿಲ್ಲವೆಂದು ತಿಳಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕನ್ನಡದಲ್ಲಿರುವ ಪ್ರಮಾಣವಚನ ಪ್ರತಿಯನ್ನು …

ಸ್ಥಳೀಯಾಡಳಿತ ಚುನಾವಣೆ ಸ್ವೀಕೃತಿ-ವಿತರಣೆ ಕೇಂದ್ರಗಳ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ವೀಕೃತಿ, ವಿತರಣೆ ಕೇಂದ್ರಗಳನ್ನು ತೀರ್ಮಾನಿಸಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಅಡಿಯಲ್ಲಿ ಬರುವ ಗ್ರಾಮ ಪಂಚಾಯತ್‌ಗಳಿಗೆ (ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡ್, ಚೆಂಗಳ,ಬದಿಯಡ್ಕ) ಸರಕಾರಿ ಕಾಲೇಜು ಕಾಸರಗೋಡು, ವಿದ್ಯಾನಗರ ಪೂರ್ವ ಪಶ್ಚಿಮದಲ್ಲಿರುವ ಪ್ರಧಾನ ಕಟ್ಟಡದ ಕೆಳ ಅಂತಸ್ತು, ಇತರ ಕಟ್ಟಡಗಳು ಸ್ವೀಕೃತಿ, ವಿತರಣೆ ಕೇಂದ್ರವಾಗಿ ಮಂಜೂರು ಮಾಡಲಾಗಿದೆ. ಕಾಞಂಗಾಡ್ ಬ್ಲೋಕ್ ಪಂಚಾಯತ್‌ನ ಗ್ರಾಮ ಪಂಚಾಯತ್‌ಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲೋಕ್ ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ (ಕುಂಬ್ಡಾಜೆ, …

ನಗರದಲ್ಲಿ ರಸಮಂಜರಿ ಕಾರ್ಯಕ್ರಮ ವೇಳೆ ಪ್ರೇಕ್ಷಕರ ಭಾರೀ ನೂಕುನುಗ್ಗಲು: ಉಸಿರುಗಟ್ಟುವ ವಾತಾವರಣ; ಕುಸಿದುಬಿದ್ದು 12ಕ್ಕೂ ಹೆಚ್ಚು

ಮಂದಿ ಆಸ್ಪತ್ರೆಯಲ್ಲಿ, ಲಾಠಿ ಪ್ರಯೋಗಿಸಿದ ಪೊಲೀಸರು, ಸಂಘಟಕರ ವಿರುದ್ಧ ಕೇಸು ಕಾಸರಗೋಡು: ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ  ಪ್ರೇಕ್ಷಕರ ಅಭೂತಪೂರ್ವ ಸಂದಣಿಯಿಂದಾಗಿ ಭಾರೀ ನೂಕುನುಗ್ಗಲು ಹಾಗೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ೧೨ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಗರದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿಯ ಖಾಸಗಿ ಸ್ಥಳದಲ್ಲಿ ಎಫ್‌ಎಲ್‌ಇಎ ಎಂಬ ಹೆಸರಲ್ಲಿ  ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ೩೦೦೦ ಪ್ರೇಕ್ಷಕರು ಭಾಗವಹಿಸುವ ಸೌಕರ್ಯ ಏರ್ಪಡಿಸಲಾಗಿದೆ. ಆದರೆ …

ಪಂ. ಚುನಾವಣೆ: ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳ ಮಧ್ಯೆ ಆವೇಶಭರಿತ ಪೈಪೋಟಿ ; ಮುಖ್ಯಸ್ಪರ್ಧೆ ಕಾಂಗ್ರೆಸ್ – ಲೀಗ್ ಮಧ್ಯೆ

ಮಂಜೇಶ್ವರ:  ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ  ಬಿರುಸುಗೊಳ್ಳುತ್ತಿರುವಂತೆ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಗ್ರಾಮ ಪಂಚಾಯತ್‌ಗಳಲ್ಲಿ  ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ತೀವ್ರಗೊಂಡಿದೆ.  ಮುಂದೆ ಏನಾಗಲಿದೆಯೆಂದು ತಿಳಿಯಲು  ನಿರೀಕ್ಷೆಯೊಂದಿಗೆ ಮತದಾರರು ಕಾದುಕುಳಿತಿದ್ದಾರೆ.  ಪಂಚಾಯತ್ ಚುನಾವಣೆಯಲ್ಲಿ ಈ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ನ ಅಡಿಪಾಯ ತಪ್ಪಿಸುವುದಾಗಿ ಲೀಗ್ ಕಾರ್ಯಕ ರ್ತರು ಒಂದೆಡೆ ಹೇಳುತ್ತಿದ್ದರೆ ಲೀಗ್‌ನ ಆಡಳಿತವನ್ನೇ ಇಲ್ಲದಾಗಿಸುವುದಾಗಿ  ಕಾಂಗ್ರೆಸ್ ಮತ್ತೊಂದೆಡೆ  ತಿಳಿಸುತ್ತಿದ್ದಾರೆ.  ಈಮಧ್ಯೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಶ್ ಮಂಜೇಶ್ವರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ. …

ಪೆರ್ಲ  ಬಳಿ  ಮನೆಯಿಂದ ನಾಡಕೋವಿ, ಮದ್ದುಗುಂಡು ವಶ: ಬಂಧಿತ ಆರೋಪಿಗೆ ರಿಮಾಂಡ್

ಕಾಸರಗೋಡು: ಪೆರ್ಲ  ಬಳಿಯ ಕುರಿಯಡ್ಕದಲ್ಲಿ  ಮನೆಯಿಂದ ಕಳ್ಳಕೋವಿ ಹಾಗೂ   ಮದ್ದುಗುಂಡುಗಳ ಸಹಿತ ಸೆರೆಗೀಡಾದ  ವ್ಯಕ್ತಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಕುರಿಯಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಬದಿಯಡ್ಕ ಪೊಲೀಸರು ಮೊನ್ನೆ ನಡೆಸಿದ ದಾಳಿ ವೇಳೆ ಕೃಷ್ಣಪ್ಪ ನಾಯ್ಕನ ಮನೆಯಿಂದ ಕಳ್ಳಕೋವಿ, ಎರಡು ಮದ್ದುಗುಂಡುಗಳು ಹಾಗೂ ೪೨ ಖಾಲಿ ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೃಷ್ಣಪ್ಪ ನಾಯ್ಕ್‌ನನ್ನು ಬಂಧಿಸಲಾಗಿತ್ತು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ …

ಪೊಲೀಸರಿಗೆ ಹಲ್ಲೆ: ಕೊಲೆಯತ್ನ ಸಹಿತ 22 ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ   ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ  ಕೊಲೆಯತ್ನ ಸಹಿತ ೨೨ರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ ಕುಖ್ಯಾತ ಗೂಂಡಾನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಕೂಡ್ಲು ಪಾರೆಕಟ್ಟೆ ಆರ್‌ಡಿನಗರದ   ಅಜಯ್ ಕುಮಾರ್ ಶೆಟ್ಟಿ ಯಾನೆ ತೇಜು (29) ಎಂಬಾತನನ್ನು ನೀಲೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ನಿಬಿನ್ ಜೋಯ್ ಬಂಧಿಸಿದ್ದಾರೆ.  ನಿನ್ನೆ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಕರುವಚ್ಚೇರಿ ಲೋಕೋಪಯೋಗಿ ಕಚೇರಿ ಮುಂದಿನ ರಸ್ತೆಯಲ್ಲಿ ತೇಜು ಜನರಿಗೆ  ಬೆದರಿಕೆಯೊಡ್ಡಿದ್ದನು.  ಈ ವಿಷಯ ತಿಳಿದು …

ಸೀತಾಂಗೋಳಿಯಲ್ಲಿ ಗೂಡಂಗಡಿಯಿಂದ ಗ್ಯಾಸ್ ಸೀಲಿಂಡರ್‌ಗಳು, ಅಕ್ಕಿ, ಮಿಠಾಯಿ ಕಳವು

ಸೀತಾಂಗೋಳಿ: ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ಗೂಡಂಗಡಿಗೆ  ಕಳ್ಳರು ದಾಳಿ ನಡೆಸಿದ್ದಾರೆ. ಅಂಗಡಿಯ ಕಬ್ಬಿಣದ  ಗ್ರಿಲ್ಸ್‌ನ  ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಗ್ಯಾಸ್ ಸಿಲಿಂಡರ್, ಸ್ಟವ್,ಮಿಠಾಯಿಗಳು, ಅಕ್ಕಿ ಮೊದಲಾದವುಗಳನ್ನು ದೋಚಿ ದ್ದಾರೆ.   ಸೀತಾಂಗೋಳಿ ಸಮೀಪ ವಾಸಿಸುವ ನಬೀಸ ಎಂಬವರ ಗೂಡಂಗಡಿಯಿಂದ ಕಳವು ನಡೆದಿದೆ.  ಇಂದು ಬೆಳಿಗ್ಗೆ ಅಂಗಡಿ ತೆರೆಯಲೆಂದು ನಬೀಸ ತಲುಪಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.  ಒಳಗೆ ಪ್ರವೇಶಿಸಿ ನೋಡಿದಾಗ ಗ್ಯಾಸ್ ಸಿಲಿಂಡರ್ ಸಹಿತ ವಿವಿಧ ವಸ್ತುಗಳು ಕಳವಿಗೀಡಾಗಿರುವುದು ತಿಳಿದುಬಂದಿದೆ. ಈ ಬಗ್ಗೆ …

ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನಗರದ ನಾಗರಕಟ್ಟೆ  ಶ್ರೀ ಶಾರದಾ ಭಜನಾ ಮಂದಿರ ಬಳಿಯ ಚಂದ್ರದೇವಿ ಕೃಪಾದ ರಮಾನಂದ-ಆಶಾ ದಂಪತಿ ಪುತ್ರ ಪ್ರಸಾದ್ ನಾಗರಕಟ್ಟೆ (35) ಸಾವನ್ನಪ್ಪಿದ ಯುವಕ. ಕಾರ್ಪೆಂಟರ್ ಕೆಲಸ ನಿರ್ವಹಿಸುತ್ತಿದ್ದ ಪ್ರಸಾದ್ ಶನಿವಾರ ಮಧ್ಯಾಹ್ನ ಸ್ಕೂಟರ್‌ನಲ್ಲಿ ಮನೆಯಿಂದ ಹೊರ ಹೋದವರು ಬಳಿಕ  ಹಿಂತಿರುಗಲಿಲ್ಲವೆಂದು ಮನೆಯವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿರುವಂತೆ ನಿನ್ನೆ ಮಧ್ಯಾಹ್ನ ಕೊರಕ್ಕೋಡು  ಬೈಲಿನ ಮನೆಯೊಂದರ ಬಾವಿಯಲ್ಲಿ  ಪ್ರಸಾದ್‌ರ …

ಮನೆಯ ಪ್ರಾರ್ಥನಾ ಕೊಠಡಿಯೊಳಗೆ ಸಿಲುಕಿದ 3ರ ಹರೆಯದ ಬಾಲಕನ ರಕ್ಷಣೆ

ಕಾಸರಗೋಡು: ಅಜಾಗರೂಕತೆ ಯಿಂದ ಪ್ರಾರ್ಥನಾ ಕೊಠಡಿಯ ಬಾಗಿಲಿನ ಬೀಗ ಲಾಕ್ ಆಗಿ ತೆರೆಯಲಾಗದ ಕಾರಣ  3 ವರ್ಷದ ಬಾಲಕ ಒಂದು ಗಂಟೆ ಕಾಲ ಕೊಠಡಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಚೆರ್ಕಳ ನಿವಾಸಿ ನೌಫಲ್‌ನ ಪುತ್ರ ಗಾಜು ಹಾಕಿದ ಪ್ರಾರ್ಥನಾ ಕೊಠಡಿಯಲ್ಲಿ ಸಿಲುಕಿಕೊಂಡಿದ್ದನು. ನಿನ್ನೆ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಹೆತ್ತವರು ಸೇರಿ ಬಹಳ ಹೊತ್ತು ಬಾಗಿಲು ತೆರೆಯಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. …