ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿಬಿದ್ದ ಸರಕುಲಾರಿ

ಕಾಸರಗೋಡು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ತೆಕ್ಕಿಲ್‌ಫೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಭಾಗದಿಂದ ಮಂಗಳೂರಿ ನತ್ತ ಸಾಗುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಅಪಘಾ ತದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಉಂಟಾಗಿಲ್ಲ. ಇದೇ ಜಾಗದಲ್ಲಿ ಕಳೆದ ಗುರುವಾರ ಸರಣಿ ವಾಹನ ಅಪಘಾತ ನಡೆದಿತ್ತು. ಸರಕು ಲಾರಿಯೊಂದು ಖಾಸಗಿ ಬಸ್ಸಿನ  ಹಿಂದುಗಡೆ ಢಿಕ್ಕಿ ಹೊಡೆದು 19 ಮಂದಿ ಪ್ರಯಾಣಿ ಕರು ಗಾಯಗೊಂಡಿದ್ದರು. ಮಾತ್ರವಲ್ಲದೆ ಢಿಕ್ಕಿಯ ಆಘಾತದಿಂದ ಬಸ್‌ನ ಎದುರುಗಡೆ ಇದ್ದ ಇನ್ನೊಂದು ಸರಕು …

ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಕಾಸರಗೋಡು: ದಶಂಬರ್ 11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಪಂಚಾಯತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮೊದಲ ಹಂತದ ಯಾದಿಯನ್ನು ವಿವಿಧ ಪಂಚಾಯತ್ಗಳಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಮಡಿಕೈ, ಮೀಂಜ, ವರ್ಕಾಡಿ, ಅಜಾನೂರು, ಬದಿಯಡ್ಕ, ತೃಕರಿಪುರ, ಪಡನ್ನ, ಪಿಲಿಕ್ಕೋಡ್, ಈಸ್ಟ್ ಎಳೇರಿ, ವೆಸ್ಟ್ ಎಳೇರಿ, ಕಿನಾನೂರು ಕರಿಂದಳ ಮೊದಲಾದ ಪಂಚಾಯತ್ ಹಾಗೂ ನೀಲೇಶ್ವರ ನಗರಸಭೆಗಳ ಸ್ಪರ್ಧಾಳುಗಳ ಹೆಸರನ್ನು ಪ್ರಕಟಿಸಲಾಗಿದೆ.ಮೀಂಜ ಪಂಚಾಯತ್ ಹಾಗೂ ವರ್ಕಾಡಿ ಪಂಚಾಯತ್ನಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಹಂತದ ಯಾದಿಯನ್ನು ಬಿಜೆಪಿ …

ಕುಂಬಳೆ ಪಂಚಾಯತ್ ಸಿಪಿಎಂ ಪ್ರಚಾರ ಸಮಾವೇಶ ಇಂದು: ಅಭ್ಯರ್ಥಿಗಳ ಯಾದಿ ಪ್ರಕಟ

ಕುಂಬಳೆ: ಕಳೆದ ಐದು ದಶಕಗಳಿಂದ ಪಂಚಾಯತ್ ಆಡಳಿತ ನಡೆಸುತ್ತಿರುವ ಐಕ್ಯರಂಗದ ಆಡಳಿತ ಸಮಿತಿ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿರಹಿತ ಕೇರಳದ ಹಿಂದುಳಿದ ಪಂಚಾಯತ್ ಆಗಿ ಕುಂಬಳೆಯನ್ನು ಬದಲಿಸಿದೆ ಎಂದು ಎಡರಂಗ ಪಂಚಾಯತ್ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಐಕ್ಯರಂಗದ ಭ್ರಷ್ಟಾಚಾರ ವಿಷಯದಲ್ಲಿ ಮೌನ ಪಾಲಿಸುತ್ತಿದೆ ಎಂದು ಅವರು ಆರೋಪಿಸಿದರು. ಬಸ್ ತಂಗುದಾಣ, ಬೀದಿ ಬದಿ ವಿಶ್ರಾಂತಿ ಕೇಂದ್ರ, ಹೊಯ್ಗೆ ಕಡವ್ ಎಂಬಿವುಗಳಲ್ಲಿ ಭ್ರಷ್ಟಾಚಾರ ದಿಂದ ಆಡಳಿತ ಸಮಿತಿ ನಾಚಿಕೆ ಹೊಂದಿ ಚುನಾವಣೆಯನ್ನು ಎದುರಿಸ ಲಾಗದ …

ಕುಂಬಳೆ ಪಂಚಾಯತ್ ಎಸ್‌ಡಿಪಿಐ ಅಭ್ಯರ್ಥಿಗಳು

ಕುಂಬಳೆ: ಪಂಚಾಯತ್‌ನಿಂದ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಹಂತದ ಯಾದಿಯನ್ನು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು. ವಾರ್ಡ್ 1 ಕುಂಬೋಳ್‌ನಲ್ಲಿ ರುಖಿಯ ಅನ್ವರ್,  ಕಕ್ಕಳಂಕುನ್ (3)ನಲ್ಲಿ ನಾಸರ್ ಬಂಬ್ರಾಣ, ರೈಲ್ವೇ ಸ್ಟೇಷನ್ (18)- ಫಹೀಮ ನೌಷಾದ್,  ಬದ್ರಿಯಾನಗರ್ (20)- ಅನ್ವರ್ ಆರಿಕ್ಕಾಡಿ ಸ್ಪರ್ಧಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಖಾದರ್ ಅರಫ, ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್, ಕುಂಬಳೆ ಪಂ. ಕಾರ್ಯದರ್ಶಿ ಶಾನಿಫ್ ಮೊಗ್ರಾಲ್, ಕೋಶಾಧಿಕಾರಿ ನೌಶಾದ್ ಮನ್ಸೂರ್ ಭಾಗವಹಿಸಿದರು.

ಪ್ರತಾಪನಗರದಲ್ಲಿ ಭರದಿಂದ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ

ಉಪ್ಪಳ: ಸ್ಥಳೀಯಾಡಳಿತ ಚುನಾವಣೆ ಡಿ.11ರಂದು ನಡೆಯಲಿ ರುವಂತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವಾರು ರಸ್ತೆಗಳ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೋಂಕಾಲು ಪ್ರತಾಪನಗರ ರಸ್ತೆ 73 ಮೀಟರ್ ಕಾಂಕ್ರೀಟ್, ಸಮೀಪದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಹಾಗೂ ಪುಳಿಕುತ್ತಿ ಸೋಂಕಾಲು ಕ್ರಾಸ್ ರಸ್ತೆಯ 85 ಮೀಟರ್ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್, ಗುಳಿಗ ಬನ ಪರಿಸರದಲ್ಲಿ …

ದೇಲಂತೊಟ್ಟು ಬಜೆ ಶ್ರೀ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ 21ರಂದು ಸಮಾಪ್ತಿ: ವಿವಿಧ ಕಾರ್ಯಕ್ರಮ

ಹೇರೂರು: ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ವಿಶೇಷ ಕಾರ್ತಿಕ ದೀಪೋತ್ಸವ ಈ ತಿಂಗಳ 21ರಂದು ಸಮಾಪ್ತಿಗೊಳ್ಳಲಿದ್ದು, ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ಅದೇ ದಿನ ಸಂಜೆ 7ರಿಂದ ಕಲಾರತ್ನ ಶಂನಾಡಿಗ ಕುಂಬಳೆ ಇವರಿಂದ ಭಕ್ತ ಪ್ರಹ್ಲಾದ ಹರಿಕಥಾ ಸತ್ಸಂಗ ಹಾಗೂ ರಾತ್ರಿ 8.30ರಿಂದ ಗಡಿನಾಡ ಸಾಂಸ್ಕöÈತಿಕ ಕಲಾ ವೇದಿಕೆ ಕಾಸರಗೋಡು ಇವರಿಂದ ಸಾಂಸ್ಕöÈ ತಿಕ ಕಲಾ ವೈಭವ ನಡೆಯಲಿದೆ. ಪ್ರತಿ ದಿನ ಸಂಜೆ 5.30ರಿಂದ ವಿವಿಧ ತಂಡಗಳಿAದ ಹರಿನಾಮ ಕೀರ್ತನೆ, …

ವಾಹನ ಅಪಘಾತ: ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕುಂಬಳೆ: ಕಾಸರಗೋಡು- ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ ಮೇಲ್ಪರಂಬ ಕಟ್ಟೆಕ್ಕಾಲ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಇಂದು ಮುಂಜಾನೆ ಮೃತಪಟ್ಟನು. ಕುಂಬಳೆ ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ಪುಷ್ಪ ನಿವಾಸ್‌ನ ವಿನೋದ್ ಎಂಬವರ ಪುತ್ರ ವಿನೀಶ್ ವಿ.ಎಸ್. (23) ಮೃತಪಟ್ಟ ದುರ್ದೈವಿಯಾಗಿದ್ದಾರೆ. ವಿನೀಶ್ ಮೇಲ್ಪರಂಬದಲ್ಲಿ ಲೈಟ್ ಆಂಡ್ ಸೌಂಡ್ಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಅಕ್ಟೋಬರ್ ೧೬ರಂದು ಬೆಳಿಗ್ಗೆ ಇವರು ಕಳನಾಡ್ ಭಾಗದಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ …

ಮಿಠಾಯಿ ಖರೀದಿಸಲು ಅಂಗಡಿಗೆ ಬಂದ 10ರ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಸೆರೆ

ಬದಿಯಡ್ಕ: ಮಿಠಾಯಿ ಖರೀದಿಸಲು ಅಂಗಡಿಗೆ ಬಂದ 10ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ಅಂಗಡಿ ಮಾಲಕನನ್ನು ಪೋಕ್ಸೋ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ತುಪ್ಪೆಕಲ್ಲು ನಿವಾಸಿಯಾದ ಅಬ್ದುಲ್ಲ (64) ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಇತ್ತೀಚೆಗೆ ಓರ್ವ ಬಾಲಕಿ ಅಂಗಡಿಗೆ ಬಂದಿದ್ದಾಗ ಆರೋಪಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಬಾಲಕಿ ಮನೆಯವರಲ್ಲಿ ವಿಷಯ ತಿಳಿಸಿದ್ದು ಬಳಿಕ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.

ನೈತಿಕ ಪೊಲೀಸ್‌ಗಿರಿ: ಯುವಕನಿಗೆ ತಂಡದಿಂದ ಹಲ್ಲೆ

ಉಪ್ಪಳ:    ಯುವಕನನ್ನು ತಂಡ ವೊಂದು  ನೈತಿಕ ಪೊಲೀಸ್‌ಗಿರಿಯ ಹೆಸರಲ್ಲಿ ದಾರಿಯಲ್ಲಿ ತಡೆದು ನಿಲ್ಲಿಸಿ ಹಾಗೂ ವಾಸಸ್ಥಳದಲ್ಲಿ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.  ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ರೈಲು ನಿಲ್ದಾಣ ಬಳಿ  ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30) ಎಂಬವರಿಗೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ  2 ಗಂಟೆ ವೇಳೆ ಸಿನಿಮಾ ವೀಕ್ಷಿಸಿ  ವಾಸಸ್ಥಳಕ್ಕೆ ನಡೆದು ಹೋಗುತ್ತಿದ್ದ ಇಬ್ರಾಹಿಂ ಕರೀಂರನ್ನು ಇಬ್ಬರು ವ್ಯಕ್ತಿಗಳು ಉಪ್ಪಳ ರೈಲು ನಿಲ್ದಾಣ …

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಂಧಿತ ಮುಜರಾಯಿ ಮಂಡಳಿ ಮಾಜಿ ಅಧ್ಯಕ್ಷ ಜೈಲಿಗೆ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ನಿನ್ನೆ ಬಂಧಿಸಿದ ತಿರುವಿದಾಂಕೂರ್ ಮುಜ ರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಆಯುಕ್ತರೂ ಆಗಿದ್ದ ಎನ್. ವಾಸುರನ್ನು ಬಳಿಕ ಪತ್ತನಂತಿಟ್ಟ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ) ನೀಡಿದ ನಿರ್ದೇಶ ಪ್ರಕಾರ ನವಂಬರ್ ೨೪ರ ತನಕ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಇದರಂತೆ ಅವರನ್ನು ಕೊಟ್ಟಾರಕರ ಸಬ್ ಜೈಲ್‌ಗೆ ಸಾಗಿಸಲಾಯಿತು. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ವಾಸುರನ್ನು ಮೂರನೇ ಆರೋಪಿಯನ್ನಾಗಿ  ಸೇರಿಸಲಾಗಿದೆ. 2019ರಲ್ಲಿ ಶಬರಿಮಲೆ …