ಅಡೂರಿನಲ್ಲಿ ಸ್ನೇಹಿತನಿಂದ ಇರಿತಕ್ಕೀಡಾಗಿ ಯುವತಿ ಆಸ್ಪತ್ರೆಗೆ ದಾಖಲು: ಆರೋಪಿಗಾಗಿ ಶೋಧ

ಮುಳ್ಳೇರಿಯ: ಅಡೂರಿನಲ್ಲಿ ಯುವತಿಯನ್ನು ಸ್ನೇಹಿತ ಇರಿದು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆ ದಿದೆ. ಘಟನೆಗೆ ಸಂಬಂಧಿಸಿ ಪರಾರಿ ಯಾದ  ಯುವಕನ ಪತ್ತೆಗಾಗಿ  ಆದೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಡೂರು ಕುರತ್ತಿಮೂಲೆಯ 27ರ ಹರೆಯದ ಯುವತಿಗೆ ಇರಿಯಲಾಗಿದೆ. ನಿನ್ನೆ ಸಂಜೆ ಯುವತಿ ಮನೆಗೆ ನಡೆದು ಹೋಗುತ್ತಿದ್ದ ವೇಳೆ  ದಾರಿಯಲ್ಲಿ ಕಾದು ನಿಂತಿದ್ದ ಸ್ನೇಹಿತ ಕರ್ನಾಟಕದ  ಮಂಡೆಕೋಲು ನಿವಾಸಿಯಾದ ಪ್ರತಾಪ್ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಇರಿದಿದ್ದಾನೆ. ಯುವತಿ ಬೊಬ್ಬಿಟ್ಟಾಗ ಯುವಕ ಓಡಿ ಪರಾರಿಯಾಗಿ ದ್ದಾನೆ. ಗಾಯಗೊಂಡ ಯುವತಿಯನ್ನು ಜನರಲ್ ಆಸ್ಪತ್ರೆಯಲ್ಲಿ …

33.5 ಕಿಲೋ ಗಾಂಜಾ ವಶ ಪ್ರಕರಣ: ಕುಕ್ಕಾರಿನ ಹಮೀದ್ ಸೆರೆ

ಉಪ್ಪಳ: ಸೋಂಕಾಲ್‌ನ ಮನೆಯೊಂದರಿಂದ 33.5 ಕಿಲೋ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಉಪ್ಪಳ ಕುಕ್ಕಾರ್ ನಿವಾಸಿ ಹಮೀದ್ ಅಲಿಯಾಸ್ ಟಿಪ್ಪರ್ ಹಮೀದ್ (32) ಸೆರೆಯಾದ ವ್ಯಕ್ತಿ. ಈತನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಜೂನ್ 1ರಂದು ಕೇಸಿಗೆ ಆಸ್ಪದವಾದ ಘಟನೆ ಜರಗಿತ್ತು. ಉಪ್ಪಳ ಸೋಂಕಾಲ್‌ನ ಎ. ಅಶೋಕ (45)ರ ಮನೆಯ ಮಲಗುವ ಕೊಠಡಿಯ ಮಂಚದಡಿಯಲ್ಲಿ ಗೋಣಿಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಗಾಂಜಾವನ್ನು ಪತ್ತೆಹಚ್ಚಲಾಗಿತ್ತು. ಅಶೋಕನನ್ನು ಸೆರೆ ಹಿಡಿದು ವಿಚಾರಿಸಿದಾಗ ಹಮೀದ್ ಕೂಡಾ ಇದರಲ್ಲಿ ಆರೋಪಿಯಾಗಿ ದ್ದನೆಂದು ತಿಳಿದು …

ಎಚ್‌ಎಎಲ್ ಕಂಪೆನಿ ನೌಕರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಸೀತಾಂಗೋಳಿ: ಸೀತಾಂಗೋಳಿ ಯಲ್ಲಿರುವ ಎಚ್‌ಎಎಲ್ ಕಂಪೆನಿಯ ತಾತ್ಕಾಲಿಕ ನೌಕರನಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕುದ್ರೆಪ್ಪಾಡಿ ನಿವಾಸಿ ಶಂಕರ ಪಾಟಾಳಿಯವರ ಪುತ್ರ ಹರಿಕೃಷ್ಣ (22) ಮೃತಪಟ್ಟ ಯುವಕ. ನಿನ್ನೆ ಸಂಜೆ ಕೆಲಸ ಮುಗಿಸಿ ಹರಿಕೃಷ್ಣ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲವೆನ್ನ ಲಾಗಿದೆ. ಹೊರಗೆ ತೆರಳಿದ್ದ ಮನೆಯವರು ಸಂಜೆ ೬ ಗಂಟೆಗೆ ಮನೆಗೆ ಮರಳಿ ತಲುಪಿದಾಗ ಹರಿಕೃಷ್ಣ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ …

ಬೈಕ್ ಅಪಘಾತ: ಯುವ ಇಂಜಿನಿಯರ್ ದಾರುಣ ಸಾವು

ಬೋವಿಕಾನ: ಬೈಕ್ ಅಪಘಾತಕ್ಕೀಡಾಗಿ ಯುವ ಇಂಜಿನಿಯರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇತೂರುಪಾರ ತೀರ್ಥಂಗರದ ಎ. ವಿಜಯನ್ ತೀರ್ಥಂಕರ- ಎಂ. ಶಾಲಿನಿ ದಂಪತಿ ಪುತ್ರ ಎಂ. ಜಿತೇಶ್ (23) ಸಾವನ್ನಪ್ಪಿದ ದುರ್ದೈವಿ. ಇವರು ನಿನ್ನೆ ಮಧ್ಯಾಹ್ನ ಬೈಕ್‌ನಲ್ಲಿ ಬೋವಿಕ್ಕಾನದಿಂದ ಬೇತೂರುಪಾರಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಮಂಜಕಲ್ ಬಸ್ ತಂಗುದಾಣದ ಬಳಿ ತಲುಪಿದಾಗ ಆಟೋರಿಕ್ಷಾವೊಂದನ್ನು ಓವರ್‌ಟೇಕ್ ಮಾಡಲೆತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಬಸ್ ತಂಗುದಾಣದ ಕಂಬಕ್ಕೆ ಬಡಿದಿದೆ. ಇದರಿಂದ ಗಂಭೀರ ಗಾಯಗೊಂಡ  ಜಿತೇಶ್‌ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ …

ಕೂಲಿ ಕಾರ್ಮಿಕ ಕೆಲಸ ವೇಳೆ ಹೃದಯಾಘಾತದಿಂದ ನಿಧನ

ಪೆರ್ಲ: ಕೂಲಿ ಕಾರ್ಮಿಕರೊ ಬ್ಬರು ಕೆಲಸ ವೇಳೆ ಹೃದಯಾ ಘಾತದಿಂದ ನಿಧನಹೊಂದಿದರು. ಬಜಕೂಡ್ಲು ನಿವಾಸಿ ಜಯಪ್ರಕಾಶ್ (51) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಕಾಟುಕುಕ್ಕೆಯಲ್ಲಿ ಕೆಲಸ ನಿರತರಾಗಿದ್ದ ವೇಳೆ ಎದೆನೋವು ಅನುಭವಗೊಂ ಡಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ನಿಧನ ಸಂಭವಿಸಿದೆ. ಬಳಿಕ ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ದಿವಂಗತರಾದ ಐತ್ತಪ್ಪ ಬಿ.ಎಂ-ಅರುಣ ದಂಪತಿಯ ಪುತ್ರನಾದ ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ  ಧನುಷ್, ಋತಿಕ್,ಸಹೋದರ ಪ್ರಶಾಂತ್, ಸಹೋದರಿಯರಾದ ವನಿತ, …

ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಪೆರಿಯ ಬಜಾರ್‌ನಲ್ಲಿರುವ ಕಾರು ಶೋರೂಮ್ ಸಿಬ್ಬಂದಿ ಕೋಡೋಂ ಗ್ರಾಮದ ಕರಿಯಂವಳಪ್ಪಿನ ನಿವಾಸಿ ಸಜಿತ್ ಲಾಲ್ (26) ಎಂಬಾತನ ಮೃತದೇಹ ನಿನ್ನೆ ಆಯಂಕಡವು ಸಮೀಪದ ಬಂಗಾಡ್ ಹೊಳೆಯಲ್ಲಿ ಮರದ ಎಡೆಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾನು ದುಡಿಯುತ್ತಿರುವ  ಶೋರೂಮ್ ನಲ್ಲಿ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮನೆಯವರಲ್ಲಿ ತಿಳಿಸಿ ಸಜಿತ್‌ಲಾಲ್ ಸೆ.೪ರಂದು ಮನೆಯಿಂದ ಹೊರಗೆ ಹೋಗಿದ್ದನು. ನಂತರ ಮನೆಗೆ ಹಿಂತಿರುಗಿರಲಿಲ್ಲ. ಈ ಮಧ್ಯೆ ಆತ ಚಲಾಯಿಸುತ್ತಿದ್ದ ಬೈಕ್, ಹೆಲ್ಮೆಟ್ …

ಕುಂಬಳೆ ಟೋಲ್ ಬೂತ್‌ಗೆ ಮಾರ್ಚ್ ನಡೆಸಿದ 150 ಮಂದಿ ವಿರುದ್ಧ ಕೇಸು: 10 ಮಂದಿ ಸೆರೆ; ಒಂದೆಡೆ ಜನರ ಪ್ರತಿಭಟನೆ: ಇನ್ನೊಂದೆಡೆ ಮುಂದುವರಿದ ಕಾಮಗಾರಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಕಡವತ್ ಬಳಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಬೂತ್ ನಿರ್ಮಾಣದ ವಿರುದ್ಧ ಜನಪರ ಮುಷ್ಕರ ಸಮಿತಿ ನೇತೃತ್ವದಲ್ಲಿ ನಿನ್ನೆ ನಡೆದ ಪ್ರತಿಭಟನೆಗೆ ಸಂಬಂಧಿಸಿ 150 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಮಂದಿಯನ್ನು ಬಂಧಿಸಲಾಗಿದೆ. ಮುಷ್ಕರ ಸಮಿತಿ ನೇತಾರರಾದ ಸುಲ್ಫಿಕರ್ (42), ಬಿ.ಎನ್. ಮೊಹಮ್ಮದಲಿ (62), ಸೈನುಉಹಾರಿಸ್ (25), ಯೂಸುಫ್ ಉಳುವಾರು (45), ಅಬ್ದುಲ್ ಮುನೀರ್ (36), ಮೊಯ್ದೀನ್ ಕುಂಞಿ (37), ಅನ್ವರ್ (49), ಮಾಹಿನ್ ಕೇಳತ್ (34), ಅಬ್ದುಲ್ ಮಜೀದ್ …

ಯುವತಿ ಮುಂದೆ ಲೈಂಗಿಕಚೇಷ್ಠೆ ತೋರಿಸಿದ ಯುವಕ ಸೆರೆ

ಕಾಸರಗೋಡು: ವೆಳ್ಳರಿಕುಂಡ್ ಬಳಿಯ ನಿವಾಸಿ ಯುವಕನೋರ್ವ ಪರಶ್ಶಿನಿಕಡವು ವಿಸ್ಮಯ ಪಾರ್ಕ್‌ನಲ್ಲಿ ಯುವತಿ ಮುಂದೆ ಲೈಂಗಿಕ ಚೇಷ್ಠೆ ತೋರಿಸಿದ ಆರೋಪದಂತೆ ಸೆರೆಗೀಡಾಗಿದ್ದಾನೆ. ವೆಳ್ಳರಿಕುಂಡ್ ಬಳಿಯ ಪರಪ್ಪ ಮೂಲಪ್ಪಾರದ ಲೈಂಕಿಲಗತ್ತ್ ನಿವಾಸಿ ಕೆ, ಸಫಾದ್ (25) ಎಂಬಾತನನ್ನು ತಳಿಪರಂಬ ಎಸ್‌ಐ ಎನ್.ವಿ. ಪ್ರಕಾಶನ್, ಎಎಸ್‌ಐ ಜಯಶ್ರೀ ಎಂಬಿವರ ನೇತೃತ್ವದಲ್ಲಿ  ಬಂಧಿಸಲಾಗಿದೆ. ಆದಿತ್ಯವಾರ ಸಂಜೆ ಪರಶ್ಶಿನಿಕಡವು ವಿಸ್ಮಯ ಪಾರ್ಕ್ ಸಮೀಪ ಘಟನೆ ನಡೆದಿದೆ. ಪಾರ್ಕ್ ವೀಕ್ಷಿಸಲು ತಲುಪಿದ ಕಲ್ಲಿಕೋಟೆ ನಿವಾಸಿ ಮುಂದೆ ಸಫಾದ್ ಲೈಂಗಿಕ ಚೇಷ್ಠೆ ತೋರಿಸಿದ ಬಗ್ಗೆ ದೂರಲಾಗಿದೆ. ಈ …

ರಸ್ತೆ ಶೋಚನೀಯ: ದುರಸ್ತಿಗೆ ಕ್ರಮವಿಲ್ಲ; ಕಾಸರಗೋಡು-ಉಕ್ಕಿನಡ್ಕ, ಪೈಕ-ಮುಳ್ಳೇರಿಯ ರೂಟ್‌ಗಳಲ್ಲಿ 29ರಿಂದ ಅನಿರ್ಧಿಷ್ಟಾವಧಿ ಬಸ್ ಮುಷ್ಕರ

ಬದಿಯಡ್ಕ: ಕಾಸರಗೋಡು-ಚೆರ್ಕಳ-ನೆಲ್ಲಿಕಟ್ಟೆ-ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಹಾಗೂ ಪೈಕ-ಮುಳ್ಳೇರಿಯ ರಸ್ತೆಯ ಶೋಚನೀಯಾ ವಸ್ಥೆಯನ್ನು ಪ್ರತಿಭಟಿಸಿ ಈ ಎರಡು ರೂಟ್‌ಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಎರಡು ರೂಟ್‌ಗಳಲ್ಲಿ ರಸ್ತೆಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿದ್ದು, ಬಸ್ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗಳನ್ನು ದುರಸ್ತಿಗೊಳಿಸದಿದ್ದಲ್ಲಿ ಈ ತಿಂಗಳ 29ರಿಂದ  ಅನಿರ್ಧಿಷ್ಟಾವಧಿ ಬಸ್ ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಫ್ರೈಡ್ ಬಸ್ ಕಾರ್ಮಿಕರ ಯೂನಿಯನ್ ಬದಿಯಡ್ಕ ವಲಯ ಅಧ್ಯಕ್ಷ ಹಾರಿಸ್ ಬದಿಯಡ್ಕ ತಿಳಿಸಿದ್ದಾರೆ. ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜು …

ಮತ್ತೆ 180 ಹೊಸ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ತೀರ್ಮಾನ

ತಿರುವನಂತಪುರ: 143 ಹೊಸ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಿರುವ ಬೆನ್ನಲ್ಲೇ ಅದರ ಹೊರತಾಗಿ ಮತ್ತೆ ೧೮೦ ಹೊಸ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ. ಇದಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದೆ. ಹೀಗೆ ಹೊಸದಾಗಿ ಖರೀದಿಸಲು ತೀರ್ಮಾನಿಸಿರುವ ಬಸ್‌ಗಳ ಪೈಕಿ 100 ಸೂಪರ್ ಕ್ಲಾಸ್ ಹಾಗೂ 50 ಆರ್ಡಿನರಿ ಬಸ್‌ಗಳು ಒಳಗೊಂಡಿವೆ. ಸೂಪರ್‌ಫಾಸ್ಟ್ ಸೇವೆ ನಡೆಸುತ್ತಿರುವ  ಬಸ್‌ಗಳ ನಿಗದಿತ ವರ್ಷಗಳ ಸೇವಾ ಅವಧಿ ಕೊನೆಗೊಂಡಿರುವುದೇ ಅದಕ್ಕೆ ಪರ್ಯಾಯವಾಗಿ ಈ ಹೊಸ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ಈಗ ಮುಂದಾಗಿರುವುದರ ಪ್ರಧಾನ …