ಬಿಜೆಪಿಯಿಂದ ಧರಣಿ ಮುಷ್ಕರ: ರಾಜ್ಯದಲ್ಲಿ ಅತೀ ಹೆಚ್ಚು ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವುದು ಕಾಸರಗೋಡು ನಗರಸಭೆ-ವಿ.ಕೆ. ಸಜೀವನ್

ಕಾಸರಗೋಡು: ಬಿಜೆಪಿಯ ಕಾಸರ ಗೋಡು ನಗರ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಮುನಿಸಿಪಾಲಿಟಿ ಟೌನ್ ಹಾಲ್ ಪರಿಸರದಲ್ಲಿ ನಿನ್ನೆ ಧರಣಿ ಮುಷ್ಕರ ಹೂಡಲಾಯಿತು. ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಉದ್ಘಾಟಿಸಿದರು. ಕೇರಳದಲ್ಲಿ ಅತೀ ಹೆಚ್ಚು ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವುದು ಕಾಸರಗೋಡು ನಗರಸಭೆಯಾಗಿದೆ.  ಅಲ್ಲಿ ಭ್ರಷ್ಟಾಚಾರ ಮತ್ತು ಭಾರೀ ಅವ್ಯವಹಾರಗಳೂ ನಡೆಯುತ್ತಿವೆ.  ವಿವಿಧ ಯೋಜನೆಗಳಿಗೆ ಸಂಬಂಧಿಸಿ ನಗರಸಭೆಯಲ್ಲಿ  ಭಾರೀ ಅವ್ಯವಹಾರ ನಡೆದಿದ್ದು ಆ ಬಗ್ಗೆ ಹಲವು ರೀತಿಯ ತನಿಖೆಗಳನ್ನು ನಗರಸಭೆ ಎದುರಿಸುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಎದುರಿಸುತ್ತಿರುವ  …

ಅಸೌಖ್ಯ: ಮುಸ್ಲಿಂ ಲೀಗ್ ಕಾರ್ಯಕರ್ತ ನಿಧನ

ಮುಳಿಯಾರು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮುಳಿಯಾರಿನ ಮುಸ್ಲಿಂಲೀಗ್ ಕಾರ್ಯಕರ್ತ ಬೋವಿಕ್ಕಾನ ಬಾಲನಡ್ಕ ನಿವಾಸಿ ಜಾಫರ್ ಸೈಫ್ (47) ನಿಧನ ಹೊಂದಿದರು. ಕರುಳು ಸಂಬಂಧವಾದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು.  ದಿ| ಅಬ್ದುಲ್ಲ-ಮರಿಯಾ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಮಿಸ್ರಿಯಾ, ಮಕ್ಕಳಾದ ಸಾನಿಯಾ, ಸಾನಿಫ್, ಸಹೋದರರಾದ ಅಶ್ರಫ್, ನಾಸರ್, ಸಹೋದರಿ ಸಕೀನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕುಂಬಳೆ ಟೋಲ್ ಪ್ಲಾಜಾ: ಹೈಕೋರ್ಟ್‌ನ ಮಧ್ಯಪ್ರವೇಶ ನಿರೀಕ್ಷೆ ಹುಟ್ಟಿಸುತ್ತಿದೆ- ಶಾಸಕ ಎಕೆಎಂ ಅಶ್ರಫ್

ಉಪ್ಪಳ: ಕುಂಬಳೆಯಲ್ಲಿ ಟೋಲ್ ಪ್ಲಾಜಾ ಕಾರ್ಯಾಚರಿಸಲು, ನೇಶನಲ್ ಹೈವೇ ಟೋಲ್ ಸಂಗ್ರಹಿಸಲು ಪ್ರಸ್ತುತ ನೇಶನಲ್ ಹೈವೇ ಪ್ರಾಧಿಕಾರಕ್ಕೆ ಕೇಂದ್ರ ಸರಕಾರದ ಒಪ್ಪಿಗೆ ಇಲ್ಲ ಎಂಬ ಹೈಕೋರ್ಟ್‌ನ ಮಧ್ಯಪ್ರವೇಶ ನಿರೀಕ್ಷೆ ನೀಡುತ್ತಿದೆ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಶಾಸಕ ಎಕೆಎಂ ಅಶ್ರಫ್ ನುಡಿದರು. ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮುಂದುವರಿಯುತ್ತಿರುವ ಜನಪರ ಮುಷ್ಕರ ಹೈಕೋರ್ಟ್ ಹಾಗೂ ಕೇಂದ್ರ ಸರಕಾರದ ಅನುಕೂಲ ನಿಲುವಿಗೆ ಕಾರಣವಾಗಬಹುದೆಂದು ನಿರೀಕ್ಷಿಸುತ್ತಿರುವುದಾಗಿಯೂ ಅವರು ನುಡಿದರು. ಕೇಂದ್ರ ಸರಕಾರದ ಅನುಮತಿ ರಹಿತವಾಗಿ ಟೋಲ್ ಪ್ಲಾಜಾ ಕಾರ್ಯಾರಂಭಗೊಳಿಸಲು, ಟೋಲ್ ಸಂಗ್ರಹಿಸಲು …

ಪೊಲೀಸ್ ಹಲ್ಲೆ ಆರೋಪ: ಸಂಸದ ಶಾಫಿ ಪರಂಬಿಲ್‌ರಿಗೆ ತುರ್ತು ಶಸ್ತ್ರಚಿಕಿತ್ಸೆ

ಕಲ್ಲಿಕೋಟೆ: ಪೇರಾಂಬ್ರದಲ್ಲಿ ಯುಡಿಎಫ್- ಸಿಪಿಎಂ ಪ್ರತಿಭಟನೆ ಮೆರವಣಿಗೆ ಮಧ್ಯೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡ ಸಂಸದ ಶಾಫಿ ಪರಂಬಿಲ್‌ರನ್ನು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಶಾಸಕ ಟಿ. ಸಿದ್ದಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಫಿಯ ಮೂಗಿನ ಎಲುಬಿಗೆ ಗಾಯವುಂಟಾಗಿದೆ ಎಂದು,  ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಮೂಗಿನ ಎಲುಬು ಮುರಿದ ಬಗ್ಗೆ ತಿಳಿದು ಬಂದಿತ್ತು. ಐದು ದಿನದ ವಿಶ್ರಾಂತಿ ಡಾಕ್ಟರ್‌ಗಳು ನಿರ್ದೇಶಿಸಿದ್ದಾರೆ. ಪೇರಾಂಬ್ರ ಸಿಕೆಜಿ ಕಾಲೇಜ್ ಯೂನಿಯನ್ ಚುನಾವಣೆಗೆ …

ಕಾಂಗ್ರೆಸ್ ಮುಖಂಡ ಬೇಕಲ ನಿವಾಸಿ ವಿದೇಶದಲ್ಲಿ ನಿಧನ

ಕಾಸರಗೋಡು: ಮುಂಬೈಯಲ್ಲಿ ವಾಸಿಸುತ್ತಿರುವ ಮೂಲತಃ ಬೇಕಲ ನಿವಾಸಿ ಬಿ.ಕೆ. ಕೃಪಾಲಿನಿ (76) ನಿಧನ ಹೊಂದಿದರು. ನೆದರ್‌ಲ್ಯಾಂಡ್‌ನ ಆಮ್‌ಸ್ಟರ್ ಡಾಮ್‌ನಲ್ಲಿ ನಿಧನ ಸಂಭವಿಸಿದೆ. ನೇಶನಲ್ ಮಾರಿಟೈಮ್ ಅಕಾಡೆಮಿ ಎಂಬ ಶಿಪ್ಪಿಂಗ್ ಕೋಚಿಂಗ್ ಸೆಂಟರ್‌ನ ಮಾಲಕನಾಗಿದ್ದಾರೆ. ಮುಂಬೈ ನೋರ್ತ್ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಮಾಜಿ ಸದಸ್ಯನಾಗಿದ್ದರು. ಮೃತರು ಪತ್ನಿ ವಿನೋದಿನಿ, ಮಕ್ಕಳಾದ ವಿಖಿಲ್, ಡಾ| ಕವಿತ, ಡಾ| ನಿಖಿತಾ ಪ್ರಪುಲ್, ಸೊಸೆ ಗ್ರೀಷ್ಮ, ಸಹೋದರರಾದ ನ್ಯಾಯವಾದಿ ಬಿ.ಕೆ. ಅಶೋಕ್, ಬಿ.ಕೆ. ಮುರಳಿ, ಸಹೋದರಿ ಯರಾದ ಅರುಣ …

ಚಿನ್ನವನ್ನು ತಾಮ್ರವಾಗಿ ಬದಲಿಸಿದ ಪಿಣರಾಯಿ ವಿಜಯನ್ ನೋಬೆಲ್ ಪ್ರಶಸ್ತಿಗೆ ಅರ್ಹರು-ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಆಲ್‌ಕೆಮಿಸ್ಟ್‌ಗಳು ಲೋಹವನ್ನು ಚಿನ್ನವನ್ನಾಗಿ ಮಾಡುವವ ರಾಗಿದ್ದರೆ, ಚಿನ್ನವನ್ನು ತಾಮ್ರವನ್ನಾಗಿ ಬದಲಿಸುವವರಾಗಿದ್ದಾರೆ ಕಮ್ಯೂನಿಸ್ಟರೆಂದು, ಶಬರಿಮಲೆಯ ಶಿಲ್ಪದ ಚಿನ್ನದ ಕವಚವನ್ನು ತಾಮ್ರವಾಗಿ ಬದಲಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ರಸಾಯನಶಾಸ್ತ್ರದಲ್ಲಿ ನೋಬೆಲ್ ಬಹುಮಾನಕ್ಕೆ ಅರ್ಹರಾಗಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕಾರಡ್ಕ ಪಂಚಾಯತ್ ಬಿಜೆಪಿ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಸರಕಾರದ ಜನಕ್ಷೇಮ ಯೋಜನೆಗಳ ಪ್ರಚಾರದೊಂದಿಗೆ, ಪಿಣರಾಯಿ ವಿಜಯನ್‌ರ ಭ್ರಷ್ಟಾಚಾರ ಆಡಳಿತವನ್ನು, ದೇವಸ್ವಂ ಬೋರ್ಡ್ ಕ್ಷೇತ್ರಗಳ ದರೋಡೆಯನ್ನು ಜನರ ಮುಂದಿಡಲು ಅಶ್ವಿನಿ ಕಾರ್ಯಕರ್ತರಲ್ಲಿ …

ರೈಲ್ವೇ ನಿಲ್ದಾಣದ ಹೋಟೆಲ್‌ಗಳಲ್ಲಿ ಮಿಂಚಿನ ತಪಾಸಣೆ

ಕಾಸರಗೋಡು: ರಾಜ್ಯದ ರೈಲ್ವೇ ನಿಲ್ದಾಣಗಳ ಹೋಟೆಲ್‌ಗಳಲ್ಲಿ ರೈಲ್ವೇ ಪೊಲೀಸರ ನೇತೃತ್ವದಲ್ಲಿ ಮಿಂಚಿನ ತಪಾಸಣೆ ನಡೆಸಲಾಯಿತು. ‘ಆಪರೇಶನ್ ಪೊದಿಚ್ಚೋರ್’ ಯೋಜನೆಯಂಗವಾಗಿ ಕ್ಯಾಟ್ರಿಂಗ್ ಸ್ಟಾಲ್‌ಗಳಲ್ಲೂ ಕೆಎಸ್‌ಆರ್‌ಟಿಸಿ ಬಳಿಯ ಹೋಟೆಲ್‌ಗಳಲ್ಲೂ ತಪಾಸಣೆ ನಡೆಸಲಾಯಿತು. ಕಾಸರಗೋಡು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ ಕಾರ್ಯಾಚರಿಸುವ ಹೋಟೆಲ್‌ಗಳಲ್ಲೂ, ತಾಯಲಂಗಾಡಿಯಲ್ಲಿ ಕಾರ್ಯಾಚರಿ ಸುವ ವಂದೇ ಭಾರತ್ ಬೇಸ್ ಕಿಚನ್‌ನಲ್ಲಿ ಕೂಡಾ ಪರಿಶೀಲನೆ ನಡೆಸಲಾಯಿತು. ಆದರೆ ಹಳಸಿದ ಆಹಾರಗಳನ್ನು ಇಲ್ಲಿಂದ ಪತ್ತೆಹಚ್ಚಲಾ ಗಲಿಲ್ಲ. ರೈಲ್ವೇ ಸ್ಟೇಶನ್ ಎಸ್‌ಎಚ್‌ಒ ರೆಜಿ ಕುಮಾರ್ ನೇತೃತ್ವ ನೀಡಿದರು.

ಮಧೂರು ಪಂ. ಕೇರಳೋತ್ಸವ ಹೊರತುಪಡಿಸಿದ ವಿರುದ್ಧ ಯೂತ್ ಲೀಗ್ ಪ್ರತಿಭಟನೆ

ಮಧೂರು: ಕೇರಳೋತ್ಸವವನ್ನು ಹೊರತುಪಡಿಸಿದ ಮಧೂರು ಪಂಚಾಯತ್ ವಿರುದ್ಧ ಯೂತ್ ಲೀಗ್ ಪ್ರತಿಭಟಿಸಿದೆ. ಪಂಚಾಯತ್ ಮೈದಾನವನ್ನು ಸಂರಕ್ಷಿಸಬೇಕು ಎಂದು ಯೂತ್ ಲೀಗ್ ಈ ವೇಳೆ ಆಗ್ರಹಿಸಿದೆ. ಪಂಚಾಯತ್ ಕಚೇರಿ ಮುಂಭಾಗ ಯುವಕರು ಕಾಲ್ಚೆಂಡಾಟ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಕೇರಳೋತ್ಸವದ ಸ್ಪರ್ಧಾ ಫಲಿತಾಂಶಗಳನ್ನು ಬುಡಮೇ ಲುಗೊಳಿಸಿರುವುದು ವಿವಾದಕ್ಕೆ, ಘರ್ಷಣೆಗೆ ಹೇತುವಾಗಿತ್ತೆಂದು ಯೂತ್ ಲೀಗ್ ಆರೋಪಿಸಿದೆ. ಈ ವರ್ಷ ಕೇರಳೋತ್ಸವ ನಡೆಸಿದರೆ ಅದರ ಮುಂದುವರಿಕೆ ಉಂಟಾಗಬಹುದು ಎಂದು ಅದು ಮುಂದೆ ಬರಲಿರುವ ಚುನಾವಣೆಯಲ್ಲಿ ತಿರುಗೇಟಾಗಬಹುದೆಂದು ಹೆದರಿ ಆಡಳಿತ ಸಮಿತಿ …

ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ: ಗಾಯಗೊಂಡ ಇಲೆಕ್ಟ್ರೀಶ್ಯನ್ ಮೃತ್ಯು

ಮುಳ್ಳೇರಿಯ: ವಾಹನ  ಅಪಘಾ ತದಲ್ಲಿ ಗಂಭೀರ ಗಾಯ ಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದ ಇಲೆಕ್ಟ್ರೀಶ್ಯನ್ ಮೃತಪಟ್ಟಿದು,  ಈ ದಾರುಣ ಘಟನೆ ಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕರ್ಮಂತೋಡಿ ಬಳಿಯ ಕೊಟ್ಟಂ ಗುಳಿ ನಿವಾಸಿ ಕೆ. ಅಶೋಕನ್ (55) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಸೆಪ್ಟಂಬರ್ ೧೯ರಂದು ಸೌತ್ ಪೊಯಿನಾಚಿ ಸಮೀಪ ಅಪಘಾತ ಸಂಭವಿಸಿತ್ತು. ಅಶೋಕನ್ ಹಾಗೂ ಸ್ನೇಹಿತ ಸಂಚರಿಸುತ್ತಿದ್ದ ಬೈಕ್‌ಗೆ ಕಾರು  ಢಿಕ್ಕಿ ಹೊಡೆದಿತ್ತು. ಇದರಿಂದ ಅಶೋಕನ್ ಗಂಭೀರ ಗಾಯ ಗೊಂಡಿದ್ದರು.   ನಿನ್ನೆ ಬೆಳಿಗ್ಗೆ ಚಿಕಿತ್ಸೆಯಲ್ಲಿದ್ದಂತೆ …

ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕರಣೆ ಇಂದಿನಿಂದ ಜ್ಯಾರಿ

ಕುಂಬಳೆ: ಪೇಟೆಯಲ್ಲಿ ಕಂಡು ಬರುತ್ತಿರುವ ಸಾರಿಗೆ ಅಡಚಣೆ ನಿವಾರಣೆ ಅಂಗವಾಗಿ ಪೊಲೀಸರು ಏರ್ಪಡಿಸಿದ ಟ್ರಾಫಿಕ್ ಪರಿಷ್ಕರಣೆ ಇಂದಿನಿಂದ ಜ್ಯಾರಿಗೆ ಬಂದಿದೆ. ಇಂದಿನಿಂದ ಈ ತಿಂಗಳ 16ರವರೆಗೆ ಈ ವ್ಯವಸ್ಥೆಯನ್ನು ಪ್ರಯೋಗಾರ್ಥವಾಗಿ ಜ್ಯಾರಿಗೊಳಿಸಲಾಗುತ್ತಿದೆ. 16ರ ಬಳಿಕ ಇದನ್ನು ಶಾಶ್ವತಗೊಳಿಸಲಾಗುವುದು. ಅನಂತರ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ನೂತನ ಟ್ರಾಫಿಕ್ ಪರಿಷ್ಕಾರದಂತೆ ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ ನಿರ್ಮಿಸಲಾದ ೬ ಬಸ್ ವೈಟಿಂಗ್ ಶೆಡ್‌ಗಳ ಮುಂಭಾಗದಲ್ಲೇ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳನ್ನು ನಿಲ್ಲಿಸಬೇಕಾಗಿದೆ. ಇದರಂತೆ …