ಬಿಎಲ್‌ಒಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ 10 ವರ್ಷಗಳ ತನಕ ಸಜೆ

ಕಾಸರಗೋಡು; ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮದಂತೆ ಕರ್ತವ್ಯದಲ್ಲಿ ನಿರತರಾಗುವ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್)ಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾ ಗುವುದೆಂದು ಕೇಂದ್ರ ಚುನಾವಣಾ ಆಯೋಗದ ರಾಜ್ಯ ಆಯುಕ್ತ ರತನ್ ಯು. ಖೇಲ್ಕರ್ ತಿರುವನಂತಪುರ ದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ. ಬಿಎಲ್‌ಒಗಳು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲು ಚುನಾವಣಾ ಆಯೋಗ ನಿಯೋಜಿಸಿದ ಸಾರ್ವಜನಿಕ ಸೇವಕರಾಗಿದ್ದಾರೆ. ಆದ್ದರಿಂದ ಎಸ್‌ಐಆರ್ ನಡೆಸುವ ವೇಳೆ ಅವರಿಗೆ ಅಡಚಣೆ   ಉಂಟುಮಾಡಿದಲ್ಲಿ ಅದು ಹತ್ತು …

ಮಜಿಬೈಲು ತಿರುವಿನಲ್ಲಿ ತುಂಬಿಕೊಂಡ ಕಾಡು ಪೊದೆ: ಅಪಾಯಭೀತಿ

ಮೀಂಜ:  ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲ್ ಸೇತುವೆ ಸಮೀಪ ತಿರುವಿನಲ್ಲಿ ಕಾಡುಪೊದೆ ಆವರಿಸಿಕೊಂ ಡಿದ್ದು ವಾಹನ ಸವಾರರಲ್ಲಿ ಅಪಘಾತಭೀತಿ ಸೃಷ್ಟಿಯಾಗಿದೆ.  ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವುಗಳಿದ್ದು ಎರಡೂ ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಆದರೆ ಸೇತುವೆ ಸಮೀಪದಲ್ಲಿ  ದೊಡ್ಡ ತಿರುವು ಇದ್ದು ಪೊದೆಗಳು ಆವರಿಸಿದ ಕಾರಣ ಗಮನಕ್ಕೆ ಬಾರದೆ ಅಪಾಯ ಉಂಟಾಗುವ ಸಾಧ್ಯತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮೀಯಪದವು ಭಾಗದಿಂದ ಹೊಸಂಗಡಿಗೆ ಹಾಗೂ ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ರಸ್ತೆ ಬದಿಯಲ್ಲಿ ತುಂಬಿಕೊಂಡಿರುವ …

ರೈಲು ಯಾತ್ರೆ ಮಧ್ಯೆ ಮೊಬೈಲ್ ಕದ್ದ ಆರೋಪಿ ಗಂಟೆಗಳೊಳಗೆ ಸೆರೆ

ಕಾಸರಗೋಡು: ರೈಲಿನಲ್ಲಿ ನಿದ್ರಿಸುತ್ತಿದ್ದ ಕಾಸರಗೋಡು ನಿವಾಸಿಯ ಮೊಬೈಲ್ ಫೋನ್ ಕಳವುಗೈದ ಕಳ್ಳನನ್ನು ಗಂಟೆಗಳೊಳಗೆ ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಕನ್ಯಾಕುಮಾರಿ ನಿವಾಸಿ ಇ. ಸುರೇಶ್ (47) ಸೆರೆಯಾದವ. ಇತ್ತೀಚೆಗೆ ಕಾಸರಗೋಡು ನಿವಾಸಿ ಹಾಶಿಂ ಬಂಬ್ರಾಣಿಯವರ ಮೊಬೈಲ್ ಫೋನನ್ನು ಆರೋಪಿ ರೈಲಿನಿಂದ ಕಳವುಗೈದಿದ್ದನು. ಎರ್ನಾಕುಳಂನಿಂದ ಒಕೆ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಹಾಶಿಂ ಬಂಬ್ರಾಣಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.

ತ್ರಿಸ್ತರ ಪಂ. ಚುನಾವಣೆ : ಜಿಲ್ಲೆಯಲ್ಲಿ ಇದುವರೆಗೆ 830 ನಾಮಪತ್ರಿಕೆ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆ ಅಂಗವಾಗಿ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳು ಹಾಗೂ ಡಿವಿಶನ್ಗಳಲ್ಲಿ ನಿನ್ನೆ ಸಂಜೆ ವರೆಗೆ 830 ನಾಮಪತ್ರಿಕೆಗಳನ್ನು ಸಲ್ಲಿಸಲಾಗಿದೆ. ನಾಳೆ ವರೆಗೆ ನಾಮಪತ್ರ ಸಲ್ಲಿಸಲು ಸಮ ಯಾವಕಾಶವಿದೆ. ನವಂಬರ್ 22ರಂದು ಸೂಕ್ಷ್ಮ ತಪಾಸಣೆ ನಡೆಯಲಿದೆ. ನವಂಬರ್ 24ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದು.ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ ಹೊಸತಾಗಿ ಐದು ನಾಮಪತ್ರಗಳನ್ನು ನಿನ್ನೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾ ಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಉಪಚುನಾವಣೆ ಅಧಿಕಾರಿ ಎಡಿಎಂ ಅಖಿಲ್ರಿಗೆ …

ಕುಂಬಳೆಯಲ್ಲಿ ಪ್ರಮುಖ ಪಕ್ಷಗಳ ವಿರುದ್ಧ  ಮಾಹಿತಿ ಹಕ್ಕು ಕಾರ್ಯಕರ್ತ ಚುನಾವಣಾ ಕಣಕ್ಕೆ

ಕುಂಬಳೆ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್‌ನಲ್ಲಿ ಪ್ರಮುಖ ಪಕ್ಷಗಳ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕುಂಬಳೆ ಪಂಚಾಯತ್‌ನಲ್ಲಿ ಹೊಸತಾಗಿ ರೂಪೀಕರಿಸಿದ ಶೇಡಿಕಾವು 24ನೇ ವಾರ್ಡ್‌ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಸ್ಪರ್ಧಿಸುತ್ತಿದ್ದಾರೆ. ಕುಂಬಳೆ ಪೇಟೆ ಒಳಗೊಂಡ ಈ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಈ ಹಿಂದೆ ಗೆಲುವು ಸಾಧಿಸಿದ್ದವು. ಇದೀಗ ಈ ವಾರ್ಡ್‌ನಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕೇಶವ ನಾಯ್ಕ್ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕುಂಬಳೆ ಪಂಚಾಯತ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರತಿಭಟಿಸಿ ತಾನು …

ಎಕೆಪಿಎ ವೆಸ್ಟ್ ಯೂನಿಟ್‌ನಿಂದ ವಿಶೇಷ ಆರೈಕೆ ಕೇಂದ್ರದಲ್ಲಿ ಕಾರ್ಯಕ್ರಮ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ವೆಸ್ಟ್ ಯೂನಿಟ್‌ನಿಂದ ಪರವನಡ್ಕದಲ್ಲಿ ರುವ ವಿಶೇಷ ಆರೈಕೆ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು.  ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಾರ್ಡ್ ಪ್ರತಿನಿಧಿ ಚಂದ್ರ ಶೇಖರನ್ ಕುಳಂಗರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು. ಸಂಯೋಜಕ ಸುಧೀಶ್, ಶಿಕ್ಷಕಿ ದಿವ್ಯಾ, ಮಿನಿ ಟೀಚರ್, ಸ್ಪೀಚ್ ತೆರಾಫಿಸ್ಟ್ ಸಿತಾರ, ಫಿಸಿಯೋ ತೆರಾಫಿಸ್ಟ್ ಭಾವನ, ಪೋಷಕರು, ಎಕೆಪಿಎ ಜಿಲ್ಲಾ ಕ್ರೀಡಾ ಸಂಯೋಜಕ ರತೀಶ್, ಸುಬ್ರಹ್ಮಣ್ಯ, …

ಅಸೌಖ್ಯ: ಮೀಯಪದವು ಶಾಲಾ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಅಸೌಖ್ಯದಿಂದ ನಿಧನ ಹೊಂದಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮಜಿಬೈಲು ಶಾಲೆ ಬಳಿಯ ಅಬ್ದುಲ್ ಸಲೀಂ- ಫೌಸಿಯ ದಂಪತಿ ಪುತ್ರ ಫಾಸಿಲ್ ಸಲೀಂ (11) ಮೃತಪಟ್ಟ ವಿದ್ಯಾರ್ಥಿ. ಕಳೆದ ಮೂರು ತಿಂಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದನು. 10 ದಿನದ ಹಿಂದೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಲ್ಲಿ ಅಂತ್ಯ ಸಂಭವಿಸಿದೆ. ಮೃತದೇಹವನ್ನು ಊರಿಗೆ ತಂದು ಮನೆ ಪರಿಸರದ  ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. …

ಹೊಳೆಯಿಂದ  ಅನಧಿಕೃತ ಹೊಯ್ಗೆ ಸಂಗ್ರಹಿಸುತ್ತಿದ್ದ ದೋಣಿ ನಾಶಗೊಳಿಸಿದ ಪೊಲೀಸ್

ಕುಂಬಳೆ: ಚುನಾವಣಾ ಚಟುವಟಿಕೆ ಬಿರುಸುಗೊಳ್ಳುತ್ತಿರುವಂತೆಯೇ ಮೊಗ್ರಾಲ್ ಮಡಿಮು ಗರ್ ಹೊಳೆಯಿಂದ  ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ತೀವ್ರಗೊಂಡ ಬಗ್ಗೆ ದೂರುಂಟಾಗಿದೆ. ಇದರಂತೆ ನಿನ್ನೆ ಸಂಜೆ ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಲ್ಲಿ  ಬಚ್ಚಿಟ್ಟಿದ್ದ ದೋಣಿಯೊಂದನ್ನು  ಮೇಲಕ್ಕೆತ್ತಿ ಜೆಸಿಬಿ ಬಳಸಿ ನಾಶಗೊಳಿಸಿ ದ್ದರು. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹ ನಡೆಸುತ್ತಿದ್ದ ತಂಡ ಅಲ್ಲಿಂದ ಪರಾರಿಯಾಗಿರು ವುದಾಗಿ ಹೇಳಲಾಗುತ್ತಿದೆ.  ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟಕ್ಕೆ  ಅವಕಾಶ ನೀಡ ಲಾಗುವುದಿಲ್ಲವೆಂದು ಇನ್‌ಸ್ಪೆಕ್ಟರ್ …

ಲಾಡ್ಜ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ ಮಾಲಕ, ನೌಕರೆ ಸಹಿತ ಹಲವರ ಸೆರೆ

ಹೊಸದುರ್ಗ:  ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಚಂದೇರ ಪೊಲೀಸರು ಚೆರ್ವ ತ್ತೂರಿನಲ್ಲಿ ಲಾಡ್ಜ್‌ವೊಂದಕ್ಕೆ  ದಾಳಿ ನಡೆಸಿ  ಹಲವರನ್ನು ಬಂಧಿಸಿದ್ದಾರೆ. ಚೆರ್ವತ್ತೂರಿನ  ಮಲಬಾರ್ ಲಾಡ್ಜ್ ಕೇಂದ್ರೀಕರಿಸಿ  ನಡೆಸಿದ ದಾಳಿ ವೇಳೆ ಅಲ್ಲಿ ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡ ತಂಡವನ್ನು ಪೊಲೀಸರು ಕೈಯ್ಯಾರೆ ಸೆರೆಹಿಡಿದಿದ್ದಾರೆ. ಲಾಡ್ಜ್ ಮಾಲಕ ಮೊಹಮ್ಮದ್ ಅಸೈನಾರ್, ನೌಕರೆ ಮುಳ್ಳೇರಿಯ ನಿವಾಸಿ ನಸೀಮ, ಇತರ ನಾಲ್ಕು ಮಂದಿ ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಸುರೇಶ್ ಬಾಬುರ ನಿರ್ದೇಶ ಮೇರೆಗೆ ಚಂದೇರ ಇನ್‌ಸ್ಪೆಕ್ಟರ್  …

ಶಬರಿಮಲೆ: ಹರಿದುಬರುತ್ತಿರುವ ಭಕ್ತರ ಪ್ರವಾಹ; ನೂಕುನುಗ್ಗಲಿನ ವಾತಾವರಣ ಸೃಷ್ಟಿ: ದರ್ಶನ ಲಭಿಸದೆ ಹಿಂತಿರುಗುತ್ತಿರುವ ಭಕ್ತರು ; ಎಲ್ಲೆಡೆ ಭಾರೀ ಅವ್ಯವಸ್ಥೆ

ಪತ್ತನಂತಿಟ್ಟ: ಶಬರಿಮಲೆ ತೀರ್ಥಾಟನಾ ಋತು ಆರಂಭಗೊAಡಿರುವAತೆ ಕ್ಷೇತ್ರಕ್ಕೆ ಭಕ್ತರ ಮಹಾಪ್ರವಾಹವೇ ಹರಿದು ಬರತೊಡಗಿದೆ. ಇದರಿಂದಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಮಾತ್ರವಲ್ಲ ಭಾರೀ ಅವ್ಯವಸ್ಥೆಯೂ ಉಂಟಾಗಿದೆ. ನಿನ್ನೆ ಮಾತ್ರವಾಗಿ 1,96,594 ಮಂದಿ ಭಕ್ತರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ.ವರ್ಚುವಲ್ ಕ್ಯೂ ಮೂಲಕ ದೈನಂದಿನ 70000 ಮಂದಿಗೆ ಹಾಗೂ ಸ್ಪೋಟ್ ಬುಕ್ಕಿಂಗ್ ಮೂಲಕ 20,000 ಮಂದಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಪೋಟ್ ಬುಕ್ಕಿಂಗ್ ಮೂಲಕ ದರ್ಶನ ಪಡೆಯಲು ಈಗ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ನಿಬಿಡತೆ …