ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ಬೀಮ್‌ನ ಒಂದು ಭಾಗ ಕುಸಿತ ಪ್ರಯಾಣಿಕರು ಅದೃಷ್ಟವಶಾತ್ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಳ ಬಸ್ ನಿಲ್ದಾಣ ಸಮೀಪ ಮೇಲ್ಸೇತುವೆಯ ಅಡಿಭಾಗದ ಕಾಂಕ್ರೀಟ್ ಭೀಮ್‌ನ ಒಂದು  ಭಾಗ ಕುಸಿದು ಬಿದ್ದಿದೆ. ಇದೇ ಸಮಯದಲ್ಲಿ ಮೇಲ್ಸೇತುವೆಯ ಕೆಳ ಭಾಗದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಅವುಗಳ ಮೇಲೆ ಕಾಂಕ್ರೀಟ್ ತುಂಡು ಬೀಳದಿರುವುದರಿಂದ ಭಾರೀ ಅಪಾಯ ತಪ್ಪಿ ಹೋಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಇಲ್ಲಿ ಮೇಲ್ಸೇತುವೆ ಕೆಲಸ ಪೂರ್ಣಗೊಂಡಿತ್ತು. ಹಲವು ವಾಹನಗಳು ಮೇಲ್ಸೇತುವೆ ಹಾಗೂ ಕೆಳಗಿನ ರಸ್ತೆಯಲ್ಲಿ ಸಂಚರಿಸುತ್ತಿದೆ. ಇದೀಗ ಈ ಮೇಲ್ಸೇತುವೆಯ ಕಾಂಕ್ರೀಟ್ ತುಂಡು ಬಿದ್ದಿರುವುದು ಸ್ಥಳೀಯರಲ್ಲಿ …

ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಅಣಂಗೂರು ಸ್ಕೌಟ್ ಭವನ ಬಳಿಯ ನಿವಾಸಿ ಕೆ.ಎಂ. ಅಬ್ದುಲ್ಲ (67) ಎಂಬವರು ತಳಂಗರೆಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಇಂದು ಮುಂಜಾನೆ ಮೃತದೇಹ ಕಂಡು ಬಂದಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.  ಮಾಹಿನ್ ಫಕ್ರುದ್ದೀನ್ ಎಂಬವರ ಪುತ್ರನಾದ ಮೃತರು ಪತ್ನಿ  ಮರಿಯಾಂಬಿ, ಮಕ್ಕಳಾದ ಕಲಂದರ್ ಶಾ, ಶಹನಾಸ್, ಶಬ್ನ, ರಹೀಸ್, ರುಪ್ಸ, ಅಳಿಯ- ಸೊಸೆಯಂದಿರಾದ ಸಹೀದ್, ಇರ್ಶಾದ್, ಫವಾಸ್, ಉಮರುಲ್ ಫಾರೂಕ್, ರಿಸ್ವಾನ್, ಫೈಬೀನ, ಸಹೋದರ- …

ಕಾರಿನಲ್ಲಿ 112 ಕೆ.ಜಿ ಗಾಂಜಾ ಸಾಗಿಸಿದ ಪ್ರಕರಣ: ಒಂದನೇ ಆರೋಪಿಗೆ 10 ವರ್ಷ ಕಠಿಣ ಸಜೆ, 1 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ೧೧೨ ಕಿಲೋ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ೧೦ ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ವೆಳ್ಳರಿಕುಂಡ್ ತಾಲೂಕಿನ ಭೀಮನಡಿ ಕುನ್ನುಂಗೈ ಕಕ್ಕಾಡಿನಗತ್ತ್ ನೌಫಲ್ ಕೆ.ಕೆ. (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ …

ಏರುತ್ತಲೇ ಇದೆ ಚಿನ್ನದ ಬೆಲೆ: ಇಂದು ಸಾರ್ವಕಾಲಿಕ ದಾಖಲೆ

ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿ ಸಾಗಿದೆ. ಇಂದು ಇತಿಹಾಸದಲ್ಲೇ ಅತ್ಯಧಿಕ ದರದಲ್ಲಿ ಚಿನ್ನದ ವಹಿವಾಟು ನಡೆಯುತ್ತಿದೆ. ಚಿನ್ನದ ಬೆಲೆ 85,000 ದಾಟಿ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಇಂದು ಪವನ್ ಗೆ 85,360 ರೂ. ಇದೆ. ಇಂದು ಪವನ್ ಗೆ 680 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 1 ರಿಂದ ಇಂದಿನವರೆಗೆ ಮಾರುಕಟ್ಟೆಯಲ್ಲಿ 7,720 ರೂ. ಏರಿಕೆ ಕಂಡುಬAದಿ ರುವುದು ಗಮನಾರ್ಹ. ಒಂದು ಗ್ರಾಂ ಚಿನ್ನದ ಬೆಲೆ 10,000 ರೂ.ಗಿಂತ ಹೆಚ್ಚಾಗಿದೆ. ಇಂದು ಒಂದು ಗ್ರಾಂ …

ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮ: ಕೃಷಿಕರು ಸಂದಿಗ್ಧತೆಯಲ್ಲಿ

ಕಾಸರಗೋಡು: ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮದಿಂದಾಗಿ ತೆಂಗು ಕೃಷಿಕರು ಭಾರೀ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಮರದಲ್ಲಿರುವ ತೆಂಗಿನಕಾಯಿ ಕೊಯ್ಯಲು ಕಾರ್ಮಿಕರನ್ನು ಹುಡುಕಿಕೊಂಡು ಕೃಷಿಕರು ಅಲೆದಾಡಬೇಕಾದ ಸ್ಥಿತಿ ಉಂಟಾಗಿದೆ. ಕಾರ್ಮಿಕರು ಸಿಕ್ಕಿದರೂ ಪ್ರತೀಯೊಂದು ಮರದಿಂದ ಲಭಿಸುವ ತೆಂಗಿನಕಾಯಿಯ ಬೆಲೆಗಿಂತ ಹೆಚ್ಚು ಮೊತ್ತವನ್ನು ಹಲವರು ವೇತನವಾಗಿ ಕೇಳುತ್ತಿದ್ದಾರೆ. ಹಸಿ ತೆಂಗಿನಕಾಯಿಗೆ ಉತ್ತಮ ಬೆಲೆ ಲಭಿಸುವ ಸಂದರ್ಭದಲ್ಲಿ ತೆಂಗಿನಮರವೇರಲು ಕಾರ್ಮಿಕರು ಸಿಗದಿರುವುದು ಕೃಷಿಕರನ್ನು ತೀವ್ರ ಸಮಸ್ಯೆಯಲ್ಲಿ ಸಿಲುಕಿಸಿದೆ. ಹಸಿ ತೆಂಗಿನಕಾಯಿ ಕೊಯ್ಯಬೇಕಾದ ಸಮಯದಲ್ಲಿ ಮರವೇರುವ ಕಾರ್ಮಿಕರು ಸಿಗದಿರುವುದರಿಂದ ಮರಗಳಲ್ಲೇ ಕಾಯಿ ಒಣಗಿ …

ತಿರುವೋಣಂ ಬಂಪರ್: ಜಿಲ್ಲೆಯಲ್ಲಿ ಈತನಕ ಮಾರಾಟವಾಗಿದ್ದು 2.59 ಲಕ್ಷ ಟಿಕೆಟ್‌ಗಳು

ಕಾಸರಗೋಡು: ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೆ. 26ರ ತನಕದ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ 2.59 ಲಕ್ಷ ಮಾರಾಟ ವಾಗಿದೆ. ಅಂದರೆ ಕಳೆದ ವರ್ಷಕ್ಕಿಂ ತಲೂ ಹೆಚ್ಚು ಓಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೇರಿ ಮಾರಾಟ ವಾಗಿದೆ. ಸೆಪ್ಟಂಬರ್ 27ರಂದು ನಡೆಯಬೇಕಾಗಿದ್ದ ತಿರುವೋಣಂ ಬಂಪರ್ ಡ್ರಾವನ್ನು ಈಗ ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 2.32 ಲಕ್ಷ ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಮಾರಾಟವಾಗಿತ್ತು. ಸೆ. 26ರ ತನಕದ ಲೆಕ್ಕಾಚಾರದಂತೆ ಕಳೆದ ವರ್ಷಕ್ಕಿಂತಲೂ ಈ ವರ್ಷ 24,800ರಷ್ಟು …

ಬಾವಿಗೆ ಬಿದ್ದ ಕಾಡು ಹಂದಿ

ಕುಂಬಳೆ: ಆರಿಕ್ಕಾಡಿಯಲ್ಲಿ ಕಾಡು ಹಂದಿಯೊಂದು ಬಾವಿಗೆ ಬಿದ್ದಿದ್ದು ಅರಣ್ಯಾಧಿಕಾರಿಗಳು ಅದನ್ನು ಮೇಲೆತ್ತಿ ಅಪಾಯದಿಂದ ರಕ್ಷಿಸಿದ್ದಾರೆ. ಆರಿಕ್ಕಾಡಿ ಕಾರ್ಳೆಯಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿರುವ ಆವರಣವಿರದ ಬಾವಿಯಲ್ಲಿ ನಿನ್ನೆ ಬೆಳಿಗ್ಗೆ  ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯವರು ಅಲ್ಲಿಗೆ ತೆರಳಿ ನೋಡಿದಾಗ ಹಂದಿ ನೀರಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮನೆ ಮಾಲಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆಯ ರಾಪಿಡ್ ರೆಸ್ಕ್ರೂಫೋರ್ಸ್ ಬಾವಿಗೆ ಬಲೆ ಇಳಿಸಿ ಹಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ಅದನ್ನು ಕೊಂಡೊಯ್ದು ಆರೋಗ್ಯ …

ಕಾಂಗ್ರೆಸ್ ಕಾರ್ಯಕರ್ತ ಪಕ್ಷದ ಕಚೇರಿಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕಾಂಗ್ರೆಸ್ ಕಾರ್ಯಕರ್ತನೋರ್ವ ಪಕ್ಷದ ಕಚೇರಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಿಕೋಟೆ ಮೇಪಯೂರ್ ನಿಡುಂಪೊಯಿಲ್ ಕಾಂಗ್ರೆಸ್ ಘಟಕ ಕಚೇರಿಯಲ್ಲಿ   ಪರಿಸರ ನಿವಾಸಿಯಾಗಿರುವ ರಾಜನ್ (61) ಎಂಬವರು ಇಂದು ಬೆಳಿಗ್ಗೆ ಪಕ್ಷದ ಕಚೇರಿಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರು ಹಾಗೂ ಪತ್ರಿಕೆ ವಿತರಣಾ ಏಜೆಂಟರಾಗಿದ್ದಾರೆ. ಆದರೆ ಅವರ ಸಾವಿಗೆ ಮತ್ತು ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲವೆಂದು  ಪಕ್ಷದ ನೇತಾರರು ತಿಳಿಸಿದ್ದಾರೆ.

ಮಾನ್ಯದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ

ಮಾನ್ಯ: ಆರ್‌ಎಸ್‌ಎಸ್ ಬದಿಯಡ್ಕ ಖಂಡ್ ನೀರ್ಚಾಲು ಮಂಡಲದ ವಿಜಯದಶಮಿ ಕಾರ್ಯಕ್ರಮ ಮಾನ್ಯ ಶಾಲಾ ಮೈದಾನದಲ್ಲಿ ನಿನ್ನೆ ನಡೆಯಿತು. ಕಣ್ಣೂರು ವಿಭಾಗ ಪ್ರೌಢ ಪ್ರಮುಖ್ ಓ.ಎಂ. ಶ್ರೀಜಿತ್ ತಲಶ್ಶೇರಿ ಬೌದ್ಧಿಕ್ ನೀಡಿದರು. ಸಾಮಾಜಿಕ ಕಾರ್ಯಕರ್ತ ರಾಮ ಕಾರ್ಮಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬದಿಯಡ್ಕ ಖಂಡ್ ಸಂಘ್ ಚಾಲಕ್ ರಮೇಶ್ ಕಳೇರಿ ಉಪಸ್ಥಿತರಿದ್ದರು. ಮುಂಡೋಡಿನಿಂದ ಮಾನ್ಯ ಪೇಟೆಗೆ ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ನಡೆಯಿತು.

ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ ಬೆಳ್ಳಿ ಅಭಿಯಾನ ಉದ್ಘಾಟನೆ

ಬದಿಯಡ್ಕ: ಬದಿಯಡ್ಕ: ಸನಾತನ ವಿಶ್ವಾಸ, ಆಚರಣೆಗಳ ಮೇಲೆ ಈಗೀಗ ನಿರಂತರ ಆಕ್ರಮಣಗಳು ವ್ಯಾಪಕವಾ ಗುತ್ತಿದೆ. ವ್ಯಕ್ತಿಗಳ ಹೆಸರಲ್ಲಿ ನಡೆಸುವ ತೇಜೋವಧೆಗಳ ಮಧ್ಯೆ ದೈವ-ದೇವರುಗಳನ್ನು ಅವಹೇಳ ನಗೈದು ಹಿಂದೂ ಮನಸ್ಸುಗಳಿಗೆ ನೋವ ನ್ನುಂಟುಮಾಡುವ ಕುತ್ಸಿತ ಮನೋ ಭಾವಗಳಿಗೆ ತಕ್ಕ ಉತ್ತರ ನೀಡಬೇಕು. ವ್ಯಕ್ತಿಗಳು ಶಾಶ್ವತರಲ್ಲ. ಆದರೆ ಮೌಲ್ಯ ಗಳನ್ನುಳಿಸಿಕೊಂಡು ನಂಬಿಕೆ, ಆಚರಣೆ, ಸತ್ಕರ್ಮಗಳಿಗೆ ಬೆಂಬಲ ನೀಡಬೇಕು. ಆರಾಧನಾ ಲಯಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದಿ ರಬೇಕು ಎಂದು ಧಾರ್ಮಿಕ ಮುಂ ದಾಳು, ಉದ್ಯಮಿ ಮಧುಸೂದನ ಅಯರ್ ಮಂಗ ಳೂರು ಅಭಿಪ್ರಾಯ …