ಪತ್ನಿಯನ್ನು ಕೊಂದು ಮೃತದೇಹ ಕಂದಕಕ್ಕೆಸೆದ ಪತಿ ಮೈಸೂರಿನಲ್ಲಿ ಸೆರೆ: ಜತೆಗಿದ್ದ ಇರಾನ್‌ನ ಯುವತಿ ಕಸ್ಟಡಿಗೆ

ಕೋಟಯಂ: ಅನ್ಯಸ್ತ್ರೀಯರೊಂ ದಿಗಿನ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು  ಉಸಿರುಗಟ್ಟಿಸಿ ಕೊಲೆಗೈದು ಮೃತದೇ ಹವನ್ನು ಕಂದಕಕ್ಕೆಸೆದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಣಕ್ಕಾರಿ ರತ್ನಗಿರಿ ಸಮೀಪ ಕಪ್ಪಣಕ್ಕುನ್ನೇಲ್ ನಿವಾಸಿ ಜೆಸಿ ಸಾಮ್ (50) ಕೊಲೆಗೀಡಾದ  ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಾಮ್ ಕೆ. ಜೋರ್ಜ್ (59)ನನ್ನು ಮೈಸೂರಿನಿಂದ ಬಂಧಿಸಲಾಗಿದೆ. ಈತನ ಜೊತೆಗಿದ್ದ ಇರಾನ್ ಪ್ರಜೆಯಾದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಾಮ್ ಕೆ. ಜೋರ್ಜ್‌ಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ ಯೆಂದೂ ಅದನ್ನು ಪ್ರಶ್ನಿಸಿರುವುದೇ ಪತ್ನಿ ಯನ್ನು ಕೊಲೆಗೈಯ್ಯಲು ಕಾರಣವಾಗಿದೆ …

ಉಸಿರಾಟ ತೊಂದರೆ: ಯುವತಿ ಮೃತ್ಯು

ಮಧೂರು: ಅಸೌಖ್ಯ ಬಾಧಿಸಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಮಧೂರು ಬಳಿಯ ಅರಂತೋಡು ನಿವಾಸಿ ತಿಮೋತಿ ಕ್ರಾಸ್ತರ ಪುತ್ರಿ ಸೌಮ್ಯಪ್ರಿಯ ಕ್ರಾಸ್ತ (25) ಮೃತ ಯುವತಿ. ಈಕೆಗೆ ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಳೆನ್ನಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಉಸಿರಾಟ ತೊಂದರೆ ಅನುಭವಗೊಂಡಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಮೃತಳು ತಂದೆ, ತಾಯಿ ವೆಲೆನ್ಸಿಯಾ ಡಿ’ಸೋಜಾ, ಸಹೋದರ-ಸಹೋದರಿಯರಾದ ಮೆಲ್ವಿನ್ ಕ್ರಾಸ್ತ, ಹರ್ಷಿತ್ ಪವನ್ ಕ್ರಾಸ್ತ, ಸ್ವಾತಿ ಪ್ರಿಯಾಂಕ ಕ್ರಾಸ್ತ,  ಶಾಲೆನ್ ಪ್ರೀತಿ …

ಬೈಕ್ ತಡೆದು ನಿಲ್ಲಿಸಿ ಇಬ್ಬರಿಗೆ ಹಲ್ಲೆ: 4 ಮಂದಿ ವಿರುದ್ಧ ನರಹತ್ಯಾಯತ್ನ ಕೇಸು

ಬದಿಯಡ್ಕ: ಪಂಚಾಯತ್‌ನ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ದ್ವೇಷದಿಂದ ಬೈಕ್ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಶೇಣಿ ಪಜ್ಜಾನ ಪುಲ್ಲಾಟ್ ಹೌಸ್‌ನ ಅಜೀಶ್ ಜೋಸೆಫ್ (33)ರ ದೂರಿನಂತೆ ಜಯಂತ, ವಸಂತ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನಿಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.ಕಳೆದ ಮಂಗಳವಾರ ರಾತ್ರಿ 7.30ಕ್ಕೆ ಓಣಿಬಾಗಿಲು ಎಂಬಲ್ಲಿ ಘಟನೆ ನಡೆದಿದೆ. ಅಜೀಶ್ ಜೋಸೆಫ್ ಹಾಗೂ ಸ್ನೇಹಿತ ಗಣೇಶ್ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕೂಟರ್‌ಗಳಲ್ಲಿ ತಲುಪಿದ ನಾಲ್ಕು ಮಂದಿ ತಡೆದು …

ಹೃದಯಾಘಾತ: ಮಹಿಳೆ ನಿಧನ

ಮಾರ್ಪನಡ್ಕ: ಪೊಡಿಪ್ಪಳ್ಳ ಭಂಡಾರಬೀಡು ನಿವಾಸಿ ಕೃಷ್ಣ ಬಿ.ಎಂ ಎಂಬವರ ಪತ್ನಿ ಹರಿಣಾಕ್ಷಿ (47) ನಿಧನ ಹೊಂದಿದರು. ಇವರಿಗೆ ಒಂದೂವರೆ ವರ್ಷದ ಹಿಂದೆ ಹೃದಯಾಘಾತವುಂಟಾಗಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರಾಗಿದ್ದರು. ನಿನ್ನೆ ಅಪರಾಹ್ನ ಮತ್ತೆ ಎದೆನೋವು ಉಂಟಾಗಿದ್ದು, ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಬಂದ್ಯೋಡು ವಳಚ್ಚಲ್ ನಿವಾಸಿ ದಿ| ನಾರಾಯಣರ ಪುತ್ರಿಯಾಗಿದ್ದಾರೆ. ತಾಯಿ ಲಕ್ಷ್ಮಿ, ಪತಿ, ಮಕ್ಕಳಾದ ಕೃಪೇಶ್, ಹರ್ಷಿಣಿ,  ಸಹೋದರ-ಸಹೋದರಿಯರಾದ ಚಂದ್ರಹಾಸ, ಯತೀಶ, ರಾಜೇಶ್, ಉಷಾ, ನಯನ, ಆಶಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ …

ಕುಂಬಳೆ ಪೇಟೆಯಲ್ಲಿ ಪ್ರಯೋಗಾರ್ಥ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸೃಷ್ಟಿಯಾ ಗುತ್ತಿರುವ ಸಾರಿಗೆ ಅಡಚಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನೂತನ ವ್ಯವಸ್ಥೆಗಳೊಂದಿಗೆ ಜ್ಯಾರಿಗೊಳಿಸುವ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ ಬರಲಿದೆ. ಸೋಮವಾರದಿಂದ ಅಕ್ಟೋಬರ್ ೧೬ರವರೆಗೆ ಪ್ರಯೋಗಾರ್ಥವಾಗಿ ಇದು ಜ್ಯಾರಿಯಲ್ಲಿರುವುದು. ಇದು ಯಶಸ್ವಿಯಾದಲ್ಲಿ ಇದನ್ನೇ ಶಾಶ್ವತವಾಗಿ ಮುಂದುವರಿಸಲಾಗು ವುದು. ಇದೇ ವೇಳೆ ಟ್ರಾಫಿಕ್ ಪರಿಷ್ಕರಣೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಪರಿಷ್ಕರಣೆಯ ವ್ಯವಸ್ಥೆಗಳು ಈ ಕೆಳಗಿನಂತಿವೆ ಆಟೋ ಸ್ಟಾಂಡ್ ಆಗಿ ನಿರ್ಧರಿಸಲಾದ ಸ್ಥಳಗಳು: 1. ಪ್ರಕಾಶ್ ಮೆಡಿಕಲ್‌ನಿಂದ ಒಬರ್ಲೆ ಕಾಂಪ್ಲೆಕ್ಸ್ …

ಯುವಕರನ್ನು ಉದ್ಯೋಗದಾತರನ್ನಾಗಿಸಿದ್ದು ಮೋದಿ-ಎಂ.ಎಲ್. ಅಶ್ವಿನಿ

ಕಾಸರಗೋಡು: ಉದ್ಯೋಗ ಅವಕಾಶಕ್ಕಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದ ಯುವ ಜನಾಂಗವನ್ನು ಉದ್ಯಮಿಗಳಾಗಿ, ಉದ್ಯೋಗದಾತರಾಗಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಜಿಲ್ಲಾ ಹೆಲ್ಫ್ ಡೆಸ್ಕ್‌ನ ಆಶ್ರಯದಲ್ಲಿ ಆಯೋಜಿಸಿದ ಏಕದಿನ ಉದ್ಯಮತ್ವ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.  2047ರಲ್ಲಿ ಅಭಿವೃದ್ಧಿಗೊಂಡ ಭಾರತ ಎಂಬ ಗುರಿ ಹೊಂದಲು ಆಂತರಿಕ ಉತ್ಪಾದನೆ ಹೆಚ್ಚಿಸಿ, ಸ್ವದೇಶಿ ಉತ್ಪನ್ನಗಳ ಉಪಯೋಗ ಹೆಚ್ಚಿಸಬೇಕೆಂದು ಅಶ್ವಿನಿ ಸೂಚಿಸಿದರು. ರಾಂ ಬಯೋಟೆಕ್ ಫ್ಯೂವಲ್ಸ್‌ನ ಮೆನೇಜಿಂಗ್ ಡೈರೆಕ್ಟರ್ ರಾಜೀವನ್ ಎಂ …

ಹೈನುಗಾರಿಕೆಯಲ್ಲಿ ಮಲಬಾರ್ ವಲಯದ ಉತ್ತಮ ಸಾಧನೆ-ಸಚಿವೆ ಜೆ. ಚಿಂಜುರಾಣಿ

ಕಾಸರಗೋಡು: ರಾಜ್ಯದಲ್ಲಿ ಅತ್ಯಂತ ಹೆಚ್ಚು ಹಾಲು ಉತ್ಪಾದಿಸಲ್ಪಡುವುದು ಮಲಬಾರ್ ವಲಯದಲ್ಲಾಗಿದೆ ಎಂದು ಮೃಗಸಂರಕ್ಷಣೆ, ಕ್ಷೀರ ಅಭಿವೃದ್ಧಿ ಇಲಾಖೆ ಸಚಿವೆ ಜೆ. ಚಿಂಜುರಾಣಿ ನುಡಿದರು. ಪೆರ್ಲದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ಷೀರ ಕೃಷಿಕರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ಭಾರತದಲ್ಲಿ ಕೇರಳ ದ್ವಿತೀಯ ಸ್ಥಾನದ ಲ್ಲಿದೆ. ಸಮ್ಮಿಶ್ರ ಜಾತಿಯ ದನಗಳನ್ನು ಸಾಕುವುದರಿಂದಾಗಿ ಕೇರಳದಲ್ಲಿ ಉತ್ಪಾ ದನಾ ಸಾಮರ್ಥ್ಯ ಹೆಚ್ಚಲು ಕಾರಣ ವೆಂದು ಅವರು ನುಡಿದರು. ಹಲವಾರು ಯೋಜನೆಗಳನ್ನು ಹೈನು ಕೃಷಿಕರಿಗಾಗಿ ಸರಕಾರ ಆಯೋಜಿಸಿರುವುದು. …

ಖಾಸಗಿ ಸಂಸ್ಥೆಗಳನ್ನು ಸರಕಾರದ ಸಾಧನೆಯಾಗಿ ತೋರಿಸಲು ಪಿಣರಾಯಿ ಸರಕಾರ ಯತ್ನಿಸುತ್ತಿರುವುದು ಅಪಹಾಸ್ಯಕರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಖಾಸಗಿ ಸಂಸ್ಥೆ ಗಳನ್ನು ರಾಜ್ಯ ಸರಕಾರದ ಆಡಳಿತ ಸಾಧನೆಯಾಗಿ ತೋರಿಸಲು ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು ಅಪಹಾಸ್ಯಕರವಾ ಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳ ಮುಂದೆ ಕೆಂಪು ಧ್ವಜ ಸ್ಥಾಪಿಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವುದು ಸಿಪಿಎಂ ಹಾಗೂ ಎಡಪಕ್ಷಗಳಾಗಿವೆ ಎಂಬುವುದನ್ನು ಕೇರಳದ ಜನತೆ ಮರೆಯಲಾರರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಸಮಯ ಕಂಡುಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಪವೇ ದೂರದಲ್ಲಿರುವ ಉಕ್ಕಿನಡ್ಕದ ಸರಕಾರಿ ಮೆಡಿಕಲ್ …

ತನ್ನ ವಿರುದ್ಧ ಸೈಬರ್ ಆಕ್ರಮಣ ಮುಂದುವರಿಸಿದರೆ ಹಲವು ವಿಷಯ ಬಹಿರಂಗಪಡಿಸುವೆ- ರಿನಿ ಆನ್‌ಜಾರ್ಜ್

ಕೊಚ್ಚಿ: ಸಿಪಿಎಂ ಪರವೂರು ಏರಿಯಾ ಸಮಿತಿ ನಡೆಸಿದ ಮಹಿಳಾ ಪ್ರತಿರೋಧ ಸಂಗಮದಲ್ಲಿ ಭಾಗವಹಿಸಿ ರುವುದಕ್ಕೆ ವಿವರಣೆ ನೀಡಿ ನಟಿ ರಿನಿ ಆನ್ ಜಾರ್ಜ್ ರಂಗಕ್ಕಿಳಿದಿದ್ದಾರೆ. ಯಾವುದೇ ರಾಜಕೀಯ ಪಕ್ಷದವಳೆಂಬ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲ. ನನ್ನನ್ನು ಆಹ್ವಾನಿಸಿದ ಕಾರಣ ಹೋಗಿದ್ದೇನೆ. ತನ್ನ ರಾಜಕೀಯ ನಿಲುವು ಎಂಬುದು ಮಹಿಳೆಯರ ಪರವಾಗಿದೆ. ಯಾವುದೇ ಪಕ್ಷದಲ್ಲಿ ಸದಸ್ಯೆಯಲ್ಲ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಮಧ್ಯೆ ನಟಿ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತನ್ನ …

ಜೋಡುಕಲ್ಲು ಫ್ರೆಂಡ್ಸ್ ಕ್ಲಬ್‌ನಲ್ಲಿ ಉಚಿತ ವೈದ್ಯಕೀಯ ಶಿಬಿರ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು, ರೋಟರಿ ಕ್ಲಬ್ ದೇರಳಕಟ್ಟೆ, ಮಂಗಳೂರು ಹಾಗೂ ಯೇನಪೋಯ ಆಯುರ್ವೇದ ವ್ಯೆದ್ಯಕೀಯ ಶಾಲೆ ಮತ್ತು ಆಸ್ಪತ್ರೆ ಮಂಜ ನಾಡಿ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ವ್ಯೆದ್ಯಕೀಯ ಶಿಬಿರ ಜೋಡುಕಲ್ಲು ಫ್ರೆಂಡ್ಸ್ ಸಭಾಭವನ ದಲ್ಲಿ ಜರಗಿತುರೋಟರಿ ಕ್ಲಬ್ ದೇರಳಕಟ್ಟೆ ಯ ಅಧ್ಯಕ್ಷ ಅನಿತಾ ಉದ್ಘಾಟಿಸಿದರು. ಪಿ. ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.