ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ವಿಜಿಲೆನ್ಸ್‌ನಿಂದ ತನಿಖೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ಆಡಳಿತ ಸಮಿತಿ ಒತ್ತಾಸೆ ನೀಡುತ್ತಿದೆ ಎಂಬ ಆರೋಪದ ಕುರಿತು ವಿಜಿಲೆನ್ಸ್ ತನಿಖೆ ಆರಂಭಗೊಂಡಿದೆ. ವಿಜಿಲೆನ್ಸ್ ಡಿವೈಎಸ್‌ಪಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ತಲುಪಿದ ವಿಜಿಲೆನ್ಸ್ ತಂಡ ಕಟ್ಟಡನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ನೀಡಿದ ಅನುಮತಿಯ ಕುರಿತಾದ ಕಡತಗಳನ್ನು ಪರಿಶೀಲಿಸಿದೆ. ಮಾತ್ರವಲ್ಲದೆ ಹೆಚ್ಚಿನ ತನಿಖೆಗೆ ಅಗತ್ಯವುಳ್ಳ ಕಡತಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಕ್ಕೆಡೆಯಾದ ಕುಂಬಳೆ ಪೇಟೆಯ ಕೆಲವು ಕಟ್ಟಡಗಳನ್ನು ಅಳತೆ ಮಾಡಿ ವಿಜಿಲೆನ್ಸ್ ತಂಡ ಪರಿಶೀಲಿಸಿದೆ. ಕುಂಬಳೆ ಪಂಚಾಯತ್ …

ಒಂಭತ್ತು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ತಿರುವನಂತಪುರ: ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ 9 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಘೋಷಿಸಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಭಾರೀ ಬಿರುಗಾಳಿ, ಸಿಡಿಲು, ಮಿಂಚು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂದು ಕೇರಳ, ಕರ್ನಾಟಕ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ

ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರಕಾರ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ ಹಣ ಹಾಗೂ ಮೊಬೈಲ್ ಫೋನ್ ನೀಡಿ ಅವರ ನಾಮಪತ್ರ ವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆಯೆಂದು ಆರೋಪಿಸಿ ನೀಡಲಾದ ದೂರಿನಂತೆ ಪೊಲೀಸರು ದಾಖಲಿಸಿಕೊಂಡಿದ್ದ ಕೇಸನ್ನು ರದ್ದುಪಡಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ  ನೀಡಿದ್ದ ತೀರ್ಪಿನ ವಿರುದ್ಧ ಕೇರಳ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಅಂದು ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ ಎರಡು ಲಕ್ಷ ರೂ. ಹಾಗೂ 8,300 ರೂ. ಮೌಲ್ಯದ ಮೊಬೈಲ್ …

ಮುಖ್ಯಮಂತ್ರಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ-ಮುಲ್ಲಪ್ಪಳ್ಳಿ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದಲ್ಲಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆಂದು ಕಾಂಗ್ರೆಸ್ ನೇತಾರ ಮುಲ್ಲಪಳ್ಳಿ ರಾಮಚಂದ್ರನ್ ಆರೋಪಿಸಿದ್ದಾರೆ. ಮೂರನೇ ಬಾರಿಯೂ ಅಧಿಕಾರಕ್ಕೇರ ಬಹುದೆಂಬ ವ್ಯಾಮೋಹದಿಂದ ಬಹುಸಂಖ್ಯಾತ ಕೋಮುವಾದವನ್ನು ಪ್ರೋತ್ಸಾಹಿಸುತ್ತಿರುವುದಾಗಿಯೂ ಅವರು ಆರೋಪಿಸಿದರು. ಕಾಂಗ್ರೆಸ್ ನೇತಾರನಾಗಿದ್ದ ಕೆ.ಪಿ.ಕುಂಞಿ ಕಣ್ಣನ್‌ರ ಪ್ರಥಮ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯುವತಿಯರನ್ನು ಶಬರಿಮಲೆಗೆ ಪ್ರವೇಶಿಸಲು ಮುಂದಾದ ವ್ಯಕ್ತಿಯೇ  ಜಾಗತಿಕ ಅಯ್ಯಪ್ಪ ಸಂಗಮ ನಡೆಸುತ್ತಿರುವುದರ ಪ್ರಾಧಾನ್ಯತೆಯೇ ನೆಂದೂ  ಮುಲ್ಲಪ್ಪಳ್ಳಿ ಪ್ರಶ್ನಿಸಿದರು. ಕೋಮು ಧ್ರುವೀಕ ರಣದ ವಿಷಯ ದಲ್ಲಿ ಪಿಣರಾಯಿ  ಹಾಗೂ ಮೋದಿ ಸಮಾನರು …

ಮೌಲ್ಯಗಳನ್ನರಿತು ನಡೆಸುವ ಆಚರಣೆಗಳು ಬೇಕು-ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ

ಕಾಸರಗೋಡು: ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಆಚರಣೆಗಳ ಹಿಂದೆಯೂ ಜೀವನ ಮೌಲ್ಯಗಳು, ಬದುಕಿನ ಶ್ರೇಯಸ್ಸ್ಸಿನ ಶಕ್ತಿ ಅಡಗಿದೆ. ಬಹು ವೈಶಿಷ್ಟ್ಯದ ನಮ್ಮ ಸಂಸ್ಕೃತಿ ನಮ್ಮ ಪ್ರತಿಬಿಂಬಗಳಾಗಿದ್ದು, ಸಂಸ್ಕೃತಿಯನ್ನು ತಿರುಚಿ ವಿಕೃತಗೊಳಿಸುವುದರಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯು ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾಸರಗೋಡು ಪೇಟೆ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಆಯೋಜಿಸಿದ್ದ ಕಾಸರಗೋಡು ದಸರಾ ಕಾರ್ಯಕ್ರಮವನ್ನು …

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಪುಂಡೂರು: ಯಕ್ಷಗಾನ ಕಲಾವಿದ ಹಾಗೂ ಪುಂಡೂರು ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪರಯಂಕೋಡು ಸುಬ್ರಹ್ಮಣ್ಯ ಭಟ್ (87) ನಿಧನರಾದರು. ಕೋಟೂ ರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆ ದರು. ಇವರ ಪತ್ನಿ ಲಲಿತಾ ಎಸ್ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಜೇಶ್ವರಿ ಭಟ್, ಶೈಲಜಾ ಭಟ್, ಅಳಿಯ ಪ್ರಕಾಶ ಭಟ್ ಆರ್ಲಪದವು, ಸೊಸೆ ಕೀರ್ತಿ ಭಟ್, ಬೆಂಗಳೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪುತ್ರ ಗಿರೀಶ್ ಭಟ್, ಅಳಿಯಯಕ್ಷಗಾನ ಕಲಾವಿದ ಹಾಗೂ …

ಕುಂಬ್ಡಾಜೆ ಪಂ.ನಲ್ಲಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.

ಕಾಸರಗೋಡು: ಕುಂಬ್ಡಾಜೆ ಪಂಚಾಯತ್‌ನ ಎ.ಪಿ ಸರ್ಕಲ್-ಗೋಸಾಡ-ಬೆಳಿಂಜ ರಸ್ತೆ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳ ಆಡಳಿತಾನುಮತಿ ಲಭಿಸಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ. 2025-26ರ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವಂತೆ  ಆಗ್ರಹಿಸಿ ಶಾಸಕ ಸಲ್ಲಿಸಿದ ಮನವಿಯ ಆಧಾರದಲ್ಲಿ ಈ ಮೊತ್ತ ಮಂಜೂರು ಮಾಡಲಾಗಿದೆ. 4.4 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಶೀಘ್ರ ತಾಂತ್ರಿಕ ಅನುಮತಿ ಲಭ್ಯಗೊಳಿಸಿ ಟೆಂಡರ್ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಹಲವು ವರ್ಷಗಳಿಂದ ಶೋಚನೀ ಯಾವಸ್ಥೆಯಲ್ಲಿರುವ ಈ ರಸ್ತೆಯಲ್ಲಿ ಸಂಚಾರ ಸುಗಮಗೊಳ್ಳಲಿದೆ.

ಪಂಜುರ್ಲಿ ದೈವ ಪಾತ್ರಿ ನಿಧನ

ಉಪ್ಪಳ: ಬೇಕೂರು ನಿವಾಸಿ, ಪಂಜುರ್ಲಿ ದೈವದ ಪಾತ್ರಿ ಸುಂದರ (85) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಅಡ್ಕ ಶ್ರೀ ಉಳ್ಳಾಲ್ತಿ ಬಲ್ಲಾರ ಅಣ್ಣಪ್ಪ ಪಂಜುರ್ಲಿ ಧೂಮಾವತಿ ದೈವಸ್ಥಾನ ಪರಂಕಿಲ ಇಲ್ಲಿ ಪಂಜುರ್ಲಿ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮಕ್ಕಳಾದ  ಸದಾನಂದ, ಸುನೀತಾ, ರೇಖಾ, ಸೊಸೆ ಮಮತಾ, ಅಳಿಯ ಶ್ರೀನಿವಾಸ, ಸಹೋದರ ರತ್ನಾಕರ, ಕೃಷ್ಣ, ಸಹೋದರಿ ಕಮಲ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪತ್ನಿ ಕಮಲ, ಪುತ್ರ ಶಿವಪ್ಪ, ಸೊಸೆ ಶೈಲಜ, ಅಳಿಯ ದಿನೇಶ್ ಈ ಹಿಂದೆ ನಿಧನಹೊಂದಿದ್ದಾರೆ.

ಮಂಜೇಶ್ವರ ಅಂಚೆ ಕಚೇರಿಗೆ ಬೀಡಿ ಕಾರ್ಮಿಕರ ಸಂಘಟನೆಯಿಂದ ಮಾರ್ಚ್

ಮಂಜೇಶ್ವರ: ಮಂಜೇಶ್ವರ ಏರಿಯಾ ಬೀಡಿ ಕಾರ್ಮಿಕರ ಯೂನಿಯನ್ (ಸಿ ಐ ಟಿ ಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರನ್ನು ಸಂರಕ್ಷಿಸಬೇಕು, ಬೀಡಿ ಕಾರ್ಮಿ ಕರನ್ನು ಇಎಸ್‌ಐ ಯೋಜನೆಯಲ್ಲಿ ಒಳಗೊಳ್ಳಿಸಬೇಕು, ಬೀಡಿ ಸಿಗಾರ್ ಕಾನೂನನ್ನು ಪುನಸ್ಥಾಪಿಸಬೇಕು, ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನೆ ನಿಗದಿಪಡಿಸಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಕಚೇರಿಯಾದ ಮಂಜೇಶ್ವರ ಪೋಸ್ಟ್ ಆಫೀಸ್ ಗೆ ಪ್ರತಿಭಟನೆ ಮಾರ್ಚ್ ನಡೆಸಲಾಯಿತು.ಪ್ರತಿಭಟನೆ ಸಭೆಯನ್ನು ರೈತ ಸಂಘ ರಾಜ್ಯ ಸಮಿತಿ ಸದಸ್ಯ, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. …

ವಾಹನಗಳಿಗೆ ಅತೀವ ಸುರಕ್ಷಾ ನಂಬ್ರಪ್ಲೇಟ್ ಕಡ್ಡಾಯ ಕಾರುಗಳಿಗೆ 1000 ರೂ, ದ್ವಿಚಕ್ರ ವಾಹನಗಳಿಗೆ 500 ರೂ. ಶುಲ್ಕ ದರ

ಕಾಸರಗೋಡು: ರಾಜ್ಯದಲ್ಲಿ ಎಲ್ಲಾ  ವಾಹನಗಳಿಗೂ ಅತೀವ ಸುರಕ್ಷತಾ ನಂಬ್ರ ಪ್ಲೇಟ್ ಅಳವಡಿಕೆಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಮಾತ್ರವಲ್ಲ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನೂ ಜ್ಯಾರಿಗೊಳಿಸಿದೆ. ಹೀಗೆ ಅಳವಡಿಸಲಾಗುವ ಅತೀವ ಸುರಕ್ಷಣಾ ನಂಬ್ರ ಪ್ಲೇಟ್‌ಗಳಿಗೆ ಶುಲ್ಕವನ್ನೂ ನಿಗದಿಪಡಿಸಲಾಗಿದೆ. ಇದರಂತೆ ನಿಗದಿಪಡಿಸಲಾದ ಶುಲ್ಕ ಇಂತಿದೆ. ದ್ವಿಚಕ್ರವಾಹನಗಳು- 500ರೂ, ತ್ರಿಚಕ್ರ ವಾಹನಗಳು-೬೦೦ರೂ, ಫೋರ್ ವೀಲರ್-1000ರೂ., ಮೀಡಿಯಂ/ ಹೆವಿ ವಾಹನಗಳು- 1000 ರೂ, ಟ್ರಾಕ್ಟರ್ ಮತ್ತು ಕೃಷಿ ಅಗತ್ಯದ ವಾಹನಗಳ ಶುಲ್ಕವನ್ನು 1000 ರೂ.ಆಗಿ ನಿಗದಿ ಪಡಿಸಲಾಗಿದೆ. ಹೀಗೆ ಅಂಗೀಕರಿಸಲಾದ ದರದಲ್ಲಿ ಇಂತಹ …