ವಿಳಿಂಞ್ಞಂ ಬಂದರು ಎರಡನೇ ಹಂತದ ನಿರ್ಮಾಣಕ್ಕೆ ಇಂದು ಚಾಲನೆ

ತಿರುವನಂತಪುರ: ವಿಳಿಂಞ್ಞಂ ಬಂದರಿನ ಎರಡನೇ ಹಂತದ ನಿರ್ಮಾಣವನ್ನು ಇಂದು ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕೇಂದ್ರ ಶಿಪ್ಪಿಂಗ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಮುಖ್ಯ ಅತಿಥಿಯಾಗಿರುವರು. 10 ಸಾವಿರ  ಕೋಟಿ ರೂಪಾಯಿಗಳ ನಿರ್ಮಾಣ ಚಟುವಟಿಕೆಗಳನ್ನು ಎರಡನೇ ಹಂತದಲ್ಲಿ ನಡೆಸಲಾಗುವುದು. ಇದರೊಂದಿಗೆ ಬಂದರಿನ   ಅಭಿವೃದ್ಧಿ ಪೂರ್ತಿಯಾಗಲಿದೆ. 2028ರಲ್ಲಿ ನಿರ್ಮಾಣ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. ರೈಲ್ವೇ ಯಾರ್ಡ್, ಮಲ್ಟಿ ಪರ್ಪಸ್ ಬರ್ತ್, ಲಿಕ್ವಿಡ್ ಟರ್ಮಿನಲ್, ಟ್ಯಾಂಕ್ ಫಾಮ್ ಎಂಬಿವುಗಳು ಕೂಡಾ ದ್ವಿತೀಯ ಹಂತದಲ್ಲಿ ನಡೆಯಲಿದೆ. ವಿಳಿಂಞ್ಞಂನಲ್ಲಿ ಈಗಾಗಲೇ 710 ಹಡಗುಗಳಿಂದಾಗಿ …

ಹೊಯ್ಗೆ ಸಾಗಾಟ: 2 ವಾಹನ ವಶ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಎರಡು ಲೋಡ್ ಹೊಯ್ಗೆಯನ್ನು  ಎಸ್.ಐ ಶ್ರೀಜೇಶ್ ನೇತೃತ್ವದ ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಂದು ಟಿಪ್ಪರ್ ಲಾರಿ ಹಾಗೂ ಓಮ್ನಿ ವ್ಯಾನ್ ವಶಪಡಿಸಿ ಇಬ್ಬರನ್ನು ಬಂಧಿಸಲಾಗಿದೆ. ಓಮ್ನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಆರಿಕ್ಕಾಡಿ ಕೆ.ಪಿ. ರೆಸಾರ್ಟ್ ಬಳಿಯಿಂದ ವಶಪಡಿಸಿಕೊಂಡಿದ್ದು ಅದರಲ್ಲಿದ್ದ ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (40) ಎಂಬಾತನನ್ನು ಬಂಧಿಸಲಾಗಿದೆ. ಇದರ ಹೊರತು ವಳಯಂಕಡವು ಭಾಗದಿಂದ ಬಂದ್ಯೋಡು ಭಾಗಕ್ಕೆ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿದೆ. ಲಾರಿಯಲ್ಲಿದ್ದ ಮೀಂಜ ನಿವಾಸಿ …

ಕಾರು ಢಿಕ್ಕಿ ಹೊಡೆದು ಟ್ರಾನ್ಸ್‌ಫಾರ್ಮರ್ ಹಾನಿ: ತಪ್ಪಿದ ದುರಂತ

ಕಾಸರಗೋಡು: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಟ್ರಾನ್ಸ್ ಫಾರ್ಮರ್ ಹಾನಿಗೀಡಾದ ಘಟನೆ ತಚ್ಚಂಗಾಡ್‌ನಲ್ಲಿ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ ಅಪಘಾತವುಂಟಾಗಿದೆ. ತಚ್ಚಂಗಾಡ್ -ಪಾಲಕುನ್ನು ರಸ್ತೆಯಲ್ಲಿ ತಚ್ಚಂಗಾಡ್ ಜಂಕ್ಷನ್‌ನ ಟ್ರಾನ್ಸ್ ಫಾರ್ಮರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಪಾಲಕುನ್ನು ಭಾಗದಿಂದ ಬಂದ ಕಾರು ರಸ್ತೆಯಿಂದ ೨ ಮೀಟರ್ ದೂರದಲ್ಲಿರುವ ಟ್ರಾನ್ಸ್ ಫಾರ್ಮರ್‌ನ ಕಬ್ಬಿಣದ ಬೇಲಿ ಹಾಗೂ ಕಗ್ಗಲ್ಲಿನ ಕಟ್ಟೆಗೆ ಢಿಕ್ಕಿ ಹೊಡೆದು ನಿಂತಿದೆ. ಚಟ್ಟಂಚಾಲ್ ಭಾಗದ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಯುವಕರು …

ಜೀವ ತೆಗೆಯುವುದನ್ನು ತಡೆದ ಮಕ್ಕಳಿಗೆ ಹಣ್ಣು ನೀಡಿ ಪ್ರತ್ಯುಪಕಾರ: ಪಯಸ್ವಿನಿ ಮಾವಿನ ಮರ ಫಲವಿತ್ತ ಸಂಭ್ರಮ

ಕಾಸರಗೋಡು: ಹೊಸವರ್ಷದ ಹೊಸ ದಿನಗಳಲ್ಲಿ ನಿರೀಕ್ಷೆಯ ಹೊಸ ಕಿರಣಗಳೊಂದಿಗೆ ಮಾವಿನ ಮರ ಹೂಬಿಟ್ಟಿದೆ. ಪ್ರಕೃತಿಪ್ರೇಮಿಗಳು ಮಧ್ಯಪ್ರವೇಶಿಸಿ ಪುನರ್ಜನ್ಮ ನೀಡಿದ ಪಯಸ್ವಿನಿ ಮಾವಿನಮರ ಫಲ ಬಿಟ್ಟಿದೆ. ಮರ ತುಂಬ ಹೂಗಳಿದ್ದು ಕಾಯಿ ಕಂಡು ಬರುತ್ತಿದೆ. ೨೦೨೨ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯಂ ಗವಾಗಿ ಹೊಸ ಬಸ್ ನಿಲ್ದಾಣ ಬಳಿಯ ರಸ್ತೆ ಬದಿಯಿಂದ   ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯ ಮೈದಾನಕ್ಕೆ ಸ್ಥಳಾಂತರಿಸಿದ ಮಾವಿನ ಮರದಲ್ಲಿ ಈ ವರ್ಷ ಪ್ರಥಮವಾಗಿ ಮಾವಿನಕಾಯಿ ಕಂಡು ಬಂದಿದೆ. ಕಾಸರಗೋಡು ನಗರ ಹೃದಯ ದಲ್ಲಿ ಕವಯಿತ್ರಿ ಸುಗತಕುಮಾರಿ …

ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಅಪೂರ್ಣ: ಮುಷ್ಕರ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಇಂದಿನಿಂದ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದು 13 ವರ್ಷ ಕಳೆದರೂ  ಮೆಡಿಕಲ್ ಕಾಲೇಜು ಸಾಕ್ಷಾತ್ಕಾರಗೊ ಳ್ಳದಿರುವುದನ್ನು ಪ್ರತಿಭಟಿಸಿ ಇಂದಿನಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ನಡೆಸುವುದಾಗಿ ಮೆಡಿಕಲ್ ಕಾಲೇಜು ಮುಷ್ಕರ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 2013 ನವಂಬರ್ 30ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದಿ ದ್ದರು. ಬಳಿಕ 2014-15ರ ವರ್ಷದಲ್ಲಿ ಅಕಾಡೆಮಿಕ್ ಬ್ಲೋಕ್ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಹಣ ಮಂಜೂರು ಮಾಡಲಾಯಿತು. 2016 ಜನವರಿಯಲ್ಲಿ ಅಕಾಡೆಮಿಕ್ ಬ್ಲೋಕ್‌ನ …

ಚರಂಡಿಗೆ ಮಲಿನ ಜಲ ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನಿಗೆ ದಂಡ

ಉಪ್ಪಳ: ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಉಪ್ಪಳ ಪತ್ವಾಡಿ ರಸ್ತೆಯ ಚೆರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟ ಬಗ್ಗೆ ನೀಡಿದ ದೂರಿನಂತೆ ಕಾಸರಗೋಡು ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಲವನ್ನು ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನನ್ನು ಪತ್ತೆಹಚ್ಚಿ ೨೦,೦೦೦ ರೂ. ದಂಡ ವಸೂಲು ಮಾಡಿದೆ. ಮಲಿನಜಲ  ಹರಿದುಹೋಗುವಂತೆ ಮಾಡಲು ಸಿದ್ಧಪಡಿಸಿದ್ದ ಪೈಪ್‌ಲೈನನ್ನು ನಾಲ್ಕು ದಿನದೊಳಗೆ ತೆರವುಗೊಳಿಸಬೇಕೆಂದು ನಿರ್ದೇಶಿಸಲಾಗಿದೆ. ಪತ್ವಾಡಿ ಪ್ರಧಾನ ರಸ್ತೆ ಬದಿಯ ಖಾಸಗಿ ಸ್ಥಳದಲ್ಲಿ ಜೈವಿಕ ಸಹಿತ ತ್ಯಾಜ್ಯಗಳನ್ನು ಉಪೇಕ್ಷಿಸುವುದಕ್ಕೆ ಸೌಕರ್ಯ ಮಾಡಿಕೊಟ್ಟ ಸ್ಥಳದ ಮಾಲಕನಿಗೂ ದಂಡ ಹೇರಲಾಗಿದೆ. ಪೇಟೆಯ …

ರಿಪಬ್ಲಿಕ್ ದಿನಾಚರಣೆ: ಸಿದ್ಧತೆ ಪೂರ್ಣ

ಕಾಸರಗೋಡು: ಜನವರಿ 26ರ ಗಣರಾಜ್ಯ ದಿನಾಚರಣೆಗೆ ಜಿಲ್ಲೆಯಲ್ಲಿ ವಿಪುಲ ಸಿದ್ಧತೆ ನಡೆಸಲಾಗಿದೆ. ಅಂದು ಬೆಳಿಗ್ಗೆ ವಿದ್ಯಾನಗರ ನಗರಸಭಾ ಮೈದಾನದಲ್ಲಿ ನಡೆಯುವ ದಿನಾಚರಣೆಯಲ್ಲಿ  ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ರಾಷ್ಟ್ರೀಯ ಧ್ವಜಾರೋಹಣಗೈ ಯ್ಯುವರು. ಪರೇಡ್‌ನಲ್ಲಿ ವೀಕ್ಷಿಸುವ ಅವರು ಬಳಿಕ ರಿಪಬ್ಲಿಕ್ ದಿನ ಸಂದೇಶ ನೀಡುವರು. ಇಂದು ಬೆಳಿಗ್ಗೆ ವಿದ್ಯಾನಗರ ಮೈದಾನದಲ್ಲಿ ಸಮವಸ್ತ್ರ ಧರಿಸಿರುವ ಪರೇಡ್ ರಿಹರ್ಸಲ್ ನಡೆಯಿತು. ಎಆರ್ ಕ್ಯಾಂಪ್ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವ ನೀಡುವರು. ಪ್ಲಾಸ್ಟಿಕ್ ಮುಕ್ತವಾಗಿ ಪ್ರೊಟೋಕಾಲ್ ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ. ಪರೇಡ್‌ನಲ್ಲಿ …

ನಾಯ್ಕಾಪಿನ ನ್ಯಾಯವಾದಿ ಮನೆಯಿಂದ ಕಳವುಗೈದ ಆರೋಪಿ ಬಂಧನ: ಸೆರೆಗೀಡಾದುದು ಅಡ್ಯನಡ್ಕ ಬ್ಯಾಂಕ್‌ನಿಂದ ಕಳವುಗೈದ ಪ್ರಕರಣದ ಆರೋಪಿ

ಕುಂಬಳೆ: ನಾಯ್ಕಾಪು ನಿವಾಸಿಯೂ ಕಾಸರಗೋಡು ಬಾರ್‌ನ ನ್ಯಾಯವಾದಿಯಾದ ಚೈತ್ರಾ ಎಂಬವರ ಮನೆಯಿಂದ 29 ಪವನ್ ಚಿನ್ನ, 25 ಸಾವಿರ ರೂ.ಗಳ ಬೆಳ್ಳಿ ಆಭರಣಗಳು, ೫ ಸಾವಿರ ರೂಪಾಯಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ  ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯೂ, ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಯ ವಿವಿಧ ಸ್ಥಳಗಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾ ತನನ್ನು ಕರ್ನಾಟಕದಿಂದ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಕೆ.ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ …

ಪೊಲೀಸರ ಮೇಲೆ ಹಲ್ಲೆ:ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾ ಚರಿಸುವ ಮಲೆನಾಡ್ ಕಫೆ ಹೋಟೆಲ್‌ನಲ್ಲಿ  ಘರ್ಷಣೆ ನಡೆಯುತ್ತಿದೆಯೆಂಬ ಮಾಹಿತಿ ಯಂತೆ ಅಲ್ಲಿಗೆ ತಲುಪಿದ ಪೊಲೀಸರ ಮೇಲೆ ಹಲ್ಲೆಗೈದುದಾಗಿ ದೂರ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅಶೋಕನಗರ ಮುನ್ಸಿಪಲ್ ಕ್ವಾರ್ಟರ್ಸ್‌ನ ಸುಧೀಶ್ (42), ಕಾಞಂಗಾಡ್ ಕುಶಾಲನಗರದ ದೇವಿಪ್ರಸಾದ್ (37) ಎಂಬಿವರನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ 6 ಗಂಟೆ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಸ್ ನಿಲ್ದಾಣದ ಹೋಟೆಲ್‌ನಲ್ಲಿ …

ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರದಲ್ಲಿ: ಹಲವು ಅಭಿವೃದ್ಧಿ ಯೋಜನೆಗಳ ಘೋಷಣೆ; ಶಿಲಾನ್ಯಾಸ, ಅಮೃತ್ ಭಾರತ್ ರೈಲು ಸೇವೆಗೆ ಹಸಿರು ನಿಶಾನೆ

ತಿರುವನಂತಪುರ: ಪ್ರಧಾನ ಮಂತ್ರಿ ನರೇಂದ್ರಮೋದಿ ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಕೇರಳ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ನೇತಾರರೂ ಸೇರಿದಂತೆ ಹಲವು ಗಣ್ಯರು  ಭಾವ್ಯ ಸ್ವಾಗತ ನೀಡಿದರು. ನಂತರ ಪ್ರಧಾನಮಂತ್ರಿ ಅಲ್ಲಿಂದ ಪ್ರಧಾನ ಕಾರ್ಯಕ್ರಮ ನಡೆಯುವ ತಿರುವನಂತಪುರ ಪುತ್ತರಿಕಂಡ ಮೈದಾನ ತನಕ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ಸಹಸ್ರಾರು ಮಂದಿ ಜಮಾಯಿಸಿ    ಪ್ರಧಾನಿಯವರಿಗೆ  ಹೂಮಳೆಗರೆದು ಮುಗಿಲುಮುಟ್ಟುವ ಜೈಕಾರಗಳನ್ನು ಮೊಳಗಿಸಿದರು. ನಂತರ ಪುತ್ತರಿಕಂಡ …