ತೆಂಗಿನಮರದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ಮನೆ ಹಿತ್ತಿಲಿನಲ್ಲಿರುವ  ತೆಂಗಿನ ಮರದಿಂದ  ಕಾಯಿಕೊಯ್ಯುತ್ತಿದ್ದ ವೇಳೆ  ಬಿದ್ದು  ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬಂಗಳಂ ಪಳ್ಳತ್ತುವಯಲ್ ನಿವಾಸಿ ಪಿ.ವಿ. ಕೊಟ್ಟನ್ (65) ಮೃತ ವ್ಯಕ್ತಿ. ನಿನ್ನೆ ಇವರು ಮನೆ ಹಿತ್ತಿಲಿನಲ್ಲಿರುವ ತೆಂಗಿನ ಮರದಿಂದ ಕಾಯಿ ಕೊಯ್ಯುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು  ಗಾಯಗೊಂಡಿ ದ್ದರು. ಕೂಡಲೇ ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಮೃತರು ಪತ್ನಿ ಕಾರ್ತ್ಯಾಯಿನಿ, ಮಕ್ಕಳಾದ ನಿತಿನ್, ನಿಖಿಲ, ನಿತ್ಯ, ಅಳಿಯಂದಿರಾದ ಸಂತೋಷ್, ಪ್ರಶಾಂತ್ ಹಾಗೂ ಅಪಾರ ಬಂಧು-ಮಿತ್ರರನ್ನು …

ವೃಶ್ಚಿಕ ಮಾಸದ ಮೊದಲ ಮುಂಜಾನೆ ಶಬರಿಮಲೆಯಲ್ಲಿ ನೂತನ ಅರ್ಚಕರಿಂದ ಪೂಜೆ ಆರಂಭ

ಶಬರಿಮಲೆ: ಶಬರಿಮಲೆಯಲ್ಲಿ ಹೊಸತಾಗಿ ಅಧಿಕಾರ ವಹಿಸಿಕೊಂಡ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿಯವರ ನೇತೃತ್ವದಲ್ಲಿ ಗರ್ಭಗುಡಿಯ ಬಾಗಿಲು ತೆರೆಯುವುದರೊಂದಿಗೆ ವೃಶ್ಚಿಕ ಮಾಸದ ಮೊದಲ ಮುಂಜಾನೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ನೂರಾರು ಭಕ್ತರು ತಲುಪಿದರು. ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಉಪಸ್ಥಿತಿಯಲ್ಲಿ ನಡೆ ಬಾಗಿಲು ತೆಗೆದಾಗ ಶರಣು ಘೋಷಗಳು ಮೊಳಗಿತು. ದೇವಸ್ವಂಬೋರ್ಡ್ ಕಾರ್ಯದರ್ಶಿ ಪಿ.ಎನ್. ಗಣೇಶ್ವರನ್ ಪೋತ್ತಿ, ಎಕ್ಸಿಕ್ಯೂಟಿವ್ ಆಫೀಸರ್ ಒ.ಜಿ. ಬಿಜು ಉಪಸ್ಥಿತರಿದ್ದರು. ಮುಂಜಾನೆ 3 ಗಂಟೆಗೆ ನಡೆ ಬಾಗಿಲು ತೆರೆಯಲಾಗಿದೆ. ಬಳಿಕ ನಿರ್ಮಾಲ್ಯ ಅಭಿಷೇಕ, ಗಣಪತಿ ಹೋಮ, …

ಹೈದರಾಬಾದ್ ನಿವಾಸಿಗಳು ಸಂಚರಿಸಿದ ಬಸ್‌ಗೆ ಸೌದಿಯಲ್ಲಿ ಬೆಂಕಿ: 42 ಸಾವು

ಮಕ್ಕ: ಸೌದಿಯಲ್ಲಿ ಉಂರ ತೀರ್ಥಾಟಕರು ಸಂಚರಿಸಿದ ಬಸ್‌ಗೆ  ಬೆಂಕಿ  ತಗಲಿ  ಸಂಭವಿಸಿದ ಅಪಘಾತದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 20 ಮಹಿಳೆಯರು, 11 ಮಕ್ಕಳು ಸೇರಿದ್ದಾರೆ.  ಹೈದರಾಬಾದ್ ನಿವಾಸಿಗಳು ಸಂಚರಿಸಿದ ಬಸ್ ಇದಾಗಿತ್ತೆಂದು ತಿಳಿದುಬಂದಿದೆ. ಬಸ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೆಂಕಿ ಸೃಷ್ಟಿಯಾಗಿದೆ. ಬಸ್‌ನಲ್ಲಿದ್ದ ಓರ್ವ ಮಾತ್ರ ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. 43 ಮಂದಿ ಹೈದರಾಬಾದ್ ನಿವಾಸಿಗಳು ಮಕ್ಕಾ ತೀರ್ಥಾಟನೆ ಪೂರ್ತಿಗೊಳಿಸಿ ಮದೀನಕ್ಕೆ ತೆರಳುತ್ತಿದ್ದ ವೇಳೆ ಇಂದು ಮುಂಜಾನೆ 1.30ರ ವೇಳೆ ದುರ್ಘಟನೆ ಸಂಭವಿಸಿದೆ.

ಜಿಲ್ಲೆಯಾದ್ಯಂತ ಪೊಲೀಸ್ ಕಾರ್ಯಾಚರಣೆ: ತಲೆ ಮರೆಸಿಕೊಂಡವರೂ ಸೇರಿ 221 ವಾರಂಟ್ ಆರೋಪಿಗಳ ಸೆರೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಪೊಲೀಸರು ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳು ಸೇರಿ ಒಟ್ಟು 221 ವಾರಂಟ್ ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿ ೧೨೬ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ 3711 ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ. ಇದರ ಹೊರತಾಗಿ ಹೋಟೆಲ್ ಮತ್ತು ವಸತಿಗೃಹಗಳೂ ಸೇರಿದಂತೆ ೬೫ ಕೇಂದ್ರಗಳಿಗೆ …

ಸಾಲ ಪಡೆದ ಹಣವನ್ನು ಹಿಂತಿರುಗಿಸದಿರಲು ನಗ್ನ ವೀಡಿಯೋ ತೆಗೆದು ಪ್ರಚಾರ: ಮನನೊಂದು ಯುವಕ ಆತ್ಮಹತ್ಯೆ; ಯುವತಿ ಸಹಿತ 4ಮಂದಿ ಸೆರೆ

ನಿಲಂಬೂರ್: ಇಲ್ಲಿಗೆ ಸಮೀಪದ ಚುಂಗತ್ತರದಲ್ಲಿ 42ರ ಯುವಕ ಆತ್ಮಹತ್ಯೆಗೈಯ್ಯಲು ಕಾರಣ ನಗ್ನ ವೀಡಿಯೋ ಪ್ರಚಾರಪಡಿಸಿದ ಹಿನ್ನೆಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುಂಗತ್ತರ ಪಳ್ಳಿಕುತ್ ಕುಂಡುಕುಳದಲ್ಲಿ ರತೀಶ್ (42) ಕಳೆದ ಜೂನ್ ೧೧ರಂದು ಆತ್ಮಹತ್ಯೆಗೈದಿದ್ದರು. ಸಾಲ ಪಡೆದ ಹಣವನ್ನು ವಾಪಸು ನೀಡದಿರುವುದಕ್ಕಾಗಿ ಸಂಬಂಧಿಕೆಯಾದ ಯುವತಿ, ಪತಿ ಹಾಗೂ ಗೆಳೆಯರು ಸೇರಿ ರತೀಶ್‌ನನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದ ರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪಳ್ಳಿಕುತ್ ಇಡಪ್ಪಲಂ ಸಿಂಧು (41), ಪತಿ ಶ್ರೀರಾಜ್ (44), ಸಿಂಧುನ ಸಂಬಂಧಿಕ ಪಳ್ಳಿಕುತ್ತ್ ಕೊನ್ನಮಣ್ಣ ನಿವಾಸಿ ಪ್ರವೀಣ್ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಸಮಗ್ರ ಪ್ರಶಸ್ತಿ : ಹೈಸ್ಕೂಲ್ ವಿಭಾಗದಲ್ಲಿ ಕಾರಡ್ಕ ಶಾಲೆ ಪ್ರಥಮ

ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮ ಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಚಾಂಪ್ಯನ್ ಪಟ್ಟ ಗೆದ್ದುಕೊಂಡಿದೆ. ಈ ಶಾಲೆ ಸತತ ಮೂರನೇ ಬಾರಿ ಚಾಂಪ್ಯನ್ಶಿಪ್ ಗೆದ್ದುಕೊಂಡು ಹ್ಯಾಟ್ರಿಕ್ ಸಾಧನೆಗೈದಿದೆ.ಐದು ದಿನಗಳ ಕಾಲ ನಡೆದ ಕಲೋತ್ಸವದಲ್ಲಿ 243 ಅಂಕ ಗಳಿಸಿ ಚಾಂಪ್ಯನ್ ಪಟ್ಟವನ್ನು ಕಾಟುಕುಕ್ಕೆ ಶಾಲೆ ತನ್ನದಾಗಿಸಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ 203 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗ್ರೂಪ್ ಸ್ಪರ್ಧೆಗಳಾದ ಚೆಂಡೆ …

ಆಚಾರ ಉಲ್ಲಂಘನೆ, ಶಬರಿಮಲೆ ಕ್ಷೇತ್ರದ ಚಿನ್ನ ಅಪಹರಣ ನಡೆಸಿದವರಿಗೆ ದೇವದೋಷ ತಪ್ಪದು- ಸಾಧ್ವಿ ಶ್ರೀ ಮಾತಾನಂದಮಯಿ

ಕಾಸರಗೋಡು: ಶಬರಿಮಲೆ ಚಿನ್ನ ಅಪಹರಣ ಮತ್ತು ಆಚಾರ ಉಲ್ಲಂಘನೆ ಮಾಡಿದವರಿಗೆ ದೋಷ ತಪ್ಪದು. ಎಲ್ಲಿ ಅನ್ಯಾಯ, ಅಧರ್ಮ, ಅಕ್ರಮ ನಡೆಯುತ್ತದೋ ಆವಾಗ ಮಹಿಳೆ ಅಬಲೆಯಾಗದೆ ಸಬಲೆಯಾಗುತ್ತಾಳೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ನುಡಿದರು. ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನಡೆಯುವ ಮಂಡಲ ಭಜನೆ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಇಂದ್ರಿಯಗಳ ದಾಸನಾಗದೆ ಭೂಮಿಯಲ್ಲಿ ಬದುಕುವ ಅವಕಾಶವಿತ್ತ ಭಗವಂತನ ದಾಸನಾಗಬೇಕು. ದೇವರು ಮೆಚ್ಚುವ ಕೆಲಸಗಳನ್ನಷ್ಟೇ ಮಾಡಬೇಕು. ಅದರಿಂದಲೇ ಮಾನವ ಜನ್ಮಕ್ಕೆ ಮಾಧವನಿಂದ …

ಅವಳಿ ಸಿಹಿ ನೀಡಿ ವಳಪ್ಪಿಲ ಕಮ್ಯೂನಿಕೇಶನ್ಸ್‌ಗೆ ರಾಷ್ಟ್ರೀಯ ಪುರಸ್ಕಾರ

ಕಣ್ಣೂರು: ಮಾಧ್ಯಮರಂಗದ ರಾಷ್ಟ್ರೀಯ ಪುರಸ್ಕಾರಗಳಾದ ಇ.ಫಾರ್ ಎಂ. ಮೀಡಿಯಾ ಏಸ್‌ಏಸ್ ಪ್ರಶಸ್ತಿಯಲ್ಲಿ ಅಭಿಮಾನಕರವಾದ ಅವಳಿ ಸಾಧನೆಯನ್ನು ವಳಪ್ಪಿಲ ಕಮ್ಯೂನಿಕೇ ಶನ್ಸ್ ಮಾಡಿದೆ.  ಇಂಡಿಪೆಂಡೆಂಟ್ ಏಜೆನ್ಸಿ ಆಫ್ ದಿ ಇಯರ್ ಪುರಸ್ಕಾರ ವಳಪ್ಪಿಲ ಕಮ್ಯೂನಿಕೇಷನ್ಸ್‌ಗೂ, ಇಂಡಿಪೆಂಡೆಂಟ್ ಏಜೆನ್ಸಿ ಹೆಡ್ ಆಫ್ ದಿ ಇಯರ್ ಪುರಸ್ಕಾರ ಮೆನೇಜಿಂಗ್ ಡೈರೆಕ್ಟರ್ ಆದ ಜೇಮ್ಸ್ ವಳಪ್ಪಿಲ್‌ಗೂ ಲಭಿಸಿದೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ವಳಪ್ಪಿಲ ಕಮ್ಯೂನಿಕೇಶನ್ಸ್ ಮೆನೇಜಿಂಗ್ ಡೈರೆಕ್ಟರ್‌ಗಳಾದ ಜೇಮ್ಸ್ ವಳಪ್ಪಿಲ,  ಜೋನ್ಸ್ ವಳಪ್ಪಿಲ, ನಿರ್ದೇಶಕ ಲಿಯೋ ವಳಪ್ಪಿಲ ಎಂಬಿವರು ಜಂಟಿಯಾಗಿ ಪುರಸ್ಕಾರ ಸ್ವೀಕರಿಸಿದರು. …

ಟೈಲರ್ ನಿಧನ

ದೈಗೋಳಿ: ಹಲವು ವರ್ಷ ಗಳಿಂದ ದೈಗೋಳಿಯಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ, ದೈಗೋಳಿ ಜ್ಞಾನೋದಯ ಸಮಾಜ ಸ್ಥಾಪಕ ಸದಸ್ಯ ಕೃಷ್ಣಪ್ಪ (80) ನಿಧನ ಹೊಂದಿದರು. ದೈಗೋಳಿ ಸಾರ್ವ ಜನಿಕ ಶ್ರೀ ಗಣೇಶೋತ್ಸವ ಕಾರ್ಯ ಕಾರಿ ಸಮಿತಿ ಉಪಾಧ್ಯಕ್ಷರಾಗಿ ಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ರತ್ನಾವತಿ, ಮಕ್ಕಳಾದ ಆಶಾಲತಾ, ಪುಷ್ಪಲತಾ, ಸುಜಾತ, ಮಮತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ನಿಧನಕ್ಕೆ ಜ್ಞಾನೋದಯ ಸಮಾಜ ಸಂತಾಪ ವ್ಯಕ್ತಪಡಿಸಿದೆ.

ಎಡರಂಗ ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ

ಪೈವಳಿಕೆ: ಎಡರಂಗ ಸರಕಾರ ನಡೆಸುತ್ತಿರುವ ಜನಕಲ್ಯಾಣ ಯೋಜನೆಗಳು ಹಾಗೂ ಪಂಚಾಯತ್ ಆಡಳಿತ ಸಮಿತಿ ನಡೆಸಿದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಎಡರಂಗದ ಉಮೇದ್ವಾರರು ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಪಡೆಯಲಿದ್ದಾರೆ ಎಂದು ಎಂ.ವಿ. ಜಯರಾಜನ್ ನುಡಿದರು. ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ.ಸಿ. ಲಾಲ್‌ಬಾಗ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಬಾಬು, ಎಡರಂಗದ ಪುತ್ತಿಗೆ ಜಿಲ್ಲಾ ಪಂಚಾಯತ್ ಡಿವಿಷನ್ ಅಭ್ಯರ್ಥಿ ಮೊಹಮ್ಮದ್ ಹನೀಫ, ಸಿಪಿಐ …