ಪುದುಕೋಳಿ ರುದ್ರಭೂಮಿಯಲ್ಲಿ ಕಟ್ಟಡ ನಿರ್ಮಾಣ, ತ್ಯಾಜ್ಯ ಸಂಗ್ರಹ: ಪ್ರತಿಭಟನಾನಿರತರಿಗೆ ಅಧಿಕಾರಿಗಳಿಂದ ಪರಿಹಾರ ಭರವಸೆ

ಬದಿಯಡ್ಕ: ಮನುಷ್ಯರ ಮರಣ ಬಳಿಕ ನಡೆಸುವ ಅಂತ್ಯ ಕಾರ್ಯಗಳಿಗೂ ಪುದುಕೋಳಿ ನಿವಾಸಿಗಳು ಹೋರಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಹಿಂದೂ ರುದ್ರಭೂಮಿಯನ್ನು ಕಬಳಿಸುವ ಯತ್ನ ಆರಂಭಗೊಂಡಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬದಿಯಡ್ಕ ಪಂ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ರುದ್ರಭೂಮಿ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬದಿಯಡ್ಕ ಪಂ. ವ್ಯಾಪ್ತಿಯ ಮಾನ್ಯ, ನೀರ್ಚಾಲು, ಪೆರಡಾಲ, ಕಾರ್ಮಾರು, ಬೇಳ, ಕನ್ನೆಪ್ಪಾಡಿ, ತಲ್ಪಣಾಜೆ, …

ಪ್ರಗತಿಪರ ಕೃಷಿಕ ನಿಧನ

ಪೆರ್ಲ: ಬೇಂಗಪದವು ಸಮೀಪದ ಕಲ್ಲರೋಡಿ ನಿವಾಸಿ, ಪ್ರಗತಿಪರ ಕೃಷಿಕ ಲೂವಿಸ್ ಡಿಸೋಜಾ (76) ನಿನ್ನೆ ನಿಧನ ಹೊಂದಿದರು. ಬೆಳಿಗ್ಗೆ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮೃತರು ಪತ್ನಿ ಸಿಸಿಲಿಯಾ ಡಿಸೋಜಾ, ಮಕ್ಕಳಾದ ಮ್ಯಾಕ್ಸಿಮ್, ಫಾದರ್ ಮೆಲ್ವಿನ್ (ಪಂಜ ಚರ್ಚ್‌ನ ಧರ್ಮಗುರು), ಮಿಲ್ಟನ್ ಪೀಟರ್, ಸೊಸೆಯಂದಿರಾದ ಲವೀನಾ, ಪ್ರೀತಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಣಿಯಂಪಾರೆ ಸೈಂಟ್‌ಲಾರೆನ್ಸ್ ಚರ್ಚ್‌ನಲ್ಲಿ ಇಂದು ಅಂತ್ಯ ಸಂಸ್ಕಾರ ಜರಗಿತು.

ಕ್ಷೇತ್ರೋತ್ಸವ ಸಮಯದಲ್ಲಿ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಸರಕಾರದಿಂದ ಸುತ್ತೋಲೆ

ಕಾಸರಗೋಡು: ಕ್ಷೇತ್ರ ಉತ್ಸವಕ್ಕೆ ಸಂಬಂಧಿಸಿ ಕ್ಷೇತ್ರ ಗಳಲ್ಲೂ ಹಾಗೂ ಕ್ಷೇತ್ರ ಪರಿಸರಗಳಲ್ಲಿ ಧ್ವಜ, ತೋರಣಗಳು, ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಕೇರಳ ಹೈಕೋರ್ಟ್‌ನ ನಿರ್ದೇಶಗಳನ್ನು ಸರಿಯಾಗಿ ಪಾಲಿಸಬೇಕಾಗಿದೆ. ಕ್ಷೇತ್ರಗಳು ಹಾಗೂ ಕ್ಷೇತ್ರ ಪರಿಸರಗಳಲ್ಲಿ ರಾಜಕೀಯ ಸಂಘಟನೆಗಳ, ಸಂಸ್ಥೆಗಳ, ವ್ಯಕ್ತಿಗಳ ಚಿಹ್ನೆ ಅಥವಾ ಗುರುತುಗಳನ್ನು, ಧ್ವಜ ಅಥವಾ ತೋರಣಗಳನ್ನು ಪ್ರದರ್ಶಿಸ ಬಾರದು. ಕೋಮು ಸ್ಪರ್ಧೆ ಬೆಳೆಸುವ ಚಿತ್ರಗಳನ್ನು ಕ್ಷೇತ್ರ ಪರಿಸರಗಳಲ್ಲಿ ಪ್ರದರ್ಶಿಸಬಾರದು, ಉತ್ಸವ ಕಾಲದಲ್ಲಿ ಈ ಬಗ್ಗೆ ಪ್ರತ್ಯೇಕ …

ನಿವೃತ್ತ ಎಸ್.ಐ ಬಾಬುರಾಜ್ ನಿಧನ

ಕಾಸರಗೋಡು: ತೃಕರಿಪುರ ಪೂಚೋಲ್ ನಿವಾಸಿ ನಿವೃತ್ತ ಎಸ್‌ಐ ಪುದಿಯಡವನ್ ಬಾಬುರಾಜ್ (57) ನಿಧನ ಹೊಂದಿದರು. ಮೃತರು ಪತ್ನಿ ಸುಮ, ಮಕ್ಕಳಾದ ತೀರ್ಥ, ಯದುಲ್, ಸಹೋದರರಾದ ಪಿ. ಕುಂಞಿಕೃಷ್ಣನ್ (ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್), ಪಿ. ಸುರೇಂದ್ರನ್ (ನಿವೃತ್ತ ಲೋಕೋಪಯೋಗಿ ಇಲಾಖೆ ಅಧಿ ಕಾರಿ), ಪಿ. ಭಾಸ್ಕರನ್, ಪಿ. ಮಹೇಶ್, ಸಹೋದರಿ ಪಿ. ಯಮುನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಜಮಾಯತ್ ಅಧ್ಯಕ್ಷ ನಿಧನ

ಕಾಸರಗೋಡು: ನೀಲೇಶ್ವರ ಪಳ್ಳಿಕೆರೆ ರೈಲ್ವೇ ಮೇಲ್ಸೇತುವೆಯಲ್ಲಿ ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಜಮಾಯತ್ ಅಧ್ಯಕ್ಷ ಮೃತಪಟ್ಟರು. ಬೇಕಲ ಚಿತ್ತಾರಿ ಕೊಟ್ಟಿಲಂಗಾಡ್ ನಿವಾಸಿ ನಸೀಮ ಮಂಜಿಲ್‌ನ ಹಂಸ (73) ಮೃತಪಟ್ಟವರು. ತಿಚ್ಚಾರಿ ಕೊತ್ತಿಕ್ಕಾಲ್ ಜಮಾಯತ್ ಸಮಿತಿಯ ಅಧ್ಯಕ್ಷನಾಗಿದ್ದರು. ನಿನ್ನೆ ಅಪರಾಹ್ನ 2 ಗಂಟೆಗೆ ರೈಲ್ವೇ ಮೇಲ್ಸೇತುವೆಯಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟರ್‌ನಲ್ಲಿ ಚೆರ್ವತ್ತೂರು ಭಾಗದಿಂದ ಹಂಸ ಆಗಮಿಸುತ್ತಿದ್ದರು. ಘಟನೆ ಸ್ಥಳದಲ್ಲೇ ಮರಣ ಸಂಭವಿಸಿದೆ. ನೀಲೇಶ್ವರ ಪೊಲೀಸರು ತಲುಪಿ ಮೃತದೇಹ ವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. …

ದಾರಿ ತಪ್ಪಿದ ಬಾಲಕಿಯನ್ನು ಮನೆಗೆ ಕರೆದೊಯ್ಯುವುದಾಗಿ ನಂಬಿಸಿ ದೌರ್ಜನ್ಯ: ಯುವಕ ಸೆರೆ

ಕಣ್ಣೂರು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ದೌರ್ಜನ್ಯ ಗೈದ ಪ್ರಕರಣದಲ್ಲಿ ಯುವಕ ಸೆರೆಯಾಗಿದ್ದಾನೆ. ಕಣ್ಣೂರು ಪುನ್ನಾಡ್ ನಿವಾಸಿ ಪಿ.ಪಿ. ಶಾನಿಫ್ (32)ನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಪ್ರಕಾರ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಪ್ರಯಾಣ ಮಧ್ಯೆ ದಾರಿ ತಪ್ಪಿದ ಬಾಲಕಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಶಾನಿಫ್ ಕರೆದುಕೊಂಡು ಹೋಗಿದ್ದನು. ಬಳಿಕ ಜನವಾಸವಿಲ್ಲದ ಹಿತ್ತಿಲಿಗೆ ಕರೆ ದೊಯ್ದು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಮನೆಗೆ ತಲುಪಿದ ಬಾಲಕಿ ಹೆತ್ತವರಲ್ಲಿ ವಿಷಯ ತಿಳಿಸಿದ್ದು, …

ಎಡನೀರು: ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನೆ ನಾಳೆ

ಎಡನೀರು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನೆ ನಾಳೆ ನಡೆಯಲಿದೆ. ಬೆಳಿಗ್ಗೆ 6.30ರಿಂದ ಮಹಾಪೂಜೆ, ೯ಕ್ಕೆ ಧ್ವಜಾರೋಹಣ, ಕಜಂಪಾಡಿ ಶ್ರೀ ಸುಬ್ರಹ್ಮಣ್ಯ ಭಟ್‌ರಿಂದ ಆಶಯ ಭಾಷಣ, 9.30ರಿಂದ ವೀಣಾವಾದನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ವೃಂದಾವನ ಪೂಜೆ, 2 ಗಂಟೆಗೆ ಮಂತ್ರಾಕ್ಷತೆ, ೨.೩೦ರಿಂದ ಆರಾಧನೋತ್ಸವ ಮಹಾಪೂಜೆ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅಭ್ಯಾಗತರಾಗಿರುವರು. …

ಕಾಸರಗೋಡು ವೈದ್ಯಕೀಯ ಕಾಲೇಜು ಪ್ರಥಮ ವರ್ಷ ಎಂಬಿಬಿಎಸ್ ಕೋರ್ಸ್ ಈ ವರ್ಷವೇ ಆರಂಭ

ತಿರುವನಂತಪುರ: ಕಾಸರಗೋಡು ಮತ್ತು ವಯನಾಡು ಜಿಲ್ಲೆಯ ವೈದ್ಯಕೀಯ ಕಾಲೇಜುಗಳಿಗೆ ಪ್ರಥಮ ವರ್ಷ ಎಂ.ಬಿ.ಬಿ.ಎಸ್ ಕೋರ್ಸ್‌ಗಿರುವ ಪ್ರವೇಶವನ್ನು ಈ ವರ್ಷವೇ ಆರಂಭಿಸಲಾ ಗುವುದು. ಇದಕ್ಕಿರುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕೆ ಅಗತ್ಯದ ಪೂರ್ವಭಾವಿ ಕ್ರಮಗಳು ಸೆಪ್ಟಂಬರ್ 22ರೊಳಗಾಗಿ ಪೂರ್ತೀಕರಿಸಿದರೆ ಮಾತ್ರವೇ ಈ ಎರಡು ವೈದ್ಯಕೀಯ ಕಾಲೇಜುಗಳಲ್ಲಿ  ಎಂಬಿಬಿಎಸ್ ಕೋರ್ಸ್‌ಗಿರುವ ಅಲೋಟ್‌ಮೆಂಟ್ ಕ್ರಮ ಆರಂಭಿಸಲು ಸಾಧ್ಯವಾಗಲಿದೆ. ಇದಕ್ಕಿರುವ ಕ್ರಮಗಳನ್ನು ತ್ವರಿತ ರೀತಿಯಲ್ಲಿ  ಈಗಾಗಲೇ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಈ ಎರಡು ವೈದ್ಯಕೀಯ ಕಾಲೇಜುಗಳನ್ನು ನೇರವಾಗಿ ಸಂದರ್ಶಿಸಿ ಅಗತ್ಯದ …

ಎಕೆಪಿಎ ಉಪ್ಪಳ ಯೂನಿಟ್ ಸಮ್ಮೇಳನ, ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಆಲ್ ಕೇರಳ ಪೊಟೋ ಗ್ರಾಫರ್ಸ್ ಅಸೋಶಿಯೇಶನ್ (ಎ.ಕೆ.ಪಿ.ಎ) ಉಪ್ಪಳ ಯೂನಿಟ್ ಇದರ ಸಮ್ಮೇಳನ ಹಾಗೂ ನೂತನ ಪದಾಧಿಕಾರಿಗಳ ರಚನೆ ನಿನ್ನೆ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ಸಂದೇಶ್ ಐಲ್ ದ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಉದ್ಘಾಟಿಸಿ ಮಾತ ನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಾಕ್ಷ ವೇಣು.ವಿ.ವಿ, ಜಿಲ್ಲಾ ವೆಲ್ಫೇರ್ ಕನ್ವೀನರ್ ವಿಜಯನ್, ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ, ಕೋಶಾಧಿಕಾರಿ ವೇಣು ಬದಿಯಡ್ಕ, ಉಪ್ಪಳ ಯೂನಿಟ್ ಇನ್‌ಚಾರ್ಜ್ …

ಗಗನಕುಸುಮವಾಗುತ್ತಿರುವ ಚಿನ್ನ : 80,000 ರೂ. ದಾಟಿ ಮತ್ತೆ ದಾಖಲೆ

ಕೊಚ್ಚಿ: ರಾಜ್ಯದಲ್ಲಿ ದಾಖಲೆಗಳನ್ನು ಬೇಧಿಸಿ ಚಿನ್ನದ ಬೆಲೆಯ ನೆಗೆತ ಮುಂದುವರಿಯುತ್ತಿದೆ. ಪವನ್ಗೆ ಇದೇ ಮೊದಲಾಗಿ 80,000 ದಾಟಿ 80880 ರೂ.ಗೆ ತಲುಪಿದೆ. ದಿನವೊಂದರಲ್ಲಿ 1000 ರೂ. ಹೆಚ್ಚಾಗಿದೆ. ಇದೇ ವೇಳೆ ಗ್ರಾಂಗೆ 10,110 ರೂ. ಆಗಿದೆ. ನಿನ್ನೆ 9985 ರೂ. ಆಗಿತ್ತು ಗ್ರಾಂನ ಬೆಲೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಾರ್ವಕಾಲಿಕ ದಾಖಲೆ ಆಗಿದೆ. 10 ಗ್ರಾಂಗೆ 1ಲಕ್ಷದ 9000 ರೂ. ಆಗಿ ಮಾರಾಟವಾಗುತ್ತಿದೆ. ಕಳೆದ ತಿಂಗಳ 8ರಂದು 75,760 ರೂ. ಆಗಿದ್ದ ಚಿನ್ನದ ಬೆಲೆ ಬಳಿಕದ …