ವ್ಯಕ್ತಿಪಲ್ಲಟ ನಡೆಸಿ ದೂರು ನೀಡಿದ ಆರೋಪದಂತೆ ಕೇಸು ದಾಖಲು

ಬದಿಯಡ್ಕ: ನಕಲಿ ದಾಖಲುಪತ್ರ ಗಳನ್ನು ಅಸಲಿ ದಾಖಲುಪತ್ರದ ರೂಪದಲ್ಲಿ ಉಪಯೋಗಿಸಿ ಜಮಾ ಯತ್ ಸಮಿತಿಯ ಕಾರ್ಯದರ್ಶಿ ಎಂಬ ಹೆಸರಲ್ಲಿ ಜ್ಯಾರಿಯಲ್ಲಿರುವ ಕಾರ್ಯದರ್ಶಿಯಾಗಿದ್ದೇನೆಂಬ ರೀತಿಯಲ್ಲಿ  ವ್ಯಕ್ತಿಪಲ್ಲಟಗೊಳಿಸಿ ವಕ್ಫ್ ಮಂಡಳಿಗೆ 2025 ಮೇ 16ರಲ್ಲಿ ನಕಲಿ ದೂರು ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏತಡ್ಕ ಬೆಳಿಂಜೆ ಬದರ್ ಜುಮಾ ಮಸೀದಿಯ ಅಬ್ದುಲ್ಲ ಜಿ.ಬಿ ಎಂಬವರು ಈ ಬಗ್ಗೆ ಮೊದಲು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯನೀಡಿದ ನಿರ್ದೇಶ ಪ್ರಕಾರ ಪೊಲೀಸರು ಅಹಮ್ಮದ್ ಮುಸ್ತಫಾ ಎಂಬವರ …

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 5ರಿಂದ

ತಿರುವನಂತಪುರ: ಎಸ್‌ಎಸ್ ಎಲ್‌ಸಿ ಪರೀಕ್ಷೆ ಮುಂದಿನ ವರ್ಷ ಮಾರ್ಚ್ ೫ರಿಂದ ಆರಂಭಗೊಂಡು ೩೦ರಂದು ಕೊನೆಗೊಳ್ಳಲಿದೆ. ಇದೇ ರೀತಿ ಹೈಯರ್ ಸೆಕೆಂಡರಿ ಪ್ರಥಮ ವರ್ಷ ಪರೀಕ್ಷೆ ಮಾರ್ಚ್ 5ರಂದು ಆರಂಭಗೊಂಡು 27ರ ತನಕ ಮುಂದುವರಿಯಲಿದೆ. ಹೈಯರ್ ಸೆಕೆಂಡರಿ ದ್ವಿತೀಯ ವರ್ಷದ ಪರೀಕ್ಷೆ ಮಾರ್ಚ್ ೬ರಂದು ಆರಂಭಗೊಂಡು 28ರ ತನಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಬೆಳಿಗ್ಗೆ 9.30 (ಶುಕ್ರವಾರದಂದು 9.15) ಆರಂಭಗೊಳ್ಳಲಿದೆ. ಪ್ಲಸ್‌ವನ್ ಪರೀಕ್ಷೆ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ರಾಜ್ಯ ದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ …

ಅನ್‌ಲೈನ್ ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಓರ್ವ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗದ ಭರವಸೆಯೊಡ್ಡಿ 11 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಸೆರೆಗೀಡಾಗಿದ್ದಾನೆ. ಕಣ್ಣೂರು ಕದಿರೂರು ಪುಳಿಯೋಡ್ ನಿವಾಸಿ ಯಾದ ಸಿ. ವಿನೀಶ್ (39) ಸೆರೆಗೀಡಾದ ವ್ಯಕ್ತಿ. ಇರಿಂಙಾಲಕುಡ ಅವಿಟ್ಟತ್ತೂರು ನಿವಾಸಿ ಆದರ್ಶ್ (32) ಎಂಬವರನ್ನು ಆರೋಪಿ ವಂಚಿಸಿರುವುದಾಗಿ ದೂರ ಲಾಗಿದೆ. ವಾಟ್ಸಪ್ ಮೂಲಕ ಆರೋಪಿ ಯುವಕನನ್ನು ಸಂಪರ್ಕಿಸಿದ್ದನು. ‘ಡಿ.ಡಿ.ಬಿ. ವರ್ಲ್ಡ್ ವೈಡ್ ಮೀಡಿಯಾ ಇಂಡಿಯಾ’ ಎಂಬ ಕಂಪೆನಿಯ ಹೆಸರಲ್ಲಿ ಹೋಟೆಲ್‌ಗಳಿಗೆ ಹಾಗೂ ರೆಸ್ಟೋರೆಂಟ್‌ಗಳಿಗೆ ಸ್ಟಾರ್ ರೇಟಿಂಗ್ …

ಚುನಾವಣಾ ಕೊಡುಗೆ: ಕಲ್ಯಾಣನಿಧಿ ಪಿಂಚಣಿ 2000 ರೂ.ಗೇರಿಕೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನೇನು ಚುನಾವಣೆ ನಡೆಯಲಿರುವಂತೆಯೇ ಅದನ್ನು ಮುಂದಕ್ಕೆ ಕಂಡುಕೊAಡು ರಾಜ್ಯ ಸರಕಾರ ಕೊಡುಗೆಗಳ ಮಹಾಪೂರವನ್ನೇ ಘೋಷಿಸಿದೆ.ಇದರಂತೆ ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು ಈಗಿರುವ 1600ರೂ.ನಿಂದ 2000 ರೂ.ಗೇರಿಸ ಲಾಗಿದೆ. ಆಶಾಕಾರ್ಯಕರ್ತರು, ಅಂಗನವಾಡಿ ವರ್ಕರ್ಸ್ ,ಹೆಲ್ಪರ್, ಪ್ರೈಮರೀ ಟೀಚರ್, ಆಯಾ, ಸಾಕ್ಷರತಾ ಪ್ರೇರಕ್ರ ಗೌರವಧನದಲ್ಲೂ ತಲಾ 1000 ರೂ.ನಂತೆ ಹೆಚ್ಚಳ ಘೋಷಿಸ ಲಾಗಿದೆ. ಆಶಾ ಕಾರ್ಯಕರ್ತರಿಗೆ ವಿತರಿಸಲು ಬಾಕಿ ಇರುವ ಹಣವನ್ನು ಶೀಘ್ರ ವಿತರಿಸಲಾಗುವುದು. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ತರ …

ಚಿಪ್ಪಾರುಪದವು-ಪೊಸಡಿಗುಂಪೆ ರಸ್ತೆ ದುರಸ್ತಿ ಕಾಮಗಾರಿ ಅರ್ಧದಲ್ಲಿ ಮೊಟಕು ವಾಹನ ಸಂಚಾರಕ್ಕೆ ಸಮಸ್ಯೆ; ಬಿಜೆಪಿಯಿಂದ ಹೋರಾಟ ಎಚ್ಚರಿಕೆ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚಿಪ್ಪಾರುಪದವು-ಬಾಯಾರು ಸೊಸೈಟಿ, ಸರ್ಕುತ್ತಿ, ಸಜಂಕಿಲ, ಪೊಸಡಿಗುಂಪೆ ದಾರಿ ಯಾಗಿ  ಪೆರ್ಮುದೆ ಸಂಗಮಿಸುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಅರ್ಧದಲ್ಲೇ ಮೊಟಕು ಗೊಳಿಸಿದ ಹಿನ್ನೆಲೆಂiiಲ್ಲಿ ಬಸ್ ಸಹಿತ ವಾಹನ ಸಂಚಾರ ಕಷ್ಟಕರವಾಗಿದ್ದು,  ಸಾರ್ವಜನಿಕರು ಸಂಕಷ್ಟಗೊಂಡಿದ್ದಾರೆ. ರಸ್ತೆ ದುರಸ್ತಿ ಶೀಘ್ರ ಮುಂದುವರಿಸದಿದ್ದಲ್ಲಿ  ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಹೋರಾಟಕ್ಕೆ  ಮುಂದಾಗುವುದಾಗಿ ತಿಳಿಸಿದೆ. ನಾಲ್ಕು ತಿಂಗಳ ಹಿಂದೆ ಈ ರಸ್ತೆಯನ್ನು ಅಗಲ ಹಾಗೂ ಮರು ಡಾಮರೀಕರಗೊಳಿಸಲು ಚಾಲನೆ ನೀಡಲಾಗಿತ್ತು. ಆದರೆ ಮಳೆಯಿಂದಾಗಿ ಕಾಮಗಾರಿ ಮೊಟಕು …

 ಬೀಡಿ ಕಾರ್ಮಿಕೆ ನಿಧನ

ಪೈವಳಿಕೆ: ಇಲ್ಲಿಗೆ ಸಮೀಪದ ಮಾಸಿಕುಮೇರಿ ನಿವಾಸಿ ಬೀಡಿ ಕಾರ್ಮಿಕೆ, ಸಿಪಿಎಂ ಹಿತೈಷಿ ಗುಲಾಬಿ (59) ನಿಧನಹೊಂದಿದರು.  ಇವರ ಪತಿ ಕೃಷ್ಣ, ಓರ್ವ ಪುತ್ರ ಚಂದ್ರ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಪುತ್ರ ಹರೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಮಾನಿಪ್ಪಾಡಿ, ಮುಖಂಡರಾದ ಹಾರಿಸ್ ಪೈವಳಿಕೆ, ಖಲೀಲ್ ಚಿಪ್ಪಾರು, ರಫೀಕ್, ಜಗದೀಶ್ ಶೆಟ್ಟಿ, ನಾರಾಯಣ ಶೆಟ್ಟಿ, ಸೀತಾರಾಮ …

ಕಾಂಜಿಪುರದಲ್ಲಿ ದರೋಡೆ: ಐದು ಮಂದಿ ಸೆರೆ

ಚೆನ್ನೈ: ಕಾಂಜೀಪುರದ  ಹೆದ್ದಾರಿಯಲ್ಲಿ ಕಾರು ತಡೆದು ನಿಲ್ಲಿಸಿ 4.5 ಕೋಟಿ ರೂ. ದರೋಡೆ  ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕೇರಳೀಯರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ  ದರೋಡೆ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ ಕೊಲ್ಲಂ, ಪಾಲಕ್ಕಾಡ್, ತೃಶೂರು ನಿವಾಸಿಗಳಾದ ಸಂತೋಷ್, ಸುಜಿತ್‌ಲಾಲ್, ಜಯನ್, ಮುರುಗನ್, ಕುಂಞುಮೊಹಮ್ಮದ್ ಎಂಬಿವರನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಹಳೆಯ ಬಟ್ಟೆಗಳ ಮಧ್ಯೆ ಲಭಿಸಿದ  ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರಿಗೆ ಅಭಿನಂದನೆ

ಮುಳ್ಳೇರಿಯ: ಹಳೆಯ ಸಾಮಗ್ರಿಗಳನ್ನು  ಸಂಗ್ರಹಿಸುವ ಮಧ್ಯೆ ಲಭಿಸಿದ ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಮಾದರಿಯಾಗಿದ್ದಾರೆ. ಕಾರಡ್ಕ ಪಂಚಾಯತ್‌ನ  ೬ನೇ ವಾರ್ಡ್ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯ ರಾದ ತಾರಾ, ಮೀನಾಕ್ಷಿ ಕಡೆಂಗೋಡು ಪ್ರಾಮಾಣಿಕತೆ ಮೆರೆದು ಮಾದರಿಯಾದವರು. ಇವರು ಮಲ್ಲಾವರ ನಿವಾಸಿ ಆನಂದ ಭಟ್‌ರ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿದ್ದರು. ಇದನ್ನು ತೆಗೆದುಕೊಂಡು ಹೋಗಿ ಸಂಗ್ರಹಣಾ ಕೇಂದ್ರದಲ್ಲಿ ಹಾಕುವ ವೇಳೆ  ಬಟ್ಟೆಗಳ ಮಧ್ಯೆ ೫೦೦೦ ರೂ. ಪತ್ತೆಯಾಗಿದೆ. ಕೂಡಲೇ ಇದನ್ನು ಮಲ್ಲಾ ವರದ ಆನಂದ …

ಎಫ್‌ಎಸ್‌ಇಟಿಒ ಕಾಲ್ನಡೆ ಜಾಥಾ ಉದ್ಘಾಟನೆ: ನಾಳೆ ಕುಂಬಳೆಯಲ್ಲಿ ಸಮಾಪ್ತಿ

ಪೈವಳಿಕೆ: ಕೇಂದ್ರ ಸರಕಾರದ ಜನ ವಿರೋಧಿ ನೀತಿ ಆರೋಪಿಸಿ, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಎಫ್‌ಎಸ್‌ಇಟಿಒ ಸಂಘಟನೆಯ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುವ ಕಾಲ್ನಡೆ ಜಾಥಾದಂತೆ ಇಂದು ಮತ್ತು ನಾಳೆ ಮಂಜೇಶ್ವರದ ವಿವಿಧ ಭಾಗಗಳಲ್ಲಿ ಸಂಚರಿಸುವ ಕಾಲ್ನಡೆ ಜಾಥಾವನ್ನು ನಿನ್ನೆ  ಪೈವಳಿಕೆ ನಗರದಲ್ಲಿ ಉದ್ಘಾಟಿಸಲಾ ಯಿತು. ಇಂದು ಮತ್ತು ನಾಳೆ ವಿವಿಧ ಕಡೆಗಳಲ್ಲಿ ಸಂಚರಿಸುವ ಜಾಥಾ ಕುಂಬಳೆಯಲ್ಲಿ ಸಮಾಪ್ತಿಗೊಳ್ಳ ಲಿದೆ.  ಪೈವಳಿಕೆ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ …

ಪೇಟೆ ಅಭಿವೃದ್ಧಿಗಾಗಿ ಕುಂಬಳೆ ಪಂಚಾಯತ್ ಆಡಳಿತ ಏನೂ ಕೈಗೊಂಡಿಲ್ಲವೆಂದು ಕೇಶವ ನಾಯ್ಕ್ ಆರೋಪ

ಕುಂಬಳೆ: ಪಂಚಾಯತ್  ಕುಂಬಳೆ ಪೇಟೆ ಅಭಿವೃದ್ಧಿಗಾಗಿ ಏನನ್ನೂ ನಡೆಸಿಲ್ಲವೆಂದು ಕುಂಬಳೆಯ  ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪೇಟೆಯ ಅಭಿವೃದ್ಧಿಯೆಂದರೆ ಸಂಚಾರ ಪರಿಷ್ಕಾರವಲ್ಲವೆಂದು ಬಸ್ ನಿಲ್ದಾಣವನ್ನು ಬದಿಯಡ್ಕ  ರಸ್ತೆಗೆ ಬದಲಿಸಿದ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು. ಚಿಕಿತ್ಸೆಗಾಗಿ ಮಂಗಳೂರು, ತಲಶ್ಶೇರಿಗೆ, ಕಲ್ಲಿಕೋಟೆಗೆ ತೆರಳುವ ರೋಗಿಗಳು ಸಹಿತದವರಿಗೆ ರೈಲ್ವೇ ಪ್ರಯಾಣಕ್ಕೆ  ಸಾರಿಗೆ ಪರಿಷ್ಕಾರ ಸಂಕಷ್ಟ ತಂದಿದೆಯೆಂದು ಅವರು ದೂರಿದರು. ಈಗ ಬಸ್‌ನಿಂದ ಇಳಿದು ರೈಲು ನಿಲ್ದಾಣಕ್ಕೆ ಬಹಳ ದೂರ ನಡೆಯಬೇಕಾಗಿ ಬರುತ್ತಿದೆ. …