ಎಸ್‌ಐಆರ್ ಪರಿಷ್ಕರಣೆ: ಕನ್ನಡ ಭಾಷೆಯಲ್ಲೂ  ಫಾರ್ಮ್ ವಿತರಣೆಗೆ ಅನುಕೂಲ ತೀರ್ಮಾನ ಉಂಟಾಗಲಿದೆ-ಬಿಜೆಪಿ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಮತದಾರರ ಯಾದಿಯ  ಪ್ರತ್ಯೇಕ ಪರಿಷ್ಕರಣೆ ಆರಂಭಿಸಿರುವಂತೆ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಎನ್ಯುಮರೇಶನ್, ಫಾರ್ಮ್ 6 ಸಹಿತ ಎಲ್ಲಾ ಅರ್ಜಿ ಫಾರ್ಮ್‌ಗಳು, ಸೂಚನೆಗಳನ್ನು ಕನ್ನಡ ಭಾಷೆಯಲ್ಲೂ ಲಭ್ಯಗೊಳಿ ಬೇಕೆಂಬ ಬೇಡಿಕೆಯೊಂದಿಗೆ ಚುನಾವಣಾ ಆಯೋಗವನ್ನು ಸಮೀಪಿಸಿರುವು ದಾಗಿಯೂ, ಅನುಕೂಲ ತೀರ್ಮಾನ ಉಂಟಾಗ ಬಹುದೆಂದು ಸಂಬಂಧ ಪಟ್ಟ ಅಧಿಕಾರಿಗಳಿಂದ ಖಚಿತತೆ ಲಭಿಸಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಯಾದಿ ಸಹಿತ ಕನ್ನಡ, ಮಲೆಯಾಳ ಭಾಷೆಗಳಲ್ಲಿ ಲಭ್ಯಗೊಳಿಸಬೇಕೆಂದು ರಾಷ್ಟ್ರೀಯ ಚುನಾವಣಾ ಆಯೋಗದ …

ರಾಷ್ಟ್ರೀಯ ತೈಕೋಂಡಾದಲ್ಲಿ ಕಾಸರಗೋಡಿನ ವಿದ್ಯಾರ್ಥಿನಿಗೆ ಚಿನ್ನದ ಪದಕ

ಕಾಸರಗೋಡು: ಅಕ್ಟೋಬರ್ 28ರಿಂದ ನವಂಬರ್ 2ರ ವರೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ತೈಕೋಂಡಾ ಚಾಂಪ್ಯನ್‌ಶಿಪ್‌ನಲ್ಲಿ ವಿದ್ಯಾನಗರ ಪಡುವಡ್ಕದ ಎ.ಎಂ. ಫಾತಿಮಳಿಗೆ ಚಿನ್ನದ ಪದಕ ಲಭಿಸಿದೆ. ಈ ಬಾರಿ ಕೇರಳ ತೈಕೋಂಡಾ ತಂಡಕ್ಕೆ ಸಮಗ್ರ ಪ್ರಶಸ್ತಿ ಲಭಿಸಿರುತ್ತದೆ. ತೈಕೋಂಡಾ ದಲ್ಲಿ ರಾಜ್ಯಮಟ್ಟದಲ್ಲಿ ನಿರಂತರ ೬ನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಫಾತಿಮ ಈ ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದಳು. ರಾಜ್ಯದಲ್ಲಿ ಚಿನ್ನದ ಪದಕ ಗಳಿ ಸಿದ ಮೊದಲ ಎರಡು ಬಾರಿಯೂ ಕೊರೋನ ರೋಗ …

ನಿಷೇಧಿತ ಉತ್ಪನ್ನಗಳನ್ನು ಬಚ್ಚಿಟ್ಟ, ತ್ಯಾಜ್ಯ ಉಪೇಕ್ಷಿಸಿದ  ವ್ಯಕ್ತಿಗಳಿಗೆ ದಂಡ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ವಿವಿಧ ಕಾನೂನು ಉಲ್ಲಂಘನೆಗಳಿಗೆ ದಂಡ ಹೇರಲಾಗಿದೆ. ನಿಷೇಧಿತ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ಗಳನ್ನು ಗೋದಾಮಿನಲ್ಲಿ ಬಚ್ಚಿಟ್ಟಿರುವ ಕುಂಬಳೆ ಆರಿಕ್ಕಾಡಿಯ ಹೈಪರ್ ಮಾರ್ಕೆಟ್ ಮಾಲಕನಿಗೆ 10 ಸಾವಿರ ರೂ. ದಂಡ ಹೇರಿ ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮೊಗ್ರಾಲ್ ಹೊಳೆ ಸಮೀಪದ ರಸ್ತೆ ಬದಿ ರಾಶಿ ಹಾಕಿರುವ ತ್ಯಾಜ್ಯಗಳಿಂದ ಲಭಿಸಿದ  ಪುರಾವೆ ಪ್ರಕಾರ ಹೈಪರ್ ಮಾರ್ಕೆಟ್, ಕಾಸರಗೋಡು ರೆಸ್ಟೋರೆಂಟ್ ಮಾಲಕರಿಗೆ 7 ಸಾವಿರ ರೂ. ದಂಡ ಹೇರಲಾಗಿದೆ. ಹೋಟೆ …

ಕಾಸರಗೋಡು ರೈಲ್ವೇ ಠಾಣೆಯ ಇಬ್ಬರಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಪ್ರದಾನ

ಕಾಸರಗೋಡು: ಸೇವೆಯ ಹಾಗೂ ಸಮರ್ಪಣೆಯ ಮೆರುಗಿನಲ್ಲಿ  ರಾಜ್ಯ ಮುಖ್ಯಮಂತ್ರಿಯ ಈ ವರ್ಷದ ಪೊಲೀಸ್ ಪಡೆ ಕಾಸರಗೋಡು ರೈಲ್ವೇ ಪೊಲೀಸ್ ಸ್ಟೇಶನ್‌ನ ಇಬ್ಬರು ಅಧಿಕಾರಿಗಳಿಗೆ ಲಭಿಸಿದೆ. ಎಸ್‌ಎಪಿ ಕ್ಯಾಂಪ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎಸ್‌ಎಚ್‌ಒ ಎಂ. ರಜಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಎಂ.ವಿ. ಪ್ರಕಾಶನ್ ಎಂಬಿವರಿಗೆ ಪೊಲೀಸ್ ಪದಕವನ್ನು ಮುಖ್ಯಮಂತ್ರಿ  ಪಿಣರಾಯಿ ವಿಜಯನ್  ಪ್ರದಾನ ಮಾಡಿದರು. ಕೇರಳ ರೈಲ್ವೇಯ ಮೂರು ಮಂದಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಲಭಿಸಿದೆ. ಅದರಲ್ಲಿ ಇಬ್ಬರು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ. ಠಾಣೆಯಲ್ಲಿ ಕಳೆದ …

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಮುದೆ ಘಟಕ ವಾರ್ಷಿಕ ಮಹಾಸಭೆ

ಪೆರ್ಮುದೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಮುದೆ ಘಟಕದ ವಾರ್ಷಿಕ ಮಹಾಸಭೆ ಪೆರ್ಮುದೆ ಚರ್ಚ್ ಹಾಲ್‌ನಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಅಹಮದ್ ಶರೀಫ್ ಉದ್ಘಾಟಿಸಿದರು. ಪೆರ್ಮುದೆ ಘಟಕದ ಅಧ್ಯಕ್ಷ ಎ ವೈ ಅಬ್ಬಾಸ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಜೆ ಸಜಿ ವ್ಯಾಪಾರಿಗಳಿಗಿರುವ ಕ್ಷೇಮ ಯೋಜನೆಯ ವಿವರಗಳನ್ನು ನೀಡಿದರು. ಕಾರ್ಯದರ್ಶಿ ದಿನೇಶ್ ಶುಭ ಹಾರೈಸಿದರು. ಯಾವುದೇ ಪರವಾನಿಗೆ ಇಲ್ಲದೆ ಫುಟ್ಪಾತ್ನಲ್ಲಿ ನಡೆಯುವ ಅನಧಿಕೃತ ವ್ಯಾಪಾರ ದಿಂದಾಗಿ ಅಧಿಕೃತ ವ್ಯಾಪಾರಿಗಳು ತೊಂದರೆ ಅನುಭವಿಸುವುದರೊಂ …

ನಿವೃತ್ತ ಮೃಗಸಂರಕ್ಷಣಾ ಇಲಾಖೆ ಸಿಬ್ಬಂದಿ ನೇಣು ಬಿಗಿದು ಸಾವು

ಕಾಸರಗೋಡು: ಒಂದು ವರ್ಷ ಹಿಂದೆ ಸೇವೆಯಿಂದ ನಿವೃತ್ತಿಗೊಂಡ ಮೃಗಸಂರಕ್ಷಣಾ ಇಲಾಖೆ ಸಿಬ್ಬಂದಿ ಮನೆಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ಪಾರೆಕಟ್ಟೆ ಮುಕುಂದ  ನಿವಾಸಿ ಬಿ. ಬಾಬುರಾಜ್ (57) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕೆಳಗಿಳಿಸಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ  ಇಂದು ಮುಂಜಾನೆ 1 ಗಂಟೆಗೆ ಸಾವು ಸಂಭವಿಸಿದೆ. ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ …

ವಾಹನ ಅಪಘಾತ: ಯುವಕನ ಸಾವಿಗೆ ಕಾರಣ ಆಂತರಿಕ ಅವಯವದಲ್ಲಿ ರಕ್ತಸ್ರಾವ-ಮರಣೋತ್ತರ ಪರೀಕ್ಷಾ ವರದಿ

ಕುಂಬಳೆ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಸಾವಿಗೆ ಕಾರಣ ಆಂತರಿಕ ಅವಯವದಲ್ಲಿ ಉಂಟಾದ ರಕ್ತಸ್ರಾವವಾಗಿದೆಯೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ನಡೆಸಿದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಆರಿಕ್ಕಾಡಿ ಪಾರೆಸ್ಥಾನದ ಕೃಷ್ಣ ಬೆಳ್ಚಪ್ಪಾಡರ ಪುತ್ರ ಎಂ. ಹರೀಶ್ ಕುಮಾರ್ (37) ಮೊನ್ನೆ ರಾತ್ರಿ 11 ಗಂಟೆಗೆ ಪೆರುವಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರು. ಇವರು ಸಂಚರಿಸಿದ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿತ್ತು. ಇದರಲ್ಲಿ  ಗಾಯಗೊಂಡ ಹರೀಶ್ ಕುಮಾ ರ್‌ರನ್ನು ಕುಂಬಳೆ …

ಅನಧಿಕೃತ ಹೊಯ್ಗೆ ಸಾಗಾಟ ರಿಕ್ಷಾ ಪಲ್ಟಿ: ಚಾಲಕ ಪರಾರಿ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಆಟೋ ರಿಕ್ಷಾ ಅಪಘಾತಕ್ಕೀಡಾಗಿದ್ದು, ಈ ವೇಳೆ ಚಾಲಕ ಓಡಿ ಪರಾರಿಯಾಗಿದ್ದಾನೆ. ಆಟೋ ರಿಕ್ಷಾವನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಅಪರಾಹ್ನ 2.45ರ ವೇಳೆ ಉಪ್ಪಳ ಹಿದಾಯತ್ ಬಜಾರ್‌ನಲ್ಲಿ ಘಟನೆ ನಡೆದಿದೆ. ಉಪ್ಪಳ ಗೇಟ್‌ನಿಂದ ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ರಿಕ್ಷಾ ಸರ್ವೀಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದರು. ರಿಕ್ಷಾ ಅಪಘಾತಕ್ಕೀಡಾದ ವಿಷಯ ತಿಳಿದು ಪೊಲೀಸರು ಅಲ್ಲ್ಲಿಗೆ ತಲುಪಿದಾಗ …

49 ದಿನ ಪ್ರಾಯದ ಮಗುವಿನ ಸಾವು ಕೊಲೆಯೆಂದು ಸಾಬೀತು: ತಾಯಿ ಸೆರೆ

ತಳಿಪರಂಬ: ಕುರುಮಾತೂರ್ ಪೋಕುಂಡ್ ಡಯರಿ ಜುಮಾ ಮಸೀದಿ ಸಮೀಪದ 49 ದಿನ ಪ್ರಾಯದ ಮಗುವಿನ ಸಾವು ಕೊಲೆ ಕೃತ್ಯವೆಂದು ದೃಢೀಕರಣಗೊಂಡಿದೆ. ಈ ವಿಷಯದಲ್ಲಿ  ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿ ನಿನ್ನೆ ಸಂಜೆ ತಾಯಿ ಮುಬಶಿರಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಮವಾರ ಬೆಳಿಗ್ಗೆ 9.30ರ ವೇಳೆ ಜಾಬಿರ್‌ರ ಪುತ್ರ ಅಮೀಶ್ ಅಲನ್ ಜಾಬಿರ್‌ನನ್ನು ಬಾವಿಯಲ್ಲಿ ಪತ್ತೆ ಮಾಡಲಾಗಿತ್ತು. ಮಗುವನ್ನು ಸ್ನಾನ ಮಾಡಿಸುತ್ತಿರುವಾಗ ಆಕಸ್ಮಾತ್ ಬಾವಿಗೆ ಬಿದ್ದಿರುವುದಾಗಿ ತಾಯಿ ತಿಳಿಸಿದ್ದಳು. ಸ್ಥಳೀಯನಾದ ಪಿ.ಪಿ. ನಾಸರ್ ಎಂಬವರು 24 …

ಶಬರಿಮಲೆಗೆ ಕಾಲ್ನಡೆ ಪ್ರಯಾಣಗೈಯ್ಯುತ್ತಿದ್ದ ಅಯ್ಯಪ್ಪ ಭಕ್ತನಿಗೆ ಬೈಕ್ ಢಿಕ್ಕಿ ಹೊಡೆದು ಮೃತ್ಯು

ತಲಪಾಡಿ: ಕಾಲ್ನಡೆ ಮೂಲಕ  ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿಗೆ ಅಪರಿಮಿತ ವೇಗದಿಂದ ಸಂಚರಿಸಿದ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಾಯವುಂಟಾಗಿದೆ. ಕುಂದಾಪುರದ ಅಯ್ಯಪ್ಪ ಶಿಬಿರದಿಂದ ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕಿರುವ ಕಾಲ್ನಡೆ ಪ್ರಯಾಣ ಮಧ್ಯೆ ಅಪಘಾತ ಸಂಭವಿಸಿದೆ. ಕೋಟೆಶ್ವರದ ಬಳಿ ಇರುವ ಕುಂಬ್ರಿ ನಿವಾಸಿ ಸುರೇಂದ್ರ ಮೊಗವೀರ (35) ಮೃತಪಟ್ಟ ವ್ಯಕ್ತಿ. ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 15 ಅಯ್ಯಪ್ಪ ಭಕ್ತರು ಮಂದರ್ತಿ ಕ್ಷೇತ್ರದಿಂದ ನಡೆದು ಹೋಗುತ್ತಿದ್ದ ಮಧ್ಯೆ …