ರಸ್ತೆಯಿಂದ ಹಿಂದಕ್ಕೆ ಚಲಿಸಿದ ಜೀಪು ಢಿಕ್ಕಿ ಹೊಡೆದು ಮನೆಯಂಗಳದಲ್ಲಿದ್ದ ತಾಯಿ, ಪುತ್ರಿಗೆ ಗಾಯ

ಉಪ್ಪಳ: ಎತ್ತರ ಪ್ರದೇಶದ ರಸ್ತೆ ಬದಿ ನಿಲ್ಲಿಸಿದ್ದ ಬೊಲೆರೋ ಜೀಪು ಹಿಂದಕ್ಕೆ ಚಲಿಸಿ ಮನೆಯೊಂದರ ಅಂಗಳ ಮೂಲಕ ಸಂಚರಿಸಿದ್ದು, ಈ ವೇಳೆ ಜೀಪು ಹರಿದು ತಾಯಿ ಹಾಗೂ ಪುತ್ರಿ ಗಂಭೀರ ಗಾಯಗೊಂಡ ಘಟನೆ  ಬೇಕೂರು ಬೊಳುವಾಯಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಅಪಘಾತದಲ್ಲಿ ಬೊಳುವಾಯಿ ನಿವಾಸಿ ದಿ| ಮಹಾಬಲ ಭಂಡಾರಿಯವರ ಪತ್ನಿ ಜಯಂತಿ ಭಂಡಾರಿ (74), ಪುತ್ರಿ ಸುಮಲತ ಶೆಟ್ಟಿ (47) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೊಳುವಾಯಿಯ ಎತ್ತರ ಪ್ರದೇಶದ ರಸ್ತೆ ಬದಿ ಕೇರಳ …

ಹೃದಯಾಘಾತ: ಯುವಕ ನಿಧನ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಬಳಿಯ ನಿವಾಸಿ ದಿ| ಕೃಷ್ಣ ಎಂಬವರ ಪುತ್ರ ಜಗದೀಶ ಸಾಲಿಯಾನ್ 42) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ೫.೩೦ರ ವೇಳೆ ಮನೆಯಲ್ಲಿದ್ದ ಇವರಿಗೆ ಹೃದಯಾಘಾತವುಂಟಾಗಿದ್ದು, ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿತ್ತೆನ್ನ ಲಾಗಿದೆ. ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರೂ ಆಗಿದ್ದ ಜಗದೀಶ ಸಾಲಿಯಾನ್ ಪ್ರಸ್ತುತ ಕ್ಷೇತ್ರದ ನವೀಕರಣ ಸಮಿತಿ …

ಬಿದ್ದು ಸಿಕ್ಕಿದ ಚಿನ್ನಾಭರಣ ಹಿಂತಿರುಗಿಸಿ ಅಣ್ಣ-ತಂಗಿಯ ಪ್ರಾಮಾಣಿಕತೆ: ಕಲ್ಕಾರ್ ಉನ್ನತಿಯ ಬಡ ಕುಟುಂಬಕ್ಕೆ ಪ್ರಶಂಸೆ

ಅಂಗಡಿಮೊಗರು: ಬಿದ್ದು ಸಿಕ್ಕಿದ ಚಿನ್ನಾಭರಣಗಳನ್ನು ವಾರಿಸುದಾರರಿಗೆ ಹಿಂತಿರುಗಿಸಿ ಹಳ್ಳಿಯ ಮುಗ್ದ ಮನಸ್ಸುಗಳು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.  ಪುತ್ತಿಗೆ ಪಂ.ನ ಅಂಗಡಿಮೊಗರು ವಾರ್ಡ್‌ನ ಕಲ್ಕಾರ್ ಉನ್ನತಿಯ ಬಾಬು ಎಂಬವರಿಗೆ ಇಲ್ಲಿನ ಮಸೀದಿ ಪಕ್ಕದ ಮನೆಯೊಂದರ ಅಂಗಳದಲ್ಲಿ ಪರ್ಸೊಂದು ಬಿದ್ದು ಸಿಕ್ಕಿದ್ದು ಅದನ್ನು ಆಮನೆಯೊಡತಿಯಲ್ಲಿ ಕೇಳಿ  ತೆಗೆದುಕೊಂಡಿದ್ದರು. ಮನೆಗೆ ಬಂದ ಬಳಿಕ ಪರ್ಸ್ ನೋಡಿದಾಗ ಅದರಲ್ಲಿ ಚಿನ್ನದ ಪದಕ ಕಂಡುಬಂದಿದೆ. ಕೂಡಲೇ  ಬಾಬುರ ತಂಗಿ ಗೀತಾ ಆ ಪದಕವನ್ನು ಅದರ ವಾರಿಸುದಾರರಿಗೆ  ಹಿಂತಿರುಗಿಸಿ ಬರಲು ತಿಳಿಸಿದ್ದಾರೆ. ಅದರಂತೆ ಬಾಬು …

ಇಂಟರ್ವ್ಯೂಗೆಂದು ತಿಳಿಸಿ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಯುವಕನೊಂದಿಗೆ ಸೆರೆ

ಕಾಸರಗೋಡು: ಇಂಟರ್ವ್ಯೂ ಗೆಂದು ತಿಳಿಸಿ ಮನೆಯಿಂದ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಅನ್ಯ ಮತದ ಯುವಕನೊಂದಿಗೆ ಕಾಸರಗೋಡಿನಲ್ಲಿ ಸೆರೆಗೀಡಾಗಿದ್ದಾಳೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ  ಕೂವೇರಿ ನಿವಾಸಿಯಾದ 42ರ ಹರೆಯದ ಗೃಹಿಣಿ ಚೆಂಗಳಾ ಯಿ ನಿವಾಸಿಯಾದ ಶಫೀರ್ ಎಂಬಾತನೊಂದಿಗೆ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು  ಅವರನ್ನು ನಗರಠಾಣೆ ಪೊಲೀಸರು ಕಸ್ಟಡಿಗೆ ತೆಗೆದು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನವಂಬರ್ 7ರಂದು ಬೆಳಿಗ್ಗೆ ಇಂಟರ್ವ್ಯೂಗೆಂದು ತಿಳಿಸಿ ಗೃಹಿಣಿ ಹೋಗಿದ್ದಳು. ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದರು. ಇದೇ …

ಮಂಜೇಶ್ವರ ಮಂಡಲ ಲೀಗ್ ಪದಾಧಿಕಾರಿಗಳು ಸ್ಪರ್ಧಾ ಕಣಕ್ಕೆ: ಮಂಡಲ ಕಮಿಟಿಯನ್ನು ಶೀಘ್ರ ವಿಸರ್ಜಿಸುವಂತೆ ಒತ್ತಾಯ

ಮಂಜೇಶ್ವರ: ಮುಸ್ಲಿಂಲೀಗ್‌ನ ಅಭ್ಯರ್ಥಿ ಪಟ್ಟಿ ಪೂರ್ತಿಗೊಳ್ಳುತ್ತಿ ರುವಂತೆಯೇ ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲೂ, ಅನಂತರವೂ ಪಕ್ಷಕ್ಕೆ ಮಂಜೇಶ್ವರ ಮಂಡಲದಲ್ಲಿ ಯಾರು ನೇತೃತ್ವ ನೀಡುವರೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಮಂಡಲ ಲೀಗ್ ಕಮಿಟಿಯನ್ನು ಕೂಡಲೇ ವಿಸರ್ಜಿಸಿ ಅಡ್‌ಹೋಕ್ ಕಮಿಟಿ ರೂಪೀಕರಿಸಬೇಕೆಂದು ಒತ್ತಾಯವೂ ಕೇಳಿ ಬಂದಿದೆ. ಇದೇ ವೇಳೆ ಅಸೀಸ್ ಮರಿಕ್ಕೆ ಅವರನ್ನು ಮಂಡಲ ಲೀಗ್ ಅಧ್ಯಕ್ಷ ಸ್ಥಾನದಿಂದ ಅತೀ ಶೀಘ್ರವಾಗಿ ತೆರವುಗೊಳಿಸಬೇಕೆಂದು ಮಂಗಲ್ಪಾಡಿ ಪಂಚಾಯತ್ ಲೀಗ್ …

ಬಂದ್ಯೋಡು ಬ್ಲೋಕ್ ಡಿವಿಶನ್ ಅಭ್ಯರ್ಥಿ ಘೋಷಣೆ ಫೇಸ್‌ಬುಕ್‌ನಲ್ಲಿ: ಲೀಗ್ ಕಾರ್ಯಕರ್ತರಿಂದ ಪ್ರತಿಭಟನೆ

ಕುಂಬಳೆ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಡಿವಿಷನ್‌ಗಳಿಗೆ ಅಭ್ಯರ್ಥಿಗಳನ್ನು ಮುಸ್ಲಿಂ ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ನಿನ್ನೆ ಬೆಳಿಗ್ಗೆ ಘೋಷಿಸಲಿರುವಂತೆಯೇ ಮೊನ್ನೆ ಮಧ್ಯರಾತ್ರಿ ಫೇಸ್‌ಬುಕ್ ಮೂಲಕ  ಓರ್ವ ಅಭ್ಯರ್ಥಿಯನ್ನು ಘೋಷಿಸಿರುವುದು  ಕಾರ್ಯಕರ್ತರಲ್ಲಿ  ಆಶ್ಚರ್ಯ ಮೂಡಿಸಿದೆ. ಪಕ್ಷದ ನಾಯಕತ್ವಕ್ಕೆ ನೀಡಿದ ಹೆಸರುಗಳಲ್ಲಿ ಇಲ್ಲದಿದ್ದ ವ್ಯಕ್ತಿಯ ಹೆಸರನ್ನು ಈ ರೀತಿಯಲ್ಲಿ ಘೋಷಿಸಿರುವುದು ಯಾರು, ಯಾರಲ್ಲಿ ಕೇಳಿಯಾಗಿದೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಬ್ಲೋಕ್ ಪಂ.ನ ಬಂದ್ಯೋಡು ಡಿವಿಶನ್‌ಗೆ ಮುಸ್ಲಿಂ ಲೀಗ್ ಪಂ.ಕಮಿಟಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅವರನ್ನು  ಮೊದಲ ಹೆಸರಾಗಿ …

ಪುತ್ತಿಗೆ ಪಂಚಾಯತ್‌ನಲ್ಲಿ ಎಡರಂಗ ಬೆಂಬಲಿತ ಅವಳಿ ಮತಗಳು ವ್ಯಾಪಕವೆಂದು ದೂರು: ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್

ಕುಂಬಳೆ: ಪುತ್ತಿಗೆ ಪಂಚಾಯತ್ ನಲ್ಲಿ ಈ ಮೊದಲು ವಾಸಿಸಿದ್ದವರು ಬಳಿಕ ವಿವಾಹವಾಗಿ ಹೋದವರಿಗೆ ವ್ಯಾಪಕ ವಾಗಿ ಅವಳಿ ಮತಗಳಿರುವುದಾಗಿ ದೂರ ಲಾಗಿದೆ. ಈ ರೀತಿಯ ಅವಳಿ ಮತ ಗಳನ್ನು ಹೊರತುಪಡಿಸಲು ಲಿಖಿತವಾಗಿ ದೂರು ನೀಡಿದ್ದರೂ ಸಿಪಿಎಂ ಬೆಂಬಲಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್ ಪುತ್ತಿಗೆ ಪಂಚಾಯತ್ ಸಮಿತಿ ಪದಾಧಿ ಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಊರಿನ ಲ್ಲಿಲ್ಲದ ಮತದಾರರನ್ನು ಯಾದಿಯಿಂದ ತೆರವುಗೊಳಿಸಲು ಪಂಚಾಯತ್ಗೆ ಅರ್ಜಿ ನೀಡಲಾಗಿತ್ತು.ಇವರು ಹಿಯ ರಿಂಗ್ಗೆ …

ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಿಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶ ನೀಡಿದೆ. ಮತದಾರರಿಗ ತಮ್ಮ ಮತ ದಾನದ ಹಕ್ಕನ್ನು ಚಲಾಯಿಸಲು ಡಿಸೆಂಬರ್ 9,11ರಂದು ಸಂಬಂಧ ಪಟ್ಟ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಹಾಗೂ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅನುಸಾರ ವಾಗಿರುವ ರಜೆಯನ್ನು ಮಂಜೂರು ಮಾಡಬೇಕು. ಇದರ ಜೊತೆಗೆ ರಾಜ್ಯದ ಕಾರ್ಖಾನೆ, ಪ್ಲಾಂಟೇಶನ್ ಹಾಗೂ ಇತರ ವಿಭಾಗ ನೌಕರ ರಿಗೂ ರಜೆ ಲಭ್ಯಗೊಳಿಸುವುದು ಅಥವಾ ಅವರಿಗೆ ಮತ ಚಲಾಯಿಸಲು ಇರುವ ಸೌಕರ್ಯ ನೀಡುವುದಕ್ಕೆ  …

ಕುಂಬಳೆ ಪಂಚಾಯತ್ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕುಂಬಳೆ: ಕುಂಬಳೆ ಪಂಚಾಯತ್ ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಾದ ಅಮಿತ ದೇವದಾಸ ಆಳ್ವ, ಮಮತ ಶಾಂತಾರಾಮ ಆಳ್ವ, ದಿನೇಶ ಕೆ, ದೇವಿಕ, ಸುಮಿತ್ರ ಗಟ್ಟಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ, ಡಿ.ಎಸ್. ಭಟ್,ಶಂಕರ ಆಳ್ವ ಕೋಟೆಕ್ಕಾರು, ರಾಧಾಕೃಷ್ಣ ರೈ ಮಡ್ವ, ರಮೇಶ ಭಟ್, ಪ್ರೇಮಲತಾ ಎಸ್, ಪ್ರೇಮಾವತಿ ಶೆಟ್ಟಿ, ಪ್ರದೀಪ್ ಕುಮಾರ್, ಮೋಹನ …

ಮಂಗಲ್ಪಾಡಿ ಪಂ. 19ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ 16ನೇ ವಾರ್ಡ್ ಮಲ್ಲಂಗೈಯಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಸಾಕ್ಷಿ ಶೆಟ್ಟಿ ನಿನ್ನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಲಯ ಉಪಾಧ್ಯಕ್ಷ ವಿಜಯ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಂಗಲ್ಪಾಡಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ದಕ್ಷಿಣ ವಲಯ ಅಧ್ಯಕ್ಷೆ ರೇವತಿ ಕಮಲಾಕ್ಷ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಭಗವತಿ, ಕಿಶೋರ್ ಬಂದ್ಯೋಡು, ಮಂಡಲ ಉಪಾಧ್ಯಕ್ಷ ಬಾಲಕೃಷ್ಣ ಅಂಬಾರು, ಬಾಬು ಕೆ, ರಾಮಚಂದ್ರ ಬಲ್ಲಾಳ್, ಹರಿನಾಥ ಭಂಡಾರಿ, ಪದ್ಮಾ …