ವಿವಿಧ ಯೋಜನೆಗಳ ಉದ್ಘಾಟನೆ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು- ಕೇಂದ್ರ ಸಚಿವ ಜೋರ್ಜ್ ಕುರ‍್ಯನ್

ಕಾಸರಗೋಡು: ನಾಡಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದೆಂದೂ, ಅಂತಹ ಚಿಂತನೆ ಹೊರತುಪಡಿಸ ಬೇಕೆಂದು ಕೇಂದ್ರ ಮೀನುಗಾರಿಕೆ- ಪಶುಸಂಗೋಪನೆ- ಹೈನುಗಾರಿಕಾ ಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಸಹ ಸಚಿವ ಜೋರ್ಜ್ ಕುರ‍್ಯನ್ ಅಭಿಪ್ರಾ ಯಪಟ್ಟಿದ್ದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯ ನಿಲುವು ಕೂಡಾ ಆಗಿದೆ. ಪೆರಿಯಾದಲ್ಲಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕಾಗಿ ಹೊಸ ಅಕಾಡೆಮಿಕ್ ಬ್ಲೋಕ್ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿ ಅವರು ಮಾತನಾ ಡುತ್ತಿದ್ದರು. ಪ್ರಧಾನಮಂತ್ರಿ ಜನ್‌ವಿಕಾಸ್ ಕಾರ್ಯಕ್ರಮ್ (ಪಿಎಂಜಿವಿಕೆ) ಯೋಜನೆಯಲ್ಲಿ ಒಳಪಡಿಸಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಮಂಜೂರು ಮಾಡಿರುವ ೫೨.೬೮ …

ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ಮಹಿಳೆಗೆ 1 ಲಕ್ಷ ರೂ. ಜುಲ್ಮಾನೆ, ಸಜೆ

ಕಾಸರಗೋಡು: ಮೂವರು ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ನಡೆಸಿದ ಪ್ರಕರಣದ ಆರೋಪಿಯಾ ಗಿರುವ ತಮಿಳುನಾಡಿನ ಮಹಿಳೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ  (ಪ್ರಥಮ)ದ ನ್ಯಾಯಾ ಧೀಶರಾದ ಟಿ.ಎಚ್. ರಜಿತ ಒಂದು ಲಕ್ಷರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಇದರ ಹೊರತಾಗಿ ನ್ಯಾ ಯಾಲಯದ ನಿನ್ನೆಯ ಕಲಾಪ ಮುಗಿ ಯುವ ತನಕ  ಸಜೆಯನ್ನೂ ವಿಧಿಸಲಾಗಿದೆ. ತಮಿಳುನಾಡು ಚೆನ್ನೈ ಕಲ್ಲಕುರುಚ್ಚಿ ಕಟ್ಟುಕ ಪಾಳಯಂ ನಿವಾಸಿ ಮಲ್ಲಿಕಾ (55) ಎಂಬಾಕೆಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 15 …

ಮಂತ್ರವಾದಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುವ ಪದಾರ್ಥ ಎರಚಿ ಪತಿಯ ಕ್ರೂರತೆ

ಕೊಲ್ಲಂ: ಮಂತ್ರವಾದಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುವ ಮೀನಿನ ಪದಾರ್ಥ ಎರಚಿ ಪತಿಯೋರ್ವ ಕ್ರೂರತೆ ತೋರಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ಆಯೂರ್‌ನ ರಜಿಲ ಎಂಬಾಕೆ ಪತಿ ಸಜೀರ್ ನಡೆಸಿದ ಕೃತ್ಯದಿಂದ ಸುಟ್ಟು ಗಾಯಗೊಂಡಿದ್ದಾಳೆ. ದಂಪತಿ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಪತ್ನಿಯ ದೇಹಕ್ಕೆ ಪಿಶಾಚಿ ಸೇರಿಕೊಂಡಿರುವುದೇ ಜಗಳಕ್ಕೆ ಕಾರಣವೆಂದು ಸಜೀರ್ ನಂಬಿದ್ದನು.  ದೇಹದಿಂದ ಪಿಶಾಚಿಯನ್ನು ಹೊರತುಪಡಿಸಲು ಅವರಿಬ್ಬರು ಆಯೂರಿನಲ್ಲಿರುವ ಓರ್ವ ಮಂತ್ರವಾದಿಯನ್ನು ಸಂಪರ್ಕಿಸಿದ್ದರು. ಪಿಶಾಚಿ ಬಾಧೆ ತೊಲಗಿಸಲು ಮಂತ್ರವಾದಿ ಮಂತ್ರವಾದ ನಡೆಸಿ ಅವರನ್ನು ಮರಳಿ ಕಳುಹಿಸಿದ್ದನು. …

ಮೀಂಜ ಕೃಷಿ ಭವನ ಸಚಿವರಿಂದ ಉದ್ಘಾಟನೆ

ಮೀಂಜ: ಕೃಷಿಕರ ಬಳಿಗೆ ತೆರಳಿ ಅವರಿಗಾಗಿ ಕಾರ್ಯಾಚರಿಸು ವವರಾಗಿರಬೇಕು ಕೃಷಿ ಇಲಾಖೆಯ ಅಧಿಕಾರಿಗಳು ಎಂದು ರಾಜ್ಯ ಕೃಷಿ ಅಭಿವೃದ್ಧಿ ಖಾತೆ ಸಚಿವ ಪಿ. ಪ್ರಸಾದ್ ನುಡಿದಿದ್ದಾರೆ. ಮೀಂಜ ಪಂಚಾಯತ್ ಕೃಷಿ ಭವನದ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದರು. ಕಾರ್ಯಕ್ರಮದಂಗವಾಗಿ ನಡೆದ ಕಿಸಾನ್ ಗೋಷ್ಠಿಯನ್ನು ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀಮ ಟೀಚರ್ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ …

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಧರ್ಮತ್ತಡ್ಕ ಪ್ರಥಮ, ಪೈವಳಿಕೆನಗರ ದ್ವಿತೀಯ

ಉಪ್ಪಳ: ಪೈವಳಿಕೆ ನಗರ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನಿನ್ನೆ ಸಂಜೆ ಸಮಾರೋಪಗೊಂಡಿತು. ಹೈಯರ್ ಸೆಕಂಡರಿ ಜನರಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತ್ತಡ್ಕ 256 ಅಂಕಗಳೊಂದಿಗೆ ಪ್ರಥಮ ಹಾಗೂ 238 ಅಂಕಗಳೊಂದಿಗೆ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಹೈಸ್ಕೂಲ್ ಜನರಲ್‌ನಲ್ಲಿ 250 ಅಂಕ ಪಡೆದು ಎಸ್.ಡಿ.ಪಿ. ಎಚ್.ಎಸ್ ಧರ್ಮತ್ತಡ್ಕ ಪ್ರಥಮ, 204 ಅಂಕದೊಂದಿಗೆ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ದ್ವಿತೀಯ, ಯು.ಪಿ ಜನರಲ್‌ನಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ 80 ಅಂಕದೊಂದಿಗೆ ಪ್ರಥಮ, …

ತಿಂಗಳ ಮಗು ಮಾರಾಟ: ನೀರ್ಚಾಲ್‌ನಲ್ಲಿ ಪತ್ತೆ; ತಾಯಿ ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ಒಂದು ತಿಂಗಳು ಪ್ರಾಯದ ಗಂಡು ಮಗುವನ್ನು ತಾಯಿ ಬೇರೊಬ್ಬ ಮಹಿಳೆಗೆ ಮಾರಾಟಗೈದ ಪ್ರಕರಣ ಕುಂಬಳೆಯಲ್ಲಿ ನಡೆದಿದೆ. ಪೊಲೀಸರ ಸಹಾಯದೊಂದಿಗೆ ಶಿಶುಕ್ಷೇಮ ಸಮಿತಿ ನಡೆಸಿದ ತನಿಖೆಯಲ್ಲಿ ಮಗುವನ್ನು ನೀರ್ಚಾಲ್ ವಿಲ್ಲೇಜ್‌ನ ಮನೆಯೊಂದರಲ್ಲಿ ಪತ್ತೆಹಚ್ಚಲಾಗಿದೆ. ಈ ಸಂಬಂಧ ಮಗು ಹಾಗೂ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಸಿಡಬ್ಲ್ಯುಸಿಗೆ ಹಸ್ತಾಂತರಿಸಲಾಗಿದ್ದು, ಮಗುವನ್ನು ಚೈಲ್ಡ್ ಹೋಮ್‌ಗೆ ಕಳುಹಿಸಿ ಕೊಡಲಾಗಿದೆ. ಮಗುವನ್ನು ಮಾರಾಟಗೈದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಈ ರೀತಿ ತಿಳಿಸುತ್ತಿದ್ದಾರೆ- ಕುಂಬಳೆ ಪೇಟೆ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಯುವತಿ ಒಂದು …

ತೋಟದ ಕೆಲಸಕ್ಕೆ ತಲುಪಿ ಮಾಲಕಿಯ ಕುತ್ತಿಗೆಯಿಂದ ಸರ ಅಪಹರಣ ಯತ್ನ: ಯುವಕ ಸೆರೆ

ಕಾಸರಗೋಡು: ಅಡಿಕೆ ತೋಟ ದ ಕೆಲಸಕ್ಕೆ ತಲುಪಿದ ಯುವಕ ತೋಟದ ಮಾಲಕಿಯಾದ ಗೃಹಿಣಿ ಯ ಕುತ್ತಿಗೆ ಯಿಂದ  ಚಿನ್ನದ ಸರ ಕಸಿದು ಪರಾರಿಯಾಗಲೆತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕರ್ನಾಟಕದ ಚಿತ್ರದುರ್ಗ ನಿವಾಸಿಯಾದ ಮಂಜು ಯಾನೆ ಮಂಜುನಾಥ (35) ಎಂಬಾತನನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಚೆಂಗಳ ಚೇರೂರು ಮೇನಂಕೋಡ್‌ನ ಬದ್ರಿ ಯಾ ಮಂಜಿಲ್‌ನ ಅಬ್ದುಲ್ ಖಾದರ್‌ರ ಪತ್ನಿ  ಕುಂಞಿಬಿ (58) ಯವರ ಕುತ್ತಿಗೆಯಿಂದ ಸರ ಅಪಹರಿ ಸಲು ಆರೋಪಿ ಯತ್ನಿಸಿದ್ದಾನೆ. ನಿನ್ನೆ ಬೆಳಿಗ್ಗೆ …

ಚೆರ್ಕಳದಲ್ಲಿ ಬೃಹತ್ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ: 20 ಮಂದಿ ಸೆರೆ

ಕಾಸರಗೋಡು: ಚೆರ್ಕಳದಲ್ಲಿ ಬಹು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೊಠಡಿಯೊಳಗೆ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಇವರ ಕೈಯಿಂದ 55,000 ರೂ. ವಶಪಡಿಸಲಾಗಿದೆ. ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪಿ. ಶೈನ್ರ ನೇತೃತ್ವದಲ್ಲಿ ಮೊನ್ನೆ ರಾತ್ರಿ 10.30ರ ವೇಳೆ ದಾಳಿ ನಡೆಸಲಾಗಿದೆ. ಕುಂಡAಗುಳಿ ಕಾರಕ್ಕಾಡ್ ಹೌಸ್ನ ಮುಹಮ್ಮದ್ ಕುಂuಟಿಜeಜಿiಟಿeಜ (46), ಚೆರ್ಕಳ ಪಾಡಿ ರೋಡ್ ಕುದಿರತ್ ನಗರದ ಅಬ್ದುಲ್ ಹಮೀದ್ (42), ಬೇಡಡ್ಕ ಪಂಚಾಯತ್ …

ಮದ್ಯಪಾನವನ್ನು ವಿರೋಧಿಸಿದ ತಾಯಿಯನ್ನು ಕುತ್ತಿಗೆ ಇರಿದು ಕೊಲೆಗೈದ ಪುತ್ರ

ತಿರುವನಂತಪುರ: ಮದ್ಯಪಾನವನ್ನು ವಿರೋಧಿಸಿದ ತಾಯಿಯನ್ನು ಸ್ವಂತ ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಕಲ್ಲಿಯೂರು ಮನ್ನಂ ಮೆಮೋರಿಯಲ್ ರೋಡ್ ನಿವಾಸಿಯಾದ ವಿಜಯ ಕುಮಾರಿ (74) ಕೊಲೆಗೀಡಾದ ಗೃಹಿಣಿಯಾಗಿದ್ದಾರೆ. ಈ ಸಂಬಂಧ ಇವರ ಪುತ್ರ ಅಜಯ ಕುಮಾರ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 11.45ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಅಜಯ ಕುಮಾರ್ ಮದ್ಯ ಸೇವಿಸುತ್ತಿದ್ದಾಗ ಬಾಟ್ಲಿ ನೆಲಕ್ಕೆ ಬಿದ್ದು ಪುಡಿಯಾಗಿತ್ತು. ಇದನ್ನು ತಾಯಿ ಪ್ರಶ್ನಿಸಿದಾಗ ಬಾಟ್ಲಿಯ ಗಾಜಿನಿಂದ ಆಕೆಯ ಕುತ್ತಿಗೆಗೆ …

ಶಬರಿಮಲೆಯಲ್ಲಿ ಕಾಸರಗೋಡು ನಿವಾಸಿಗಳಾದ ಭಕ್ತರಿಂದ ಹಣ ಪಡೆದು ವಂಚಿಸಿದ ಇಬ್ಬರು ಡೋಲಿ ಕಾರ್ಮಿಕರ ಸೆರೆ

ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳಾದ ಅಯ್ಯಪ್ಪ ಭಕ್ತರನ್ನು ವಂಚಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇಬ್ಬರು ಡೋಲಿ ಕಾರ್ಮಿಕರನ್ನು ಪಂಪಾ ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿ ಪೀರುಮೇಡ್ ರಾಣಿಕೋವಿಲ್ ಎಸ್ಟೇಟ್ ನಿವಾಸಿಗಳಾದ ಕಣ್ಣನ್ (31), ರಘು ಆರ್. (27) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಅಕ್ಟೋಬರ್ 18ರಂದು ಘಟನೆ ನಡೆದಿದೆ.  ತುಲಾ ಮಾಸ ಪೂಜೆಗಾಗಿ ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳು ಒಳಗೊಂಡ ತಂಡವನ್ನು ಆರೋಪಿಗಳು ವಂಚಿಸಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆ ಭಕ್ತರ ಸಂದಣಿ …