ಶಬರಿಮಲೆ ಚಿನ್ನದ ಕವಚ ನಿಗೂಢವಾಗಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು- ಶೋಭಾ ಸುರೇಂದ್ರನ್

ಬದಿಯಡ್ಕ: ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಆಗ್ರಹಪಟ್ಟಿದ್ದಾರೆ. ಜನಪ್ರತಿನಿಧಿಯಾಗಿ ೨೫ ವರ್ಷ ಪೂರ್ತೀಕರಿಸಿದ ಡಿ. ಶಂಕರರಿಗೆ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ನಡೆಸಲಾದ  ಅಭಿನಂದನಾ ಕಾರ್ಯಕ್ರಮ ಮತ್ತು  ಬಿಜೆಪಿ ಕಾರ್ಯಕರ್ತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ವಿಪಕ್ಷ ತಾಳುತ್ತಿರುವ ಮೌನ ಭಾರೀ ಶಂಕೆಗೆ ದಾರಿ …

ಹಮಾಸ್‌ನ್ನು ಬೆಂಬಲಿಸಿ ಸ್ಪರ್ಧೆ ಪ್ರದರ್ಶಿಸಲು ಮಕ್ಕಳನ್ನು ಒತ್ತಾಯಿಸಿದವರು ಯಾರು-ಶೋಭಾ ಸುರೇಂದ್ರನ್

ಕಾಸರಗೋಡು: ಕುಂಬಳೆ ಶಾಲಾ ಕಲೋತ್ಸವದಲ್ಲಿ ಹಮಾಸ್‌ನ್ನು ಬೆಂಬಲಿಸಿ ಮೂಕಾಭಿನಯ ಪ್ರದರ್ಶಿಸಲು  ಮಕ್ಕಳನ್ನು ಒತ್ತಾಯಿಸಿದವರು ಯಾರೆಂದು ಶಿಕ್ಷಣ ಸಚಿವ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಒತ್ತಾಯಿಸಿದ್ದಾರೆ. ಕಾಸರಗೋಡಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಲೋತ್ಸವದಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವುದು ಗುರಿಯಾಗಿದೆ. ಅಲ್ಲದೆ ಉಗ್ರಗಾಮಿ ಸಂಘಟನೆಯೆಂದು ಇಡೀ ಪ್ರಪಂಚವೇ ಆರೋಪಿಸುವ  ಹಮಾಸನ್ನು ಬೆಂಬಲಿಸಿ ಸ್ಪರ್ಧೆ ಪ್ರದರ್ಶಿಸುವುದು ಸರಿಯೇ ಎಂದು ಶೋಭಾ ಸುರೇಂದ್ರನ್ ಪ್ರಶ್ನಿಸಿದ್ದಾರೆ. ದೇಶ ಅನುಸರಿಸುವ ವಿದೇಶ ನೀತಿಯನ್ನು ಪ್ರಶ್ನಿಸಲು ಯಾವ ವಿದ್ಯಾಭ್ಯಾಸ ಮಂತ್ರಿಗೆ …

ಧರ್ಮ ಸಂದೇಶ ಯಾತ್ರೆಗೆ ನಾಳೆ : ಕಾಸರಗೋಡಿನಿಂದ ಚಾಲನೆ

ಕಾಸರಗೋಡು: ಮಾರ್ಗದರ್ಶಕ ಮಂಡಳಿ ಕೇರಳ ಇದರ ಆಶ್ರಯದಲ್ಲಿ ಸನ್ಯಾಸಿಗಳು ನೇತೃತ್ವ ನೀಡುವ ಧರ್ಮ ಸಂದೇಶ ಯಾತ್ರೆ ನಾಳೆ ಕಾಸರಗೋಡಿ ನಿಂದ ಪ್ರಯಾಣ ಆರಂಭಿಸಲಿದೆ. ಕಾಸರಗೋಡಿನಿಂದ ತಿರುವನಂತಪುರ ತನಕ ಪ್ರಯಾಣ ನಡೆಸಲಿರುವ ಈ ಯಾತ್ರೆಯ ಉದ್ಘಾಟನೆ ನಾಳೆ ಅಪರಾಹ್ನ ೩ ಗಂಟೆಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯಲಿದೆ. ಕೊಳತ್ತೂರು ಅದ್ವೈತಂ ಆಶ್ರಮದ ಮಠಾಧೀಶ ಹಾಗೂ ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷರೂ ಆಗಿರುವ ಸ್ವಾಮಿ ಚಿದಾನಂದಪುರಿ ಪ್ರಧಾನ ಭಾಷಣಗಾರರಾಗಿ ಮಾತನಾಡಲಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು …

ಕಾರಡ್ಕ ಸಂಭ್ರಮ ದ. 21ರಂದು: ಆಮಂತ್ರಣಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಕಾರಡ್ಕ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಕೇರಳ, ಕರ್ನಾಟಕದಲ್ಲಿ ಹಲವು ಪುರಸ್ಕಾರಕ್ಕೆ ಅರ್ಹರಾದ ಯಕ್ಷಗುರು ರಾಘವ ಬಲ್ಲಾಳ್ ಕಾರಡ್ಕ ಇವರ ನೇತೃತ್ವದಲ್ಲಿ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಶಿಷ್ಯರ ರಂಗಪ್ರವೇಶ ಕಾರ್ಯಕ್ರಮ ದ.21ರಂದು ಮುಂಡೋಳು ಕ್ಷೇತ್ರದ ಸಭಾ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು.ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕೇರಳ ಕಲಾ ಮಂಡಲ ಅಸಿಸ್ಟೆಂಟ್ ಪ್ರೊಫೆಸರ್  ನೃತ್ಯ ಕಲಾವಿದ ಡಾ. ಆರ್.ಎಲ್.ವಿ. …

ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಸಂಕಷ್ಟದಲ್ಲಿ

ಮಂಗಳೂರು: ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆ ಯನ್ನು ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾರಕ್ಕೆ ನಾಲ್ಕು ವಿಮಾನಗಳು ಈ ಮೊದಲು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಸ್ಥಗಿತಗೊಂಡಿದ್ದು, ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ. ಗಲ್ಫ್ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊAಡಿದೆ. ಆದರೆ ಮಸ್ಕತ್‌ನಿಂದ …

ಆರ್‌ಎಸ್‌ಎಸ್ ಉಪ್ಪಳ ಮಂಡಲದ ವಿಜಯದಶಮಿ ಉತ್ಸವ

ಉಪ್ಪಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಪ್ಪಳ ಮಂಡಲ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ನಿನ್ನೆ ಸಂಜೆ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಿತು. ಇದರ ಅಂಗವಾಗಿ ಕೋಡಿಬೈಲು ಯಶೋನಂದ ನಗರ ಮೈದಾನದಿಂದ ಆರಂಭಿಸಿದ ನೂರಾರು ಸ್ವಯಂಸೇವಕರು ಭಾಗವಹಿಸಿದ ಪಥಸಂಚಲನ ಕೈಕಂಬ ದಾರಿಯಾಗಿ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಧನ್‌ರಾಜ್ ಎ ಸುಭಾಷ್‌ನಗರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರ. ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಕಾರ್ಯವಾಹ್ ಪವಿತ್ರನ್ ಬಿ ಬೌದ್ಧಿಕ್ ನೀಡಿದರು.

ಕೃಪೇಶ್ ನಾಪತ್ತೆ ತನಿಖೆ ತೀವ್ರಗೊಳಿಸಲು ಪೊಲೀಸರಲ್ಲಿ ಒಬಿಸಿ ಮೋರ್ಛಾ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಸೋಂಕಾಲು ಪ್ರತಾಪನಗರ ದಿಂದ 13 ವರ್ಷದ ಕೃಪೇಶ್ ನಾಪತ್ತೆಯಾದ ಪ್ರಕರಣದ ತನಿಖೆ ತೀವ್ರಗೊಳಿಸಬೇಕೆಂದು ಒಬಿಸಿ ಮೋರ್ಛಾ ಆಗ್ರಹಿಸಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 12 ದಿನಗಳು ಕಳೆದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭಿಸಿಲ್ಲ. ತನಿಖೆ ನಿಧಾನವಾಗಿ ನಡೆಯುತ್ತಿದೆಯೆಂದು ಬಿಜೆಪಿ ಒಬಿಸಿ ಮೋರ್ಛಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದ್ದಾರೆ.  ಕೃಪೇಶ್ ಅವರ ತಂದೆ, ತಾಯಿ ಮತ್ತು ಸಹೋದರರು  ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರ ಕೃಪೇಶ್‌ರನ್ನು ಹುಡುಕಲು ವ್ಯವಸ್ಥೆ ಮಾಡಬೇಕು ಮತ್ತು ತನಿಖೆಯನ್ನು ತೀವ್ರಗೊಳಿಸಬೇಕು. …

ಸಿಪಿಎಂ ನೇತಾರೆಯಾದ ಯುವ ನ್ಯಾಯವಾದಿಯ ಸಾವು : ಮುಂದುವರಿದ ನಿಗೂಢತೆ; ತಲೆಮರೆಸಿಕೊಂಡ ನ್ಯಾಯವಾದಿಯ ಪತ್ತೆಗಾಗಿ ಶೋಧ, ಮೊಬೈಲ್‌ಫೋನ್ ಕೇಂದ್ರ ಫಾರೆನ್ಸಿಕ್ ಲ್ಯಾಬ್‌ಗೆ

ಕುಂಬಳೆ: ಸಿಪಿಎಂ ಲೋಕಲ್ ಕಮಿಟಿ ಸದಸ್ಯೆ, ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ಕುಂಬಳೆ ವಿಲ್ಲೇಜ್ ಸೆಕ್ರೆಟರಿ, ಡಿವೈಎಫ್‌ಐ ವಲಯ ಅಧ್ಯಕ್ಷೆಯೂ, ಕಾಸರಗೋಡು ಬಾರ್‌ನ ಯುವ ನ್ಯಾಯವಾದಿಯೂ ಆಗಿದ್ದ ಸಿ. ರಂಜಿತ ಕುಮಾರಿ(30)ಯವರ ಸಾವಿನ ಬಗ್ಗೆ ನಿಗೂಢತೆ ಮುಂದುವರಿಯುತ್ತಿದೆ.  ಸಾವಿಗೆ ಕಾರಣವನ್ನು ಪತ್ತೆಹಚ್ಚಬೇಕೆಂದು  ಒತ್ತಾಯಿಸಿ ಸಿಪಿಎಂ ಸಹಿತ ವಿವಿಧ ಸಂಘಟನೆಗಳು  ರಂಗಕ್ಕಿಳಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೇರಿಕೆ ಕಡಪ್ಪುರದ ಕೃತೇಶ್ ಎಂಬವರ ಪತ್ನಿಯಾದ ರಂಜಿತ  ಮಂಗಳವಾರ  ಕುಂಬಳೆಯಲ್ಲಿರುವ ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯವರು …

ತಂದೆಯ ಕಿರುಕುಳದಿಂದ: ಗರ್ಭಿಣಿಯಾದ 14ರ ಬಾಲಕಿ; ಪರಾರಿಯಾಗಲೆತ್ನಿಸಿದ ಆರೋಪಿ ಬಂಧನ

ಕಾಸರಗೋಡು: ತಂದೆಯ ನಿರಂತರ ಲೈಂಗಿಕ ಕಿರುಕುಳದಿಂದಾಗಿ 14ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆ ಬೆಳಕಿಗೆ ಬಂದಿದೆ. ಮಗಳು ಗರ್ಭಿಣಿಯಾದ ವಿಷಯ ತಿಳಿಯುತ್ತಲೇ ಪಾಸ್‌ಪೋರ್ಟ್‌ನೊಂದಿಗೆ ಪರಾರಿಯಾಗಲೆತ್ನಿಸಿದ ತಂದೆಯನ್ನು ಹೊಸದುರ್ಗ ಪೊಲೀಸರು ಅತೀ ಸಾಹಸಿಕವಾಗಿ ಸೆರೆ ಹಿಡಿದು  ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕರ್ನಾಟಕದ ಕೊಡಗು ನಿವಾಸಿಯಾದ 45ರ ಹರೆಯದ ವ್ಯಕ್ತಿ ವಿರುದ್ಧ ಕೇಸು ದಾಖಲಾಗಿದೆ. ಆರೋಪಿ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾರ್ಟರ್ಸ್‌ವೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದನು. ಎಂಟನೇ ತರಗತಿ ವಿದ್ಯಾರ್ಥಿನಿಯಾದ ಮಗಳಿಗೆ ಇತ್ತೀಚೆಗೆ ಅಸಹನೀಯ ಸೊಂಟನೋವು ಅನುಭವಗೊಂಡುದರಿಂದ …

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಸಮಗ್ರ ತನಿಖೆ ಒತ್ತಾಯಿಸಿ ಪಂದಳ ಅರಮನೆ,ರಾಜಕೀಯ ಪಕ್ಷಗಳೂ ಪ್ರತ್ಯಕ್ಷ ಹೋರಾಟಕ್ಕೆ

ಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ ಚಿನ್ನ  ಹೇಗೆ ಮಾಯವಾಯಿತು ಎಂಬುವುದು ಈಗಲೂ ಬೇಧಿಸಲಾಗದ ನಿಗೂಢ ಪ್ರಶ್ನೆಯಾಗಿಯೇ ಮುಂದುವರಿದಿದೆ. ಉದ್ಯಮಿ ವಿಜಯ್ ಮಲ್ಯ 1998ರಲ್ಲಿ ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿ ಕವಚವನ್ನು ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದರು. ಆ ಕವಚ ನಿರ್ಮಿಸಲು 33 ಕಿಲೋ ಗ್ರಾಂ ಚಿನ್ನ ಉಪಯೋಗಿಸಲಾಗಿತ್ತೆಂದು ಉದ್ಯಮಿ ವಿಜಯ್ ಮಲ್ಯ ಅಂದು ನಿಯೋಜಿಸಿದ ತಜ್ಞರು ತಿಳಿಸಿದ್ದಾರೆ.  ಆ ಬಳಿಕ 2019ರಲ್ಲಿ ಆ ಕವಚ ಕೇವಲ ತಾಮ್ರವಾಗಿ ಹೇಗೆ ಬದಲಾಯಿತೆಂಬ ಪ್ರಶ್ನೆಗೆ …