ಜಿಲ್ಲಾ ಶಾಲಾ ಕ್ರೀಡಾ ಮೇಳ: ತಿರುವನಂತಪುರ ಜಿಲ್ಲೆಯ ನಾಗಾಲೋಟ; ಈಜು ಸ್ಪರ್ಧೆಯಲ್ಲಿ 7 ದಾಖಲೆ

ತಿರುವನಂತಪುರ: ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ 1287 ಅಂಕದೊAದಿಗೆ ತಿರುವನಂತಪುರ ಜಿಲ್ಲೆ ಚಾಂಪ್ಯನ್ ಪಟ್ಟದತ್ತ ಸಾಗುತ್ತಿದೆ. 146 ಚಿನ್ನ, 105 ಬೆಳ್ಳಿ, 126 ಕಂಚಿನ ಪದಕದೊಂದಿಗೆ ತಿರುವನಂತಪುರ ಜಿಲ್ಲೆ ಸಾಧನೆ ಮಾಡಿದೆ. ದ್ವಿತೀಯ ಸ್ಥಾನದಲ್ಲಿ ತೃಶೂರ್ (595 ಅಂಕ), ತೃತೀಯ ಸ್ಥಾನದಲ್ಲಿ ಪಾಲಕ್ಕಾಡ್ (541) ಅಂಕದೊAದಿಗೆ ಸೆಣಸಾಡುತ್ತಿದೆ. ಅಥ್ಲೆಟಿಕ್ಸ್ ಹೊರತಾಗಿ ಕ್ರೀಡಾ ಮೇಳದಲ್ಲಿ ತಿರುವನಂತಪುರ ತನ್ನ ಆದಿಪಥ್ಯವನ್ನು ಸ್ಥಾಪಿಸಿದೆ. ಗೇಮ್ಸ್ ವಿಭಾಗಗಳಲ್ಲಿ 727 ಅಂಕ (84 ಚಿನ್ನ, 51 ಬೆಳ್ಳಿ, 87 ಕಂಚು), ಈಜು ಸ್ಪರ್ಥೆಗಳಲ್ಲಿ 544 ಅಂಕ …

ಸ್ಥಳೀಯಾಡಳಿತ ಚುನಾವಣೆ: ಮಂಜೇಶ್ವರ ಪಂಚಾಯತ್‌ನ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಮಂಜೇಶ್ವರ: ಸೌಲಭ್ಯಗಳು ಅರ್ಹರಿಗೆ, ಭ್ರಷ್ಟಾಚಾರವಿಲ್ಲದ ಅಭಿವೃದ್ಧಿಗಾಗಿ ಎಸ್‌ಡಿಪಿಐಗೆ ಮತ ಚಲಾಯಿಸಿರಿ ಎಂಬ ಘೋಷಣೆಯೊಂದಿಗೆ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಂಜೇಶ್ವರ ಪಂಚಾಯತ್ ನ  ಜವಾಬ್ದಾರಿ ಹೊಂದಿರುವ ಅಶ್ರಫ್ ಬಡಾಜೆ ತಿಳಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅವರು ಪ್ರಕಟಿಸಿದರು. ಪಕ್ಷದ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು ಮಚ್ಚಂಪಾಡಿ ವಾರ್ಡ್‌ನಲ್ಲೂ, ಮಂಡಲ ಆರ್ಗನೈಸರ್ ಯಾಕೂಬ್ ಹೊಸಂಗಡಿ ಕಜೆಯಲ್ಲಿ ಸ್ಪರ್ಧಿಸಲಿದ್ದಾರೆ. ಪಂಚಾಯತ್ ಸಮಿತಿ ಸದಸ್ಯ …

ಶಶಿಕಲ ಕುಂಬಳೆ ಇವರಿಗೆ ಶಿಕ್ಷಕರತ್ನ ಪ್ರಶಸ್ತಿ ನಾಳೆ ಪ್ರದಾನ

ಕುಂಬಳೆ: ಇಲ್ಲಿನ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಶಿಕ್ಷಕಿ ಶಶಿಕಲಾ ಕುಂಬಳೆ ಇವರಿಗೆ ಮಂಗಳೂರು ಕಥಾಬಿಂದು ಪ್ರಕಾಶನ ಸಂಸ್ಥೆ ವತಿಯಿಂದ ಶಿಕ್ಷಕರತ್ನ ಪ್ರಶಸ್ತಿ ನಾಳೆ ಪ್ರದಾನ ಮಾಡಲಾಗುವುದು. ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಕಥೆ, ಕವನ ರಚನೆ, ಭಾಷಣ ಮೊದಲಾದವುಗಳಲ್ಲಿ ಮಾರ್ಗದರ್ಶನ ನೀಡಿ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಬಹಮಾನ ಗಳಿಸುವಂತೆ ಇವರು  ಮಾಡಿದ್ದಾರೆ. ಗಣಿತ ಮೇಳದಲ್ಲಿ ತೀರ್ಪುಗಾರರಾಗಿ ಪತ್ರಿಕೆಗಳಲ್ಲಿ ಲೇಖನವನ್ನು ಬರೆಯುವ ಹವ್ಯಾಸವಿಟ್ಟುಕೊಂಡಿದ್ದಾರೆ. ಈಗಾಗಲೇ ಇವರಿಗೆ ಚುಟುಕು, ಯುಗ ಆಚಾರ್ಯ ಜಿ.ವಿ. ಅರಸ್ ಪ್ರಶಸ್ತಿ, ಕಾಸರಗೋಡು ಕವಿ …

ಎಂ. ಗಂಗಾಧರ ಭಟ್ ಸಂಸ್ಮರಣೆ 28ರಂದು

ಕಾಸರಗೋಡು: ಕವಿ, ಅಧ್ಯಾಪಕ, ಪತ್ರಕರ್ತ, ಕನ್ನಡ ಹೋರಾಟಗಾರ ದಿ| ಎಂ. ಗಂಗಾಧರ ಭಟ್ ಇವರ ಸಂಸ್ಮರಣೆ ಈ ತಿಂಗಳ 28ರಂದು ಸಂಜೆ 4 ಗಂಟೆಗೆ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ. ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೈ. ಸತ್ಯನಾರಾಯಣ, ಪ್ರೊ. ಪಿ.ಎನ್. ಮೂಡಿತ್ತಾಯ ನುಡಿನಮನ ಸಲ್ಲಿಸುವರು.

ಬದಿಯಡ್ಕ ಪಂಚಾಯತ್‌ಗೆ 28ರಂದು ಸಿಪಿಎಂನಿಂದ ಬಹುಜನ ಮಾರ್ಚ್ : ನಾಳೆ ವಾಹನ ಪ್ರಚಾರ ಜಾಥಾ

ಬದಿಯಡ್ಕ: ಬದಿಯಡ್ಕ ಪಂಚಾ ಯತ್‌ನಲ್ಲಿ ಅಭಿವೃದ್ಧಿ ಕುಂಠಿತಗೊಂ ಡಿರುವುದನ್ನು ಪ್ರತಿಭಟಿಸಿ ಈ ತಿಂಗಳ 28ರಂದು ಪಂಚಾ ಯತ್‌ಗೆ ಬಹುಜನ ಮಾರ್ಚ್ ಹಾಗೂ ಧರಣಿ ನಡೆಸಲು ಸಿಪಿಎಂ ಪಂಚಾಯತ್ ಸಮಿತಿ ತೀರ್ಮಾನಿಸಿ ದೆ. ಇದರ ಪ್ರಚಾರಾರ್ಥ ನಾಳೆ ಸಿಪಿಎಂ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ವಾಹನ ಜಾಥಾ ನಡೆಸಲಿದೆ.  ನಾಳೆ  ಬೆಳಿಗ್ಗೆ 9.30 ಕ್ಕೆ ಕನ್ಯಪ್ಪಾಡಿ ಪೇಟೆಯಲ್ಲಿ ಏರಿಯಾ ಸೆಕ್ರೆಟರಿ  ಸಿ.ಎ. ಸುಬೈರ್ ಜಾಥಾವನ್ನು ಉದ್ಘಾಟಿಸುವರು.   ಐದು ವರ್ಷಗಳಿಂದ ಪಂಚಾಯತ್‌ನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸಲು ಆಡಳಿತ ಸಮಿತಿಗೆ …

ವಿರೋಧದ ನಡುವೆ ಪಿಎಂಶ್ರೀಗೆ ಸಹಿ ಹಾಕಿದ ಸರಕಾರ: ಎಡರಂಗದಲ್ಲಿ ಭಿನ್ನಮತ; ತುರ್ತು ಸೆಕ್ರೆಟರಿಯೇಟ್ ಸಭೆ ಕರೆದ ಸಿಪಿಐ

ತಿರುವನಂತಪುರ: ಎಡರಂಗದ ಘಟಕ ಪಕ್ಷವಾದ ಸಿಪಿಐಯ ಭಾರೀ ವಿರೋಧದ ನಡುವೆಯೇ ಪಿ.ಎಂ.ಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯ) ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದೆ. ಕೇರಳ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಕೆ. ವಾಸುಕಿಯವರು ದಿಲ್ಲಿಗೆ ತೆರಳಿ ಒಪ್ಪಂದ ಪತ್ರಕ್ಕೆ ವಿದ್ಯುಕ್ತವಾಗಿ ಸಹಿ ಹಾಕಿದ್ದಾರೆ. ಈ ಯೋಜನೆಗೆ ಸಿಪಿಐ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಮಾತ್ರವಲ್ಲ ರಾಜ್ಯ ಸಚಿವ ಸಂಪುಟ ಸಭೆ ಮತ್ತು ಎಡರಂಗ ಸಭೆಯಲ್ಲೂ ಸಿಪಿಐ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಅದನ್ನು ಕಡೆಗಣಿಸಿ  …

ಚಿಕ್ಕಬಳ್ಳಾಪುರದಲ್ಲಿ ವಾಹನ ಅಪಘಾತ: ಪಟ್ಲ ನಿವಾಸಿ ಮೃತ್ಯು

ಕಾಸರಗೋಡು:  ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಧೂರು ಬಳಿಯ ನಿವಾಸಿ ಯುವತಿ ಮೃತಪಟ್ಟಿದ್ದಾರ. ಮಧೂರು ಬಳಿಯ ಪಟ್ಲ ನಿವಾಸಿ ಸಫಿಯುಲ್ಲ ಎಂಬವರ ಪತ್ನಿ ಫಾತಿಮ ಬೀಗಂ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಮಂಗಳವಾರ ಸಂಜೆ  ಫಾತಿಮ ಬೀಗಂ  ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.  ಇದರಿಂದ ಗಂಭೀರ ಗಾಯಗೊಂಡ ಫಾತಿಮಾ ಬೀಗಂ ತಕ್ಷಣ ಮೃತಪಟ್ಟಿದ್ದಾರೆ.  ಎಂ.ಜಿ. ಅಬ್ದುಲ್ಲ-ಖದೀಜ ದಂಪತಿಯ ಪುತ್ರಿಯಾದ ಮೃತರು ಮಕ್ಕಳಾದ ಹುಸೈನ್, ಇಫ್ರತ್, ಅನ್ಸಿಯಾಭಾನು, ಸಹೋದರ-ಸಹೋದರಿಯರಾದ ಹನೀಫ,ಮುಸ್ತಫ, ಉದೈಫ್, ಬಾತಿಷ, …

ಸಿಪಿಎಂ ನೇತಾರ ಪಕ್ಷದ ಕಚೇರಿಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ಸಿಪಿಎಂ ನೇತಾರನೋರ್ವ ಪಕ್ಷದ ಕಚೇರಿಯೊಳಗೆ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದಯಂಪೇ ರೂರ್ ನೋರ್ತ್ ಲೋಕಲ್ ಕಮಿಟಿ ಮಾಜಿ ಕಾರ್ಯದರ್ಶಿ ಟಿ.ಎಸ್. ಪಂಕಜಾಕ್ಷನ್ ಸಾವಿಗೀಡಾದ ವ್ಯಕ್ತಿ. ಉದಯಂಪೇರೂರ್ ನಡಕ್ಕಾವ್ ಲೋಕಲ್ ಕಮಿಟಿ ಆಫೀಸ್‌ನ  ವಾಚನಾಲಯದ ಕೊಠಡಿಯೊಳಗೆ ಮೃತದೇಹ ಪತ್ತೆಯಾಗಿದೆ. ಇಂದು ಬೆಳಿಗ್ಗೆ 6 ಗಂಟೆ ವೇಳೆ  ಪತ್ರಿಕೆ ವಿತರಕನಿಗೆ ಮೃತದೇಹ ಕಂಡುಬಂದಿದೆ.  ಆತ ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪರೇಶನ್‌ನ ನೌಕರನಾಗಿದ್ದ ಪಂಕಜಾಕ್ಷನ್ …

ಮಂಜೇಶ್ವರ ಠಾಣೆ ನೂತನ ಸಿ.ಐಯಾಗಿ ಅಜಿತ್ ಕುಮಾರ್ ಪಿ. ಅಧಿಕಾರ ಸ್ವೀಕಾರ

ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ನೂತನ ಇನ್ಸ್ಫೆಕ್ಟರ್ ಆಗಿ ಅಜಿತ್ ಕುಮಾರ್. ಪಿ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿ ದ್ದಾರೆ. ಈ ಹಿಂದೆ ಇವರು ಕಾಞಂ ಗಾಡ್ ಠಾಣೆಯಲ್ಲಿ ಕರ್ತವ್ಯದಲಿ ್ಲದ್ದರು. ಮಂಜೇಶ್ವರ ಠಾಣೆಯಲ್ಲಿ ಈ ಹಿಂದೆ ಸಿ.ಐ ಯಾಗಿದ್ದ ಅನೂಪ್ ಕುಮಾರ್ ಕಾಞಂಗಾಡ್‌ಗೆ ವರ್ಗಾವಣೆ ಗೊಂಡಿದ್ದಾರೆ. ಅಲ್ಲದೆ ಮಂಜೇ ಶ್ವರ ಠಾಣೆಯಲ್ಲಿ ನೂತನ ಎಸ್.ಐ ಆಗಿ ವೈಷ್ಣವ್ ಹಾಗೂ ಪ್ರೊಬೇ ಶನಲ್ ಎಸ್.ಐ ಆಗಿ ಶಬರಿಕೃಷ್ಣ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ತೃಶೂರು: ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ತೃಶೂರು ಎರುಮಪೆಟ್ಟಿ ಎಂಬಲ್ಲಿ ಸಂಭವಿಸಿದೆ. ಆದೂರ್ ಕಂಡೇರಿವಳಪ್ಪಿಲ್ ಉಮ್ಮರ್ -ಮುಫೀದ ದಂಪತಿಯ ಪುತ್ರ ಮಹಮ್ಮದ್ ಶಹಲ್ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಮಧ್ಯೆ ಬಾಟ್ಲಿಯ ಮುಚ್ಚಳವನ್ನು ಮಗು ನುಂಗಿರುವುದಾಗಿ ತಿಳಿದುಬಂದಿದೆ. ಉಸಿರಾಟ ಸಾಧ್ಯವಾಗದೆ ಚಡಪಡಿಸುತ್ತಿದ್ದ ಮಗುವಿನ ಬಾಯಿ ತೆರೆದು  ಮನೆಯವರು ನೋಡಿದಾಗ ಮುಚ್ಚಳ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ.   ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಮಗುವಿನ ಜೀವ ರಕ್ಷಿಸಲಾಗಲಿಲ್ಲ.