ಪಿಣರಾಯಿ ಆಡಳಿತದಿಂದ ಪೊಲೀಸರು ಗೂಂಡಾ, ಮಾಫಿಯಾಗಳಾಗಿ ಮಾರ್ಪಾಡು-ಸಾಜಿದ್ ಮವ್ವಲ್

ಕುಂಬಳೆ: ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರಕ್ಕೇರುವುದ ರೊಂದಿಗೆ ಈ ಹಿಂದೆ ಇಡೀ ದೇಶಕ್ಕೇ ಮಾದರಿಯಾಗಿದ್ದ ಕೇರಳ ಪೊಲೀಸರು ಗೂಂಡಾ ಹಾಗೂ ಮಾಫಿಯಾಗಳಾಗಿ ಬದಲಾಗಿದ್ದಾರೆ ಎಂದು ಡಿಸಿಸಿ ಉಪಾಧ್ಯಕ್ಷ ಸಾಜಿದ್ ಮವ್ವಲ್ ಆರೋಪಿಸಿದ್ದಾರೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನಡೆಸಿದ ಪೊಲೀಸ್ ಠಾಣೆ ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪೊಲೀಸರು ಕಾನೂನು ವಿರುದ್ಧವಾಗಿ ವರ್ತಿಸುವುದನ್ನು ಕ್ಷುಲ್ಲಕವಾಗಿ ಕಾಣುವ ನೀತಿಯನ್ನು ಮುಖ್ಯಮಂತ್ರಿ  ಸಹಿತ ಆಡಳಿತಾಧಿಕಾರಿಗಳು ಅನುಸರಿಸುತ್ತಿದ್ದಾರೆ.  ಇದನ್ನು ಕಾಂಗ್ರೆಸ್ ಸಹಿಸದು. ಇದರ ವಿರುದ್ಧ ತೀವ್ರ ಚಳವಳಿ ನಡೆಸುವುದಾಗಿ …

ಕುಟುಂಬ ಆರೋಗ್ಯ ಕೇಂದ್ರ ನೂತನ ಕಟ್ಟಡದ ಅಣಕು ಉದ್ಘಾಟನೆ: ಆರೋಗ್ಯ ವಲಯದಲ್ಲಿ ಸಂದಿಗ್ಧತೆ ಎದುರಿಸುವಾಗ ಉದ್ಘಾಟನೆ ವಿಳಂಬ ಜನರೊಂದಿಗೆ ಸರಕಾರದ ಸವಾಲು-ಎಂ.ಎಲ್. ಅಶ್ವಿನಿ

ಬಾಯಾರು: ನಿರ್ಮಾಣ ಪೂರ್ತಿಗೊಂಡು ಒಂದೂವರೆ ವರ್ಷ ಕಳೆದರೂ ಉದ್ಘಾಟನೆ ನಡೆಸದ ಪೈವಳಿಕೆ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಬಿಜೆಪಿ ಅಣಕು ಉದ್ಘಾಟನೆ ನಡೆಸಿದೆ. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಈ ಕಾರ್ಯ ನೆರವೇರಿಸಿದರು. ಪೈವಳಿಕೆ ಪಂಚಾಯತ್ ನೋರ್ತ್, ಸೌತ್ ಏರಿಯಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಪರಿಸರದಿಂದ ಮೆರವಣಿಗೆ ಮೂಲಕ ತಲುಪಿ ಅಣಕು ಉದ್ಘಾಟನೆ ನೆರವೇರಿಸಲಾಗಿದೆ. ಆರೋಗ್ಯ ವಲಯದಲ್ಲಿ ಬಹಳ ಸಂದಿಗ್ಧತೆ ಎದುರಿಸುತ್ತಿರುವ ಜಿಲ್ಲೆಯ ಜನಸಾಮಾನ್ಯರ ವಿರುದ್ಧ ಸವಾಲಾಗಿದೆ, ನಿರ್ಮಾಣ ಪೂರ್ತಿಯಾದರೂ …

ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಮಾತೃಭಾಷೆ ಕಲಿಕೆಗೆ ತೊಡಕು: ಭವಿಷ್ಯಕ್ಕೆ ಅಧಿಕಾರಿಗಳಿಂದ ಕೊಡಲಿಯೇಟು

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡದ ಮೇಲೆ ಹೇಗೆಲ್ಲ ಗದಾಪ್ರಹಾರ ಮಾಡಬಹುದೆಂಬ ಬಗ್ಗೆ ಅಧಿಕಾರಿಗಳ ಮಟ್ಟದಲ್ಲೇ ಸಂಶೋಧನೆ ನಡೆಸುತ್ತಿ ರುವುದಾಗಿ ಗಡಿನಾಡ ಕನ್ನಡಾಭಿಮಾನಿ ಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಕನ್ನಡ ಎಂಬುದನ್ನು ತೊಳೆದು ಹಾಕಲು ಈಗ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸುತ್ತಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳು ಅಚ್ಚ ಕನ್ನಡ ಪ್ರದೇಶವೆಂದು ಹಿಂದೆ ಕರೆಯಲಾಗುತ್ತಿ ದ್ದರೂ, ಈಗ ಅದು ಮಂಜೇಶ್ವರ ತಾಲೂಕಿಗೆ ಸೀಮಿತವಾಗುತ್ತಿದೆ. ಮಂಜೇಶ್ವರ ತಾಲೂಕಿನಿಂದಲೂ ಕನ್ನಡವನ್ನು ಹೊಡೆದೋಡಿಸಲು ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳ ಅಧ್ಯಾಪಕರನ್ನು ತರಗತಿಗಾಗಿ ನೇಮಕ ಮಾಡಲಾಗುತ್ತಿದೆ. ಬಹುತೇಕ …

ಪುತ್ತಿಗೆ ಪಂಚಾಯತ್ ನಲ್ಲೂ ಬಿಜೆಪಿ ಮೊದಲ ಸ್ಥಾನಕ್ಕೇರಬೇಕು-ವಿಜಯ ರೈ

ಪುತ್ತಿಗೆ: ಪ್ರಪಂಚದ ರಾಜಕೀಯ ಪಕ್ಷಗಳಲ್ಲಿ ಮೊದಲೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ  ನರೇಂದ್ರಮೋದಿ ನೇತೃತ್ವದಲ್ಲಿ  ದಶಕಗಳಿಂದ ಆಡಳಿತ ನಡೆಸುತ್ತಿರುವ  ಈ ಸುವರ್ಣ ಕಾಲಘಟ್ಟದಲ್ಲಿ  ಪುತ್ತಿಗೆ ಪಂಚಾಯತ್‌ನಲ್ಲೂ ಬಿಜೆಪಿ  ಮೊದಲ ಸ್ಥಾನಕ್ಕೇರಬೇಕಾಗಿ ದೆಯೆಂದು  ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯ ರೈ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ವತಿಯಿಂದ ಎಡನಾಡು-ಕಣ್ಣೂರು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ  ನಡೆದ ಚುನಾವಣಾ ಕಾರ್ಯಾಗಾರ ಹಾಗೂ ಮಾಹಿತಿ ಶಿಬಿರದಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಪ್ರಮುಖರನ್ನು ಹಾಗೂ …

ಬೆಳ್ಳೂರು ಪಂ. ಮತದಾರರ ಪಟ್ಟಿಯಲ್ಲಿ ವಂಚನೆ-ಸಿಪಿಎಂ ಆರೋಪ

ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತ್ ಸೆ. 2ರಂದು ಪ್ರಕಟಿಸಿದ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿ ಪಕ್ಷಪಾತ ಹಾಗೂ ಕಾನೂನು ವಿರುದ್ಧ ರೀತಿಯಲ್ಲಿದೆಯೆಂದು ಸಿಪಿಎಂ ಬೆಳ್ಳೂರು ಲೋಕಲ್ ಸಮಿತಿ ಆರೋಪಿಸಿದೆ. ವಿವಿಧ ವಾರ್ಡ್‌ಗಳಲ್ಲಿ ಒಳಪಡಬೇಕಾದ ಯಥಾರ್ಥ ಮತದಾರರ ಹೆಸರುಗಳನ್ನು ಹೊರತುಪಡಿಸಲಾಗಿದೆ. ಅದೇ ರೀತಿ ಹೊರಡುಪಡಿಸಬೇಕಾದ ಮತಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆ ಮಾನದಂಡ ಪ್ರಕಾರದ ವಾರ್ಡ್ ಗಡಿಯನ್ನು ಪೂರ್ಣವಾಗಿ ಉಲ್ಲಂಘಿಸಲಾಗಿದೆ. ಹಿಯರಿಂಗ್‌ಗೆ ಹಾಜರಾಗದವರನ್ನು ಹಾಗೂ ದಾಖಲೆ ಸಲ್ಲಿಸದವರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೇ ವೇಳೆ  ದಾಖಲೆಗಳ ಸಹಿತ ಹಿಯರಿಂಗ್‌ಗೆ ಹಾಜರಾದವರನ್ನು …

ಮೀನು ಮಾರಾಟ ಹರಾಜು ಕಾರ್ಮಿಕ ನಿಧನ

ಕುಂಬಳೆ: ಬದ್ರಿಯ ನಗರದ ಎಂ.ಎಂ. ಅಬ್ದುಲ್ಲ (58) ನಿಧನ ಹೊಂದಿದರು. ಕಿಡ್ನಿ ಸಂಬಂಧವಾದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡಿನಲ್ಲಿ ಹಲವು ವರ್ಷಗಳ ಕಾಲ ಮೀನು ಮಾರಾಟ ಹರಾಜು ಕಾರ್ಮಿಕನಾಗಿದ್ದರು. ಮೃತರು ಪತ್ನಿ ಸುಹರಾ, ಮಕ್ಕಳಾದ ಸಾಜಿತ, ಸಫರಿಯ ಸಲಾಹುದ್ದೀನ್, ಅಳಿಯಂದಿರಾದ ಮನ್ಸೂರ್ ಪೈಕ, ನೌಶಾದ್ ಕೊಪ್ಪರಬಜಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿವಾಹ ಆಗ್ರಹ ನಿರಾಕರಿಸಿದ ದ್ವೇಷ: ಯುವತಿಯನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ ಸೆರೆ

ಮುಳ್ಳೇರಿಯ: ಮದುವೆ ಆಗ್ರಹವನ್ನು ನಿರಾಕರಿಸಿದ ದ್ವೇಷದಿಂದ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಅಡೂರು ಬಳಿಯ ಮಂಡೆಕೋಲು ನಿವಾಸಿ ಪ್ರತಾಪ್ (30) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು  ಬಂಧಿಸಿದ್ದಾರೆ. ಆರೋಪಿ ಅಡೂರು ಬಸ್ ವೈಂಟಿಂಗ್ ಶೆಡ್ ಸಮೀಪ ಇದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಮೊನ್ನೆ ಸಂಜೆ ಈ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ೨೯ರ ಹರೆಯದ …

ಪೆರ್ಮುದೆಯಲ್ಲಿ ಮನೆಯಿಂದ ಹಣ, ಚೆಕ್‌ಲೀಫ್ ಕಳವು

ಕುಂಬಳೆ: ಕುಟುಂಬ ಮಸೀ ದಿಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವುಗೈದ ಘಟನೆ ನಡೆದಿದೆ. ಪೆರ್ಮುದೆ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ರಫೀಕ್ ಎಂಬವರ ಅರಫಾ ಮಂಜಿಲ್‌ಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೩೦ ಸಾವಿರ ರೂಪಾಯಿ ಹಾಗೂ ಬ್ಯಾಂಕ್‌ನ ಚೆಕ್ ಲೀಫ್ ಕಳವುಗೈದಿದ್ದಾರೆ. ಈಬಗ್ಗೆ ರಫೀಕ್‌ರ ಪತ್ನಿ ಶಮ್ನ ಕೆ.ಎ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಹಾಗೂ ಮಕ್ಕಳು ಈ ತಿಂಗಳ ೮ರಂದು …

ಉಳ್ಳಾಲ ಸಮೀಪ ರೈಲು ಢಿಕ್ಕಿ ಹೊಡೆದು ಅಪರಿಚಿತ ಯುವಕ ಮೃತ್ಯು: ಸಂಚಾರ ವಿಳಂಬ

ತಲಪಾಡಿ: ಉಳ್ಳಾಲ ಸಮೀಪ ಅಪರಿಚಿತ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕಣ್ಣೂರು ಭಾಗಕ್ಕಿರುವ ರೈಲುಗಳು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿದೆ. ನಿನ್ನೆ ಸಂಜೆ ೫.೧೫ಕ್ಕೆ ಎಂಜಿಆರ್ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಢಿಕ್ಕಿ ಹೊಡೆದು 40 ವರ್ಷ ಪ್ರಾಯದ ಯುವಕ ಮೃತಪಟ್ಟಿದ್ದಾರೆ. ಆದರೆ ಇವರ ಗುರುತು ಹಚ್ಚಲಾಗಲಿಲ್ಲ. ಹಳಿಯಲ್ಲಿದ್ದ ಮೃತದೇಹವನ್ನು ತೆರವುಗೊಳಿಸಲು  ಪೊಲೀಸರು ವಿಳಂಬವಾಗಿ ತಲುಪಿದ ಕಾರಣ ರೈಲು ಸಂಚಾರ ವಿಳಂಬಗೊಂಡಿದೆ. ಮಂಗಳೂರು- ಕಣ್ಣೂರು ಪ್ಯಾಸೆಂಜರ್, ಮಾವೇಲಿ ಎಕ್ಸ್‌ಪ್ರೆಸ್, ಮಲಬಾರ್ …

ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಿಂದ ಬಿದ್ದು ನಿರ್ಮಾಣ ಕಾರ್ಮಿಕ ಮೃತ್ಯು

ಕಾಸರಗೋಡು: ಚೆರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯಿಂದ ನಿರ್ಮಾಣ ಕಾರ್ಮಿಕ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಅಸ್ಸಾಂ ಬಾಲ್‌ಪೆಟ್ಟ ನಿವಾಸಿ ರಬಿಬುಲ್ ಹಕ್ (27) ಸಾವನ್ನಪ್ಪಿದ  ವ್ಯಕ್ತಿ.ನಿನ್ನೆ ಸಂಜೆ ಸುಮಾರು ೬.೩೦ಕ್ಕೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಚೆರ್ಕಳ ಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಕಾಂಕ್ರೀಟೀಕರಣಕ್ಕಾಗಿ ಕಬ್ಬಿಣದ ಸರಳು ಕಟ್ಟುತ್ತಿದ್ದ ವೇಳೆ ರಬಿಬುಲ್ ಹಕ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಆತನ ಜತೆ ಇತರ ಐದು ಮಂದಿ ಕಾರ್ಮಿಕರೂ ಕೆಲಸದಲ್ಲಿ …