ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರು ಮಂಜೇಶ್ವರದಲ್ಲಿ

ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಎಂಬಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 230113 ಮತದಾರರಿದ್ದಾರೆ. ಇದರಲ್ಲಿ 115801 ಪುರುಷರು ಮತ್ತು 114312 ಮಹಿಳೆಯರು ಒಳಗೊಂಡಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 105824 ಪುರುಷರು, 105399 ಮಹಿಳೆಯರು ಸೇರಿ ಒಟ್ಟು 210923 ಮತದಾರರಿದ್ದಾರೆ. ಉದುಮ ಕ್ಷೇತ್ರದಲ್ಲಿ 112166 ಪುರುಷರು, 116342 ಮಹಿಳೆಯರು, ನಾಲ್ವರು ಮಂಗಳಮುಖಿ ಯರು ಸೇರಿ ಒಟ್ಟು 258512 ಮತದಾರರಿದ್ದಾರೆ. ಹೊಸದುರ್ಗ ಕ್ಷೇತ್ರದಲ್ಲಿ ಒಟ್ಟು 223980 ಮತದಾರರಿದ್ದು, ಇದರಲ್ಲಿ 109008 ಪುರುಷರು, 114966 …

ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಕಾರ್ಯಕರ್ತರ ಸಮಾವೇಶ

ಉಪ್ಪಳ:  ಬಿಜೆಪಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಾರ್ಯಕರ್ತರ ಸಮಾವೇಶ ನಿನ್ನೆ ಸಂಜೆ ಸೋಂಕಾಲಿನಲ್ಲಿರುವ ಮಂಜೇಶ್ವರ ವಿಧಾನ ಸಭಾ  ಚುನಾವಣಾ ಕಚೇರಿಯಲ್ಲಿ ನಡೆಯಿತು.  ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷ,  ಜಿಲ್ಲಾ ಬಿಜೆಪಿ ಪ್ರಭಾರಿ ರಘುನಾಥ್ ಚುನಾವಣೆ  ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್, …

ಜಿಲ್ಲೆಯಲ್ಲಿ ಡೀಲ್ ನಡೆದಿದ್ದು ಎನ್‌ಡಿಎ ಮತ್ತು ಯುಡಿಎಫ್ ಮಧ್ಯೆ-ಎಂ.ವಿ. ಜಯರಾಜನ್

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಡೀಲ್ ನಡೆದದ್ದು ಎಡರಂಗ ಮತ್ತು ಎನ್‌ಡಿಎ ಮಧ್ಯೆ ಅಲ್ಲ, ಬದಲಾಗಿ ಯುಡಿಎಫ್ ಮತ್ತು ಎನ್‌ಡಿಎ ನಡುವೆ ಎಂದು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಹೇಳಿದ್ದಾರೆ. ಕಾಸರ ಗೋಡಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಎಡರಂಗದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಳಿಸಿದ್ದು, ಬಿಜೆಪಿಗೆ ಸಹಾಯ ಒದಗಿಸುವ ಉದ್ದೇಶದಿಂದ  ಎಡರಂಗ ಮತ್ತು ಬಿಜೆಪಿ ಮಧ್ಯೆ ಮಾಡಿಕೊಳ್ಳಲಾದ ಒಂದು ಡೀಲ್ ಆಗಿದೆಯೆಂದು ಯುಡಿಎಫ್ ಆರೋಪಿಸಿದ್ದು, …

ಬಾಲಕಿಯ ಮುಂದೆ ನಗ್ನತೆ ಪ್ರದರ್ಶನ: ಮಣಿಯಂಪಾರೆಯಲ್ಲಿ ವಾಸಿಸುವ ಯುವಕ ಸೆರೆ

ಕುಂಬಳೆ: 12ರ ಹರೆಯದ ಬಾಲಕಿಯ ಮುಂದೆ ನಗ್ನತೆ ಪ್ರದ ರ್ಶಿಸಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ವಯನಾಡ್ ಕಲ್ಪೆಟ್ಟ ನಿವಾಸಿಯೂ ಶೇಣಿ ಮಣಿಯಂಪಾರೆ ಯಲ್ಲಿ ವಾಸಿಸುವ ಅದ್‌ನುಲ್ ಫಾರಿಸ್ (22) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾ ಲಯದಲ್ಲಿ ಹಾಜರು ಪಡಿಸಲಾಗುವುದು. ನಿನ್ನೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾರಿನೊಂದಿಗೆ ತಲುಪಿದ ಅದ್‌ನುಲ್ ಫಾರಿಸ್ …

ಮನೆಗೆ ನುಗ್ಗಿ ಬೆಲೆಬಾಳುವ ಸಾಮಗ್ರಿಗಳನ್ನು ಕಳವುಗೈದ ಇಬ್ಬರು ಆರೋಪಿಗಳ ಸೆರೆ

ಕಾಸರಗೋಡು: ಬೀಗ ಒಡೆದು ಮನೆಯೊಳಗೆ ನುಗ್ಗಿ ಭಾರೀ ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ನೈಮಾರ ನಿವಾಸಿ ಶೆಟ್ಟರ್ ಜಲೀಲ್ (38) ಮತ್ತು ಮಂಗಲಾಡಂ ನಿವಾಸಿ ವಿಶ್ವನಾಥನ್ (35) ಬಂಧಿತ ಆರೋಪಿಗಳು. ಕಳೆದವರ್ಷ ಡಿಸೆಂಬರ್ ೨೬ರಂದು ಅಂಬಲತ್ತರಕ್ಕೆ ಸಮೀಪದ ಮುಟ್ಟಿಚರಲಿಯ ಮನೆಯೊಂದರ ಬೀಗ ಒಡೆದು ಒಳನುಗ್ಗಿ ಲ್ಯಾಪ್‌ಟೋಪ್, ಕ್ಯಾಮರಾ ಸೇರಿದಂತೆ ಒಂದು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಬೈಕ್‌ನಲ್ಲಿ …

ಹೃದಯಾಘಾತದಿಂದ ಯುವಕ ನಿಧನ

ಕುಂಬಳೆ: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದರು. ಪೊನ್ನೆಂಗಳ ಮುಗು ರೋಡ್ ನಿವಾಸಿ ದಿ| ನಾರಾಯಣ ಎಂಬವರ ಪುತ್ರ ಕುಮಾರನ್ (40) ಮೃತಪಟ್ಟ ವ್ಯಕ್ತಿ. ಇವರು ಟೈಲ್ಸ್ ಕಾರ್ಮಿಕನಾಗಿದ್ದರು. ಇಂದು ಮುಂಜಾನೆ 3.30ರ ವೇಳೆ ಇವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಮನೆಯವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಆದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಜಾನಕಿ, ಸಹೋದರ ವಿಜಯ, …

ಬಿಜೆಪಿ ರೋಡ್‌ಶೋ 28ರಂದು: ತೇಜಸ್ವಿ ಸೂರ್ಯ ಬದಿಯಡ್ಕಕ್ಕೆ

ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್.ರ ಪ್ರಚಾರಾರ್ಥ ಬೆಂಗಳೂರು ಸಂಸದ, ಯುವಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ತಿಂಗಳ 28ರಂದು ಸಂಜೆ 4 ಗಂಟೆಗೆ ಬದಿಯಡ್ಕಕ್ಕೆ ತಲುಪುವರು. ಅಂದು ಬದಿಯಡ್ಕದಲ್ಲಿ ನಡೆಯುವ ರೋಡ್‌ಶೋದಲ್ಲಿ ಅವರು ಭಾಗವಹಿಸುವರು. ಬೋಳುಕಟ್ಟೆ ಮೈದಾನ ಬಳಿಯಿಂದ ಆರಂಭವಾಗುವ ರೋಡ್‌ಶೋ ಪೇಟೆ ಸುತ್ತಿ ಸಮಾಪ್ತಿಗೊಳ್ಳಲಿದೆ.

ಅಬುದಾಬಿ ಕೆಎಂಸಿಸಿ ಮಾಜಿ ನೇತಾರ ನಿಧನ

ಕುಂಬಳೆ: ಸಾಮಾಜಿಕ, ಸಾಂಸ್ಕೃತಿಕ, ಕ್ಷೇಮ ಚಟುವಟಿಕೆಗಳಲ್ಲಿ ನಿರತನಾಗಿದ್ದ ಮಾಜಿ ಅಬುದಾಬಿ ಕೆಎಂಸಿಸಿ ನೇತಾರನೂ, ದುಬೈ ಮಲಬಾರ್ ಕಲಾ ಸಾಂಸ್ಕೃತಿಕೆಯ ವೇದಿಕೆ ಕೋಶಾಧಿಕಾರಿಯಾದ ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಾಳಿಗ ಕುಂಬೋಲ್ (53) ನಿಧನ ಹೊಂದಿದರು. ದುಬೈಯಲ್ಲಿ ಅಲ್‌ಜಬೀನ್ ಎಂಬ ಸಂಸ್ಥೆಯ ಮೆನೇಜಿಂಗ್ ಡೈರಕ್ಟರ್ ಆಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ದಿ| ಕುಂಬೋಲ್ ಸಯ್ಯಿದ್ ಮುಹಮ್ಮದ್ ತಂಙಳ್ ಮಾಳಿಗ-ಮೈಮೂನ ಬೀವಿ ದಂಪತಿ ಪುತ್ರನಾದ ಮೃತರು ಪತ್ನಿ ಸಯ್ಯಿದತ್ ಅಸ್ಮಾ ಬೀವಿ, ಮಕ್ಕಳಾದ ಸಯ್ಯಿದ್ ಇಸ್ಮಾಯಿಲ್, …

ಜಿಮ್ನೇಶ್ಯಮ್ ಮರೆಯಲ್ಲಿ ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿ ಸೆರೆ

ತೃಶೂರು: ಜಿಮ್ನೇಶ್ಯಮ್ ಹಾಗೂ ಬ್ಯೂಟಿ ಸೆಲೂನ್‌ನ ಮರೆಯಲ್ಲಿ  ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ತೃಪ್ರಯಾರ್‌ನ ಜಿಮ್ನೇಶ್ಯಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೆರಿಂಙೋಟುಕರ ತಾನ್ಯಂ ನಿವಾಸಿ ಶ್ರೀಲಕ್ಷ್ಮಿ (30) ಸೆರೆಗೀಡಾದ ಯುವತಿ. ಈಕೆಯ ಕೈಯಿಂದ 2.270 ಕಿಲೋ ಗ್ರಾಂ ಹ್ಯಾಶಿಶ್ ಆಯಿಲ್, 90,500 ರೂ. ಹಾಗೂ ಹ್ಯಾಶಿಶ್ ಆಯಿಲ್ ಮಾರಾಟ ನಡೆಸಲು ಉಪಯೋಗಿತ್ತಿದ್ದ 50 ಖಾಲಿ ಪ್ಲಾಸ್ಟಿಕ್ ಬಾಟ್ಲಿ ಮೊದಲಾದವುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಆಧಾರದಲ್ಲಿ ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ …

ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ವಿವಿಧೆಡೆ ಗೃಹ ಸಂಪರ್ಕ

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು  ಬೆಳಿಗ್ಗೆ ಮಧೂರು ಪೂರ್ವವಲಯ, ಮಧೂರು ಪಶ್ಚಿಮವಲಯದಲ್ಲಿ  ಗೃಹ ಸಂಪರ್ಕ ನಡೆಸಿ ಮತಯಾಚಿಸಿದರು. ಅಪರಾಹ್ನ ನಗರಸಭಾ ವೆಸ್ಟ್ ಏರಿಯಾ, ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ಗೃಹ ಸಂಪರ್ಕ ನಡೆಸುವರು. ನಿನ್ನೆ ಬದಿಯಡ್ಕ ಪಂಚಾ ಯತ್‌ನ ವಿವಿಧ ಕಡೆಗಳಲ್ಲಿ ಮತ ಯಾಚನೆ ನಡೆಸಿದ್ದು, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್‌ರನ್ನು ಭೇಟಿ ಯಾದರು. ಬಳಿಕ ಅಳಕ್ಕೆ ತರವಾಡು ಮನೆ, ನೀರ್ಚಾಲು ಪೇಟೆ, ಕುಮಾರಮಂಗಲ ಪರಿಸರದಲ್ಲಿ ಮತ ಯಾಚಿಸಿದರು. ಇವರ ಜೊತೆ …