ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತಳಂಗರೆ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತಳಂಗರೆ ಹೊಳೆಯಲ್ಲಿ ನಿನ್ನೆಸಂಜೆ ಪತ್ತೆಯಾಗಿದೆ. ಕೋಟಿಕುಳಂ ಬೈಕೆ ಮಸೀದಿ ಬಳಿಯ ಮುಕ್ರಿ ಹೌಸ್‌ನ ಹಾಶಿಂ (55) ಸಾವನ್ನಪ್ಪಿದ ವ್ಯಕ್ತಿ. ಇವರು ಸೋಮವಾರ ಬೆಳಿಗ್ಗೆ ನಮಾಜ್‌ಗಾಗಿ ಎಂದಿನಂತೆ ಕೋಟಿಕುಳಂನ ಮಸೀದಿಗೆ ಹೋಗಿದ್ದರು. ಸಂಜೆಯಾ ದರೂ ಮನೆಗೆ ಹಿಂತಿರುಗದಾಗ ಮನೆಯವರು ಬಳಿಕ ಆ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂ ತೆಯೇ ಹಾಶಿಂರ ಮೃತದೇಹ ತಳಂಗರೆ ಕಡವತ್‌ನ ಹೊಳೆಯಲ್ಲಿ ನಿನ್ನೆ ಸಂಜೆ …

ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ಎಂಬಲ್ಲಿ ಎರಡು ರಸ್ತೆ ಸಂಗಮಿಸುತ್ತಿದ್ದು ಇದು ಹಾನಿಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಸಂಗಮಿಸುವ ರಸ್ತೆಗಳು ಶೋಚನೀಯಗೊಂಡಿವೆ. ಈ ಪ್ರದೇಶದಲ್ಲಿ ಶಾಲೆ ಸಹಿತ ನೂರಾರು ಮನೆಗಳಿದ್ದು  ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಡಾಮರು, ಕಾಂಕ್ರೀಟ್, ಇಂಟರ್ ಲಾಕ್‌ಗಳೆಲ್ಲಾ ಹಾನಿಗೊಂಡು ಹೊಂಡಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

ಪತಿ ಗಲ್ಫ್‌ಗೆ ಹೋದ ಬೆನ್ನಲ್ಲೇ ಪರಾರಿಯಾದ ಪತ್ನಿ, ಪ್ರಿಯತಮ ಸೆರೆ

ಕಾಸರಗೋಡು: ಪತಿ ಗಲ್ಫ್‌ಗೆ ಹೋದ ಬೆನ್ನಲ್ಲೇ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಪರಾರಿಯಾದ ಯುವತಿ ಹಾಗೂ ಪ್ರಿಯತಮನನ್ನು ಸೆರೆ ಹಿಡಿಯಲಾಗಿದೆ. ತಳಿಪರಂಬ ಪನ್ನಿಯೂರ್ ಮಳೂರ್‌ನ ಕೆ. ನೀತು (35) ಹಾಗೂ ಮಳೂರ್ ನಿವಾಸಿ  ಸುಮೇಶ್ (38) ಎಂಬಿವರು ಬಂಧಿತ ಯುವಕ ಹಾಗೂ ಯುವತಿ. ಇವರು ನಿನ್ನೆ ಚಟ್ಟಂಚಾಲ್‌ನ ಕ್ವಾರ್ಟರ್ಸ್‌ವೊಂದರಿಂದ ಕಾರಿನಲ್ಲಿ ಊರಿಗೆ ಮರಳುತ್ತಿದ್ದಾಗ ಚಿಟ್ಟಾರಿಕಲ್ ಎ.ಎಸ್.ಐ ಶ್ರೀಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಜಿತ್, ವನಿತಾ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸನಿಲ ಎಂಬಿವರು ಸೇರಿ ಸೆರೆ …

ವೀಸಾ ಭರವಸೆಯೊಡ್ಡಿ 7 ಲಕ್ಷ ರೂ. ಪಡೆದು ವಂಚನೆ: ಆರೋಪಿ ಸೆರೆ

ಕಾಸರಗೋಡು: ನೆದರ್‌ಲ್ಯಾಂ ಡ್‌ಗೆ ವೀಸಾ ನೀಡುವುದಾಗಿ ತಿಳಿಸಿ ಯುವಕನಿಂದ 7 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್ ಕೃಷ್ಣ ಹೌಸ್‌ನ ಉಲ್ಲಾಸ್ (40) ಎಂಬಾತನನ್ನು ಚಿಟ್ಟಾರಿಕಲ್ ಪೊಲೀ ಸರು ಬಂಧಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈತ ಊರಿಗೆ ಮರಳುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ವೆಸ್ಟ್ ಎಳೇರಿ ಮಂಗತ್‌ನ ಸಜೀವ (47) ಎಂಬವರ ಹಣ ಪಡೆದು ವಂಚಿಸಿದ ಆರೋ ಪದಂತೆ ಉಲ್ಲಾಸ್‌ನನ್ನು ಬಂಧಿಸಲಾಗಿದೆ. 2023 ಸೆ. 13 ಹಾಗೂ 2025 …

ಬಾವಿಗೆ ಬಿದ್ದ ವೃದ್ದ ಹಾಗೂ ರಕ್ಷಿಸಲು ಇಳಿದ ಯುವಕನನ್ನು ಮೇಲೆತ್ತಿ ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಬಾವಿಗೆ ಬಿದ್ದ ವೃದ್ದನನ್ನು ರಕ್ಷಿಸಲು ಇಳಿದ ಉತ್ತರ ಪ್ರದೇಶ ನಿವಾಸಿಯಾದ ಯುವಕ ಕೂಡಾ ಬಾವಿಯೊಳಗೆ  ಸಿಲುಕಿಕೊಂಡಿದ್ದು, ಬಳಿಕ ಕಾಸರಗೋಡು ಅಗ್ನಿಶಾಮಕದಳ ತಲುಪಿ ಅವರನ್ನು ಮೇಲೆತ್ತಿ ರಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ೬.೩೦ರ ವೇಳೆ ತಳಂಗರೆ ಪಳ್ಳಿಕ್ಕಾಲ್‌ನ ಅಬ್ದುಲ್ ರಹ್ಮಾನ್‌ರ ಹಿತ್ತಿಲಲ್ಲಿರುವ ಬಾವಿಗೆ ನೆಲ್ಲಿಕುಂಜೆ ನಿವಾಸಿಯಾದ ಟಿ.ಎಂ. ಮುನೀರ್ (74) ಬಿದ್ದಿದ್ದರು.  ೧೫ ಕೋಲು ಆಳವಿರುವ ಬಾವಿಯಲ್ಲಿ 10 ಅಡಿ ನೀರು ತುಂಬಿಕೊಂಡಿದೆ. ಆವರಣಗೋಡೆಯಿಲ್ಲದ ಬಾವಿಗೆ ಮುನೀರ್ ಆಯ ತಪ್ಪಿ ಬಿದ್ದಿದ್ದರೆನ್ನಲಾ ಗಿದೆ. ಅದನ್ನು ಕಂಡ …

ಬಸ್ ಪ್ರಯಾಣ ವೇಳೆ ಚಿನ್ನದ ಸರ ನಾಪತ್ತೆ: ದೂರು

ಕುಂಬಳೆ: ಬಸ್ ಪ್ರಯಾಣ ವೇಳೆ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ನಿವಾಸಿ ದಯಾನಂದ ಆಚಾರ್ಯರ ಪುತ್ರಿ ಮಿಶಿತಳ ಚಿನ್ನದ ಸರ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ನಿನ್ನೆ ಸಂಜೆ ಕರ್ನಾಟಕ ಸಾರಿಗೆ ಬಸ್‌ಗೆ  ದಯಾನಂದ ಆಚಾರ್ಯ, ಪತ್ನಿ ಅಶ್ವಿನಿ ಹಾಗೂ ಪುತ್ರಿ ಹತ್ತಿದ್ದು ಚೌಕಿಗೆ ತಲುಪಿ ಇಳಿಯುವ ವೇಳೆ  ನಾಲ್ಕು ಗ್ರಾಂನ ಚಿನ್ನದ ಸರ ನಾಪತ್ತೆಯಾಗಿದೆ. ಕೂಡಲೇ ನಿರ್ವಾಹಕರಿಗೆ ತಿಳಿಸಿ ಹುಡುಕಾಡಿದಾಗ  ಸರದ ಕೊಂಡಿ ಪತ್ತೆಯಾಗಿದೆ. ಬಳಿಕ ಅಶ್ವಿನಿ …

ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಮುಂದೂಡಿರುವುದಾಗಿ ಜಿಲ್ಲಾಧಿಕಾರಿ ಭರವಸೆ- ಶಾಸಕ

ಕುಂಬಳೆ: ತಲಪಾಡಿ- ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಇಂದಿನಿಂದ ವಾಹನಗಳಿಂದ ಟೋಲ್ ಸಂಗ್ರಹ ಆರಂಭಿಸುವುದರ ವಿರುದ್ಧ ತೀವ್ರ ಪ್ರತಿಭಟನೆ ಕೇಳಿ ಬಂದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮುಂದೂಡಿರು ವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಕುಂಬಳೆಯಲ್ಲಿ ಟೋಲ್ ಪ್ಲಾಜಾ ಮಂಜೂರು ಮಾಡಿರುವುದರ ವಿರುದ್ಧ ಕ್ರಿಯಾ ಸಮಿತಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ನ.೧೪ರಂದು ಅಂತಿಮ ತೀರ್ಪು ಬರುವವರೆಗೆ ಟೋಲ್ ಸಂಗ್ರಹ ನಡೆಸುವುದಿಲ್ಲವೆಂದು ಜಿಲ್ಲಾಧಿಕಾರಿ …

ಕುಂಬಳೆ ಪಂಚಾಯತ್ನ 13 ವಾರ್ಡ್ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕುಂಬಳೆ: ಮುಂದಿನ ತಿಂಗಳ 11ರಂದು ನಡೆಯಲಿರುವ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್ನ 24 ವಾರ್ಡ್ಗಳಲ್ಲಿ ಮೊದಲ ಹಂತದ 13 ವಾರ್ಡ್ಗಳ ಬಿಜೆಪಿ ಅಭ್ಯರ್ಥಿ ಗಳ ಯಾದಿಯನ್ನು ಕುಂಬಳೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಬಿಡುಗಡೆಗೊಳಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಕುಂಬಳೆ ಪಂ ಚಾಯತ್ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, …

ಅಣಂಗೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಿಫ್ಟ್ ನಿರ್ಮಾಣಕ್ಕೆ ಚಾಲನೆ

ಕಾಸರಗೋಡು:  ನಗರಸಭೆಯ ಅಧೀನದಲ್ಲಿರುವ ಅಣಂಗೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಿಫ್ಟ್ ಸೌಕರ್ಯ ಸಿದ್ಧವಾಗುತ್ತಿದೆ. ಇದರಿಂದಾಗಿ ರೋಗಿಗಳು ಸಹಿತದ ಆಸ್ಪತ್ರೆಗೆ ತಲುಪುವವರಿಗೆ ಮೇಲಿನ ಮಹಡಿಗೆ ಹೋಗಲು ಇರುವ ಸಮಸ್ಯೆಗೆ ಪರಿಹಾರವಾಗಲಿದೆ. ಲಿಫ್ಟ್ ನಿರ್ಮಾಣ ಕಾಮಗಾರಿಯ ಉದ್ಘಾಟ ನೆಯನ್ನು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ನಿರ್ವಹಿಸದರು. ಕಾಮಗಾರಿ ಶೀಘ್ರವೇ ಪೂರ್ತಿಗೊಳಿಸಲಾಗುವು ದೆಂದು ಆಸ್ಪತ್ರೆಯಲ್ಲಿ ಇನ್ನಷ್ಟು ಹೆಚ್ಚಿನ ಸೌಕರ್ಯಗಳನ್ನು ಏರ್ಪಡಿಸಲಾಗು ವುದೆಂದು ಅಧ್ಯಕ್ಷರು ಈ ವೇಳೆ ನುಡಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದರು. ಮುಖ್ಯ ವೈದ್ಯಾಧಿಕಾರಿ ಸ್ವಪ್ನ, …

ಸೋಂಕಾಲು ಜಂಕ್ಷನ್‌ನಲ್ಲಿ ಕುಸಿದುಬಿದ್ದ ಸ್ಲ್ಯಾಬ್: ಸಂಚಾರಕ್ಕೆ ಆತಂಕ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಪೇಟೆ ಬಸ್ ನಿಲ್ದಾಣ ಬಳಿ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಸ್ಥಿತಿಯಲ್ಲಿದ್ದು, ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಈ ಪರಿಸರ ದಲ್ಲಿ  ತಿಂಗಳ ಹಿಂದೆ ವಾಹನ ವೊಂದು ಸ್ಲ್ಯಾಬ್‌ನ ಮೇಲೆ ಸಂಚರಿಸಿರುವುದೇ  ಸ್ಲ್ಯಾಬ್ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.  ದಿನನಿತ್ಯ ಮಕ್ಕಳ ಸಹಿತ  ಹಲವಾರು ಮಂದಿ ಈ ಪರಿಸರದಲ್ಲೇ ಬಸ್ ತಂಗು ದಾಣಕ್ಕೆ ತೆರಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ರಾತ್ರಿ ಕಾಲದಲ್ಲಿ ಹೊಂಡ ಗಮನಕ್ಕೆ ಬಾರದೆ ಬೀಳುವ …