ಕೇರಳ ಹೈಕೋರ್ಟ್‌ಗಾಗಿ 1000 ಕೋಟಿ ರೂ. ವೆಚ್ಚದಲ್ಲಿ  ಜ್ಯುಡೀಶಿಯಲ್ ಸಿಟಿ ನಿರ್ಮಾಣ

ತಿರುವನಂತಪುರ: ಕೇರಳ ಹೈಕೋರ್ಟ್‌ಗಾಗಿ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಜ್ಯುಡೀಶಿಯಲ್ ಸಿಟಿ (ನ್ಯಾಯಾಂಗ ನಗರ) ಸಮುಚ್ಚಯ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಹೈಕೋರ್ಟ್ ಈಗ ನೆಲೆಗೊಂಡಿರುವ ಜಾಗದಲ್ಲಿ ಅದನ್ನು ನವೀಕರಿಸಲು ಈಗ ಅಗತ್ಯದಷ್ಟು ಸ್ಥಳ ಸೌಕರ್ಯವಿಲ್ಲ. ಅದರಿಂದಾಗಿ ಕಲ್ಯಾಶ್ಶೇರಿಯಲ್ಲಿ ಹೈಕೋರ್ಟ್‌ಗಾಗಿ ಜ್ಯುಡೀಶಿಯಲ್ ಸಿಟಿ ಎಂಬ ಯೋಜನೆಯಡಿ ಈ ಹೊಸ ನ್ಯಾಯಾಲಯ ಸಮುಚ್ಚಯವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಪಿ. ರಾಜೀವ್ ತಿಳಿಸಿದ್ದಾರೆ. ಪ್ರಸ್ತುತ …

ಕೆ.ಪಿ. ಕುಂಞ ಕಣ್ಣನ್ ಸಂಸ್ಮರಣೆ

ಪೈವಳಿಕೆ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಕೆ. ಪಿ. ಕುಂಞಕಣ್ಣನ್ ರ ಒಂದನೇ ಸಂಸ್ಮರಣಾ ವಾರ್ಷಿಕ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್ ಉದ್ಘಾಟಿಸಿದರು. ಶಾಜಿ ಎನ್.ಸಿ. ಸಂಸ್ಮರಣಾ ಭಾಷಣ ಮಾಡಿದರು. ಶಿವರಾಮ ಶೆಟ್ಟಿ ಸ್ವಾಗತಿಸಿದರು. ಎಡ್ವರ್ಡ್ ವಂದಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.

ಚೆಂಗಳದಲ್ಲಿ ಕಾರಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸಾವು: ಇನ್ನೋರ್ವ ಪೊಲೀಸ್‌ಗೆ ಗಾಯ

ಕಾಸರಗೋಡು: ಟಿಪ್ಪರ್ ಲಾರಿ  ಕಾರಿಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ದಾರುಣವಾಗಿ ಸಾವನ್ನಪ್ಪಿ, ಕಾರು ಚಲಾಯಿಸುತ್ತಿದ್ದ  ಇನ್ನೋರ್ವ ಪೊಲೀಸ್ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿವೈಎಸ್ಪಿ ನೇತೃತ್ವದ ಮಾದಕದ್ರವ್ಯ ಪತ್ತೆ ಕಾರ್ಯಾಚರಣೆಯ ಘಟಕವಾದ ಡೆನ್ಸೆಫ್  ಸ್ಕ್ವಾಡ್‌ನ  ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚೆರ್ವತ್ತೂರು ಸಮೀಪದ ಕಾರ್ಯಾಂಗೋಡು ಮೈಯಿಚ್ಚ ನಿವಾಸಿ ಸಜೇಶ್ ಕೆ.ಕೆ (40) ಸಾವನ್ನಪ್ಪಿದ ದುರ್ದೈವಿ. ಕಾರು ಚಲಾಯಿಸುತ್ತಿದ್ದ ಅದೇ ಸ್ಕ್ವಾಡ್‌ನ ಸೀನಿಯರ್ ಸಿವಿಲ್ ಪೊಲೀಸ್ …

ಮಂಜೇಶ್ವರ ಸಹಿತ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪೋಕ್ಸೋ ಪ್ರಕರಣ ದಾಖಲು

ಕಾಸರಗೋಡು: ಜಿಲ್ಲೆಯ ಚಿಟ್ಟಾರಿಕ್ಕಲ್, ಮಂಜೇಶ್ವರ, ಬೇಡಗಂ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪೋಕ್ಸೋ ಕೇಸುಗಳನ್ನು ದಾಖಲಿಸಲಾಗಿದೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ  ಪ್ರಾಯಪೂರ್ತಿಯಾಗದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಎರಡು ಕೇಸುಗಳನ್ನು ದಾಖಲಿಸಲಾಗಿದೆ. ಈ ಎರಡು ಪ್ರಕರಣಗಳಲ್ಲೂ ಆರೋಪಿಯಾದ ಕಣ್ಣನ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ೧೨ ವರ್ಷ ಪ್ರಾಯದ ಬಾಲಕನಿಗೆ 2021ರಲ್ಲಿ ಹಾಗೂ ಸ್ನೇಹಿತನಾದ ಇನ್ನೋರ್ವ ಬಾಲಕನಿಗೆ 2024ರ ಕ್ರಿಸ್ಮಸ್ ದಿನದಂದು ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. …

ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ  ಭಾರತಾಂಬೆ ಚಿತ್ರ ಪ್ರದರ್ಶಿಸುವುದಿಲ್ಲ-ರಾಜ್‌ಭವನ್

ತಿರುವನಂತಪುರ:  ರಾಜ್‌ಭವನ ದಲ್ಲಿ ಈ ಹಿಂದೆ ಹಲವು  ಸರಕಾರಿ ಮಟ್ಟದ ಕಾರ್ಯಕ್ರಮದಲ್ಲಿ ಕೈಯಲ್ಲಿ ಕೇಸರಿ ಬಣ್ಣದ ಧ್ವಜ ಹಿಡಿದ ಭಾರತಾಂಬೆಯ ಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನಡೆಸಿರುವುದು ಭಾರೀ ವಿವಾದಗಳಿಗೆ ದಾರಿಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ ೨೮ರಂದು ರಾಜ್ ಭವನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿ ಸುವ ಕಾರ್ಯಕ್ರಮದಲ್ಲಿ ಭಾರತಾಂ ಬೆಯ ಚಿತ್ರ ಪ್ರದರ್ಶಿಸದಿ ರಲು ರಾಜ್ ಭವನ್ ತೀರ್ಮಾನಿಸಿದೆ.   ರಾಜ್ ಭವನ ಮತ್ತು ರಾಜ್ಯಪಾಲರಿಗೆ ಸಂಬಂಧಿಸಿದ  ಸುದ್ದಿಗಳು, ನಿಯತಕಾಲಿಕ,ಲೇಖನ ಇತ್ಯಾದಿ ವಿಷಯಗಳನ್ನು ಒಳಗೊಂಡ ರಾಜಹಂಸಿ ಎಂಬ ಪುಸ್ತಕವನ್ನು …

ವಿದ್ಯುತ್ ತಂತಿ ಮೇಲೆ ಬಿದ್ದ ಮಡಲು ತೆಗೆಯುತ್ತಿದ್ದ ವೇಳೆ ಬಾವಿಗೆ ಬಿದ್ದು ಯುವಕ ದಾರುಣ ಸಾವು

ಕಾಸರಗೋಡು: ವಿದ್ಯುತ್ ಸರ್ವೀಸ್ ತಂತಿ ಮೇಲೆ ಬಿದ್ದಿದ್ದ ಮಡಲನ್ನು ತೆಗೆಯುತ್ತಿದ್ದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉದುಮ ವಲಿಯವಳಪ್ಪಿನ ನಿವಾಸಿ ಹಾಗೂ ಉದುಮ ನಾಲಾಂವಾದುಕ್ಕಲ್ ರಸ್ತೆ ಬಳಿಯ ಹೊಟೇಲೊಂದರ ಮಾಲಕರಾದ ಅರವಿಂದನ್- ಅಂಬುಜಾಕ್ಷಿ ದಂಪತಿಯ ಏಕ ಪುತ್ರ ಅಶ್ವಿನ್ ಅರವಿಂದ್ (18) ಸಾವನ್ನಪ್ಪಿದ ದುರ್ದೈವಿ ಯುವಕ. ಮನೆ ಪಕ್ಕದ ಬಾವಿ ಮೇಲೆ ಹಾದು ಹೋಗುತ್ತಿದ್ದ ವಿದ್ಯುತ್ ಸರ್ವೀಸ್ ತಂತಿ ಮೇಲೆ ತೆಂಗಿನ ಮರದಿಂದ ಮಡಲೊಂದು ಬಿದ್ದಿತ್ತು. ಅದನ್ನು ಕಂಡ ಅಶ್ವಿನ್ ನಿನ್ನೆ ಬಾವಿಕಟ್ಟೆ …

ಔಷಧ ಸಾಮಗ್ರಿಗಳ ಸುಂಕ ಶೇ.100ಕ್ಕೇರಿಸಿದ ಟ್ರಂಪ್

ನವದೆಹಲಿ: ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಮೇಲೆ ಸುಂಕ ದಾಳಿ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಮೆರಿಕಕ್ಕೆ ಪ್ರವೇಶಿಸುವ ಎಲ್ಲಾ ಬ್ರಾಂಡಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಸುಂಕವನ್ನು ಶೇ. 100ಕ್ಕೇರಿಸಿ ಹೊಸ ಅಧಿಸೂಚನೆ ಜ್ಯಾರಿಗೊಳಿಸಿದ್ದಾರೆ. ಈ ಸುಂಕವು ಅಕ್ಟೋಬರ್ 1ರಿಂದ ಜ್ಯಾರಿಗೆ ಬರಲಿದೆ. ಆದರೆ ಔಷಧ ಕಂಪೆನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರೆ ಅವುಗಳು ಸುಂಕಗಳಿಂದ ಪ್ರಭಾವಿತವಾಗುವುದಿ ಲ್ಲವೆಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್‌ರ ಈ ಸುಂಕ ಸಮರ ಭಾರತ ಮಾತ್ರವಲ್ಲ …

ಗೇಟ್ ತಲೆಗೆ ಬಿದ್ದು ಮಗು ಮೃತ್ಯು

ಆಲಪ್ಪುಳ: ಗೇಟ್ ತಲೆಗೆ ಬಿದ್ದು ಒಂದೂವರೆ  ವರ್ಷದ ಮಗುವೊಂದು ಮೃತಪಟ್ಟ ಘಟನೆ ಆಲಪ್ಪುಳದಿಂದ ವರದಿಯಾಗಿದೆ. ವೈಕಂ ಟಿವಿಪುರಂ ಮಣಿಮಂದಿರ ನಿವಾಸಿ ಅಶಿಲ್ ಮಣಿಯಾನ್-ಅಶ್ವತಿ ದಂಪತಿಯ ಪುತ್ರ ಋದವ್ ಮೃತಪಟ್ಟ ಮಗುವಾಗಿದೆ. ಕಳೆದ ಸೋಮವಾರ ಆಲಪ್ಪುಳ ಪಳವೀಡ್ ಎಂಬಲ್ಲಿರುವ ಅಶ್ವತಿಯ ಮನೆಯಲ್ಲಿ ದುರ್ಘಟನೆ ಸಂಭವಿಸಿತ್ತು.  ಗೇಟ್ ಮುಚ್ಚುತ್ತಿದ್ದಂತೆ ಅದು ಮಗುವಿನ ತಲೆಗೆ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಮಗುವನ್ನು ವಂಡಾನಂ ಮೆಡಿಕಲ್ ಕಾಲೇಜು ಆಸತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.

ಖೋಟಾನೋಟಿನಿಂದ ವಂಚಿತರಾಗದಿರಲು ಸೂಚನೆ: 200 ರೂ. ಖೋಟಾ ನೋಟು ವ್ಯಾಪಕ

ಕಾಸರಗೋಡು: ಜಿಲ್ಲೆಯಲ್ಲಿ ವ್ಯಾಪಕವಾಗಿ 200 ರೂ.ಗಳ ಖೋಟಾ ನೋಟು ಚಲಾವಣೆ ಮಾಡಲಾಗುತ್ತಿದೆಯೆಂಬ ಮಾಹಿತಿ ಲಭಿಸಿದೆ. ಬೇಡಗಂ ಪೊಲೀಸ್  ಠಾಣೆ ವ್ಯಾಪ್ತಿಯ ಕುಂಟಂಗುಳಿಯಲ್ಲಿ ಖೋಟಾನೋಟು ವ್ಯಾಪಕವಾಗಿ ಈಗ ಚಲಾವಣೆಯಲ್ಲಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಸಲಿ ನೋಟು ಎಂದೇ ಕಂಡುಬರುವ ಈ ಖೋಟಾ ನೋಟುಗಳಿಗೆ ಹಲವಾರು ಮಂದಿ ಈಗಾಗಲೇ ವಂಚಿತರಾಗಿದ್ದಾರೆ. ಇದೇ ವೇಳೆ 200 ರೂ.ಗಳ ಚಲಾವಣೆಯಲ್ಲಿರುವ ನೋಟು ಫ್ಯಾನ್ಸಿ ನೋಟಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ. ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲಾಗಿ ಮನೋರಂಜನ್ ಬ್ಯಾಂಕ್ ಆಫ್ ಇಂಡಿಯಾ …

ಅವೈಜ್ಞಾನಿಕವಾಗಿ ತಾಜ್ಯ ಉಪೇಕ್ಷೆ ಸ್ಕ್ವಾಡ್‌ನಿಂದ ದಂಡ

ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಉಯಿತ್ತಡ್ಕದಲ್ಲಿ ಕಸಾಯಿಖಾನೆಯ ತ್ಯಾಜ್ಯದಿಂದಾಗಿ ದುರ್ವಾಸನೆ ಇದೆ ಎಂಬ ದೂರಿನಂತೆ ತಪಾಸಣೆ ನಡೆಸಿದಾಗ ತ್ಯಾಜ್ಯವನ್ನು ಸ್ವಂತ ಹಿತ್ತಿಲಲ್ಲಿ ಅವೈಜ್ಞಾನಿಕವಾಗಿ ಉಪೇಕ್ಷಿ ಸಿರುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕಾಗಿ ಸ್ಥಳದ ಮಾಲಕನಿಗೆ 15,000 ರೂ. ದಂಡ ಹೇರಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ನಿರ್ದೇಶಿಸಲಾಗಿದೆ. ಸಂಸ್ಥೆ ಹಾಗೂ ಪರಿಸರವನ್ನು ಶುಚಿಯಾಗಿರಿಸ ದಿರುವುದಕ್ಕೆ ಅಡೂರಿನ ಜನರಲ್ ಸ್ಟೋರ್, ಗ್ರೋಸರಿ, ಅಣಂಗೂರಿನ ಮಾರ್ಟ್, ಹೋಟೆಲ್, ಕ್ವಾರ್ಟರ್ಸ್, ಪುಲ್ಲೂರಿನ ಸೂಪರ್ ಮಾರ್ಕೆಟ್, ಬೇಕರಿ, ವಿದ್ಯಾನಗರ ಅಪಾರ್ಟ್‌ಮೆಂಟ್ ಎಂಬೀ ಸಂಸ್ಥೆಗಳ ಮಾಲಕರಿಗೆ 22,000 ರೂ. ದಂಡ …