ದುರ್ವಾಸನೆ ಅಸಹನೀಯ ತ್ಯಾಜ್ಯ ತೆರವಿಗೆ ಕ್ರಮವಿಲ್ಲ

ಉಪ್ಪಳ: ಉಪ್ಪಳ ಬಸ್ ನಿಲ್ದಾ ಣದಲ್ಲಿ ವಿವಿಧ ಸಮ ಸ್ಯೆಗಳು ತಲೆದೋರಿ ರುವಂತೆಯೇ ತ್ಯಾಜ್ಯ ರಾಶಿಯೂ ಸೇರಿ ದಾಗ ಅಸಹನೀಯ ಸ್ಥಿತಿ ನಿರ್ಮಾಣ ವಾಗಿದೆ. ಬಸ್ ನಿಲ್ದಾಣದ ಶೌಚಾ ಲಯ ಹಾಗೂ ಪರಿಸರದಲ್ಲಿ ತ್ಯಾಜ್ಯ ರಾಶಿ ಕಂಡುಬರು ತ್ತಿದ್ದು, ಇದರಿಂದ ದುರ್ವಾಸನೆ ಉಂಟಾಗಿ ನಿಲ್ದಾಣ ಪ್ರವೇಶಿಸುವುದೇ ಅಸಹನೀಯವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು ಇಲ್ಲಿ ತಂದು ಉಪೇಕ್ಷಿಸಲಾಗುತ್ತಿದ್ದು,  ಶುಚೀಕರಿಸಲು ಮುಂದಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಶುಚೀಕರಿಸಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ …

ಪೊಲೀಸ್ ದೌರ್ಜನ್ಯ ವಿರುದ್ಧ ಜಿಲ್ಲೆಯ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನಾ ಸಭೆ ನಡೆಸಿದ ಕಾಂಗ್ರೆಸ್

ಕಾಸರಗೋಡು: ಪೊಲೀಸ್ ಠಾಣೆಗಳಲ್ಲಿ ಅಮಾಯಕರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಿನ್ನೆ ಜಿಲ್ಲೆಯ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನಾ ಸಭೆಗಳನ್ನು ನಡೆಸಲಾಯಿತು. ಕಾಸರಗೋಡು ಪೊಲೀಸ್ ಠಾಣೆ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು. ಕಾಂಗ್ರೆಸ್‌ನ  ಕಾಸರಗೋಡು, ಚೆಂಗಳ, ಮಧೂರು ಮತ್ತು ಮೊಗ್ರಾಲ್ ಪುತ್ತೂರು ಮಂಡಲಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಚೆಂಗಳ ಮಂಡಲಾಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಇದರ ಹೊರತಾಗಿ  ಮಂಜೇಶ್ವರ, …

ಪಿಣರಾಯಿ ಆಡಳಿತದಿಂದ ಪೊಲೀಸರು ಗೂಂಡಾ, ಮಾಫಿಯಾಗಳಾಗಿ ಮಾರ್ಪಾಡು-ಸಾಜಿದ್ ಮವ್ವಲ್

ಕುಂಬಳೆ: ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರಕ್ಕೇರುವುದ ರೊಂದಿಗೆ ಈ ಹಿಂದೆ ಇಡೀ ದೇಶಕ್ಕೇ ಮಾದರಿಯಾಗಿದ್ದ ಕೇರಳ ಪೊಲೀಸರು ಗೂಂಡಾ ಹಾಗೂ ಮಾಫಿಯಾಗಳಾಗಿ ಬದಲಾಗಿದ್ದಾರೆ ಎಂದು ಡಿಸಿಸಿ ಉಪಾಧ್ಯಕ್ಷ ಸಾಜಿದ್ ಮವ್ವಲ್ ಆರೋಪಿಸಿದ್ದಾರೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನಡೆಸಿದ ಪೊಲೀಸ್ ಠಾಣೆ ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪೊಲೀಸರು ಕಾನೂನು ವಿರುದ್ಧವಾಗಿ ವರ್ತಿಸುವುದನ್ನು ಕ್ಷುಲ್ಲಕವಾಗಿ ಕಾಣುವ ನೀತಿಯನ್ನು ಮುಖ್ಯಮಂತ್ರಿ  ಸಹಿತ ಆಡಳಿತಾಧಿಕಾರಿಗಳು ಅನುಸರಿಸುತ್ತಿದ್ದಾರೆ.  ಇದನ್ನು ಕಾಂಗ್ರೆಸ್ ಸಹಿಸದು. ಇದರ ವಿರುದ್ಧ ತೀವ್ರ ಚಳವಳಿ ನಡೆಸುವುದಾಗಿ …

ಕುಟುಂಬ ಆರೋಗ್ಯ ಕೇಂದ್ರ ನೂತನ ಕಟ್ಟಡದ ಅಣಕು ಉದ್ಘಾಟನೆ: ಆರೋಗ್ಯ ವಲಯದಲ್ಲಿ ಸಂದಿಗ್ಧತೆ ಎದುರಿಸುವಾಗ ಉದ್ಘಾಟನೆ ವಿಳಂಬ ಜನರೊಂದಿಗೆ ಸರಕಾರದ ಸವಾಲು-ಎಂ.ಎಲ್. ಅಶ್ವಿನಿ

ಬಾಯಾರು: ನಿರ್ಮಾಣ ಪೂರ್ತಿಗೊಂಡು ಒಂದೂವರೆ ವರ್ಷ ಕಳೆದರೂ ಉದ್ಘಾಟನೆ ನಡೆಸದ ಪೈವಳಿಕೆ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಬಿಜೆಪಿ ಅಣಕು ಉದ್ಘಾಟನೆ ನಡೆಸಿದೆ. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಈ ಕಾರ್ಯ ನೆರವೇರಿಸಿದರು. ಪೈವಳಿಕೆ ಪಂಚಾಯತ್ ನೋರ್ತ್, ಸೌತ್ ಏರಿಯಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಪರಿಸರದಿಂದ ಮೆರವಣಿಗೆ ಮೂಲಕ ತಲುಪಿ ಅಣಕು ಉದ್ಘಾಟನೆ ನೆರವೇರಿಸಲಾಗಿದೆ. ಆರೋಗ್ಯ ವಲಯದಲ್ಲಿ ಬಹಳ ಸಂದಿಗ್ಧತೆ ಎದುರಿಸುತ್ತಿರುವ ಜಿಲ್ಲೆಯ ಜನಸಾಮಾನ್ಯರ ವಿರುದ್ಧ ಸವಾಲಾಗಿದೆ, ನಿರ್ಮಾಣ ಪೂರ್ತಿಯಾದರೂ …

ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಮಾತೃಭಾಷೆ ಕಲಿಕೆಗೆ ತೊಡಕು: ಭವಿಷ್ಯಕ್ಕೆ ಅಧಿಕಾರಿಗಳಿಂದ ಕೊಡಲಿಯೇಟು

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡದ ಮೇಲೆ ಹೇಗೆಲ್ಲ ಗದಾಪ್ರಹಾರ ಮಾಡಬಹುದೆಂಬ ಬಗ್ಗೆ ಅಧಿಕಾರಿಗಳ ಮಟ್ಟದಲ್ಲೇ ಸಂಶೋಧನೆ ನಡೆಸುತ್ತಿ ರುವುದಾಗಿ ಗಡಿನಾಡ ಕನ್ನಡಾಭಿಮಾನಿ ಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಕನ್ನಡ ಎಂಬುದನ್ನು ತೊಳೆದು ಹಾಕಲು ಈಗ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸುತ್ತಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳು ಅಚ್ಚ ಕನ್ನಡ ಪ್ರದೇಶವೆಂದು ಹಿಂದೆ ಕರೆಯಲಾಗುತ್ತಿ ದ್ದರೂ, ಈಗ ಅದು ಮಂಜೇಶ್ವರ ತಾಲೂಕಿಗೆ ಸೀಮಿತವಾಗುತ್ತಿದೆ. ಮಂಜೇಶ್ವರ ತಾಲೂಕಿನಿಂದಲೂ ಕನ್ನಡವನ್ನು ಹೊಡೆದೋಡಿಸಲು ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳ ಅಧ್ಯಾಪಕರನ್ನು ತರಗತಿಗಾಗಿ ನೇಮಕ ಮಾಡಲಾಗುತ್ತಿದೆ. ಬಹುತೇಕ …

ಪುತ್ತಿಗೆ ಪಂಚಾಯತ್ ನಲ್ಲೂ ಬಿಜೆಪಿ ಮೊದಲ ಸ್ಥಾನಕ್ಕೇರಬೇಕು-ವಿಜಯ ರೈ

ಪುತ್ತಿಗೆ: ಪ್ರಪಂಚದ ರಾಜಕೀಯ ಪಕ್ಷಗಳಲ್ಲಿ ಮೊದಲೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ  ನರೇಂದ್ರಮೋದಿ ನೇತೃತ್ವದಲ್ಲಿ  ದಶಕಗಳಿಂದ ಆಡಳಿತ ನಡೆಸುತ್ತಿರುವ  ಈ ಸುವರ್ಣ ಕಾಲಘಟ್ಟದಲ್ಲಿ  ಪುತ್ತಿಗೆ ಪಂಚಾಯತ್‌ನಲ್ಲೂ ಬಿಜೆಪಿ  ಮೊದಲ ಸ್ಥಾನಕ್ಕೇರಬೇಕಾಗಿ ದೆಯೆಂದು  ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯ ರೈ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ವತಿಯಿಂದ ಎಡನಾಡು-ಕಣ್ಣೂರು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ  ನಡೆದ ಚುನಾವಣಾ ಕಾರ್ಯಾಗಾರ ಹಾಗೂ ಮಾಹಿತಿ ಶಿಬಿರದಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಪ್ರಮುಖರನ್ನು ಹಾಗೂ …

ಬೆಳ್ಳೂರು ಪಂ. ಮತದಾರರ ಪಟ್ಟಿಯಲ್ಲಿ ವಂಚನೆ-ಸಿಪಿಎಂ ಆರೋಪ

ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತ್ ಸೆ. 2ರಂದು ಪ್ರಕಟಿಸಿದ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿ ಪಕ್ಷಪಾತ ಹಾಗೂ ಕಾನೂನು ವಿರುದ್ಧ ರೀತಿಯಲ್ಲಿದೆಯೆಂದು ಸಿಪಿಎಂ ಬೆಳ್ಳೂರು ಲೋಕಲ್ ಸಮಿತಿ ಆರೋಪಿಸಿದೆ. ವಿವಿಧ ವಾರ್ಡ್‌ಗಳಲ್ಲಿ ಒಳಪಡಬೇಕಾದ ಯಥಾರ್ಥ ಮತದಾರರ ಹೆಸರುಗಳನ್ನು ಹೊರತುಪಡಿಸಲಾಗಿದೆ. ಅದೇ ರೀತಿ ಹೊರಡುಪಡಿಸಬೇಕಾದ ಮತಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆ ಮಾನದಂಡ ಪ್ರಕಾರದ ವಾರ್ಡ್ ಗಡಿಯನ್ನು ಪೂರ್ಣವಾಗಿ ಉಲ್ಲಂಘಿಸಲಾಗಿದೆ. ಹಿಯರಿಂಗ್‌ಗೆ ಹಾಜರಾಗದವರನ್ನು ಹಾಗೂ ದಾಖಲೆ ಸಲ್ಲಿಸದವರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೇ ವೇಳೆ  ದಾಖಲೆಗಳ ಸಹಿತ ಹಿಯರಿಂಗ್‌ಗೆ ಹಾಜರಾದವರನ್ನು …

ಮೀನು ಮಾರಾಟ ಹರಾಜು ಕಾರ್ಮಿಕ ನಿಧನ

ಕುಂಬಳೆ: ಬದ್ರಿಯ ನಗರದ ಎಂ.ಎಂ. ಅಬ್ದುಲ್ಲ (58) ನಿಧನ ಹೊಂದಿದರು. ಕಿಡ್ನಿ ಸಂಬಂಧವಾದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡಿನಲ್ಲಿ ಹಲವು ವರ್ಷಗಳ ಕಾಲ ಮೀನು ಮಾರಾಟ ಹರಾಜು ಕಾರ್ಮಿಕನಾಗಿದ್ದರು. ಮೃತರು ಪತ್ನಿ ಸುಹರಾ, ಮಕ್ಕಳಾದ ಸಾಜಿತ, ಸಫರಿಯ ಸಲಾಹುದ್ದೀನ್, ಅಳಿಯಂದಿರಾದ ಮನ್ಸೂರ್ ಪೈಕ, ನೌಶಾದ್ ಕೊಪ್ಪರಬಜಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿವಾಹ ಆಗ್ರಹ ನಿರಾಕರಿಸಿದ ದ್ವೇಷ: ಯುವತಿಯನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ ಸೆರೆ

ಮುಳ್ಳೇರಿಯ: ಮದುವೆ ಆಗ್ರಹವನ್ನು ನಿರಾಕರಿಸಿದ ದ್ವೇಷದಿಂದ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಅಡೂರು ಬಳಿಯ ಮಂಡೆಕೋಲು ನಿವಾಸಿ ಪ್ರತಾಪ್ (30) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು  ಬಂಧಿಸಿದ್ದಾರೆ. ಆರೋಪಿ ಅಡೂರು ಬಸ್ ವೈಂಟಿಂಗ್ ಶೆಡ್ ಸಮೀಪ ಇದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಮೊನ್ನೆ ಸಂಜೆ ಈ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ೨೯ರ ಹರೆಯದ …

ಪೆರ್ಮುದೆಯಲ್ಲಿ ಮನೆಯಿಂದ ಹಣ, ಚೆಕ್‌ಲೀಫ್ ಕಳವು

ಕುಂಬಳೆ: ಕುಟುಂಬ ಮಸೀ ದಿಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವುಗೈದ ಘಟನೆ ನಡೆದಿದೆ. ಪೆರ್ಮುದೆ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ರಫೀಕ್ ಎಂಬವರ ಅರಫಾ ಮಂಜಿಲ್‌ಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೩೦ ಸಾವಿರ ರೂಪಾಯಿ ಹಾಗೂ ಬ್ಯಾಂಕ್‌ನ ಚೆಕ್ ಲೀಫ್ ಕಳವುಗೈದಿದ್ದಾರೆ. ಈಬಗ್ಗೆ ರಫೀಕ್‌ರ ಪತ್ನಿ ಶಮ್ನ ಕೆ.ಎ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಹಾಗೂ ಮಕ್ಕಳು ಈ ತಿಂಗಳ ೮ರಂದು …