ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಿಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶ ನೀಡಿದೆ. ಮತದಾರರಿಗ ತಮ್ಮ ಮತ ದಾನದ ಹಕ್ಕನ್ನು ಚಲಾಯಿಸಲು ಡಿಸೆಂಬರ್ 9,11ರಂದು ಸಂಬಂಧ ಪಟ್ಟ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಹಾಗೂ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅನುಸಾರ ವಾಗಿರುವ ರಜೆಯನ್ನು ಮಂಜೂರು ಮಾಡಬೇಕು. ಇದರ ಜೊತೆಗೆ ರಾಜ್ಯದ ಕಾರ್ಖಾನೆ, ಪ್ಲಾಂಟೇಶನ್ ಹಾಗೂ ಇತರ ವಿಭಾಗ ನೌಕರ ರಿಗೂ ರಜೆ ಲಭ್ಯಗೊಳಿಸುವುದು ಅಥವಾ ಅವರಿಗೆ ಮತ ಚಲಾಯಿಸಲು ಇರುವ ಸೌಕರ್ಯ ನೀಡುವುದಕ್ಕೆ  …

ಕುಂಬಳೆ ಪಂಚಾಯತ್ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕುಂಬಳೆ: ಕುಂಬಳೆ ಪಂಚಾಯತ್ ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಾದ ಅಮಿತ ದೇವದಾಸ ಆಳ್ವ, ಮಮತ ಶಾಂತಾರಾಮ ಆಳ್ವ, ದಿನೇಶ ಕೆ, ದೇವಿಕ, ಸುಮಿತ್ರ ಗಟ್ಟಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ, ಡಿ.ಎಸ್. ಭಟ್,ಶಂಕರ ಆಳ್ವ ಕೋಟೆಕ್ಕಾರು, ರಾಧಾಕೃಷ್ಣ ರೈ ಮಡ್ವ, ರಮೇಶ ಭಟ್, ಪ್ರೇಮಲತಾ ಎಸ್, ಪ್ರೇಮಾವತಿ ಶೆಟ್ಟಿ, ಪ್ರದೀಪ್ ಕುಮಾರ್, ಮೋಹನ …

ಮಂಗಲ್ಪಾಡಿ ಪಂ. 19ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ 16ನೇ ವಾರ್ಡ್ ಮಲ್ಲಂಗೈಯಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಸಾಕ್ಷಿ ಶೆಟ್ಟಿ ನಿನ್ನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಲಯ ಉಪಾಧ್ಯಕ್ಷ ವಿಜಯ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಂಗಲ್ಪಾಡಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ದಕ್ಷಿಣ ವಲಯ ಅಧ್ಯಕ್ಷೆ ರೇವತಿ ಕಮಲಾಕ್ಷ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಭಗವತಿ, ಕಿಶೋರ್ ಬಂದ್ಯೋಡು, ಮಂಡಲ ಉಪಾಧ್ಯಕ್ಷ ಬಾಲಕೃಷ್ಣ ಅಂಬಾರು, ಬಾಬು ಕೆ, ರಾಮಚಂದ್ರ ಬಲ್ಲಾಳ್, ಹರಿನಾಥ ಭಂಡಾರಿ, ಪದ್ಮಾ …

ತ್ರಿಸ್ತರ ಪಂ. ಚುನಾವಣೆ: ಜಿಲ್ಲೆಯಲ್ಲಿ ನಿನ್ನೆ ವರೆಗೆ 544 ನಾಮಪತ್ರ ಸಲ್ಲಿಕೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆವರೆಗೆ 544 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ 32 ನಾಮಪತ್ರಗಳು ಸಲ್ಲಿಕೆಯಾಗಿದೆ. ಜಿಲ್ಲಾ ಪಂಚಾಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಹಾಗೂ ಉಪ ಚುನಾವಣಾಧಿಕಾರಿ ಎಡಿಎಂ ಪಿ. ಅಖಿಲ್ರಿಗೆ ಈ ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಕಾರಡ್ಕ ಬ್ಲೋಕ್ ಪಂಚಾಯತ್ನಲ್ಲಿ 19 ನಾಮಪತ್ರಗಳು, ಕಾಸರಗೋಡು ಬ್ಲೋಕ್ ಪಂಚಾಯತ್ನಲ್ಲಿ 3 ನಾಮಪತ್ರಗಳು, ಕಾಞಂಗಾಡ್ ಬ್ಲೋಕ್ ಪಂಚಾಯತ್ನಲ್ಲಿ 24 ನಾಮಪತ್ರಗಳನ್ನು ಸಲ್ಲಿಸಲಾಗಿದೆ.ಕಾಸರಗೋಡು ನಗರಸಭೆಗೆ 11 ನಾಮಪತ್ರ ಸಲ್ಲಿಕೆಯಾಗಿದೆ. ಬಳಾಲ್ ಪಂಚಾಯತ್ನಲ್ಲಿ 22, ಬೇಡಡ್ಕ …

ಕೃಷಿಕ ನಿಧನ

ಮಾನ್ಯ : ಕೆಳಗಿನ ಮನೆ ನಿವಾಸಿ ಕೃಷಿಕ ವೇಣುಗೋಪಾಲ(78) ನಿಧನರಾದರು. ಮೃತರು ಪತ್ನಿ ಶ್ಯಾಮಲ, ಮಗಳು ನಿರುಪಮ ಅಳಿಯ ಪುರುಷೋತ್ತಮ ಮಾನ್ಯ, ಸಹೋದರ, ಸಹೋದರಿಯರಾದ ಗೋವರ್ಧನ ಮಂಗಳೂರು, ಗಿರಿಧರ ಮಂಗಳೂರು, ಜಯಕುಮಾರಿ ಮಂಗಳೂರು, ತಿರುಮಲೇಶ್ವರಿ ಮಾನ್ಯ, ನಿರ್ಮಲ ಮಡಿಕೇರಿ, ಸುಮಂಗಲ ಬ್ರಹ್ಮಾವರ ಅಲ್ಲದೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಸಹೋದರಿ ಜಲಜ, ಸಹೋದರಾದ ಚಂದ್ರ ಶೇಖರ, ದಯಾನಂದ ಈ ಹಿಂದೆಯೇ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮಾನ್ಯ, ವಿಷ್ಣುಮೂರ್ತಿನಗರದ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ತೀವ್ರ …

ಮುಸ್ಲಿಂ ಲೀಗ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಿರುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯನ್ನು ಮುಸ್ಲಿಂ ಲೀಗ್ ಪ್ರಕಟಿಸಿದೆ. ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಿಂದ ಅಸೀಸ್ ಕಳತ್ತೂರು, ಸಿವಿಲ್ ಸ್ಟೇಷನ್ ಡಿವಿಶನ್ ನಲ್ಲಿ ಪಿ.ಬಿ. ಶಫೀಕ್, ಚೆಂಗಳದಲ್ಲಿ ಜಸ್ನಾ ಮನಾಫ್ ಎಡನೀರು, ಬದಿಯಡ್ಕ (ಎಸ್‌ಸಿ)ದಲ್ಲಿ ಲಕ್ಷ್ಮಣ ಪೆರಿಯಡ್ಕ, ಮಂಜೇಶ್ವರದಲ್ಲಿ ಇರ್ಫಾನ ಇಕ್ಬಾಲ್, ಬೇಕಲ್‌ನಲ್ಲಿ ಶಹೀದ ರಾಶಿದ್, ಪೆರಿಯ ದಲ್ಲಿ ಜಿಶಾ ರಾಜು ಸ್ಪರ್ಧಿಸಲಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಡಿವಿಶನ್‌ಗಳು ಹಾಗೂ ಅಭ್ಯರ್ಥಿಗಳು: ಕುಂಜತ್ತೂರು- ಮೊಹಮ್ಮದ್ ಹನೀಫ್ ಕುಚ್ಚಿಕ್ಕಾಡ್, ಬಡಾಜೆ- ಸಯ್ಯಿದ್ ಸೈಫುಲ್ಲಾ …

ಟ್ರಾನ್ಸ್‌ಫಾರ್ಮರ್‌ಗಳಿಂದ ಫ್ಯೂಸ್ ಕಿತ್ತೆಸೆದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ವಿದ್ಯುತ್ ಬಿಲ್‌ನ ಮೊತ್ತ ಪಾವತಿಸದ ಕಾರಣದಿಂದ ಮನೆಯ ವಿದ್ಯುತ್ ಸಂಪರ್ಕವನ್ನು ವಿದ್ಯುನ್ಮಂಡಳಿಯವರು ವಿಚ್ಛೇಧಿಸಿದ ದ್ವೇಷದಿಂದ ಟ್ರಾನ್ಸ್ ಫಾರ್ಮರ್‌ಗಳ ಫ್ಯೂಸ್‌ಗಳನ್ನು ಕಳಚಿ ತೆಗೆದು ಎಸೆದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಸೂರ್ಲು ಹೈದ್ರೋಸ್ ಜುಮಾ ಮಸೀದಿ ಬಳಿಯ  ಪಿ.ಎಂ. ಮುಹಮ್ಮದ್ ಮುನಾವರ್ (35) ಬಂಧಿತ ಆರೋಪಿಯಾಗಿದ್ದಾನೆ. ಕಾಸರಗೋಡು ಠಾಣೆ  ಎಸ್‌ಐ ಕೆ. ರಾಜು ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿದ್ಯುನ್ಮಂಡಳಿಯ ನೆಲ್ಲಿಕುಂಜೆ ಮತ್ತು ಕಾಸರಗೋಡು ಸೆಕ್ಷನ್‌ಗಳಿಗೊಳಪಟ್ಟ 24 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳ 170ಕ್ಕೂ ಹೆಚ್ಚು …

ಮುಟ್ಟಂ ರಾ. ಹೆದ್ದಾರಿಯಲ್ಲಿ ವಾಹನ ಅಪಘಾತ: ಯುವತಿ ಮೃತ್ಯು; ಪತಿ, ಮಗು ಸಹಿತ ನಾಲ್ಕು ಮಂದಿಗೆ ಗಾಯ

ಕುಂಬಳೆ: ಬಂದ್ಯೋಡು ಬಳಿಯ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಯುವತಿಯ ಪತಿ, ಮಗು ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಫಾತಿಮತ್ ಮಿರ್ಸಾನತ್ತ್ (28) ಮೃತಪಟ್ಟ ದುರ್ದೈವಿ. ಇವರ ಪತಿ ಹುಸೈನ್ ಸಅದಿ (35), ಪುತ್ರ ಶಾಹಿಂ ಅಬ್ದುಲ್ಲ (3), ಹುಸೈನ್ ಸ ಅದಿಯ ಸಹೋದರಿಯರಾದ ಜುಮಾನ, ಜಕಿಯ ಎಂಬಿವರು ಗಾಯ ಗೊಂಡಿ ದ್ದು   ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ  ಹುಸೈನ್ …

ಎಸ್.ಐ.ಆರ್: ಅಪರಿಮಿತ ಕೆಲಸದ ಹೊರೆ ಆರೋಪ: ಬಿಎಲ್‌ಒ ಆತ್ಮಹತ್ಯೆ ; ಕೆಲಸ ಬಹಿಷ್ಕರಿಸಿ ಬಿಎಲ್‌ಒಗಳಿಂದ ರಾಜ್ಯಾದ್ಯಂತ ಪ್ರತಿಭಟನೆ

ಕಾಸರಗೋಡು: ಮತಪಟ್ಟಿಯ  ತೀವ್ರ  ಪರಿಷ್ಕರಣೆಗೆ ಸಂಬಂಧಿಸಿದ  (ಎಸ್‌ಐಆರ್)ಗೆ ಸಂಬಧಿಸಿದ ಅಪರಿಮಿತ ಕೆಲಸದ ಹೊರೆಯಿಂದ ಮಾಸಿಕ ಒತ್ತಡದಲ್ಲಿ ಸಿಲುಕಿ ಪಯ್ಯನ್ನೂರಿನಲ್ಲಿ ಬೂತ್ ಲೆವೆಲ್ ಆಫೀಸರ್ (ಬಿಎಲ್‌ಒ) ಅನೀಶ್ ಜೋರ್ಜ್ (44) ಎಂಬವರು ಆತ್ಮಹತ್ಯೆಗೈಯ್ಯಲು ಕಾರಣವಾದ ಹಿನ್ನೆಲೆಯನ್ನು ಪ್ರತಿಭಟಿಸಿ ಆಡಳಿತ ಮತ್ತು ವಿರೋಧ ಪಕ್ಷ ಅನುಕೂಲಕರ  ಸರಕಾರಿ ಸಿಬ್ಬಂದಿಗಳ ಸಂಘಟನೆಗೊಳಪಟ್ಟ ಬಿಎಲ್‌ಒಗಳು ಇಂದು ತಮ್ಮ ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದೆ. ವಾಮಪಕ್ಷಗಳ ಅನುಕೂಲಕರ ಸಂಘಟನೆಯಾದ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ …

ಮಧೂರು ನಿವಾಸಿ ಪ್ರಾಂಶುಪಾಲ ನಿಧನ

ಮಧೂರು: ಇಲ್ಲಿನ ಚೇನೆಕ್ಕೋ ಡು ನಿವಾಸಿಯೂ, ಪುತ್ತೂರು ವಿವೇಕಾನಂದ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ನಾಯ್ಕ್ (57) ನಿಧನಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿ ಸಿದೆ. ಮೃತದೇಹವನ್ನು ಚೇನಕ್ಕೋಡ್‌ನ  ಮನೆಗೆ  ತಲುಪಿಸಲಾಗಿದೆ. ದಿ| ರಾಮಯ್ಯ ನಾಯ್ಕ್ ಬದಿಮನೆ ಅವರ ಪುತ್ರನಾದ ಮೃತರು ತಾಯಿ ಸುಂದರಿ, ಪತ್ನಿ ಆಶಾ (ಅಧ್ಯಾಪಿಕೆ, ಜಿಎಚ್ ಎಸ್ ಎಡ ನೀರು), ಪುತ್ರ ಡಾ| ವಿಷ್ಣು ಕೀರ್ತಿ, ಸಹೋದರ ಸಂತೋಷ್ ನಾಯ್ಕ್ ಹಾಗೂ …