ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ಮರಗಳ ರೆಂಬೆ ಕಡಿದು ತೆರವು: ಮರದಲ್ಲಿದ್ದ ಹಕ್ಕಿಗಳು ವಾಸಸ್ಥಳವಿಲ್ಲದೆ ಕಂಗಾಲು
ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದ್ದ ಮರಗಳ ರೆಂಬೆಗಳನ್ನು ಕೆಎಸ್ಇಬಿ ಅಧಿಕಾರಿಗಳು ಕಡಿದು ತೆಗೆದಿದ್ದಾರೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ ರಸ್ತೆ ಬದಿ ಆಟೋ ರಿಕ್ಷಾ ನಿಲ್ದಾಣ ಸಮೀಪವಿದ್ದ ಮರಗಳ ರೆಂಬೆಗಳನ್ನು ಕಡಿದು ತೆಗೆಯಲಾಯಿತು. ಈ ಮರಗಳು ಎತ್ತರಕ್ಕೆ ಬೆಳೆದು ಅದರ ರೆಂಬೆಗಳು ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿದ್ದವು. ಈ ಮರದಡಿಯಲ್ಲಿ ಕಾಲುದಾರಿಯಲ್ಲೇ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ನಡೆದು ಹೋಗುತ್ತಿದ್ದರು. ಮರದ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸುವ ವೇಳೆ ಅದರ ಕೆಳಗೆ ನಡೆದು ಹೋಗುವವರಿಗೆ …