ಕತ್ತಿ ತೋರಿಸಿ ಬೆದರಿಸಿ ಮಹಿಳೆಯ ಚಿನ್ನಾಭರಣ ಅಪಹರಣ: ಆರೋಪಿಗಳಿಗಾಗಿ ಶೋಧ

ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸರ ಅಪಹರಣ ಘಟನೆಗಳು  ಹೆಚ್ಚುತ್ತಿದ್ದು, ಸ್ಥಳೀಯರು ಬೀತಿಯಲ್ಲಿದ್ದಾರೆ. ಈ ತಿಂಗಳ 22ರಂದು ಹೊಸಂಗಡಿಯ ಎಸ್‌ಬಿಐ ಬ್ಯಾಂಕ್ ಸಮೀಪ ಸರ್ವೀಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಬಳಿ ಬಂದ ಸ್ಕೂಟರ್ ಸವಾರರು ಆಕೆಯ ಕುತ್ತಿಗೆಯಲ್ಲಿದ್ದ ಎರಡೂಕಾಲು ಪವನ್ ಚಿನ್ನದ ಸರವನ್ನು  ಲೂಟಿಗೈದ ಘಟನೆ ನಡೆದಿದ್ದು, ಇದರಲ್ಲಿ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇದೇ ರೀತಿಯ ಘಟನೆ ನಿನ್ನೆ ಬೆಳಿಗ್ಗೆ ಉಪ್ಪಳ ರೈಲ್ವೇ ನಿಲ್ದಾಣ ಪರಿಸರದ ಬಳಿ ನಡೆದಿದೆ. ಮೀನು ಮಾರುಕಟ್ಟೆಯಿಂದ ಮನೆಗೆ ತೆರಳುತ್ತಿದ್ದ …

ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟ: ಓರ್ವ ಸೆರೆ

ಕುಂಬಳೆ: ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀಂಜ ಜೋಡುಕಲ್ಲು ನವೋದಯ ನಗರದ ಗಿರೀಶ್ ಎ (40) ಎಂಬಾತ ಬಂಧಿತ ಆರೋಪಿ. ಕೇರಳ ನದಿ ಸಂರಕ್ಷಣೆ ಕಾನೂನಿಗೆ ವಿರುದ್ಧವಾಗಿ  ಲಾರಿಯಲ್ಲಿ ಹೊಳೆ ಹೊಯ್ಗೆಯನ್ನು ಕದ್ದು ಸಾಗಿಸಿದ ಸೆಕ್ಷನ್ ಪ್ರಕಾರ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೇರೂರು ಗ್ರಾಮದ ಚಿನ್ನಮೊಗರು ಎಂಬಲ್ಲಿ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆ ದಾರಿಯಾಗಿ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು …

ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ಧಿಗೆ 1 ತಿಂಗಳ ಆಯುಷ್ಯ: ಡಾಮರು ಎದ್ದು ಶೋಚನೀಯ ಸ್ಥಿತಿಗೆ ತಲುಪಿದ ರಸ್ತೆ : ಕಳಪೆ ಕಾಮಗಾರಿ ಆರೋಪ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಮ್ಮೇರಿ ತನಕ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ತಿಂಗಳಲ್ಲೇ ಅಲ್ಲಲ್ಲಿ ಡಾಮಾರು ಎದ್ದು ಶೋಚನೀಯಾವಸ್ಥೆಗೆ ತಲುಪಿದೆ. ಇದು ಕಳಪೆ ಕಾಮಗಾರಿಯಿಂದ ಎಂದು ಊರವರು ಆರೋಪಿಸಿದ್ದಾರೆ. ಅಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸಲಾಗುತ್ತಿದೆ. ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮುಕ್ಕಾಲು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಒಂದು ತಿಂಗಳಲ್ಲೇ ಹದಗೆಡಲು ಆರಂಭಿಸಿದ್ದು, ಊರವರಲ್ಲಿ ಆತಂಕ ಉಂಟುಮಾಡಿದೆ. ಈ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ, ಸಂಕ, ತಡೆಗೋಡೆಗಳು ನಿರ್ಮಿಸದಿರುವುದು …

ಜಯಂತಿ ಶೆಟ್ಟಿ ನಿಧನ

ಉಪ್ಪಳ: ಮಂಗಲ್ಪಾಡಿ ತಿಂಬರ ನಿವಾಸಿ ನವಿ ಮುಂಬಯಿ ಬೇಲಾಪುರ್‌ನಲ್ಲಿ ವಾಸವಾಗಿರುವ ಹಿರಿಯ ಹೋಟೆಲ್ ಉದ್ಯಮಿ, ದಾನಿ ಸಂಜೀವ ಶೆಟ್ಟಿ ತಿಂಬರ ರವರ ಪತ್ನಿ ಜಯಂತಿ ಶೆಟ್ಟಿ (63) ನಿನ್ನೆ ಮುಂಜಾನೆ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಅರುಣ್ ಶೆಟ್ಟಿ, ಅಜಿತ್ ಶೆಟ್ಟಿ, ಅಶ್ವಿಥ್ ಶೆಟ್ಟಿ, ಸೊಸೆಯಂದಿರಾದ ಕಲ್ಪಿತ, ಶಮಿತ, ಸೌಮ್ಯ, ಸಹೋದರ ರಮೇಶ ಆಳ್ವ ತಿಂಬರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಎಡನೀರು: ಮುಳಿಯಾರು ಪಂಚಾಯತ್ ವ್ಯಾಪ್ತಿಯ ಎಡನೀರು ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಬ್ರಹ್ಮಕಲಶ ಸಮಿತಿ ರಚನೆ ಎಡನೀರು ಮಠದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಆಶೀರ್ವಚನ ನೀಡಿದರು. ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಗೆ ಮಧು ಸೂದನ ಆಯರ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ವಾಮನ ಆಚಾರ್ಯ ಬೋವಿಕ್ಕಾನ ಪ್ರಧಾನ ಕಾರ್ಯದರ್ಶಿಯಾಗಿ, ಈಶ್ವರ ಭಟ್ ವಡಕ್ಕೇಮೂಲೆ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ೧೦೧ …

ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ ವಿಳಂಬಗತಿಯಲ್ಲಿ: ಮರ್ಚೆಂಟ್ಸ್ ಅಸೋಸಿಯೇಶನ್‌ನಿಂದ ಪ್ರತಿಭಟನಾ ಉಪವಾಸ ಮುಷ್ಕರ

ಚೆರ್ಕಳ: ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ, ನಿರ್ಮಾಣದಲ್ಲಿ ತಾರತಮ್ಯ ನೀತಿ ಮುಂದುವರಿಸಿದರೆ ಅನಿರ್ದಿಷ್ಟಾವಧಿ ಕಾಲ ಮುಷ್ಕರ ಆರಂಭಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಎಚ್ಚರಿಸಿದ್ದಾರೆ. ನಾಲ್ಕು ವರ್ಷ ಪೂರ್ತಿಗೊಂಡರೂ ಅರ್ಧ ಕೆಲಸ ಕೂಡ ಮುಗಿಸಲು ಸಾಧ್ಯವಾಗದೆ ಜಿಲ್ಲಾಡಳಿತ ಸಮಯಾಸಮಯಗಳಲ್ಲಿ ನೀಡುತ್ತಿರುವ ನಿರ್ದೇಶಗಳನ್ನೆಲ್ಲ ಗಾಳಿಗೆ ತೂರಿ ಎನ್‌ಎಚ್ 66 ಚೆಂಗಳ-ನೀಲೇಶ್ವರ ರೀಚ್‌ನ ನಿರ್ಮಾಣ ಹೊಣೆಯಿರುವ ಮೆಗಾ ಕನ್‌ಸ್ಟ್ರಕ್ಷನ್ ಕಂಪೆನಿಯ ನೀತಿರಹಿತವಾದ ಕ್ರಮವನ್ನು ಪ್ರಶ್ನಿಸಿ ಚೆರ್ಕಳ ಮರ್ಚೆಂಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಚೆರ್ಕಳದಲ್ಲಿ ಜನಪರ ಒಕ್ಕೂಟ ನಡೆಸಿದ ಏಕ ದಿನ ಉಪವಾಸ ಮುಷ್ಕರವನ್ನು …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಬಳಿ ಹಸಿರು ನಮನೋತ್ಸವಕ್ಕೆ ಚಾಲನೆ

ಪೆರಡಾಲ: ಪೆರಡಾಲ ಶ್ರೀ ಉದ ನೇಶ್ವರ ದೇವಸ್ಥಾನದ ಆವರಣದಲ್ಲಿ ‘ಶ್ರೀ ಉದನೇಶ್ವರ ಹಸಿರು ನಮ ನೋತ್ಸವ’ ಎಂಬ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದೇವಸ್ಥಾನದ ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಡ್ವ. ವೆಂಕಟ್ರಮಣ ಭಟ್ ಚಂಬಲ್ತಿಮಾರು ಮಾತನಾಡಿ, ದೇವರ ಸೇವೆ ಜೊತೆಗೆ ಪ್ರಕೃತಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಹಸಿರು ನಮನೋತ್ಸವ ವನ್ನು ಪ್ರತಿ ವರ್ಷ ಆಚರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಕರೆ ನೀಡಿದರು. ಬ್ರಹ್ಮ …

ಕನ್ನಡ ಗ್ರಾಮದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಾಳೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಫ್ರೀಲ್ಯಾನ್ಸ್ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕನ್ನಡ ಪತ್ರಿಕೋಧ್ಯಮ ದಿನಾಚರಣೆ, ಪತ್ರಿಕಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜಿಲ್ಲೆಯಲ್ಲಿ ಕನ್ನಡ ಪತ್ರಿಕೋಧ್ಯಮ ನಡೆದು ಬಂದ ದಾರಿ- ಉಪನ್ಯಾಸ ನಾಳೆ ಸಂಜೆ ೪ ಗಂಟೆಗೆ ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಈ ವೇಳೆ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಛಾಯಾಗ್ರಾಹಕ ಶ್ರೀಕಾಂತ್ ಕಾಸರ ಗೋಡರನ್ನು ಅಭಿನಂದಿಸಲಾಗುವುದು. …

ಕಾಸರಗೋಡಿನಲ್ಲಿ ನಾಳೆ ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಾಳೆ ಕನ್ನಡ ಪತ್ರಿಕಾ ದಿನಾಚರಣೆ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರ ಮವನ್ನು ಗೀತಾ ಪ್ರಕಾಶನದ ಸಂಪಾದಕ ಕೆ.ವಿ.ರಮೇಶ್ ಉದ್ಘಾಟಿಸುವರು.  ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ ಅಧ್ಯಕ್ಷತೆ ವಹಿಸುವರು. ಕೆಸಿಎನ್ ಚಾನೆಲ್‌ನ  ನಿರ್ದೇಶಕ ಪುರುಷೋತ್ತಮ ನಾಕ್ ಸಹಿತ ಹಲವರು ಉಪಸ್ಥಿತರಿರುವರು. ಈ ವೇಳೆ  ಕಾಸರಗೋಡು ಹೊಸ ಬಸ್ ನಿಲ್ದಾಣದ …

ಪೈವಳಿಕೆ ತ್ಯಾಜ್ಯ ಸಮಸ್ಯೆ ಡಿಫಿಯಿಂದ ಪಂಚಾಯತ್ ಮಾರ್ಚ್

ಪೈವಳಿಕೆ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ರೀತಿ ಕೈಬಿಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಪೈವಳಿಕೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿತು.  ವಿಲೇವಾರಿ ಕೇಂದ್ರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಪಂಚಾಯತ್‌ಗೆ ಪ್ರತಿಭಟನೆ ನಡೆಸಿದೆ. ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಉದಯ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಅಬ್ದುಲ್ ರಜಾಕ್ ಚಿಪ್ಪಾರ್, ಸಾಬಿರ್ ಉಪ್ಪಳ, ಹಾರಿಸ್ ಪೈವಳಿಕೆ, ಮಹೇಶ್ ಕುಮಾರ್, ಅಬ್ದುಲ್ ಆಸೀಫ್, ಝಕರಿಯ …